ದೇಶ
World Map ಬದಲಾಗುತ್ತಾ? ಆಫ್ರಿಕಾ ನೈಜ ಗಾತ್ರ ತೋರಿಸುವ ಹೊಸ ಭೂಪಟಕ್ಕೆ UN ಒಪ್ಪಿಗೆ
ನ್ಯೂಯಾರ್ಕ್:World Map ವಿಶ್ವದ ಖಂಡಗಳ ಗಾತ್ರವನ್ನು ಹೆಚ್ಚು ನಿಖರವಾಗಿ ಪ್ರತಿನಿಧಿಸುವ ನಕ್ಷೆಗಳ ಬಳಕೆಯನ್ನು ಉತ್ತೇಜಿಸುವ ಮಹತ್ವದ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದೆ. ಶುಕ್ರವಾರ ನಡೆದ ಮತದಾನದಲ್ಲಿ 164 ದೇಶಗಳು ನಿರ್ಣಯದ ಪರ ಮತ ಹಾಕಿದ್ದು, ಅಮೆರಿಕ ಮಾತ್ರ ವಿರೋಧವಾಗಿ ಮತ ಚಲಾಯಿಸಿದೆ. ಆರು ದೇಶಗಳು ಮತದಾನದಿಂದ ದೂರ ಉಳಿದಿವೆ.
ಈ ನಿರ್ಣಯದ ಕೇಂದ್ರಬಿಂದುವಾಗಿರುವುದು Equal Earth cartographic projection. ಸಾಂಪ್ರದಾಯಿಕ Mercator projectionಗೆ ಹೋಲಿಸಿದರೆ ಈ ನಕ್ಷೆಯು ಭೂಖಂಡಗಳ ವಿಸ್ತೀರ್ಣವನ್ನು ಹೆಚ್ಚು ನೈಜ ಪ್ರಮಾಣದಲ್ಲಿ ತೋರಿಸುತ್ತದೆ. ವಿಶೇಷವಾಗಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾ ಖಂಡಗಳು ತಮ್ಮ ನೈಜ ವಿಸ್ತೀರ್ಣಕ್ಕೆ ಹೆಚ್ಚು ಹತ್ತಿರವಾಗಿ ಕಾಣಿಸಲಿವೆ.
ಏನಿದು Equal Earth Map?
Equal Earth projection ಅನ್ನು 2018ರಲ್ಲಿ ಭೂಪಟ ತಜ್ಞರಾದ Bojan Šavrič, Tom Patterson ಮತ್ತು Bernhard Jenny ಅಭಿವೃದ್ಧಿಪಡಿಸಿದ್ದರು. ಗೋಳಾಕಾರದ ಭೂಮಿಯನ್ನು ಸಮತಟ್ಟಾದ ನಕ್ಷೆಯಲ್ಲಿ ತೋರಿಸುವಾಗ ಉಂಟಾಗುವ ವಿಸ್ತೀರ್ಣದ ವ್ಯತ್ಯಾಸವನ್ನು ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ವಿಶ್ವಸಂಸ್ಥೆಯ ನಿರ್ಣಯವು Equal Earth ಸೇರಿದಂತೆ ಭೂಖಂಡಗಳ ನೈಜ ವಿಸ್ತೀರ್ಣವನ್ನು ಹೆಚ್ಚು ನಿಖರವಾಗಿ ಪ್ರತಿನಿಧಿಸುವ ನಕ್ಷೆಗಳ ಬಳಕೆಯನ್ನು ಉತ್ತೇಜಿಸುತ್ತದೆ. ಈ ನಿರ್ಣಯವು ಕಡ್ಡಾಯ ಕಾನೂನುಬದ್ಧ ಬದಲಾವಣೆ ಮಾಡುವುದಿಲ್ಲ. ಬದಲಾಗಿ ಸದಸ್ಯ ರಾಷ್ಟ್ರಗಳು, ಸಂಸ್ಥೆಗಳು ಮತ್ತು ಇತರ ಬಳಕೆದಾರರು ಹೆಚ್ಚು ನಿಖರವಾದ ಭೂಪಟಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
Mercator Mapನಲ್ಲಿ ಏಕೆ ವ್ಯತ್ಯಾಸ ಕಾಣಿಸುತ್ತದೆ?
1569ರಲ್ಲಿ ಫ್ಲೆಮಿಶ್ ಭೂಪಟ ತಜ್ಞ ಜೆರಾರ್ಡಸ್ ಮರ್ಕೇಟರ್ ಅಭಿವೃದ್ಧಿಪಡಿಸಿದ Mercator projection ಮೂಲತಃ ಸಮುದ್ರಯಾನ ಮತ್ತು ದಿಕ್ಕುಗಳನ್ನು ನಿಖರವಾಗಿ ತೋರಿಸಲು ಬಹಳ ಉಪಯುಕ್ತವಾಗಿತ್ತು. ಆದರೆ ಈ projectionನಲ್ಲಿ ಧ್ರುವ ಪ್ರದೇಶಗಳತ್ತ ಸಾಗಿದಂತೆ ಭೂಪ್ರದೇಶಗಳು ನೈಜ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸುತ್ತವೆ.
ಇದರ ಪರಿಣಾಮವಾಗಿ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಂತಹ ಸಮಭಾಜಕ ರೇಖೆಯ ಸಮೀಪದ ಪ್ರದೇಶಗಳು ತಮ್ಮ ನೈಜ ವಿಸ್ತೀರ್ಣಕ್ಕಿಂತ ಚಿಕ್ಕದಾಗಿ ಕಾಣುತ್ತವೆ. ಮತ್ತೊಂದೆಡೆ, ಉತ್ತರ ಯುರೋಪ್, ಕೆನಡಾ ಮತ್ತು ಗ್ರೀನ್ಲ್ಯಾಂಡ್ನಂತಹ ಉತ್ತರದ ಪ್ರದೇಶಗಳು ಹೆಚ್ಚು ದೊಡ್ಡದಾಗಿ ಕಾಣಿಸುತ್ತವೆ.
ಉದಾಹರಣೆಗೆ, Mercator ನಕ್ಷೆಯಲ್ಲಿ ಗ್ರೀನ್ಲ್ಯಾಂಡ್ ಮತ್ತು ಆಫ್ರಿಕಾ ಒಂದೇ ರೀತಿಯ ಗಾತ್ರ ಹೊಂದಿರುವಂತೆ ಭಾಸವಾಗಬಹುದು. ಆದರೆ ವಾಸ್ತವದಲ್ಲಿ ಆಫ್ರಿಕಾದ ವಿಸ್ತೀರ್ಣ ಗ್ರೀನ್ಲ್ಯಾಂಡ್ಗಿಂತ ಸುಮಾರು 14 ಪಟ್ಟು ದೊಡ್ಡದಾಗಿದೆ.
164 ದೇಶಗಳ ಬೆಂಬಲ, ಅಮೆರಿಕ ವಿರೋಧ
ಟೋಗೋ ನೇತೃತ್ವದಲ್ಲಿ ಮತ್ತು ಆಫ್ರಿಕನ್ ರಾಷ್ಟ್ರಗಳ ಬೆಂಬಲದೊಂದಿಗೆ ಈ ನಿರ್ಣಯವನ್ನು ಮುಂದಿಡಲಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಟ್ಟು 164 ದೇಶಗಳು ನಿರ್ಣಯದ ಪರ ಮತ ಚಲಾಯಿಸಿದವು. ಅಮೆರಿಕ ಮಾತ್ರ ವಿರುದ್ಧವಾಗಿ ಮತ ಹಾಕಿದ್ದು, ಆರು ದೇಶಗಳು ಮತದಾನದಿಂದ ದೂರ ಉಳಿದವು.
ನಿರ್ಣಯದ ಪರವಾಗಿರುವ ರಾಷ್ಟ್ರಗಳ ವಾದದ ಪ್ರಕಾರ, ನಕ್ಷೆಗಳು ಕೇವಲ ಭೌಗೋಳಿಕ ಮಾಹಿತಿಯನ್ನು ನೀಡುವುದಲ್ಲ. ಅವು ಶಾಲಾ ಶಿಕ್ಷಣ, ಜನರ ಜಾಗತಿಕ ಕಲ್ಪನೆ ಮತ್ತು ವಿವಿಧ ಪ್ರದೇಶಗಳ ಬಗ್ಗೆ ಇರುವ ಗ್ರಹಿಕೆಗಳ ಮೇಲೂ ಪರಿಣಾಮ ಬೀರುತ್ತವೆ.
ಟೋಗೋ ವಿದೇಶಾಂಗ ಸಚಿವ ರಾಬರ್ಟ್ ಡಸ್ಸೆ, ನಕ್ಷೆಗಳು ಜಗತ್ತಿನ ಬಗ್ಗೆ ಜನರ ಗ್ರಹಿಕೆಯನ್ನು ರೂಪಿಸುವುದರಿಂದ ಅವುಗಳಲ್ಲಿನ ತಪ್ಪಾದ ಪ್ರಾತಿನಿಧ್ಯವನ್ನು ಸರಿಪಡಿಸುವುದು ಮುಖ್ಯ ಎಂದು ಹೇಳಿದ್ದಾರೆ.
ಅಮೆರಿಕ ಏಕೆ ವಿರೋಧಿಸಿತು?
ಅಮೆರಿಕ ಈ ನಿರ್ಣಯವನ್ನು ವಿರೋಧಿಸಿದ್ದು, ವಿಶ್ವಸಂಸ್ಥೆ ಜಾಗತಿಕ ಸಮಸ್ಯೆಗಳ ಬದಲಿಗೆ ಹಳೆಯ ಭೂಪಟಗಳ ಕುರಿತು ಚರ್ಚಿಸುವ ಮೂಲಕ ತನ್ನ ಗಮನವನ್ನು ಬೇರೆಡೆ ಹರಿಸುತ್ತಿದೆ ಎಂದು ವಾದಿಸಿದೆ. ಅಮೆರಿಕದ ಪ್ರತಿನಿಧಿಗಳು ಈ ಕ್ರಮವನ್ನು ಅಗತ್ಯವಿಲ್ಲದ ಹಾಗೂ ಸೈದ್ಧಾಂತಿಕ ಚರ್ಚೆಯಾಗಿ ಟೀಕಿಸಿದ್ದಾರೆ.
Mercator Map ಸಂಪೂರ್ಣವಾಗಿ ನಿಷೇಧವಾಗುತ್ತದೆಯೇ?
ಇಲ್ಲ. ಇದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ. ವಿಶ್ವಸಂಸ್ಥೆಯ ನಿರ್ಣಯವು Mercator projection ಅನ್ನು ಜಗತ್ತಿನಾದ್ಯಂತ ತಕ್ಷಣವೇ ನಿಷೇಧಿಸುವುದಿಲ್ಲ.
Mercator projectionಗೆ ನಾವಿಕ ಸಂಚಾರದಲ್ಲಿ ದಿಕ್ಕು ಮತ್ತು ಕೋನಗಳನ್ನು ತೋರಿಸುವಂತಹ ನಿರ್ದಿಷ್ಟ ಉಪಯೋಗಗಳಿವೆ. ಆದ್ದರಿಂದ ಅದರ ಬಳಕೆ ಮುಂದುವರಿಯಬಹುದು. ಆದರೆ ಶಾಲೆಗಳು, ಶೈಕ್ಷಣಿಕ ಸಂಸ್ಥೆಗಳು, ಮಾಧ್ಯಮಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಖಂಡಗಳ ನೈಜ ವಿಸ್ತೀರ್ಣವನ್ನು ಹೆಚ್ಚು ನಿಖರವಾಗಿ ತೋರಿಸುವ ಪರ್ಯಾಯ ನಕ್ಷೆಗಳ ಬಳಕೆಗೆ ಈ ನಿರ್ಣಯ ಉತ್ತೇಜನ ನೀಡುತ್ತದೆ.
ಶಾಲಾ ಪಠ್ಯಪುಸ್ತಕಗಳಲ್ಲೂ ಬದಲಾವಣೆ ಸಾಧ್ಯತೆ
ಹೊಸ ನಕ್ಷೆಯ ಬಳಕೆಯಿಂದ ಭೌಗೋಳಿಕ ಶಿಕ್ಷಣದಲ್ಲಿ ಖಂಡಗಳ ನೈಜ ವಿಸ್ತೀರ್ಣದ ಕುರಿತು ವಿದ್ಯಾರ್ಥಿಗಳಿಗೆ ಹೆಚ್ಚು ನಿಖರವಾದ ಚಿತ್ರಣ ಸಿಗುವ ಸಾಧ್ಯತೆಯಿದೆ. ಟೋಗೋ ಸೇರಿದಂತೆ ಕೆಲವು ರಾಷ್ಟ್ರಗಳು ತಮ್ಮ ಶೈಕ್ಷಣಿಕ ಸಾಮಗ್ರಿಗಳಲ್ಲಿ ಹೊಸ projection ಅಳವಡಿಸಿಕೊಳ್ಳುವ ಯೋಜನೆಗಳನ್ನು ಪ್ರಕಟಿಸಿವೆ.
ಒಟ್ಟಿನಲ್ಲಿ, ವಿಶ್ವಸಂಸ್ಥೆಯ ಈ ನಿರ್ಣಯವು ಕೇವಲ ನಕ್ಷೆಯ ವಿನ್ಯಾಸ ಬದಲಾವಣೆಯಲ್ಲ. ವಿಶ್ವದ ವಿವಿಧ ಪ್ರದೇಶಗಳನ್ನು ಭೌಗೋಳಿಕವಾಗಿ ಹೆಚ್ಚು ನಿಖರವಾಗಿ ಪ್ರತಿನಿಧಿಸುವ ಪ್ರಯತ್ನವಾಗಿ ಇದನ್ನು ನೋಡಲಾಗುತ್ತಿದೆ. ವಿಶೇಷವಾಗಿ ಆಫ್ರಿಕಾದ ನೈಜ ವಿಸ್ತೀರ್ಣದ ಬಗ್ಗೆ ದೀರ್ಘಕಾಲದಿಂದ ಇರುವ ತಪ್ಪು ಗ್ರಹಿಕೆಯನ್ನು ಸರಿಪಡಿಸುವತ್ತ ಇದು ಮಹತ್ವದ ಹೆಜ್ಜೆಯಾಗಿದೆ.ನ್ಯೂಯಾರ್ಕ್: ವಿಶ್ವದ ಖಂಡಗಳ ಗಾತ್ರವನ್ನು ಹೆಚ್ಚು ನಿಖರವಾಗಿ ಪ್ರತಿನಿಧಿಸುವ ನಕ್ಷೆಗಳ ಬಳಕೆಯನ್ನು ಉತ್ತೇಜಿಸುವ ಮಹತ್ವದ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದೆ. ಶುಕ್ರವಾರ ನಡೆದ ಮತದಾನದಲ್ಲಿ 164 ದೇಶಗಳು ನಿರ್ಣಯದ ಪರ ಮತ ಹಾಕಿದ್ದು, ಅಮೆರಿಕ ಮಾತ್ರ ವಿರೋಧವಾಗಿ ಮತ ಚಲಾಯಿಸಿದೆ. ಆರು ದೇಶಗಳು ಮತದಾನದಿಂದ ದೂರ ಉಳಿದಿವೆ.
ಈ ನಿರ್ಣಯದ ಕೇಂದ್ರಬಿಂದುವಾಗಿರುವುದು Equal Earth cartographic projection. ಸಾಂಪ್ರದಾಯಿಕ Mercator projectionಗೆ ಹೋಲಿಸಿದರೆ ಈ ನಕ್ಷೆಯು ಭೂಖಂಡಗಳ ವಿಸ್ತೀರ್ಣವನ್ನು ಹೆಚ್ಚು ನೈಜ ಪ್ರಮಾಣದಲ್ಲಿ ತೋರಿಸುತ್ತದೆ. ವಿಶೇಷವಾಗಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾ ಖಂಡಗಳು ತಮ್ಮ ನೈಜ ವಿಸ್ತೀರ್ಣಕ್ಕೆ ಹೆಚ್ಚು ಹತ್ತಿರವಾಗಿ ಕಾಣಿಸಲಿವೆ.
ಏನಿದು Equal Earth Map?
Equal Earth projection ಅನ್ನು 2018ರಲ್ಲಿ ಭೂಪಟ ತಜ್ಞರಾದ Bojan Šavrič, Tom Patterson ಮತ್ತು Bernhard Jenny ಅಭಿವೃದ್ಧಿಪಡಿಸಿದ್ದರು. ಗೋಳಾಕಾರದ ಭೂಮಿಯನ್ನು ಸಮತಟ್ಟಾದ ನಕ್ಷೆಯಲ್ಲಿ ತೋರಿಸುವಾಗ ಉಂಟಾಗುವ ವಿಸ್ತೀರ್ಣದ ವ್ಯತ್ಯಾಸವನ್ನು ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ವಿಶ್ವಸಂಸ್ಥೆಯ ನಿರ್ಣಯವು Equal Earth ಸೇರಿದಂತೆ ಭೂಖಂಡಗಳ ನೈಜ ವಿಸ್ತೀರ್ಣವನ್ನು ಹೆಚ್ಚು ನಿಖರವಾಗಿ ಪ್ರತಿನಿಧಿಸುವ ನಕ್ಷೆಗಳ ಬಳಕೆಯನ್ನು ಉತ್ತೇಜಿಸುತ್ತದೆ. ಈ ನಿರ್ಣಯವು ಕಡ್ಡಾಯ ಕಾನೂನುಬದ್ಧ ಬದಲಾವಣೆ ಮಾಡುವುದಿಲ್ಲ. ಬದಲಾಗಿ ಸದಸ್ಯ ರಾಷ್ಟ್ರಗಳು, ಸಂಸ್ಥೆಗಳು ಮತ್ತು ಇತರ ಬಳಕೆದಾರರು ಹೆಚ್ಚು ನಿಖರವಾದ ಭೂಪಟಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
Mercator Mapನಲ್ಲಿ ಏಕೆ ವ್ಯತ್ಯಾಸ ಕಾಣಿಸುತ್ತದೆ?
1569ರಲ್ಲಿ ಫ್ಲೆಮಿಶ್ ಭೂಪಟ ತಜ್ಞ ಜೆರಾರ್ಡಸ್ ಮರ್ಕೇಟರ್ ಅಭಿವೃದ್ಧಿಪಡಿಸಿದ Mercator projection ಮೂಲತಃ ಸಮುದ್ರಯಾನ ಮತ್ತು ದಿಕ್ಕುಗಳನ್ನು ನಿಖರವಾಗಿ ತೋರಿಸಲು ಬಹಳ ಉಪಯುಕ್ತವಾಗಿತ್ತು. ಆದರೆ ಈ projectionನಲ್ಲಿ ಧ್ರುವ ಪ್ರದೇಶಗಳತ್ತ ಸಾಗಿದಂತೆ ಭೂಪ್ರದೇಶಗಳು ನೈಜ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸುತ್ತವೆ.
ಇದರ ಪರಿಣಾಮವಾಗಿ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಂತಹ ಸಮಭಾಜಕ ರೇಖೆಯ ಸಮೀಪದ ಪ್ರದೇಶಗಳು ತಮ್ಮ ನೈಜ ವಿಸ್ತೀರ್ಣಕ್ಕಿಂತ ಚಿಕ್ಕದಾಗಿ ಕಾಣುತ್ತವೆ. ಮತ್ತೊಂದೆಡೆ, ಉತ್ತರ ಯುರೋಪ್, ಕೆನಡಾ ಮತ್ತು ಗ್ರೀನ್ಲ್ಯಾಂಡ್ನಂತಹ ಉತ್ತರದ ಪ್ರದೇಶಗಳು ಹೆಚ್ಚು ದೊಡ್ಡದಾಗಿ ಕಾಣಿಸುತ್ತವೆ.
ಉದಾಹರಣೆಗೆ, Mercator ನಕ್ಷೆಯಲ್ಲಿ ಗ್ರೀನ್ಲ್ಯಾಂಡ್ ಮತ್ತು ಆಫ್ರಿಕಾ ಒಂದೇ ರೀತಿಯ ಗಾತ್ರ ಹೊಂದಿರುವಂತೆ ಭಾಸವಾಗಬಹುದು. ಆದರೆ ವಾಸ್ತವದಲ್ಲಿ ಆಫ್ರಿಕಾದ ವಿಸ್ತೀರ್ಣ ಗ್ರೀನ್ಲ್ಯಾಂಡ್ಗಿಂತ ಸುಮಾರು 14 ಪಟ್ಟು ದೊಡ್ಡದಾಗಿದೆ.
164 ದೇಶಗಳ ಬೆಂಬಲ, ಅಮೆರಿಕ ವಿರೋಧ
ಟೋಗೋ ನೇತೃತ್ವದಲ್ಲಿ ಮತ್ತು ಆಫ್ರಿಕನ್ ರಾಷ್ಟ್ರಗಳ ಬೆಂಬಲದೊಂದಿಗೆ ಈ ನಿರ್ಣಯವನ್ನು ಮುಂದಿಡಲಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಟ್ಟು 164 ದೇಶಗಳು ನಿರ್ಣಯದ ಪರ ಮತ ಚಲಾಯಿಸಿದವು. ಅಮೆರಿಕ ಮಾತ್ರ ವಿರುದ್ಧವಾಗಿ ಮತ ಹಾಕಿದ್ದು, ಆರು ದೇಶಗಳು ಮತದಾನದಿಂದ ದೂರ ಉಳಿದವು.
ನಿರ್ಣಯದ ಪರವಾಗಿರುವ ರಾಷ್ಟ್ರಗಳ ವಾದದ ಪ್ರಕಾರ, ನಕ್ಷೆಗಳು ಕೇವಲ ಭೌಗೋಳಿಕ ಮಾಹಿತಿಯನ್ನು ನೀಡುವುದಲ್ಲ. ಅವು ಶಾಲಾ ಶಿಕ್ಷಣ, ಜನರ ಜಾಗತಿಕ ಕಲ್ಪನೆ ಮತ್ತು ವಿವಿಧ ಪ್ರದೇಶಗಳ ಬಗ್ಗೆ ಇರುವ ಗ್ರಹಿಕೆಗಳ ಮೇಲೂ ಪರಿಣಾಮ ಬೀರುತ್ತವೆ.
ಟೋಗೋ ವಿದೇಶಾಂಗ ಸಚಿವ ರಾಬರ್ಟ್ ಡಸ್ಸೆ, ನಕ್ಷೆಗಳು ಜಗತ್ತಿನ ಬಗ್ಗೆ ಜನರ ಗ್ರಹಿಕೆಯನ್ನು ರೂಪಿಸುವುದರಿಂದ ಅವುಗಳಲ್ಲಿನ ತಪ್ಪಾದ ಪ್ರಾತಿನಿಧ್ಯವನ್ನು ಸರಿಪಡಿಸುವುದು ಮುಖ್ಯ ಎಂದು ಹೇಳಿದ್ದಾರೆ.
ಅಮೆರಿಕ ಏಕೆ ವಿರೋಧಿಸಿತು?
ಅಮೆರಿಕ ಈ ನಿರ್ಣಯವನ್ನು ವಿರೋಧಿಸಿದ್ದು, ವಿಶ್ವಸಂಸ್ಥೆ ಜಾಗತಿಕ ಸಮಸ್ಯೆಗಳ ಬದಲಿಗೆ ಹಳೆಯ ಭೂಪಟಗಳ ಕುರಿತು ಚರ್ಚಿಸುವ ಮೂಲಕ ತನ್ನ ಗಮನವನ್ನು ಬೇರೆಡೆ ಹರಿಸುತ್ತಿದೆ ಎಂದು ವಾದಿಸಿದೆ. ಅಮೆರಿಕದ ಪ್ರತಿನಿಧಿಗಳು ಈ ಕ್ರಮವನ್ನು ಅಗತ್ಯವಿಲ್ಲದ ಹಾಗೂ ಸೈದ್ಧಾಂತಿಕ ಚರ್ಚೆಯಾಗಿ ಟೀಕಿಸಿದ್ದಾರೆ.
Mercator Map ಸಂಪೂರ್ಣವಾಗಿ ನಿಷೇಧವಾಗುತ್ತದೆಯೇ?
ಇಲ್ಲ. ಇದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ. ವಿಶ್ವಸಂಸ್ಥೆಯ ನಿರ್ಣಯವು Mercator projection ಅನ್ನು ಜಗತ್ತಿನಾದ್ಯಂತ ತಕ್ಷಣವೇ ನಿಷೇಧಿಸುವುದಿಲ್ಲ.
Mercator projectionಗೆ ನಾವಿಕ ಸಂಚಾರದಲ್ಲಿ ದಿಕ್ಕು ಮತ್ತು ಕೋನಗಳನ್ನು ತೋರಿಸುವಂತಹ ನಿರ್ದಿಷ್ಟ ಉಪಯೋಗಗಳಿವೆ. ಆದ್ದರಿಂದ ಅದರ ಬಳಕೆ ಮುಂದುವರಿಯಬಹುದು. ಆದರೆ ಶಾಲೆಗಳು, ಶೈಕ್ಷಣಿಕ ಸಂಸ್ಥೆಗಳು, ಮಾಧ್ಯಮಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಖಂಡಗಳ ನೈಜ ವಿಸ್ತೀರ್ಣವನ್ನು ಹೆಚ್ಚು ನಿಖರವಾಗಿ ತೋರಿಸುವ ಪರ್ಯಾಯ ನಕ್ಷೆಗಳ ಬಳಕೆಗೆ ಈ ನಿರ್ಣಯ ಉತ್ತೇಜನ ನೀಡುತ್ತದೆ.
ಶಾಲಾ ಪಠ್ಯಪುಸ್ತಕಗಳಲ್ಲೂ ಬದಲಾವಣೆ ಸಾಧ್ಯತೆ
ಹೊಸ ನಕ್ಷೆಯ ಬಳಕೆಯಿಂದ ಭೌಗೋಳಿಕ ಶಿಕ್ಷಣದಲ್ಲಿ ಖಂಡಗಳ ನೈಜ ವಿಸ್ತೀರ್ಣದ ಕುರಿತು ವಿದ್ಯಾರ್ಥಿಗಳಿಗೆ ಹೆಚ್ಚು ನಿಖರವಾದ ಚಿತ್ರಣ ಸಿಗುವ ಸಾಧ್ಯತೆಯಿದೆ. ಟೋಗೋ ಸೇರಿದಂತೆ ಕೆಲವು ರಾಷ್ಟ್ರಗಳು ತಮ್ಮ ಶೈಕ್ಷಣಿಕ ಸಾಮಗ್ರಿಗಳಲ್ಲಿ ಹೊಸ projection ಅಳವಡಿಸಿಕೊಳ್ಳುವ ಯೋಜನೆಗಳನ್ನು ಪ್ರಕಟಿಸಿವೆ.
ಒಟ್ಟಿನಲ್ಲಿ, ವಿಶ್ವಸಂಸ್ಥೆಯ ಈ ನಿರ್ಣಯವು ಕೇವಲ ನಕ್ಷೆಯ ವಿನ್ಯಾಸ ಬದಲಾವಣೆಯಲ್ಲ. ವಿಶ್ವದ ವಿವಿಧ ಪ್ರದೇಶಗಳನ್ನು ಭೌಗೋಳಿಕವಾಗಿ ಹೆಚ್ಚು ನಿಖರವಾಗಿ ಪ್ರತಿನಿಧಿಸುವ ಪ್ರಯತ್ನವಾಗಿ ಇದನ್ನು ನೋಡಲಾಗುತ್ತಿದೆ. ವಿಶೇಷವಾಗಿ ಆಫ್ರಿಕಾದ ನೈಜ ವಿಸ್ತೀರ್ಣದ ಬಗ್ಗೆ ದೀರ್ಘಕಾಲದಿಂದ ಇರುವ ತಪ್ಪು ಗ್ರಹಿಕೆಯನ್ನು ಸರಿಪಡಿಸುವತ್ತ ಇದು ಮಹತ್ವದ ಹೆಜ್ಜೆಯಾಗಿದೆ.
ದೇಶ
Air India ಪೈಲಟ್ಗಳಿಗೆ 100% Drug ಟೆಸ್ಟ್: ಫುಕೇಟ್-ದೆಹಲಿ ವಿಮಾನ ಘಟನೆ ಬಳಿಕ ಮಹತ್ವದ ನಿರ್ಧಾರ
ನವದೆಹಲಿ: ಫುಕೇಟ್ನಿಂದ ನವದೆಹಲಿಗೆ ಆಗಮಿಸುತ್ತಿದ್ದ Air India ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಘಟನೆ ಹಾಗೂ ಪೈಲಟ್ನ ಫಿಟ್ನೆಸ್ಗೆ ಸಂಬಂಧಿಸಿದ ವರದಿಗಳ ಬೆನ್ನಲ್ಲೇ ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್ಗಳಿಗೆ ಶೇಕಡಾ 100ರಷ್ಟು ಸ್ವಯಂಪ್ರೇರಿತ ವೈದ್ಯಕೀಯ ಮತ್ತು ಡ್ರಗ್ ತಪಾಸಣೆ ಆರಂಭಿಸಿದೆ.
ವಿಮಾನಯಾನ ಸುರಕ್ಷತೆ ಮತ್ತು ನಿಯಮಗಳ ಪಾಲನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಏರ್ ಇಂಡಿಯಾ ತಿಳಿಸಿದೆ. ವಿಮಾನಯಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿ ಬಿಡುಗಡೆ ಮಾಡಿದ ಬಳಿಕ ಸಂಸ್ಥೆ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಮತ್ತು ವೈದ್ಯಕೀಯ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ಏರ್ ಇಂಡಿಯಾ ಹೇಳಿದೆ. ತನಿಖಾಧಿಕಾರಿಗಳಿಗೆ ವಿಮಾನದ ಕಾರ್ಯಾಚರಣೆ, ನಿರ್ವಹಣೆ, ತಾಂತ್ರಿಕ ದಾಖಲೆಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಫುಕೇಟ್-ದೆಹಲಿ ವಿಮಾನದಲ್ಲಿ ಏನಾಗಿತ್ತು?
ಆಗಸ್ಟ್ 4ರಂದು ಫುಕೇಟ್ನಿಂದ ದೆಹಲಿಗೆ ತೆರಳುತ್ತಿದ್ದ AI-2379 ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಹಾರಾಟದ ವೇಳೆ ವಿಮಾನದ ಟ್ರಿಪಲ್ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದಿಢೀರ್ ಕುಸಿತ ಉಂಟಾದ ಪರಿಣಾಮ ವಿಮಾನದ ಎತ್ತರದಲ್ಲಿ ಏರಿಳಿತ ಸಂಭವಿಸಿತ್ತು ಎಂದು ವರದಿಯಾಗಿದೆ.
ಈ ಘಟನೆಯ ಪರಿಣಾಮ ವಿಮಾನದ ಒಳಭಾಗಕ್ಕೆ ಹಾನಿಯಾಗಿದ್ದು, 24 ಪ್ರಯಾಣಿಕರು ಗಾಯಗೊಂಡಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ವಿಮಾನ ಸಿಬ್ಬಂದಿಗೆ ಮದ್ಯಪಾನ ತಪಾಸಣೆ ನಡೆಸಲಾಗಿತ್ತು. ಬ್ರೀತ್ ವಿಶ್ಲೇಷಣೆ ಪರೀಕ್ಷೆಯಲ್ಲಿ ಪೈಲಟ್ಗಳ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಮುಖ್ಯ ಪೈಲಟ್ಗೆ ನಡೆಸಲಾದ ಪ್ರಾಥಮಿಕ ಹಾಗೂ ನಂತರದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಸೈಕೋಆಕ್ಟಿವ್ ಸಬ್ಸ್ಟೆನ್ಸ್ಗೆ ಸಂಬಂಧಿಸಿದ ಅಂಶ ಪತ್ತೆಯಾಗಿದೆ ಎಂಬ ವರದಿ ಬೆಳಕಿಗೆ ಬಂದಿದೆ.
ಎಲ್ಲಾ ಪೈಲಟ್ಗಳಿಗೂ ತಪಾಸಣೆ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಏರ್ ಇಂಡಿಯಾ, ತನ್ನ ವಿಮಾನ ಸಿಬ್ಬಂದಿಯ ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಹಾಗೂ ಸುರಕ್ಷತಾ ಮಾನದಂಡಗಳ ಮೇಲೆ ಮತ್ತಷ್ಟು ಗಮನ ಹರಿಸಿದೆ.
ಪೈಲಟ್ಗಳಿಗೆ ನಿಯಮಿತ ತರಬೇತಿ, ವೈದ್ಯಕೀಯ ಪರೀಕ್ಷೆಗಳು ಮತ್ತು ವಿವಿಧ ಸುರಕ್ಷತಾ ತಪಾಸಣೆಗಳು ಈಗಾಗಲೇ ನಡೆಯುತ್ತಿವೆ. ಆದರೆ ಇತ್ತೀಚಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ ಎಲ್ಲಾ ಪೈಲಟ್ಗಳನ್ನು ಸ್ವಯಂಪ್ರೇರಿತ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ
ವಿಮಾನಯಾನ ಸುರಕ್ಷತಾ ನಿಯಮಗಳು ಮತ್ತು ಮಾನದಂಡಗಳ ಪಾಲನೆಯಲ್ಲಿ ಯಾವುದೇ ರೀತಿಯ ಲೋಪವನ್ನು ಸಹಿಸುವುದಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಪ್ರಕರಣದ ತನಿಖೆಯಿಂದ ಹೊರಬರುವ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.
ಪ್ರಯಾಣಿಕರ ಸುರಕ್ಷತೆಯೇ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದ್ದು, ತಾಂತ್ರಿಕ ದೋಷಗಳು ಹಾಗೂ ಸಿಬ್ಬಂದಿಯ ಫಿಟ್ನೆಸ್ಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ.
ದೇಶ
Mann Ki Baat ಖ್ಯಾತಿಯ ನಿಂಗಮ್ಮಗೆ ಜಿಬಿಎ ಶಾಕ್: ಬೀದಿಬದಿ ವ್ಯಾಪಾರಕ್ಕೆ ಬ್ರೇಕ್?
ಬೆಂಗಳೂರು: PM Narendra Modi ಅವರ ‘Mann Ki Baat’ ಕಾರ್ಯಕ್ರಮದಲ್ಲಿ ಮೆಚ್ಚುಗೆ ಪಡೆದಿದ್ದ ಬೆಂಗಳೂರಿನ ಬೀದಿಬದಿ ವ್ಯಾಪಾರಿ ಟಿ.ಎಸ್. ನಿಂಗಮ್ಮ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಹೊಸಹಳ್ಳಿ ಮೆಟ್ರೋ ನಿಲ್ದಾಣದ ಸಮೀಪ ಫುಟ್ಪಾತ್ನಲ್ಲಿ ಹೋಟೆಲ್ ನಡೆಸುತ್ತಿರುವ ನಿಂಗಮ್ಮ ಅವರಿಗೆ ವ್ಯಾಪಾರ ಮುಂದುವರಿಸದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ.
ಹಾಸನ ಮೂಲದವರಾದ ಟಿ.ಎಸ್. ನಿಂಗಮ್ಮ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು, ಕಳೆದ ಹಲವು ವರ್ಷಗಳಿಂದ ಬೀದಿಬದಿ ವ್ಯಾಪಾರ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ವನಿಧಿ ಯೋಜನೆಯ ನೆರವು ಪಡೆದು ಮಾಗಡಿ ರಸ್ತೆಯ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸಣ್ಣ ಹೋಟೆಲ್ ನಡೆಸುತ್ತಿದ್ದು, ಅದರಿಂದ ಬರುವ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ತಮ್ಮ ಮಕ್ಕಳ ಶಿಕ್ಷಣಕ್ಕೂ ಈ ವ್ಯಾಪಾರದಿಂದ ಬಂದ ಹಣವನ್ನು ಬಳಸುತ್ತಿದ್ದಾರೆ.
ನಿಂಗಮ್ಮ ಅವರ ಪರಿಶ್ರಮ ಮತ್ತು ಜೀವನಕಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪ್ರಸಾರವಾದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಾದ ಬಳಿಕ ನಿಂಗಮ್ಮ ಅವರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಿತ್ತು.
ಜಿಬಿಎ ಅಧಿಕಾರಿಗಳ ಸೂಚನೆಯಿಂದ ಆತಂಕ
ಮನ್ ಕಿ ಬಾತ್ನಲ್ಲಿ ಪ್ರಧಾನಿಯವರು ತಮ್ಮ ಹೆಸರನ್ನು ಪ್ರಸ್ತಾಪಿಸಿದ ಬಳಿಕ ಸ್ಥಳೀಯವಾಗಿ ನಿಂಗಮ್ಮ ಅವರಿಗೆ ಗೌರವವೂ ದೊರೆತಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಜಿಬಿಎ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಆಗಮಿಸಿ ಹೋಟೆಲ್ ತೆರವುಗೊಳಿಸುವಂತೆ ಸೂಚಿಸಿದ್ದಾರೆ ಎಂದು ನಿಂಗಮ್ಮ ತಿಳಿಸಿದ್ದಾರೆ.
ಸುಮಾರು 20ರಿಂದ 25 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವುದಾಗಿ ಹೇಳಿರುವ ನಿಂಗಮ್ಮ, ಈಗ ಏಕಾಏಕಿ ಅಂಗಡಿ ತೆರವುಗೊಳಿಸುವಂತೆ ಸೂಚಿಸಿದರೆ ತಮ್ಮ ಜೀವನೋಪಾಯಕ್ಕೆ ಏನು ಮಾಡಬೇಕು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
“ಹೋಟೆಲ್ ಎತ್ತಿಸಿ ಎಂದರೆ ನಾವು ಎಲ್ಲಿಗೆ ಹೋಗಬೇಕು? ಬೇರೆ ಕಡೆ ಜಾಗ ಗುರುತಿಸಿ ಕೊಟ್ಟರೆ ಅಲ್ಲಿಗೆ ಹೋಗಿ ಹೋಟೆಲ್ ಹಾಕಿಕೊಳ್ಳುತ್ತೇವೆ” ಎಂದು ಅವರು ಮನವಿ ಮಾಡಿದ್ದಾರೆ.
‘ಹೊಟ್ಟೆಪಾಡಿಗಾಗಿ ಅಂಗಡಿ ಹಾಕಲೇಬೇಕು’
ಕಳೆದ ಭಾನುವಾರ ಜಿಬಿಎ ಅಧಿಕಾರಿಗಳು ತಮ್ಮನ್ನು ಸನ್ಮಾನಿಸಿದ್ದರು ಎಂದು ನಿಂಗಮ್ಮ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೆಸರನ್ನು ‘ಮನ್ ಕಿ ಬಾತ್’ನಲ್ಲಿ ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ಈ ಗೌರವ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಎಂದಿನಂತೆ ವ್ಯಾಪಾರ ಮುಂದುವರಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ ಇದೀಗ ವ್ಯಾಪಾರ ಮಾಡದಂತೆ ಸೂಚನೆ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ನಿಂಗಮ್ಮ ಹೇಳಿದ್ದಾರೆ.
“ಹೊಟ್ಟೆಪಾಡಿಗಾಗಿ ಅಂಗಡಿ ಹಾಕಲೇಬೇಕು. ನನ್ನನ್ನು ಯಾರೋ ಟಾರ್ಗೆಟ್ ಮಾಡಿದ್ದಾರೆ ಎನ್ನಿಸುತ್ತಿದೆ. ಹೋಟೆಲ್ನವರಿಗೆ ಕಷ್ಟ ಆಗುತ್ತದೆ ಎನ್ನುತ್ತಾರೆ. ಆದರೆ ನನಗೂ ಕಷ್ಟವಾಗುತ್ತದೆ. ನಾವು ಯಾವುದೇ ನಿಯಮ ಉಲ್ಲಂಘನೆ ಮಾಡುತ್ತಿಲ್ಲ. ಜೀವನ ಸಾಗಿಸಲು ವ್ಯಾಪಾರ ಮಾಡುತ್ತಿದ್ದೇವೆ” ಎಂದು ನಿಂಗಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪರ್ಯಾಯ ಜಾಗ ನೀಡುವಂತೆ ಮನವಿ
ತಮ್ಮ ವ್ಯಾಪಾರದಿಂದ ಕುಟುಂಬದ ಜೀವನ ಸಾಗುತ್ತಿದೆ. ಹೀಗಾಗಿ ಏಕಾಏಕಿ ಅಂಗಡಿ ತೆರವುಗೊಳಿಸುವ ಬದಲು ಪರ್ಯಾಯ ಸ್ಥಳವನ್ನು ಗುರುತಿಸಿ ನೀಡಬೇಕು ಎಂದು ನಿಂಗಮ್ಮ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಗೆ ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳ ಬಳಕೆ ಮತ್ತು ನಿಯಮಗಳ ಪಾಲನೆಯಲ್ಲಿಯೂ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಿಂಗಮ್ಮ ಅವರ ಮನವಿಗೆ ಅಧಿಕಾರಿಗಳು ಯಾವ ರೀತಿಯಲ್ಲಿ ಸ್ಪಂದಿಸಲಿದ್ದಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಮನ್ ಕಿ ಬಾತ್ನಲ್ಲಿ ಪ್ರಧಾನಿಯಿಂದ ಮೆಚ್ಚುಗೆ ಪಡೆದಿದ್ದ ಸಣ್ಣ ವ್ಯಾಪಾರಿಗೆ ಇದೀಗ ಎದುರಾಗಿರುವ ಈ ಸಮಸ್ಯೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ರಾಜ್ಯ
Bellary Chalo 5ನೇ ದಿನಕ್ಕೆ: ವಿಜಯೇಂದ್ರ ನೇತೃತ್ವದ ಪಾದಯಾತ್ರೆ ಜನಾಂದೋಲನ, ಸರ್ಕಾರದ ವಿರುದ್ಧ ವಾಗ್ದಾಳಿ
ಕಾರಟಗಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘Bellary Chalo’ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಕಾರಟಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.
ಪಾದಯಾತ್ರೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಂಬಲವನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹತಾಶಗೊಂಡಿದೆ ಎಂದು ವಿಜಯೇಂದ್ರ ಆರೋಪಿಸಿದರು. ಬಿಜೆಪಿ ನಡೆಸುತ್ತಿರುವ ಹೋರಾಟದ ಪರಿಣಾಮವಾಗಿಯೇ ಮುಖ್ಯಮಂತ್ರಿ ಅವರು ಹೆಲಿಕಾಪ್ಟರ್ ಮೂಲಕ ಬರಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಹಸಿರು ಶಾಲು ಹೊತ್ತು ಉತ್ತರ ಕರ್ನಾಟಕಕ್ಕೆ ಭೇಟಿ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು.
‘ಇದು ಜನಪ್ರಿಯ ಸರ್ಕಾರವಲ್ಲ, ಜಾಹೀರಾತು ಸರ್ಕಾರ’
ರಾಜ್ಯದಲ್ಲಿ ಜನಪರ ಆಡಳಿತ ನಡೆಯುತ್ತಿಲ್ಲ. ಬದಲಾಗಿ ಇದು ಕೇವಲ ಜಾಹೀರಾತುಗಳಿಗೆ ಸೀಮಿತವಾಗಿರುವ ಸರ್ಕಾರ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು. ಗೃಹಲಕ್ಷ್ಮಿ ಯೋಜನೆಯಲ್ಲಿ ₹5,000 ಕೋಟಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸರ್ಕಾರ ಇನ್ನೂ ಸೂಕ್ತ ಸ್ಪಷ್ಟನೆ ನೀಡಿಲ್ಲ ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಶಕ್ತಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸಮರ್ಪಕ ಬಸ್ ಸೌಲಭ್ಯ ಇಲ್ಲದೆ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಡವರ ಬಿಪಿಎಲ್ ಕಾರ್ಡ್ಗಳನ್ನು ಕಡಿತಗೊಳಿಸುವ ಮೂಲಕ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದರು.
ಉದ್ಯೋಗ ಸೃಷ್ಟಿ ಮತ್ತು ಶಿಕ್ಷಕರ ನೇಮಕಾತಿಯಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು. ಯುವಕರು ಹಾಗೂ ಗ್ರಾಮೀಣ ಜನರ ಸಮಸ್ಯೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಟೀಕಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮದ್ಯದ ಅಂಗಡಿಗಳ ಹೆಚ್ಚಳ?
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ರಾಜ್ಯದಲ್ಲಿ ಮದ್ಯದ ಅಂಗಡಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಇದರಿಂದ ರಾಜ್ಯವನ್ನು ‘ಕುಡುಕರ ರಾಜ್ಯ’ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಗಳ ಅನುದಾನವನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅಗತ್ಯ ಆದ್ಯತೆ ನೀಡಲಾಗುತ್ತಿಲ್ಲ ಎಂದು ದೂರಿದರು.
ಆಡಳಿತ ಪಕ್ಷದ ಶಾಸಕರೇ ಸರ್ಕಾರ ಇನ್ನೂ ‘ಟೇಕ್ಆಫ್’ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ಕೇಂದ್ರದ ನೆರವಿಗಾಗಿ ಕಾಯದೆ ರಾಜ್ಯ ಸರ್ಕಾರವೇ ರೈತರಿಗೆ ತಕ್ಷಣ ಅಗತ್ಯ ಪರಿಹಾರ ಬಿಡುಗಡೆ ಮಾಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
‘ಮನ್ ಕೀ ಬಾತ್’ನಲ್ಲಿ ಮೆಚ್ಚುಗೆ ಪಡೆದಿದ್ದ ಇಡ್ಲಿ ನಿಂಗಮ್ಮಗೆ ಅನ್ಯಾಯ?
ಪ್ರಧಾನಿ ನರೇಂದ್ರ ಮೋದಿ ಅವರ **‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೆಚ್ಚುಗೆ ಪಡೆದಿದ್ದ ಸ್ವನಿಧಿ ಯೋಜನೆಯ ಫಲಾನುಭವಿ ಇಡ್ಲಿ ನಿಂಗಮ್ಮ ಅವರ ಅಂಗಡಿ ತೆರವುಗೊಳಿಸಿರುವುದಕ್ಕೂ ವಿಜಯೇಂದ್ರ ವಿರೋಧ ವ್ಯಕ್ತಪಡಿಸಿದರು.
ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸುವುದು ಸರಿಯಲ್ಲ ಎಂದು ಅವರು ಹೇಳಿದರು. ಜೀವನೋಪಾಯಕ್ಕಾಗಿ ಸಣ್ಣ ವ್ಯಾಪಾರ ನಡೆಸುತ್ತಿರುವವರಿಗೆ ಮೊದಲು ಪರ್ಯಾಯ ಸ್ಥಳ ಕಲ್ಪಿಸಬೇಕು. ಬಳಿಕವೇ ಯಾವುದೇ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಬಳ್ಳಾರಿ ಚಲೋ ಪಾದಯಾತ್ರೆಯ ಮೂಲಕ ಉತ್ತರ ಕರ್ನಾಟಕದ ರೈತರು, ಬಡವರು ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿದ್ದು, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆ ನೀಡಿದ್ದಾರೆ.
-
ದೇಶ20 ಗಂಟೆಗಳು ago‘Hare Krishna’ ಜಪಿಸುತ್ತಿದ್ದ ಕಾರ್ಮಿಕನಿಗೆ 9 ದಿನಗಳ ಬಳಿಕ ಸಿಕ್ಕಿತು ಜೀವದಾನ; ಜನ್ಮಾಷ್ಟಮಿಯಂದೇ ರಕ್ಷಣೆ!
-
ದೇಶ19 ಗಂಟೆಗಳು agoDelhi IGI Airport Waterlogging: IGI ಏರ್ಪೋರ್ಟ್ನಲ್ಲಿ ನೀರಿನ ಪ್ರವಾಹ;
-
ರಾಜ್ಯ20 ಗಂಟೆಗಳು agoPark Land Amendment: ವಿವಾದದ ಬೆನ್ನಲ್ಲೇ ಮಸೂದೆ ವಾಪಸ್; ಡಿಕೆಶಿ ಹೇಳಿದ್ದೇನು ಗೊತ್ತಾ?
-
ದೇಶ20 ಗಂಟೆಗಳು agoDelhi ಪಾರ್ಕ್ನಲ್ಲೇ ಶಾಲೆ; 13 ವರ್ಷಗಳಿಂದ 200ಕ್ಕೂ ಹೆಚ್ಚು ಬಡ ಮಕ್ಕಳ ಭವಿಷ್ಯ ಬದಲಿಸಿದ ನಮಿತಾ ಚೌಧರಿ!
-
ರಾಜ್ಯ19 ಗಂಟೆಗಳು agoYuva Dasara 2026ಕ್ಕೆ ಭರ್ಜರಿ ಚಾಲನೆ; ಉದ್ಘಾಟನೆಗೆ ಪ್ರಭುದೇವಗೆ ಅಧಿಕೃತ ಆಹ್ವಾನ!
-
ಅಪರಾಧ1 ಗಂಟೆ agoKPSC ನೇಮಕಾತಿ ಅಕ್ರಮ: ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಆಸ್ತಿ ನೋಡಿ ಅಧಿಕಾರಿಗಳೇ ಶಾಕ್!
-
ದೇಶ19 ಗಂಟೆಗಳು agoChhatrapati Sambhajinagar Hospital Fire: ICU, PICU ರೋಗಿಗಳ ರಕ್ಷಣೆ; ಎಲ್ಲರೂ ಸುರಕ್ಷಿತ
-
ದೇಶ23 ಗಂಟೆಗಳು agoIndia-Pakisthan ಗಡಿಯಲ್ಲಿ ಮತ್ತೆ ಆತಂಕ; 17 ದಿನಗಳ ಕಾಲ ರಾಜಸ್ಥಾನದ ಆಕಾಶ ಕಾಯ್ದಿರಿಸಿದ ಭಾರತ, ಪಾಕ್ನಲ್ಲಿ ತುರ್ತು ಸಭೆ!
