Connect with us

ದೇಶ

ಧನಕರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಮಹತ್ವದ ಚುನಾವಣಾ ಪ್ರಕ್ರಿಯೆ

Published

on

ನವದೆಹಲಿ: 2025ರ ಉಪರಾಷ್ಟ್ರಪತಿ ಸ್ಥಾನಕ್ಕಾಗಿ ಇಂದು ಸಂಸತ್ ಭವನದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊದಲ ಮತದಾರರಾಗಿದ್ದಾರೆ. ವಸುಧಾ ಕೋಣೆ ಸಂಖ್ಯೆ 101 ನಲ್ಲಿ ಪ್ರಧಾನಿ ಜೊತೆ, ಕೇಂದ್ರ ಸಚಿವ ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘವಾಲ್, ಜಿತೇಂದ್ರ ಸಿಂಗ್ ಮತ್ತು ಎಲ್. ಮುರುಗನ್ ಮತ ಚಲಾಯಿಸಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಮತ್ತು ಇಂಡಿಯಾ ಕೂಟದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಮತ ಎಣಿಕೆ ಇಂದು ಸಂಜೆ 6 ಗಂಟೆಯ ಬಳಿಕ ಪ್ರಾರಂಭವಾಗಲಿದ್ದು, ತಕ್ಷಣ ಫಲಿತಾಂಶ ಪ್ರಕಟವಾಗಲಿದೆ.

ಮತದಾನದಲ್ಲಿ 92 ವರ್ಷದ ಎಚ್.ಡಿ. ದೇವೇಗೌಡರು ವೀಲ್ಚೇರ್ನಲ್ಲಿ ಬಂದು ಪಾಲ್ಗೊಂಡರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಧನಕರ್, ಮತ್ತಿತರ ಪ್ರಮುಖರು ಮತ ಚಲಾಯಿಸಿದ್ದಾರೆ. ರಾಜ್ಯಸಭೆ ಮತ್ತು ಲೋಕಸಭೆಯ ಒಟ್ಟು 781 ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದಾರೆ.

ಧನಕರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕಾಗಿ ನಡೆಯುತ್ತಿರುವ ಈ ಚುನಾವಣೆ, ಬಹುಮತ ಸಾಧಿಸಲು 391 ಮತಗಳ ಅಗತ್ಯವಿದ್ದು, ಎನ್‌ಡಿಎ ಬಳಿ 425 ಮತಗಳು ಮತ್ತು ವಿರೋಧ ಪಕ್ಷದ ಕೂಟದ ಬಳಿ 324 ಮತಗಳ ಬೆಂಬಲವಿದೆ.

ಕೇಂದ್ರ ಸಚಿವ ರಿಜಿಜು, ರಾಮ್ ಮೋಹನ್ ನಾಯ್ಡು ಮತ್ತು ಶಿವಸೇನೆಯ ಶ್ರೀಕಾಂತ್ ಶಿಂಧೆ ಅಧಿಕೃತ ಚುನಾವಣಾ ಏಜೆಂಟ್‌ಗಳಾಗಿ ನೇಮಕಗೊಂಡಿದ್ದಾರೆ.

ಸಿಪಿ ರಾಧಾಕೃಷ್ಣನ್ ಗೆಲುವಿನ ವಿಶ್ವಾಸ ಎನ್‌ಡಿಎ ಕ್ಯಾಂಪ್ನಲ್ಲಿ ವಿಪುಲವಾಗಿದ್ದರೆ, ಬಿ ಸುದರ್ಶನ್ ರೆಡ್ಡಿ “ಇದು ಸಂವಿಧಾನಕ್ಕಾಗಿ ಹೋರಾಟ” ಎಂದು ಪ್ರತಿಕ್ರಿಯಿಸಿದ್ದಾರೆ.

J S Vasudev is a journalist and writer with 15 years of experience in writing and journalism. He founded Hosasuddi.in in 2023 with a vision to deliver credible and timely Kannada news. With a strong passion for journalism, he focuses on presenting news in a clear, simple and reader-friendly manner. His work covers current affairs, Karnataka news, national developments, business, technology and social issues. He believes in independent journalism and responsible reporting that puts readers first. His guiding motto is “Write on Your Own,” reflecting his commitment to original and independent content. Through Hosasuddi.in, he continues to contribute to Kannada digital journalism with dedication and integrity.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

UPI MDR: ₹2,000 ಮೇಲ್ಪಟ್ಟ ಪಾವತಿಗೆ 0.4% ಶುಲ್ಕವೇ? ₹5,000, ₹10,000ಕ್ಕೆ ಎಷ್ಟು?

Published

on

ನವದೆಹಲಿ: ಯುಪಿಐ (UPI) ಮೂಲಕ ಹಣ ಪಾವತಿಸುವ ಕೋಟ್ಯಂತರ ಜನರಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಕುರಿತು ಗೊಂದಲ ಉಂಟಾಗಿದೆ. ಇನ್ನು ಮುಂದೆ ಯುಪಿಐ ಬಳಸಿದರೆ 0.4% ಶುಲ್ಕ ಪಾವತಿಸಬೇಕೇ ಎಂಬ ಪ್ರಶ್ನೆ ಹಲವರಲ್ಲಿದೆ. ಆದರೆ ಕೇಂದ್ರ ಹಣಕಾಸು ಸಚಿವಾಲಯದ ಸ್ಪಷ್ಟನೆಯ ಪ್ರಕಾರ, ಎಲ್ಲಾ UPI ವಹಿವಾಟುಗಳಿಗೂ 0.4% ಶುಲ್ಕ ಅನ್ವಯಿಸುವುದಿಲ್ಲ.

ನಿರ್ದಿಷ್ಟ ರೀತಿಯ ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ ₹2,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಮಾತ್ರ 0.4% MDR ಅನ್ವಯಿಸುವ ವ್ಯವಸ್ಥೆ ಇದೆ. ಅದೇ ಸಮಯದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ UPI ಹಣ ವರ್ಗಾವಣೆಗಳು ಯಾವುದೇ ಮೊತ್ತವಾಗಿದ್ದರೂ ಈ MDR ವ್ಯಾಪ್ತಿಗೆ ಬರುವುದಿಲ್ಲ.

₹2,000ರವರೆಗೆ UPI ಪಾವತಿಗೆ MDR ಇಲ್ಲ

ಹೊಸ ವ್ಯವಸ್ಥೆಯಲ್ಲಿ ₹2,000 ಅಥವಾ ಅದಕ್ಕಿಂತ ಕಡಿಮೆ ಮೊತ್ತದ ನಿರ್ದಿಷ್ಟ ವ್ಯಾಪಾರಿ ಪಾವತಿಗಳು MDR ವ್ಯಾಪ್ತಿಯಿಂದ ಹೊರಗಿವೆ. ಹಣಕಾಸು ಸಚಿವಾಲಯದ ಪ್ರಕಾರ, ದೇಶದಲ್ಲಿ ನಡೆಯುವ ಸುಮಾರು 96% P2M ವಹಿವಾಟುಗಳು ಈ ಬದಲಾವಣೆಯಿಂದ ಪರಿಣಾಮಕ್ಕೊಳಗಾಗುವುದಿಲ್ಲ.

ಅಂದರೆ ಅಂಗಡಿಯಲ್ಲಿ ₹500, ₹1,000 ಅಥವಾ ₹2,000 ಮೌಲ್ಯದ ವಸ್ತು ಖರೀದಿಸಿ UPI ಮೂಲಕ ಹಣ ಪಾವತಿಸಿದರೆ, ಈ ನಿರ್ದಿಷ್ಟ MDR ಅನ್ವಯಿಸುವುದಿಲ್ಲ.

ಇದರಿಂದ ದಿನನಿತ್ಯದ ಸಣ್ಣ ಪ್ರಮಾಣದ ಡಿಜಿಟಲ್ ಪಾವತಿಗಳ ಮೇಲೆ ಯಾವುದೇ ಸಾಮಾನ್ಯ UPI ಶುಲ್ಕ ವಿಧಿಸಲಾಗುತ್ತಿದೆ ಎಂಬ ಅರ್ಥ ಬರುವುದಿಲ್ಲ.

₹2,000ಕ್ಕಿಂತ ಹೆಚ್ಚು ಪಾವತಿಸಿದರೆ 0.4% MDR

ನಿಗದಿತ P2M ವಹಿವಾಟು ₹2,000ಕ್ಕಿಂತ ಹೆಚ್ಚಾದಾಗ 0.4% MDR ಅನ್ವಯಿಸುತ್ತದೆ. ಇದನ್ನು ಸರಳ ಉದಾಹರಣೆಗಳ ಮೂಲಕ ಅರ್ಥಮಾಡಿಕೊಳ್ಳಬಹುದು.

  • ₹3,000 ಪಾವತಿ → ₹12 MDR
  • ₹5,000 ಪಾವತಿ → ₹20 MDR
  • ₹10,000 ಪಾವತಿ → ₹40 MDR

ಆದರೆ ₹75,000 ವರೆಗೆ ಮೊತ್ತ ಹೆಚ್ಚಿದಂತೆ MDR ಹೆಚ್ಚಾಗುತ್ತಿದ್ದರೂ, ₹75,000 ತಲುಪಿದ ನಂತರ ಪ್ರತಿ ವಹಿವಾಟಿಗೆ ಗರಿಷ್ಠ ₹300 ಎಂಬ ಮಿತಿ ಇರುತ್ತದೆ. ಹೀಗಾಗಿ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ MDR ಅನಿಯಮಿತವಾಗಿ ಏರುತ್ತಾ ಹೋಗುವುದಿಲ್ಲ.

ಗ್ರಾಹಕರು ಪ್ರತ್ಯೇಕವಾಗಿ ಹಣ ಪಾವತಿಸಬೇಕೇ?

ಇದು ಅತ್ಯಂತ ಪ್ರಮುಖ ವಿಚಾರ.

MDR ಎನ್ನುವುದು ಗ್ರಾಹಕರಿಂದ ಪ್ರತ್ಯೇಕವಾಗಿ ವಸೂಲಿ ಮಾಡುವ UPI transaction fee ಅಲ್ಲ. ಇದು ವ್ಯಾಪಾರಿ ಪಾವತಿ ವ್ಯವಸ್ಥೆಯೊಳಗಿನ ಶುಲ್ಕವಾಗಿದ್ದು, ಪಾವತಿ ವ್ಯವಸ್ಥೆಯಲ್ಲಿ ಭಾಗವಹಿಸುವ ವಿವಿಧ ಸಂಸ್ಥೆಗಳ ನಡುವೆ ಹಂಚಿಕೆಯಾಗುತ್ತದೆ.

ಅಂದರೆ ಗ್ರಾಹಕರು ₹10,000 ಮೌಲ್ಯದ ವಸ್ತುವನ್ನು ಖರೀದಿಸಿ UPI ಮೂಲಕ ಪಾವತಿಸಿದಾಗ, “₹10,000 + ₹40 UPI ಶುಲ್ಕ” ಎಂದು ಗ್ರಾಹಕರಿಂದ ಪ್ರತ್ಯೇಕವಾಗಿ ಹಣ ಪಡೆಯುವ ವ್ಯವಸ್ಥೆ MDRನ ಸ್ವರೂಪವಲ್ಲ.

MDR ಸಾಮಾನ್ಯವಾಗಿ ವ್ಯಾಪಾರಿಗೆ ಪಾವತಿಸಬೇಕಾದ ಮೊತ್ತದಿಂದ ಕಡಿತವಾಗುವ ಶುಲ್ಕವಾಗಿರುತ್ತದೆ. ಇದನ್ನು ಸರ್ಕಾರ ಅಥವಾ NPCI ನೇರವಾಗಿ ತೆರಿಗೆಯಾಗಿ ಸಂಗ್ರಹಿಸುವುದಿಲ್ಲ.

ಸ್ನೇಹಿತರಿಗೆ ₹50,000 ಕಳುಹಿಸಿದರೂ ಶುಲ್ಕವಿಲ್ಲ

P2P UPI ವಹಿವಾಟುಗಳಿಗೆ MDR ಅನ್ವಯಿಸುವುದಿಲ್ಲ ಎಂಬುದು ಮತ್ತೊಂದು ಪ್ರಮುಖ ಅಂಶ.

ಉದಾಹರಣೆಗೆ, ನೀವು ನಿಮ್ಮ ಸ್ನೇಹಿತರಿಗೆ ₹5,000 ಕಳುಹಿಸಿದರೂ ಅಥವಾ ಕುಟುಂಬದ ಸದಸ್ಯರಿಗೆ ₹50,000 ವರ್ಗಾಯಿಸಿದರೂ, ಈ 0.4% MDR ಅನ್ವಯಿಸುವುದಿಲ್ಲ.

ಇಲ್ಲಿ ಹಣ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ವರ್ಗಾವಣೆಯಾಗುತ್ತಿರುವುದರಿಂದ ಅದು P2P ವಹಿವಾಟಾಗುತ್ತದೆ. MDRನ ಪ್ರಮುಖ ಬದಲಾವಣೆ ನಿರ್ದಿಷ್ಟ ವ್ಯಾಪಾರಿ ಪಾವತಿಗಳಿಗೆ ಸಂಬಂಧಿಸಿದೆ.

ಸಣ್ಣ ವ್ಯಾಪಾರಿಗಳಿಗೆ ಶೂನ್ಯ MDR

ಸಣ್ಣ ವ್ಯಾಪಾರಿಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವ್ಯವಸ್ಥೆಯೂ ಇದೆ. UPI QR ಮೂಲಕ ತಿಂಗಳಿಗೆ ₹1 ಲಕ್ಷದವರೆಗೆ ಸ್ವೀಕರಿಸುವ ನಿರ್ದಿಷ್ಟ ಸಣ್ಣ ವ್ಯಾಪಾರಿಗಳು P2PM ವರ್ಗದಡಿ ಶೂನ್ಯ MDR ಸೌಲಭ್ಯವನ್ನು ಮುಂದುವರಿಸಿಕೊಳ್ಳುತ್ತಾರೆ.

ಇದರಿಂದ ಸಣ್ಣ ಅಂಗಡಿಗಳು, ಸ್ಥಳೀಯ ವ್ಯಾಪಾರಿಗಳು ಮತ್ತು ಕಡಿಮೆ ಪ್ರಮಾಣದ UPI ಪಾವತಿಗಳನ್ನು ಸ್ವೀಕರಿಸುವ ವ್ಯಾಪಾರಿಗಳ ಮೇಲೆ ಹೆಚ್ಚುವರಿ ವೆಚ್ಚದ ಪರಿಣಾಮ ಕಡಿಮೆ ಮಾಡುವ ಉದ್ದೇಶವಿದೆ.

ರೈಲ್ವೆ, ಟೆಲಿಕಾಂ, ವಿಮೆ, ಇಂಧನ ಕ್ಷೇತ್ರಗಳಿಗೆ ಪ್ರತ್ಯೇಕ ದರ

ಎಲ್ಲಾ ₹2,000ಕ್ಕಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳಿಗೂ ಒಂದೇ ರೀತಿಯ 0.4% MDR ಇರುವುದಿಲ್ಲ.

ರೈಲ್ವೆ, ಟೆಲಿಕಾಂ, ವಿಮೆ, ಇಂಧನ ಹಾಗೂ ಕೃಷಿ ಒಳಹರಿವುಗಳಂತಹ ನಿಗದಿತ ಕ್ಷೇತ್ರಗಳಲ್ಲಿ ₹2,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ 0.4% ಬದಲಾಗಿ ಪ್ರತಿ ವಹಿವಾಟಿಗೆ ₹5 ಫ್ಲಾಟ್ MDR ಅನ್ವಯಿಸುವ ವ್ಯವಸ್ಥೆ ಇದೆ.

ಇದರಿಂದ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಮೊತ್ತದ ಪಾವತಿಗಳಿಗೆ ಶೇಕಡಾವಾರು ಆಧಾರದಲ್ಲಿ ದೊಡ್ಡ MDR ಬರುವುದನ್ನು ತಪ್ಪಿಸುವ ಉದ್ದೇಶವಿದೆ.

ಮ್ಯೂಚುವಲ್ ಫಂಡ್ ಮತ್ತು ಷೇರು ವಹಿವಾಟಿಗೆ 0.02%

ಮ್ಯೂಚುವಲ್ ಫಂಡ್, ಸೆಕ್ಯುರಿಟೀಸ್, ಸ್ಟಾಕ್‌ಬ್ರೋಕರ್‌ಗಳು ಮತ್ತು ಡೀಲರ್‌ಗಳಿಗೆ ಸಂಬಂಧಿಸಿದ ನಿರ್ದಿಷ್ಟ ಪಾವತಿಗಳಿಗೆ 0.02% MDR ಅನ್ವಯಿಸುತ್ತದೆ. ಈ ವರ್ಗದಲ್ಲಿಯೂ ಪ್ರತಿ ವಹಿವಾಟಿಗೆ ₹300 ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.

ಹೀಗಾಗಿ ಎಲ್ಲ ವಹಿವಾಟುಗಳಿಗೂ ಒಂದೇ 0.4% ದರ ಅನ್ವಯಿಸುತ್ತದೆ ಎಂಬುದು ಸರಿಯಾದ ಅರ್ಥವಲ್ಲ.

ಸರಾಸರಿ UPI ಪಾವತಿ ಎಷ್ಟು?

ಹಣಕಾಸು ಸಚಿವಾಲಯದ ಮಾಹಿತಿಯ ಪ್ರಕಾರ, ಸರಾಸರಿ P2M UPI ವಹಿವಾಟಿನ ಮೌಲ್ಯ ಸುಮಾರು ₹577ರಷ್ಟಿದೆ. ಅಂದರೆ ಸಾಮಾನ್ಯ ವ್ಯಾಪಾರಿ UPI ಪಾವತಿಯ ಮೊತ್ತವು ₹2,000ರ ಮಿತಿಗಿಂತ ಸಾಕಷ್ಟು ಕಡಿಮೆಯಾಗಿದೆ.

ಹೀಗಾಗಿ ಪ್ರಸ್ತಾಪಿತ ವ್ಯವಸ್ಥೆಯಿಂದ ಸಾಮಾನ್ಯ ದಿನನಿತ್ಯದ ಸಣ್ಣ UPI ಪಾವತಿಗಳ ಬಹುಪಾಲು ಪರಿಣಾಮಕ್ಕೊಳಗಾಗುವುದಿಲ್ಲ ಎಂಬುದು ಸರ್ಕಾರದ ವಿವರಣೆಯಾಗಿದೆ.

MDR ತೆರಿಗೆಯಲ್ಲ

MDR ಅನ್ನು ಸರ್ಕಾರ ವಿಧಿಸುವ ತೆರಿಗೆ ಎಂದು ಪರಿಗಣಿಸಬಾರದು. ಇದು ಪಾವತಿ ವ್ಯವಸ್ಥೆಯೊಳಗಿನ ಶುಲ್ಕವಾಗಿದ್ದು, ಬ್ಯಾಂಕ್‌ಗಳು, ಪಾವತಿ ಸೇವಾ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಭಾಗವಹಿಸುವವರ ನಡುವೆ ಹಂಚಿಕೆಯಾಗುತ್ತದೆ.

UPI ವ್ಯವಸ್ಥೆಯ ನಿರಂತರ ಕಾರ್ಯಾಚರಣೆ, ತಾಂತ್ರಿಕ ಮೂಲಸೌಕರ್ಯ ಹಾಗೂ ಅದರ ಮುಂದಿನ ವಿಸ್ತರಣೆಗೆ ಪಾವತಿ ಪರಿಸರ ವ್ಯವಸ್ಥೆಗೆ ಆರ್ಥಿಕ ಬೆಂಬಲ ಅಗತ್ಯವಿದೆ ಎಂಬುದು ಈ ವ್ಯವಸ್ಥೆಯ ಹಿಂದಿರುವ ಪ್ರಮುಖ ವಿಚಾರವಾಗಿದೆ.

UPI ಶೂನ್ಯ MDR ಮುಂದುವರಿಸಲು ಸರ್ಕಾರದ ಪ್ರೋತ್ಸಾಹ

ಕಡಿಮೆ ಮೌಲ್ಯದ UPI P2M ವಹಿವಾಟುಗಳಲ್ಲಿ ಶೂನ್ಯ MDR ವ್ಯವಸ್ಥೆಯನ್ನು ಮುಂದುವರಿಸಲು ಸರ್ಕಾರ ಈ ಹಿಂದೆ ಪ್ರೋತ್ಸಾಹ ಯೋಜನೆಗಳ ಮೂಲಕ ಹಣಕಾಸಿನ ನೆರವು ನೀಡಿದೆ.

2025ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ಕಡಿಮೆ ಮೌಲ್ಯದ BHIM-UPI P2M ವಹಿವಾಟುಗಳನ್ನು ಉತ್ತೇಜಿಸಲು ₹1,500 ಕೋಟಿ ವೆಚ್ಚದ ಪ್ರೋತ್ಸಾಹ ಯೋಜನೆಗೆ ಅನುಮೋದನೆ ನೀಡಿತ್ತು.

ಇದರಿಂದ UPI ಬಳಕೆದಾರರಿಗೆ ಕಡಿಮೆ ಅಥವಾ ಶೂನ್ಯ MDR ಇರುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮುಂದುವರಿಸಲು ಸರ್ಕಾರವು ಹಿಂದೆಂದೂ ಹಣಕಾಸಿನ ಬೆಂಬಲ ನೀಡಿರುವುದು ಸ್ಪಷ್ಟವಾಗುತ್ತದೆ.

ಹಾಗಾದರೆ ಸಾಮಾನ್ಯ UPI ಬಳಕೆದಾರರಿಗೆ ಏನು ಬದಲಾವಣೆ?

ಸರಳವಾಗಿ ಹೇಳುವುದಾದರೆ, ಇನ್ನು ಮುಂದೆ ಎಲ್ಲಾ UPI ಪಾವತಿಗೂ 0.4% ಶುಲ್ಕ” ಎಂಬ ಸುದ್ದಿ ಸರಿಯಲ್ಲ.

₹5,000 ಅನ್ನು ಸ್ನೇಹಿತರಿಗೆ ಕಳುಹಿಸಿದರೆ MDR ಇಲ್ಲ. ₹50,000 ಅನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸಿದರೂ MDR ಇಲ್ಲ. ₹2,000 ಅಥವಾ ಅದಕ್ಕಿಂತ ಕಡಿಮೆ ಮೊತ್ತದ ನಿರ್ದಿಷ್ಟ ವ್ಯಾಪಾರಿ ಪಾವತಿಗಳಿಗೂ ಈ MDR ಅನ್ವಯಿಸುವುದಿಲ್ಲ.

ನಿಗದಿತ ₹2,000ಕ್ಕಿಂತ ಹೆಚ್ಚಿನ P2M ವಹಿವಾಟುಗಳಿಗೆ ಮಾತ್ರ ಸಂಬಂಧಿಸಿದ MDR ದರ ಅನ್ವಯಿಸುತ್ತದೆ. ಸಣ್ಣ ವ್ಯಾಪಾರಿಗಳ ಕೆಲವು ವರ್ಗಗಳಿಗೆ ಶೂನ್ಯ MDR ಮುಂದುವರಿಯುತ್ತದೆ ಮತ್ತು ರೈಲ್ವೆ, ಟೆಲಿಕಾಂ, ವಿಮೆ, ಇಂಧನ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಪ್ರತ್ಯೇಕ ದರಗಳಿವೆ.

ಹೀಗಾಗಿ UPI ಬಳಕೆದಾರರು MDR ಮತ್ತು ನೇರ UPI transaction fee ಎರಡನ್ನೂ ಒಂದೇ ಎಂದು ಪರಿಗಣಿಸಬಾರದು. ಈ ಬದಲಾವಣೆಯ ಪ್ರಮುಖ ಪರಿಣಾಮವು ಪಾವತಿ ವ್ಯವಸ್ಥೆಯಲ್ಲಿನ ವ್ಯಾಪಾರಿ ವಹಿವಾಟುಗಳು ಮತ್ತು ಸಂಬಂಧಿತ ಭಾಗವಹಿಸುವವರ ಮೇಲಿದ್ದು, ಸಾಮಾನ್ಯ P2P UPI ಹಣ ವರ್ಗಾವಣೆಗಳು ಇದರ ಹೊರಗಿವೆ.

Continue Reading

ಅಪರಾಧ

Flyover ನಿಂದ ಅಂಡರ್‌ಪಾಸ್‌ಗೆ ಹಾರಿದ ಕಾರು; ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ದುರಂತ ಅಂತ್ಯ

Published

on

ಮಂಡ್ಯ: ನಿಯಂತ್ರಣ ತಪ್ಪಿದ ಕಾರೊಂದು Flyover ನಿಂದ ಪಲ್ಟಿ ಹೊಡೆದು ಅಂಡರ್‌ಪಾಸ್‌ಗೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಂಡ್ಯ ಸಮೀಪದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿದೆ.

ಉಮ್ಮಡಹಳ್ಳಿ ಗೇಟ್ ಸಮೀಪ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಎಕ್ಸ್‌ಪ್ರೆಸ್‌ವೇ ಫ್ಲೈಓವರ್‌ನಿಂದ ಕೆಳಕ್ಕೆ ಹಾರಿ ಅಂಡರ್‌ಪಾಸ್‌ಗೆ ಬಿದ್ದಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಂಜನಾ (32) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಸ್ಥಳೀಯ ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ

ಅಂಜನಾ ಅವರು ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅವರ ಪತಿ ಹರೀಶ್ ಅವರು ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ವಂತ ಸಾಫ್ಟ್‌ವೇರ್ ಕಂಪನಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಪ್ರಯಾಣದ ವೇಳೆ ಅಂಜನಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಫ್ಲೈಓವರ್‌ನಿಂದ ಅಂಡರ್‌ಪಾಸ್‌ಗೆ ಬಿದ್ದಿದೆ ಎಂದು ವರದಿಯಾಗಿದೆ.

ಕಾರಿನಿಂದ ಕೆಳಗೆ ಬಿದ್ದ ಮಹಿಳೆ

ಕಾರ್ ಅಂಡರ್‌ಪಾಸ್‌ಗೆ ಬೀಳುವ ಸಂದರ್ಭದಲ್ಲಿ ಕಿಟಕಿ ತೆರೆದಿದ್ದರಿಂದ ಅಂಜನಾ ಕಾರಿನಿಂದ ಹೊರಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.

ಗಾಯಗೊಂಡ ಅಂಜನಾ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಬಗ್ಗೆ ತನಿಖೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾರು ಅತಿವೇಗದಲ್ಲಿತ್ತೇ ಅಥವಾ ಚಾಲಕನ ನಿಯಂತ್ರಣ ತಪ್ಪಲು ಬೇರೆ ಕಾರಣವಿತ್ತೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿರುವ ಈ ಅಪಘಾತ ಮತ್ತೊಮ್ಮೆ ವೇಗದ ಚಾಲನೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಗಮನ ಸೆಳೆದಿದೆ.

Continue Reading

ರಾಜ್ಯ

Karnataka Milk Price: ಗ್ರಾಹಕರಿಗೆ ಶಾಕ್? ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟಗಳಿಂದ ಮಹತ್ವದ ಪ್ರಸ್ತಾವನೆ

Published

on

ಬೆಂಗಳೂರು: Karnataka ಜನತೆಗೆ ಶೀಘ್ರದಲ್ಲೇ ಹಾಲಿನ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ. ಬೆಂಗಳೂರು ಹಾಲಿನ ಒಕ್ಕೂಟ (BAMUL), ಚಾಮರಾಜನಗರ, ಮಂಡ್ಯ ಹಾಗೂ ತುಮಕೂರು ಹಾಲು ಉತ್ಪಾದಕರ ಒಕ್ಕೂಟಗಳು ಪ್ರತಿ ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿವೆ.

ಈ ಕುರಿತು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟಗಳ ಒಕ್ಕೂಟವು ಸುದ್ದಿಗೋಷ್ಠಿ ನಡೆಸಿ ದರ ಏರಿಕೆಯ ಪ್ರಸ್ತಾವನೆಗೆ ಕಾರಣಗಳನ್ನು ವಿವರಿಸಲು ಮುಂದಾಗಿದೆ. ಆದರೆ, ₹8 ದರ ಏರಿಕೆ ಇನ್ನೂ ಜಾರಿಯಾಗಿಲ್ಲ. ಸರ್ಕಾರ ಹಾಗೂ ಕೆಎಂಎಫ್ ಆಡಳಿತ ಮಂಡಳಿಯ ನಿರ್ಧಾರದ ಬಳಿಕವಷ್ಟೇ ಅಂತಿಮ ದರ ಸ್ಪಷ್ಟವಾಗಲಿದೆ.

ಹಾಲಿನ ದರ ಏರಿಕೆಗೆ ಕಾರಣವೇನು?

ಹಾಲು ಉತ್ಪಾದಕರು ಹಾಗೂ ರೈತರು ಎದುರಿಸುತ್ತಿರುವ ಉತ್ಪಾದನಾ ವೆಚ್ಚದ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಅಗತ್ಯವಾಗಿದೆ ಎಂದು ಹಾಲು ಒಕ್ಕೂಟಗಳು ಹೇಳಿವೆ.

ರಾಜ್ಯದಲ್ಲಿ ಮಳೆ ಕೊರತೆಯಿಂದ ಜಾನುವಾರುಗಳಿಗೆ ಹಸಿರು ಮೇವಿನ ಲಭ್ಯತೆ ಕಡಿಮೆಯಾಗಿದೆ ಎಂದು ಒಕ್ಕೂಟಗಳು ಉಲ್ಲೇಖಿಸಿವೆ. ಇದರಿಂದ ರಾಸುಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎನ್ನಲಾಗಿದೆ.

ಇದರ ಜೊತೆಗೆ ಮೆಕ್ಕೆಜೋಳ, ಹಿಂಡಿ, ಭೂಸಾ ಹಾಗೂ ಕಾಕಂಬಿ ಸೇರಿದಂತೆ ಪಶು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಹಾಲು ಉತ್ಪಾದಕರ ಒಕ್ಕೂಟಗಳು ತಿಳಿಸಿವೆ. ಜಾನುವಾರುಗಳ ನಿರ್ವಹಣೆಗೆ ಬಳಸುವ ನೆಲಹಾಸು ಹಾಗೂ ಇತರ ಸಾಮಗ್ರಿಗಳ ದರವೂ ಹೆಚ್ಚಾಗಿದೆ ಎನ್ನಲಾಗಿದೆ.

ಸಾರಿಗೆ ವೆಚ್ಚ ಹೆಚ್ಚಳದ ಉಲ್ಲೇಖ

ಹಾಲಿನ ಸಂಗ್ರಹಣೆ ಹಾಗೂ ಸಾಗಣೆ ವೆಚ್ಚವೂ ಹೆಚ್ಚಾಗಿದೆ ಎಂದು ಒಕ್ಕೂಟಗಳು ಹೇಳಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಹಾಗೂ ಇಂಧನ ದರಗಳ ಏರಿಕೆಯ ಪರಿಣಾಮವಾಗಿ ಸಾರಿಗೆ ವೆಚ್ಚದ ಮೇಲೂ ಒತ್ತಡ ಉಂಟಾಗಿದೆ ಎಂದು ಅವುಗಳು ವಾದಿಸಿವೆ.

ಹೀಗಾಗಿ ಹಾಲಿನ ಖರೀದಿ ಮತ್ತು ವಿತರಣಾ ವ್ಯವಸ್ಥೆಯಲ್ಲಿ ರೈತರು ಹಾಗೂ ಹಾಲು ಒಕ್ಕೂಟಗಳಿಗೆ ಎದುರಾಗುತ್ತಿರುವ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ದರ ಪರಿಷ್ಕರಣೆ ಅಗತ್ಯ ಎಂದು ಒಕ್ಕೂಟಗಳು ಅಭಿಪ್ರಾಯಪಟ್ಟಿವೆ.

ಸರ್ಕಾರದ ನಿರ್ಧಾರದತ್ತ ಚಿತ್ತ

ಪ್ರತಿ ಲೀಟರ್ ಹಾಲಿಗೆ ₹8 ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಬಂದರೆ, ರಾಜ್ಯ ಸರ್ಕಾರ ಹಾಗೂ ಕೆಎಂಎಫ್ ಆಡಳಿತ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದರೆ ಗ್ರಾಹಕರಿಗೆ ಹಾಲಿನ ಬೆಲೆ ಹೆಚ್ಚಳದ ಹೊರೆ ಬೀಳಲಿದೆ. ಮತ್ತೊಂದೆಡೆ, ಹಾಲು ಉತ್ಪಾದಕರಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾದ ಬೆಲೆ ದೊರೆಯಬೇಕು ಎಂಬುದು ಒಕ್ಕೂಟಗಳ ವಾದವಾಗಿದೆ.

ಸದ್ಯಕ್ಕೆ ₹8 ದರ ಏರಿಕೆ ಪ್ರಸ್ತಾವನೆಯ ಹಂತದಲ್ಲಿದ್ದು, ಅಂತಿಮ ನಿರ್ಧಾರ ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳ ಕೈಯಲ್ಲಿದೆ.

Continue Reading

Trending