Connect with us

ದೇಶ

ಬಾಕ್ಸ್ ಆಫೀಸ್ ದೆಸೆಗೆ ಮಹಾವತಾರ ನರಸಿಂಹ: ಕೇವಲ 6 ದಿನದಲ್ಲಿ ₹37 ಕೋಟಿ ಕಲೆಕ್ಷನ್!

Published

on

ಬೆಂಗಳೂರು: ಕನ್ನಡದ ಮೆಗಾ ಆ್ಯನಿಮೇಷನ್ ಸಿನಿಮಾ ‘ಮಹಾವತಾರ ನರಸಿಂಹ’ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಸೃಷ್ಟಿಸಿದ್ದು, ಬಿಡುಗಡೆಗೊಂಡು ಕೇವಲ 6 ದಿನಗಳೊಳಗೆ ₹37 ಕೋಟಿ ರೂ ಗಳಿಕೆ ದಾಖಲಿಸಿಕೊಂಡಿದೆ.

ಜುಲೈ 25 ರಂದು ಬಿಡುಗಡೆಯಾದ ಈ ಚಿತ್ರ ಕುರಿತು ಖ್ಯಾತ ಬಾಕ್ಸ್ ಆಫೀಸ್ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರತಿ ದಿನವೂ ಕಲೆಕ್ಷನ್‌ಗಳಲ್ಲಿ ಏರಿಕೆಯನ್ನು ಕಂಡಿರುವ ಈ ಚಿತ್ರ, ಇದೀಗ ಭಾರತದ ಮೊದಲ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಆ್ಯನಿಮೇಷನ್ ಸಿನಿಮಾವೆಂಬ ಕೀರ್ತಿಗೆ ಪಾತ್ರವಾಗಿದೆ.

KGF, ಕಾಂತಾರಾ ದಾಖಲೆ ಮುರಿದ ನರಸಿಂಹ

KGF ಮತ್ತು ಕಾಂತಾರಾ ಮೊದಲ ವಾರದ ಗಳಿಕೆಯನ್ನು ಹಿಂದಿಕ್ಕಿದ ಮಹಾವತಾರ ನರಸಿಂಹ:

  • 1ನೇ ದಿನ: ₹1.38 ಕೋಟಿ (ಹಿಂದಿ ಬೆಲ್ಟ್)
  • 2ನೇ ದಿನ: ₹3.40 ಕೋಟಿ
  • 3ನೇ ದಿನ: ₹6.77 ಕೋಟಿ
  • 4ನೇ ದಿನ: ₹3.70 ಕೋಟಿ
  • 5ನೇ ದಿನ: ₹5.01 ಕೋಟಿ
  • 6ನೇ ದಿನ: ₹5.05 ಕೋಟಿ
    ಒಟ್ಟಾರೆ ಹಿಂದಿ ಕಲೆಕ್ಷನ್: ₹25.31 ಕೋಟಿ
  • ತೆಲುಗು ಮತ್ತು ಉತ್ತರ ಭಾರತದ ಬೆಲ್ಟ್‌ಗಳಲ್ಲಿ ಭರ್ಜರಿ ಕಲೆಕ್ಷನ್
    ತೆಲುಗು ರಾಜ್ಯಗಳಲ್ಲಿ ಮಾತ್ರ 5 ದಿನದಲ್ಲಿ ₹9 ಕೋಟಿ ಗಳಿಕೆ ಕಂಡಿದೆ. ಉತ್ತರ ಭಾರತದಲ್ಲಿ ಇದೇ ಅವಧಿಯಲ್ಲಿ ₹22 ಕೋಟಿ ರೂ ಗಳಿಸಲಾಗಿದೆ. ಪ್ರೇಕ್ಷಕರು ಚಿತ್ರದ ವಿಷುಯಲ್ ಪ್ರಜೆಂಟೇಷನ್, ಮಿಥಾಲಜಿಕಲ್ ಥೀಮ್ ಹಾಗೂ ಸ್ಟೋರಿ ಟೆಲಿಂಗ್‌ಗೆ ಫಿದಾ ಆಗಿದ್ದಾರೆ.

    🎞️ ಕನ್ನಡದಲ್ಲಿ ಮಂಕಾದ ಪ್ರದರ್ಶನ
    ಚಿತ್ರ ಮೂಲತಃ ಕನ್ನಡದಲ್ಲಿ ಬಿಡುಗಡೆಯಾದರೂ, ಇಲ್ಲಿಯ ಪ್ರದರ್ಶನ ನಿರೀಕ್ಷಿತ ಮಟ್ಟಕ್ಕಿಲ್ಲ. ಸ್ಪರ್ಧಾತ್ಮಕವಾಗಿ ‘ಸು ಫ್ರಂ ಸೋ’ ಸಿನಿಮಾ ಭರ್ಜರಿ ಯಶಸ್ಸನ್ನು ಕಾಣುತ್ತಿದೆ. ಈ ಕಾರಣದಿಂದ ನರಸಿಂಹ ಕಲೆಕ್ಷನ್ ಸುಮಾರು ₹2 ಕೋಟಿ ರೂ ಮಟ್ಟದಲ್ಲೇ ನಿಂತಿದೆ.

ದೇಶ

ಇಸ್ರೇಲ್ ಬೆಂಬಲಿಸಿದರೆ ಹತ್ಯೆ: ಪಾಕ್ ಪ್ರಧಾನಿಗೆ ಲಷ್ಕರ್ ಉಗ್ರನ ಬೆದರಿಕೆ

Published

on

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಗೆ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಬಹಿರಂಗ ಬೆದರಿಕೆ ಹಾಕಿರುವ ಘಟನೆ ಪಾಕಿಸ್ತಾನದಲ್ಲಿ ಆತಂಕ ಸೃಷ್ಟಿಸಿದೆ. ಇಸ್ರೇಲ್ ದೇಶಕ್ಕೆ ಅಧಿಕೃತ ಮಾನ್ಯತೆ ನೀಡುವ ಯಾವುದೇ ಪ್ರಯತ್ನ ನಡೆದರೆ ಇಬ್ಬರನ್ನೂ “ಹತ್ಯೆ ಮಾಡಿ ಸರ್ವನಾಶ ಮಾಡಲಾಗುವುದು” ಎಂದು ಆತ ಎಚ್ಚರಿಕೆ ನೀಡಿದ್ದಾನೆ.

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರೋತ್ಸಾಹಿಸಿದ್ದ ‘ಅಬ್ರಹಾಂ ಒಪ್ಪಂದ’ದ ಅಡಿಯಲ್ಲಿ ಹಲವು ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜೊತೆ ರಾಜತಾಂತ್ರಿಕ ಬಾಂಧವ್ಯ ಬೆಳೆಸುತ್ತಿರುವ ಹಿನ್ನೆಲೆ, ಪಾಕಿಸ್ತಾನದಲ್ಲೂ ಇದೇ ಕುರಿತು ಚರ್ಚೆಗಳು ಆರಂಭವಾಗಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಸೈಫುಲ್ಲಾ ಕಸೂರಿ ಪ್ರಚೋದನಕಾರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿ ಬೆದರಿಕೆ ಹಾಕಿದ್ದಾನೆ.

ಪಾಕಿಸ್ತಾನ ಸರ್ಕಾರ ಅಥವಾ ಸೇನೆ ಇಸ್ರೇಲ್ ಜೊತೆ ಯಾವುದೇ ರೀತಿಯ ಶಾಂತಿ ಒಪ್ಪಂದ ಅಥವಾ ಮಾತುಕತೆಗೆ ಮುಂದಾದರೆ ಅವರನ್ನು ಹತ್ಯೆ ಮಾಡಲಾಗುವುದು ಎಂದು ಕಸೂರಿ ಹೇಳಿದ್ದಾನೆ. ಇಸ್ರೇಲ್‌ಗೆ ಮಾನ್ಯತೆ ನೀಡುವುದು ಇಸ್ಲಾಂ ಧರ್ಮಕ್ಕೆ ಮಾಡುವ ದ್ರೋಹ ಎಂದು ಬಿಂಬಿಸಿ, ಜನರನ್ನು ಸರ್ಕಾರದ ವಿರುದ್ಧ ಪ್ರಚೋದಿಸಲು ಉಗ್ರ ಸಂಘಟನೆ ಯತ್ನಿಸುತ್ತಿದೆ ಎನ್ನಲಾಗಿದೆ.

ಈದ್ ಉಲ್ ಅಧಾ ಪ್ರಾರ್ಥನೆಯ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೈಫುಲ್ಲಾ ಕಸೂರಿ, ಇಸ್ರೇಲ್ ಬೆಂಬಲಿಸುವ ಯಾವುದೇ ಪಾಕಿಸ್ತಾನಿ ನಾಯಕರ ವಿರುದ್ಧ ಜಿಹಾದ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾನೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಬೆಂಬಲಿಗರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪಾಕಿಸ್ತಾನವೇ ಹಿಂದೆ ಬೆಳೆಸಿದ ಉಗ್ರ ಸಂಘಟನೆಗಳು ಇದೀಗ ಅದರದೇ ರಾಜಕೀಯ ಹಾಗೂ ಸೇನಾ ನಾಯಕತ್ವದ ವಿರುದ್ಧ ತಿರುಗಿಬಿದ್ದಿರುವುದು ದೇಶದ ಆಂತರಿಕ ಭದ್ರತಾ ಪರಿಸ್ಥಿತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಈ ಬೆಳವಣಿಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

“ಬಡವರಿಗೆ ಅನ್ನ ಕೊಟ್ಟ ತಾಯಿ ಹೃದಯ”: ಸಿದ್ದರಾಮಯ್ಯ ಕುರಿತು ಭಾವುಕರಾದ ಸಚಿವ ಆರ್.ಬಿ. ತಿಮ್ಮಾಪುರ

Published

on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರ ಸಚಿವ ಸಂಪುಟದ ಸಭೆಯಲ್ಲಿ ಭಾವುಕ ವಾತಾವರಣ ಸೃಷ್ಟಿಸಿತ್ತು ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ. ಬ್ರೇಕ್‌ಫಾಸ್ಟ್ ಸಭೆಯಲ್ಲಿ ಸಿಎಂ ತಮ್ಮ ನಿರ್ಧಾರ ತಿಳಿಸಿದ ಕ್ಷಣ ಇಡೀ ಸಚಿವ ಸಂಪುಟ ಮೌನಕ್ಕೆ ಶರಣಾಯಿತು ಎಂದು ಅವರು ವಿವರಿಸಿದ್ದಾರೆ.

“ಇವತ್ತು ಸಭೆಯಲ್ಲಿ ಸಿದ್ದರಾಮಯ್ಯ ಅವರು ‘ನಾನು ರಾಜೀನಾಮೆ ಕೊಡ್ತೇನೆ’ ಎಂದಾಗ, ಸಚಿವ ಸಂಪುಟದ ಎಲ್ಲ ಸದಸ್ಯರೂ ಭಾವುಕರಾದರು. ನನ್ನನ್ನೂ ಸೇರಿದಂತೆ ಹಲವರು ಕಣ್ಣೀರು ತಡೆಯಲಾಗಲಿಲ್ಲ. ಸಚಿವರ ಕಣ್ಣೀರು ಕಂಡು ಸಿದ್ದರಾಮಯ್ಯ ಅವರೂ ಭಾವುಕರಾದರು” ಎಂದು ತಿಮ್ಮಾಪುರ ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿದ ಅವರು, “ಬಡವರಿಗೆ ಇಷ್ಟು ಕೊಟ್ಟರೆ ಸೋಮಾರಿಗಳಾಗುತ್ತಾರೆ ಎಂದು ಹಲವರು ಟೀಕಿಸಿದ್ದರು. ಆದರೆ ‘ಬಡವರಿಗೆ ಅನ್ನ ಕೊಡಬೇಕಾದದ್ದು ನನ್ನ ಕರ್ತವ್ಯ’ ಎಂಬ ತಾಯಿ ಹೃದಯ ಸಿದ್ದರಾಮಯ್ಯ ಅವರದ್ದು” ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಅಸಹಾಯಕರ ಪರ ನಿಂತ ನಾಯಕ ಎಂದು ಬಣ್ಣಿಸಿದ ತಿಮ್ಮಾಪುರ, “ಒಳಮೀಸಲಾತಿಯಂತಹ ಜಟಿಲ ಸಮಸ್ಯೆಗಳಿಗೂ ದಿಟ್ಟ ನಿರ್ಧಾರ ತೆಗೆದುಕೊಂಡವರು. ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದ ನಾಯಕತ್ವ ಅವರದ್ದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ವೈಯಕ್ತಿಕ ರಾಜಕೀಯ ಬದುಕಿನ ಬಗ್ಗೆ ಮಾತನಾಡಿದ ಅವರು, “ನಾನು ಮೂರು ಬಾರಿ ಚುನಾವಣೆಯಲ್ಲಿ ಸೋತು ರಾಜಕೀಯ ಮುಗಿದಿದೆ ಎಂದುಕೊಂಡಿದ್ದೆ. ಆಗ ನನ್ನನ್ನು ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡಿ ಮರುಜೀವ ಕೊಟ್ಟವರು ಸಿದ್ದರಾಮಯ್ಯ” ಎಂದು ಭಾವುಕರಾದರು.

ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಸಿದ್ದರಾಮಯ್ಯ ಮಾತನಾಡಿದ್ದು, “ಎಐಸಿಸಿ ನಾಯಕರು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗುತ್ತಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದೆ, ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ನಿಮ್ಮ ಮಾರ್ಗದರ್ಶನದಲ್ಲಿ ನಾನು ನಡೆದುಕೊಳ್ಳುತ್ತೇನೆ” ಎಂದು ಹೇಳಿರುವುದಾಗಿ ತಿಮ್ಮಾಪುರ ಮಾಹಿತಿ ನೀಡಿದ್ದಾರೆ.

Continue Reading

ದೇಶ

“ನೀವು ನಮ್ಮೆಲ್ಲರ ಸ್ಫೂರ್ತಿ”: ತಾತನ ಬಗ್ಗೆ ಜೂನಿಯರ್ ಎನ್‌ಟಿಆರ್ ಭಾವನಾತ್ಮಕ ಪೋಸ್ಟ್

Published

on

ಆಂಧ್ರಪ್ರದೇಶ: ತೆಲುಗು ಸಿನಿಮಾರಂಗದ ಮೇರು ನಟ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಅವರ 103ನೇ ಜಯಂತಿ ಅಂಗವಾಗಿ ಹೈದರಾಬಾದ್‌ನ ಎನ್‌ಟಿಆರ್ ಘಾಟ್‌ನಲ್ಲಿ ಭಾವುಕ ಕ್ಷಣಗಳು ಕಂಡುಬಂದವು. ಮೊಮ್ಮಗ ಹಾಗೂ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ತಮ್ಮ ಅಜ್ಜನ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.

ಭದ್ರತಾ ಸಿಬ್ಬಂದಿಯೊಂದಿಗೆ ಎನ್‌ಟಿಆರ್ ಘಾಟ್‌ಗೆ ಆಗಮಿಸಿದ ಜೂನಿಯರ್ ಎನ್‌ಟಿಆರ್, ಅಜ್ಜನ ಸಮಾಧಿ ಎದುರು ಕೆಲಕಾಲ ಮೌನವಾಗಿ ನಿಂತು ಭಾವುಕರಾದರು. ಬಳಿಕ ಹೂವಿನ ನಮನ ಸಲ್ಲಿಸಿ ಗೌರವ ವ್ಯಕ್ತಪಡಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದೇ ವೇಳೆ ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಜೂನಿಯರ್ ಎನ್‌ಟಿಆರ್, “ತೆಲುಗು ಚಿತ್ರರಂಗ ಮತ್ತು ಆಂಧ್ರಪ್ರದೇಶದ ಮೇಲೆ ಎನ್‌ಟಿಆರ್ ಅವರ ಪ್ರಭಾವ ಹಾಗೂ ಪ್ರೇರಣೆ ಅನನ್ಯವಾಗಿದೆ. ಚಿತ್ರರಂಗದಲ್ಲಿ ಅವರನ್ನು ದಂತಕಥೆಯಂತೆ ಕಾಣಲಾಗುತ್ತದೆ. ಇದಕ್ಕಾಗಿ ನಾನು ಸದಾ ಕೃತಜ್ಞ” ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಮಾತ್ರವಲ್ಲದೆ, ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಜನಪರ ಯೋಜನೆಗಳು ಹಾಗೂ ಬಡವರ ಕಲ್ಯಾಣಕ್ಕಾಗಿ ಮಾಡಿದ ಸೇವೆಗಳನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದ ಎನ್‌ಟಿಆರ್ ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಜೂನಿಯರ್ ಎನ್‌ಟಿಆರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಕೂಡ ಎನ್‌ಟಿಆರ್ ಅವರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. “ಸಿನಿಮಾ ಮತ್ತು ರಾಜಕೀಯದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಎನ್‌ಟಿಆರ್ ಅವರ ಜೀವನ ಮತ್ತು ಆದರ್ಶಗಳು ಸ್ಫೂರ್ತಿಯ ಮೂಲ” ಎಂದು ಮೋದಿ ಬರೆದುಕೊಂಡಿದ್ದಾರೆ.

ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರ್ಕಾರ ಆಂಧ್ರಪ್ರದೇಶದ ಜನರ ಕನಸುಗಳನ್ನು ಸಾಕಾರಗೊಳಿಸಲು ಬದ್ಧವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

Continue Reading

Trending