Connect with us

ದೇಶ

ಬೆಂಗಳೂರಿನಲ್ಲಿ ತರಕಾರಿ ಬೆಲೆ ಭಾರಿ ಜಿಗಿತ — ಟೊಮೆಟೊ ₹90, ನುಗ್ಗೆಕಾಯಿ ₹600!

Published

on

ಬೆಂಗಳೂರು, ನವೆಂಬರ್ 30: ರಾಜ್ಯದಲ್ಲಿ ತೀವ್ರ ಚಳಿಗಾಲ ಆರಂಭವಾಗುತ್ತಿದ್ದಂತೆ ತರಕಾರಿ ದರಗಳು ಗಗನಕ್ಕೇರಿವೆ. ದಿನನಿತ್ಯ ಅಡುಗೆಯಲ್ಲಿ ಅವಶ್ಯಕವಾಗಿರುವ ಟೊಮೆಟೊ ಮತ್ತು ನುಗ್ಗೆಕಾಯಿ ಈ ಬಾರಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ದೊಡ್ಡ ಹೊರೆ ತರಿದೆ.

ಟೊಮೆಟೊ ಎಂದರೆ ಯಾವಾಗಲೂ ಬೆಲೆಯಲ್ಲಿ ಏರುಪೇರಿಗೊಳಗಾಗುವ ತರಕಾರಿ. ಆದರೆ ಈ ಬಾರಿ 100 ರೂಪಾಯಿ ಗಡಿಯನ್ನು ಮುಟ್ಟುವ ಮಟ್ಟಿಗೆ ಏರಿಕೆಯಾಗಿದೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್ ₹600–₹850ಕ್ಕೆ ಮಾರಾಟವಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ₹70–₹80 ಕೆ.ಜಿ ದರ ಕೇಳಿಬರುತ್ತಿದೆ. ಹೊರ ರಾಜ್ಯ ಬೇಡಿಕೆ ಹೆಚ್ಚಾದರೂ ಪೂರೈಕೆ ಕಡಿಮೆಯಾಗಿರುವುದೇ ಪ್ರಮುಖ ಕಾರಣವೆಂದು ವ್ಯಾಪಾರಿಗಳು ಹೇಳುತ್ತಾರೆ.

ಆದರೆ ನುಗ್ಗೆಕಾಯಿ ಬೆಲೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. 30–40 ರೂ. ಕೆಜಿಗೆ ಸಿಗುತ್ತಿದ್ದ ನುಗ್ಗೆಕಾಯಿ ಈಗ ₹500–₹600ಕ್ಕೆ ಜಿಗಿದಿದೆ. ಅಕಾಲಿಕ ಮಳೆ, ಚಂಡಮಾರುತ, ಹವಾಮಾನ ವ್ಯತ್ಯಾಸದಿಂದ ಬೆಳೆ ಹಾನಿಯಾಗಿದ್ದು, ಬೆಂಗಳೂರಿನ ಪೂರೈಕೆ 100 ಟನ್‌ನಿಂದ ಕೇವಲ 30–40 ಟನ್‌ಗೆ ಕುಸಿದಿದೆ. ತಮಿಳುನಾಡಿನಿಂದ ಹೊಸ ಬೆಳೆ ಬರಬೇಕಾದ ಜನವರಿ–ಫೆಬ್ರವರಿವರೆಗೆ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

ಇನ್ನುಳಿದ ತರಕಾರಿಗಳ ದರವೂ ಚುಚ್ಚುವಂತಿದೆ — ಹುರಳಿಕಾಯಿ, ತೊಂಡೆಕಾಯಿ, ಗ್ರೀನ್ ಬಟಾಣಿ, ಹಸಿಮೆಣಸಿನಕಾಯಿ ಎಲ್ಲವೂ ₹80–₹120ರ ನಡುವೆ ಮಾರಾಟವಾಗುತ್ತಿವೆ.


ಚಿಕ್ಕಬಳ್ಳಾಪುರ – ಟೊಮೆಟೊ ದರ ಶತಕದ ಹತ್ತಿರ

ಚಿಕ್ಕಬಳ್ಳಾಪುರ–ಬಂಗಾರಪೇಟೆ ಪ್ರದೇಶಗಳಲ್ಲಿ ಕಳೆದ 10 ದಿನಗಳಿಂದ ಟೊಮೆಟೊ ದರ ನಿರಂತರವಾಗಿ ಏರುತ್ತಿದೆ. ಹಾಪ್‌ಕಾಮ್‌ನಲ್ಲಿ ಉತ್ತಮ ದರ್ಜೆಯ ಟೊಮೆಟೊ ಕೆ.ಜಿಗೆ ₹80ಕ್ಕೆ ಮಾರಾಟವಾಗುತ್ತಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್ ₹500–₹1500ರ ನಡುವೆ ಹರಾಜಾಗುತ್ತಿದೆ. ಸೀಸನ್ ಹೊರತಾದ ಕಾಲವಾಗಿರುವ ಕಾರಣ ಮತ್ತು ಕಡಿಮೆ ಪೂರೈಕೆಯಿಂದ ಬೆಲೆ ಏರಿಕೆ ಸ್ಥಿರವಾಗಿದೆ. ಎರಡು ವಾರಗಳ ಹಿಂದೆ ₹15–₹20ಕ್ಕೆ ಸಿಗುತ್ತಿದ್ದ ಟೊಮೆಟೊ ಇಂದು ₹50–₹90ಕ್ಕೆ ಏರಿಕೆಯಾಗಿದೆ.

ಹೊಸ ಬೆಳೆ ಮಾರುಕಟ್ಟೆಗೆ ಬರಲಿರುವವರೆಗೂ ದರ ಇಳಿಯುವ ಲಕ್ಷಣ ಕಾಣದಿದ್ದರಿಂದ ಗ್ರಾಹಕರು ಕಂಗಾಲಾಗಿದ್ದರೆ, ರೈತರು ಮಾತ್ರ ಉತ್ತಮ ಬೆಲೆಯಿಂದ ತೃಪ್ತರಾಗಿದ್ದಾರೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

SCO ಶೃಂಗಸಭೆಯಲ್ಲಿ PM Narendra Modi ಹವಾ: ಪುಟಿನ್, ಪೇಜೆಶ್ಕಿಯಾನ್ ಜೊತೆ ಮಹತ್ವದ ಮಾತುಕತೆ

Published

on

ಬಿಷ್ಕೆಕ್ (ಕಿರ್ಗಿಜ್ ಗಣರಾಜ್ಯ): ಕಿರ್ಗಿಜ್ ಗಣರಾಜ್ಯದ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ 26ನೇ ಷಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ PM Narendra Modi ಭಾಗವಹಿಸಿದ್ದು, ಹಲವು ಜಾಗತಿಕ ನಾಯಕರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೇಜೆಶ್ಕಿಯಾನ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಪ್ರಧಾನಿ ಮೋದಿ ಚರ್ಚೆ ನಡೆಸಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ಕಿರ್ಗಿಜ್ ಅಧ್ಯಕ್ಷ ಸದಿರ್ ಝಪರೋವ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಬಿಷ್ಕೆಕ್‌ಗೆ ಆಗಮಿಸಿದ್ದಾರೆ. SCO ಸ್ಥಾಪನೆಯಾಗಿ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಭದ್ರತೆ, ಸಂಪರ್ಕ ಮತ್ತು ಅವಕಾಶ ಎಂಬ ಪ್ರಮುಖ ತತ್ವಗಳಿಗೆ ಭಾರತ ಹೆಚ್ಚಿನ ಆದ್ಯತೆ ನೀಡಿದೆ.

ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಉಗ್ರವಾದ, ಪ್ರತ್ಯೇಕತಾವಾದ ಹಾಗೂ ಚರಮಪಂಥ ಪ್ರಮುಖ ಸವಾಲುಗಳಾಗಿವೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಇಂತಹ ಸವಾಲುಗಳನ್ನು ಎದುರಿಸಲು ಜಾಗತಿಕ ರಾಷ್ಟ್ರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಇರಾನ್ ಅಧ್ಯಕ್ಷರೊಂದಿಗೆ ಮೋದಿ ಮಾತುಕತೆ

SCO ಶೃಂಗಸಭೆಯ ನಡುವೆಯೇ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೇಜೆಶ್ಕಿಯಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಸ್ಥಿತಿ ಹಾಗೂ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಉಭಯ ನಾಯಕರ ಭೇಟಿಗೆ ಹೆಚ್ಚಿನ ಮಹತ್ವ ಬಂದಿದೆ.

ಪ್ರಾದೇಶಿಕ ಬೆಳವಣಿಗೆಗಳು, ಶಾಂತಿ ಮತ್ತು ಸ್ಥಿರತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ.

ಪುಟಿನ್ ಜೊತೆ ಮಹತ್ವದ ದ್ವಿಪಕ್ಷೀಯ ಸಭೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೂ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಭಾರತ ಮತ್ತು ರಷ್ಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆ, ಇಂಧನ ಭದ್ರತೆ ಹಾಗೂ ಪ್ರಾದೇಶಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

ಭಾರತ-ರಷ್ಯಾ ಸಂಬಂಧಗಳ ಹಿನ್ನೆಲೆಯಲ್ಲಿ ಮೋದಿ-ಪುಟಿನ್ ಭೇಟಿ ಪ್ರಮುಖ ಬೆಳವಣಿಗೆಯಾಗಿ ಗುರುತಿಸಿಕೊಂಡಿದೆ. ಉಭಯ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ.

ಷಿ ಜಿನ್‌ಪಿಂಗ್ ಸೇರಿದಂತೆ ಹಲವು ನಾಯಕರ ಉಪಸ್ಥಿತಿ

SCO ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸೇರಿದಂತೆ ಸದಸ್ಯ ರಾಷ್ಟ್ರಗಳ ನಾಯಕರು, ಪಾಲುದಾರ ರಾಷ್ಟ್ರಗಳು ಹಾಗೂ ವೀಕ್ಷಕ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಪ್ರಾದೇಶಿಕ ಭದ್ರತೆ, ಆರ್ಥಿಕ ಸಹಕಾರ ಮತ್ತು ಯುರೇಷಿಯನ್ ಸಾರಿಗೆ ಸಂಪರ್ಕದಂತಹ ಪ್ರಮುಖ ವಿಷಯಗಳು ಶೃಂಗಸಭೆಯ ಚರ್ಚೆಯ ಕೇಂದ್ರದಲ್ಲಿವೆ.

ಇದರೊಂದಿಗೆ ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಭಾರತದ ಸಂಪರ್ಕ ಹಾಗೂ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಅವಕಾಶವೂ ಈ ಶೃಂಗಸಭೆಯಿಂದ ದೊರೆತಿದೆ.

ಯೋಗ, ಸಂಸ್ಕೃತಿಯೊಂದಿಗೆ ಮೋದಿಗೆ ಸ್ವಾಗತ

ಬಿಷ್ಕೆಕ್‌ಗೆ ಆಗಮಿಸಿದ ಪ್ರಧಾನಿ ಮೋದಿಗೆ ಭಾರತೀಯ ಮೂಲದವರು ಹಾಗೂ ಸ್ಥಳೀಯ ಯೋಗ ಮತ್ತು ಸಾಂಸ್ಕೃತಿಕ ತಂಡಗಳು ಆತ್ಮೀಯ ಸ್ವಾಗತ ಕೋರಿವೆ. ಭಾರತ ಮತ್ತು ಕಿರ್ಗಿಜ್ ಗಣರಾಜ್ಯ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಬಿಂಬಿಸುವ ಹಲವು ಕಾರ್ಯಕ್ರಮಗಳು ಕೂಡ ಗಮನ ಸೆಳೆದಿವೆ.

ಇದಲ್ಲದೆ, ಬಿಷ್ಕೆಕ್‌ನಲ್ಲಿ ನಡೆಯಲಿರುವ 6ನೇ ‘ವರ್ಲ್ಡ್ ನೊಮ್ಯಾಡ್ ಗೇಮ್ಸ್’ ಉದ್ಘಾಟನಾ ಸಮಾರಂಭದಲ್ಲೂ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ಭೇಟಿಯ ಮೂಲಕ ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳಿಗೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ.

Continue Reading

ರಾಜ್ಯ

Gruha Jyothi ಫಲಾನುಭವಿಗಳಿಗೆ ಗುಡ್‌ನ್ಯೂಸ್: ಮರುಪರಿಶೀಲನೆಗೆ ಸೆ.30ರವರೆಗೆ ಗಡುವು ವಿಸ್ತರಣೆ

Published

on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Jyothi ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಯೋಜನೆಯಡಿ ಫಲಾನುಭವಿಗಳ ಮರುಪರಿಶೀಲನೆ ನಡೆಸುವ ಅವಧಿಯನ್ನು ಇಂಧನ ಇಲಾಖೆ ಮತ್ತೆ ವಿಸ್ತರಣೆ ಮಾಡಿದೆ. ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಇದೀಗ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಲಾಗಿದೆ.

ಗೃಹಜ್ಯೋತಿ ಯೋಜನೆ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಯೋಜನೆಯಡಿ ಅನರ್ಹರಾಗಿರುವ ಫಲಾನುಭವಿಗಳನ್ನು ಗುರುತಿಸಿ ಕಡಿತಗೊಳಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ದಾಖಲೆಗಳು ಹಾಗೂ ಅರ್ಹತೆಯನ್ನು ಪರಿಶೀಲಿಸುವಂತೆ ಸೂಚನೆ ನೀಡಲಾಗಿತ್ತು.

ಮೊದಲ ಹಂತದಲ್ಲಿ ಮರುಪರಿಶೀಲನೆ ಅರ್ಜಿ ಸಲ್ಲಿಸಲು ಜುಲೈ 31ರವರೆಗೆ ಗಡುವು ನೀಡಲಾಗಿತ್ತು. ಬಳಿಕ ಸಾಕಷ್ಟು ಫಲಾನುಭವಿಗಳು ಪ್ರಕ್ರಿಯೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಆಗಸ್ಟ್‌ವರೆಗೆ ಅವಧಿಯನ್ನು ವಿಸ್ತರಿಸಲಾಗಿತ್ತು. ಆದರೂ ಇನ್ನೂ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಮರುಪರಿಶೀಲನೆಗೆ ಒಳಪಡದ ಕಾರಣ ಇದೀಗ ಸೆಪ್ಟೆಂಬರ್ ಅಂತ್ಯದವರೆಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ 22 ಲಕ್ಷ ಫಲಾನುಭವಿಗಳು ಬಾಕಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಒಟ್ಟು 68 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಆಗಸ್ಟ್ ಅಂತ್ಯದವರೆಗೆ ಸುಮಾರು 46 ಲಕ್ಷ ಫಲಾನುಭವಿಗಳ ಮರುಪರಿಶೀಲನೆ ಪೂರ್ಣಗೊಂಡಿದೆ. ಆದರೆ ಇನ್ನೂ ಸುಮಾರು 22 ಲಕ್ಷ ಫಲಾನುಭವಿಗಳು ವಿವಿಧ ಕಾರಣಗಳಿಂದ ಮರುಪರಿಶೀಲನೆ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ.

ಬಾಕಿ ಉಳಿದಿರುವ ಫಲಾನುಭವಿಗಳನ್ನು ತಲುಪಲು ಬೆಸ್ಕಾಂ ಸಿಬ್ಬಂದಿ ಮತ್ತೊಮ್ಮೆ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಸರ್ಕಾರ ನೀಡಿರುವ ಹೊಸ ಗಡುವಿನೊಳಗೆ ಮರುಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ.

ಮರುಪರಿಶೀಲನೆ ಯಶಸ್ವಿಯಾಗಿದೆಯೇ ಎಂದು ತಿಳಿಯುವುದು ಹೇಗೆ?

ಗೃಹಜ್ಯೋತಿ ಮರುಪರಿಶೀಲನೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ತಮ್ಮ ವಿದ್ಯುತ್ ಬಿಲ್ ಮೂಲಕ ಪರಿಶೀಲನೆ ಪೂರ್ಣಗೊಂಡಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ಮರುಪರಿಶೀಲನೆ ಯಶಸ್ವಿಯಾಗಿದ್ದರೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್‌ನ ಮೇಲ್ಭಾಗದಲ್ಲಿ GJSURVEYED ಎಂಬ ನಮೂದು ಕಾಣಿಸಿಕೊಳ್ಳುತ್ತದೆ.

ಒಂದು ವೇಳೆ ಫಲಾನುಭವಿಗಳು ತಡವಾಗಿ ಮರುಪರಿಶೀಲನೆ ಅರ್ಜಿ ಸಲ್ಲಿಸಿದ್ದರೆ, ಸೆಪ್ಟೆಂಬರ್ ತಿಂಗಳ ವಿದ್ಯುತ್ ಬಿಲ್‌ನಲ್ಲಿ GJSURVEYED ಎಂಬ ಮಾಹಿತಿ ನಮೂದಾಗುವ ಸಾಧ್ಯತೆ ಇದೆ. ಆದ್ದರಿಂದ ಬಿಲ್ ಬಂದ ನಂತರ ಮೇಲ್ಭಾಗದಲ್ಲಿರುವ ವಿವರಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.

ಎಸ್ಕಾಂಗಳಲ್ಲಿ ಮರುಪರಿಶೀಲನೆ ವಿವರ

ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಒಟ್ಟು 1,17,85,507 ಅರ್ಜಿಗಳ ಮರುಪರಿಶೀಲನೆ ಪೂರ್ಣಗೊಂಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 46,70,588, ಸೆಸ್ಕ್‌ನಲ್ಲಿ 15,80,597, ಜೆಸ್ಕಾಂನಲ್ಲಿ 12,00,851, ಹೆಸ್ಕಾಂನಲ್ಲಿ 28,02,935, ಎಚ್‌ಆರ್‌ಇಸಿಎಸ್‌ನಲ್ಲಿ 77,904 ಹಾಗೂ ಮೆಸ್ಕಾಂನಲ್ಲಿ 14,52,632 ಅರ್ಜಿಗಳ ಪರಿಶೀಲನೆ ನಡೆದಿದೆ.

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಕೊನೆಯ ದಿನಾಂಕವಾದ ಸೆಪ್ಟೆಂಬರ್ 30ರೊಳಗೆ ಅಗತ್ಯ ಮರುಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಒಳಿತು. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ ಸಂಖ್ಯೆ 9480816111, 9480816112, 9480816113 ಹಾಗೂ 9480816114 ಸಂಪರ್ಕಿಸಬಹುದು.

Continue Reading

ಬೆಂಗಳೂರು

Kiccha Sudeep ಭಾವುಕ ಮಾತು: ‘ನನ್ನ ಸಿನಿಮಾ ರಿಲೀಸ್ ಆಗದಿದ್ದರೆ ನನಗಿಂತ ಹೆಚ್ಚು ನೋವು ಯಾರಿಗೂ ಆಗಲ್ಲ’

Published

on

ಬೆಂಗಳೂರು: ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ Kiccha Sudeep ಅವರಿಗೆ ಸಿನಿಮಾಗಳ ಮೇಲಿರುವ ಪ್ರೀತಿ ಎಷ್ಟಿದೆ ಎಂಬುದು ಮತ್ತೊಮ್ಮೆ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನಾದರೂ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಇದೇ ವಿಚಾರವಾಗಿ ಇತ್ತೀಚೆಗೆ ನಡೆದ ‘ಬಿಗ್ ಬಾಸ್ ಕನ್ನಡ’ ಪ್ರೆಸ್‌ಮೀಟ್‌ನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸುದೀಪ್ ಭಾವುಕವಾಗಿ ಉತ್ತರಿಸಿದ್ದಾರೆ.

“ಬಿಗ್ ಬಾಸ್ ಜೊತೆಗೆ ವರ್ಷಕ್ಕೆ ನಿಮ್ಮಿಂದ ಕನಿಷ್ಠ ಎರಡು ಸಿನಿಮಾಗಳು ಬರಬೇಕು ಎಂಬುದು ಅಭಿಮಾನಿಗಳ ಆಸೆ. ನಿಮ್ಮ ಮುಂದಿನ ಪ್ಲಾನ್ ಏನು?” ಎಂದು ಪತ್ರಕರ್ತರು ಸುದೀಪ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, ತಮ್ಮ ಮೇಲೆ ಹಲವು ಜವಾಬ್ದಾರಿಗಳಿವೆ. ಆದರೆ ಸಿನಿಮಾಗಿಂತ ದೊಡ್ಡ ಪ್ರೀತಿ ಮತ್ತೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

“ಯಾವುದಾದರೂ ವರ್ಷ ನನ್ನ ಸಿನಿಮಾ ಬಿಡುಗಡೆಯಾಗದಿದ್ದರೆ ನನಗಿಂತ ಹೆಚ್ಚು ಬೇಸರ ಮತ್ತು ನೋವು ಬೇರೆಯಾರಿಗೂ ಆಗುವುದಿಲ್ಲ. ಸಿನಿಮಾ ರಿಲೀಸ್ ಆಗದಿದ್ದಾಗ ಐ ಬ್ಲೀಡ್ ಮೋರ್ ಎಂಬಷ್ಟರ ಮಟ್ಟಿಗೆ ನನಗೆ ನೋವಾಗುತ್ತದೆ” ಎಂದು ಸುದೀಪ್ ಭಾವುಕವಾಗಿ ಹೇಳಿದ್ದಾರೆ.

ತಮ್ಮ ಸಿನಿಮಾಗಳು ತಡವಾಗುವುದಕ್ಕೆ ವೈಯಕ್ತಿಕ ಕಾರಣಗಳು ಅಥವಾ ಚಿತ್ರದ ಕಥೆ ಮತ್ತು ಸ್ಕ್ರಿಪ್ಟ್‌ಗೆ ಸಂಬಂಧಿಸಿದ ಸಮಸ್ಯೆಗಳು ಕಾರಣವಾಗಬಹುದು ಎಂದು ಅವರು ವಿವರಿಸಿದರು. ಸಿನಿಮಾ ಕೆಲಸಗಳಿಂದ ದೂರ ಉಳಿದು ಸಮಯವನ್ನು ವ್ಯರ್ಥ ಮಾಡುತ್ತಿಲ್ಲ ಎಂಬುದನ್ನೂ ಸುದೀಪ್ ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಬಹುನಿರೀಕ್ಷಿತ ‘ಬಿಲ್ಲಾ ರಂಗ ಭಾಷಾ’ ಚಿತ್ರದ ಕೆಲಸದ ಕುರಿತು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಕೇವಲ ಐದುವರೆ ತಿಂಗಳ ಅವಧಿಯಲ್ಲೇ ಚಿತ್ರದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ.

‘ಬಿಲ್ಲಾ ರಂಗ ಭಾಷಾ’ ಸಿನಿಮಾಕ್ಕಾಗಿ ಸುಮಾರು 120 ದಿನಗಳ ಕಾಲ 80 ಲೊಕೇಶನ್‌ಗಳು ಹಾಗೂ 22 ಸೆಟ್‌ಗಳಲ್ಲಿ ಹಗಲಿರುಳು ಕೆಲಸ ಮಾಡಿರುವುದಾಗಿ ಸುದೀಪ್ ಹೇಳಿದ್ದಾರೆ. ಸಿನಿಮಾವೊಂದನ್ನು ಪ್ರೇಕ್ಷಕರಿಗೆ ತಲುಪಿಸುವ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ ಎಂಬುದನ್ನು ಅವರ ಮಾತುಗಳು ತೋರಿಸಿವೆ.

ಇನ್ನು ಮುಂದೆ ಹೆಚ್ಚು ಸಿನಿಮಾಗಳನ್ನು ಮಾಡುವ ದೊಡ್ಡ ಮಟ್ಟದ ಯೋಜನೆ ರೂಪಿಸಿಕೊಂಡಿರುವುದಾಗಿಯೂ ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಹೀಗಾಗಿ ಸುದೀಪ್ ಅವರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸಿನಿಮಾಗಳನ್ನು ನಿರೀಕ್ಷಿಸಬಹುದಾಗಿದೆ.

ಸದ್ಯ ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗ ಭಾಷಾ’ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 1ರಂದು ಮಧ್ಯರಾತ್ರಿ 12 ಗಂಟೆಗೆ ಚಿತ್ರದ ಫಸ್ಟ್ ಕಟ್ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಕಿಚ್ಚನ ಅಭಿಮಾನಿಗಳು ಈ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Continue Reading

Trending