ಸುತ್ತ ಮುತ್ತ
ಈ ಶ್ಲೋಕವನ್ನ ಪಠಣೆ ಮಾಡಿದ್ರೆ ರಾಘವೇಂದ್ರರ ಕೃಪೆ ಸಿಗುತ್ತೆ
ಓಂ ಅಜ್ಞಾನಭಂಜನಾಯ ನಮಃ
ಓಂ ಅಣಿಮಾದ್ಯಷ್ಟಸಿದ್ಧಿದಾಯ (Siddidaya) ನಮಃ
ಓಂ ಅನಣುಜ್ಞಾನಸಂಪದೇ ನಮಃ
ಓಂ ಅಮೋಘಶಕ್ತಯೇ ನಮಃ
ಓಂ ಅನಘಾಯ (Anaghaya) ನಮಃ
ಓಂ ಅಪರೋಕ್ಷೀಕೃತಾಚ್ಯುತಾಯ ನಮಃ
ಓಂ ಅಖಿಲಾಭೀಷ್ಟದಾಯ ನಮಃ
ಓಂ ಆತ್ಮವಿದೇ ನಮಃ
ಓಂ ಆಯುಃಪ್ರವರ್ಧನಾಯ ನಮಃ
ಓಂ ಆನಂದತೀರ್ಥಸಚ್ಛಾಸ್ತ್ರಟೀಕಾಭಾವಪ್ರಕಾಶಕಾಯ ನಮಃ
ಓಂ ಆನಂದಸಾಂದ್ರಾಯ ನಮಃ
ಓಂ ಆರಬ್ಧಕಾರ್ಯಾಂತಗಮನಕ್ಷಮಾಯ ನಮಃ
ಓಂ ಆಕುಲೀಕೃತದುರ್ವಾದಿವೃಂದಾಯ ನಮಃ
ಓಂ ಆಕಾರಬಂಧುರಾಯ ನಮಃ
ಓಂ ಆಶುಪ್ರಸನ್ನಾಯ ನಮಃ
ಓಂ ಆಸನ್ನಭಕ್ತಕಾಮಸುರದ್ರುಮಾಯ ನಮಃ
ಓಂ ಆಧ್ಯಾತ್ಮರತಾಯ ನಮಃ
ಓಂ ಆಚಾರ್ಯಾಯ ನಮಃ
ಓಂ ಆಸಮುದ್ರೈಕಸದ್ಗುರವೇ ನಮಃ
ಓಂ ಆತ್ಮಾರಾಮಾರ್ಚನಾಸಕ್ತಾಯ ನಮಃ || 20 ||
ಓಂ ಆರ್ಯಾಯ ನಮಃ
ಓಂ ಆಪ್ತತಮಾಯ ನಮಃ
ಓಂ ಇಂದ್ರಿಯೋತ್ಪನ್ನದೋಷಘ್ನಾಯ ನಮಃ
ಓಂ ಇಂದ್ರವತ್ತ್ಯಾಗಭೋಗಿನೇ ನಮಃ
ಓಂ ಇಷ್ಟದಾತ್ರೇ ನಮಃ
ಓಂ ಈಷಣಾತ್ರಯವರ್ಜಿತಾಯ ನಮಃ
ಓಂ ಉಗ್ರರಕ್ಷಃಪಿಶಾಚಘ್ನಾಯ ನಮಃ
ಓಂ ಉನ್ಮಾದಹರಾಯ ನಮಃ
ಓಂ ಉತ್ತಮಾಯ ನಮಃ
ಓಂ ಉದಾರಚಿತ್ತಾಯ ನಮಃ
ಓಂ ಉದ್ಧಾರಕಾಯ ನಮಃ
ಓಂ ಉತ್ಪಾತಹಾರಕಾಯ ನಮಃ
ಓಂ ಉಪೇಕ್ಷಿತಕುವಾದೀಂದ್ರಾಯ ನಮಃ
ಓಂ ಉಪಕಾರಪರಾಯಣಾಯ ನಮಃ
ಓಂ ಊರುದಘ್ನೀಕೃತಾಪಾರಭವಸಾಗರಾಯ ನಮಃ
ಓಂ ಊರ್ಜಿತಾಯ ನಮಃ
ಓಂ ಊಷ್ಮಹರ್ತ್ರೇ ನಮಃ
ಓಂ ಋಕ್ಷಾಧಿಪತಿಶೀತಲದರ್ಶನಾಯ ನಮಃ
ಓಂ ಋಜುಸ್ವಭಾವಾಯ ನಮಃ
ಓಂ ಋದ್ಧೋರುಮಾಹಾತ್ಮ್ಯಾಯ ನಮಃ || 40 ||
ಓಂ ಋಜುಮಾಸಸಾಯ ನಮಃ
ಓಂ ಏಡಮೂಕಸುವಾಗ್ದಾತ್ರೇ ನಮಃ
ಓಂ ಏಕಭಾಷಿಣೇ ನಮಃ
ಓಂ ಏಕಾಂತಭಕ್ತಾಯ ನಮಃ
ಓಂ ಐಶ್ವರ್ಯದಾತ್ರೇ ನಮಃ
ಓಂ ಏಕ್ಯಮತಚ್ಛಿದೇ ನಮಃ
ಓಂ ಓತತ್ವೇತ್ಯಾದ್ಯನುವ್ಯಾಖ್ಯಾಸುಧಾಭಾವಾರ್ಥದರ್ಶಿನೇ ನಮಃ
ಓಂ ಓಂಕಾರಜಪಶೀಲಾಯ ನಮಃ
ಓಂ ಸದಾ ಓಮಾತ್ಮೇತ್ಯುಪಾಸಿನೇ ನಮಃ
ಓಂ ಔಷಧೋಕ್ತ್ಯಾಪಿ ಭಕ್ತಾನಾಮಾಮಯಾಧಿಕಹಾರಿಣೇ ನಮಃ
ಓಂ ಅಂಸಾತ್ತತುಲಸೀಮಾಲಾಯ ನಮಃ
ಓಂ ಅಂಹೋನಾಶಕದರ್ಶನಾಯ ನಮಃ
ಓಂ ಅಸ್ತಂಗತಾರಿಷಡ್ವರ್ಗಾಯ ನಮಃ
ಓಂ ಅರ್ಥಿಮಂದಾರಕಾಯ ನಮಃ
ಓಂ ಕಲಿದೋಷವಿನಾಶಾಯ ನಮಃ
ಓಂ ಕಲೌ ಸದ್ಯಃ ನಮಃ
ಓಂ ಫಲಪ್ರದಾಯ ನಮಃ
ಓಂ ಕಮಲಾಪತಿಭಕ್ತಾಯ ನಮಃ
ಓಂ ಕುಂಠಕುಂಠತ್ವಭಂಜಿನೇ ನಮಃ
ಓಂ ಕರಾಲನರಸಿಂಹೋಗ್ರಕ್ರೋಧಶಾಮಕಮೂರ್ತಯೇ ನಮಃ
ಓಂ ಕಪೋಲಶಂಖಚಕ್ರಾಂಶಶಾಲಿನೇ ನಮಃ || 60 ||
ಓಂ ಕಪಟವರ್ಜಿತಾಯ ನಮಃ
ಓಂ ಕಲ್ಪಭೂರುಹರೂಪಾಯ ನಮಃ
ಓಂ ಕಲಭೌಧಾಭಕೀರ್ತಯೇ ನಮಃ
ಓಂ ಕಮಂಡಲುಂ ಧರ್ತ್ರೇ ನಮಃ
ಓಂ ಕರೇ ದಂಡಧರಾಯ ನಮಃ
ಓಂ ಕಾಮೇಷೂಣಾಮಲಕ್ಷ್ಯಾಯ ನಮಃ
ಓಂ ಕಾಮಿನೀಕಾಮನೋಜ್ಝಿತಾಯ ನಮಃ
ಓಂ ಕಾಮಾರಿಶ್ಲಾಘ್ಯಸದ್ವೃತ್ತಾಯ ನಮಃ
ಓಂ ಕಾಮದಾಯ ನಮಃ
ಓಂ ಕಾಮರೂಪಧೃತೇ ನಮಃ
ಓಂ ಕಾನೀನಭಾವವೇತ್ತ್ರೇ ನಮಃ
ಓಂ ಕಾಲಜ್ಞಾಯ ನಮಃ
ಓಂ ಕಾಲಸಾಧಕಾಯ ನಮಃ
ಓಂ ಕಾಪಾಲಿಕಮತಧ್ವಂಸಿನೇ ನಮಃ
ಓಂ ಕಾಶಿಕಾಕಾಶಮಾನವಾಚೇ ನಮಃ
ಓಂ ಕಾಂತಾರಭೀತಿಘ್ನೇ ನಮಃ
ಓಂ ಕಾಂತಿಕಾಂತಾಯ ನಮಃ
ಓಂ ಕಾಪಥವರ್ಜಿತಾಯ ನಮಃ
ಓಂ ಕಾಷಾಯಾಂಬರಧಾರಿಣೇ ನಮಃ
ಓಂ ಕಾಶ್ಮೀರದ್ರವಚರ್ಚಿತಾಯ ನಮಃ || 80 ||
ಓಂ ಕಿರಾತಭೀತಿಸಂಹರ್ತ್ರೇ ನಮಃ
ಓಂ ಕಿಲಾಸಿತ್ವವಿನಾಶಕಾಯ ನಮಃ
ಓಂ ಕೀನಾಶಭಯಘ್ನೇ ನಮಃ
ಓಂ ಕೀಟಭಯಘ್ನೇ ನಮಃ
ಓಂ ಕೀರ್ತಿಮಂಡಿತಾಯ ನಮಃ
ಓಂ ಪಿಶಾಚಾನಾಂ ಕುಕೂಲಾಭಾಯ ನಮಃ
ಓಂ ಕುಷ್ಠರೋಗನಿವಾರಣಾಯ ನಮಃ
ಓಂ ಕುಶಾಸನಸ್ಥಿತಾಯ ನಮಃ
ಓಂ ಕುಕ್ಷಿಪೂರಕಾಯ ನಮಃ
ಓಂ ಕುತೂಹಲಿನೇ ನಮಃ
ಓಂ ಕುತ್ಸಿತಾಚಾರರಹಿತಾಯ ನಮಃ
ಓಂ ಕುಮಾರಸುಖವರ್ಧನಾಯ ನಮಃ
ಓಂ ಕುಶಲಾಯ ನಮಃ
ಓಂ ಕುಲೀನಾಯ ನಮಃ
ಓಂ ಕುಶಾಸನವಿವರ್ಜಿತಾಯ ನಮಃ
ಓಂ ಕುಂಭಘೋಣಕೃತಾವಾಸಾಯ ನಮಃ
ಓಂ ಕುತೋಽಪಿ ಭಯಭಂಜನಾಯ ನಮಃ
ಓಂ ಕೂಪಪಾತಕಪಾಪಘ್ನಾಯ ನಮಃ
ಓಂ ಕೂರ್ಮಾಸನಪರಿಗ್ರಹಾಯ ನಮಃ
ಓಂ ಕೂಷ್ಮಾಂಡಾದಿ ಪ್ರತಿಭಯಾಯ ನಮಃ || 100 ||
ಓಂ ಕೀರ್ತಿದಾಯ ನಮಃ
ಓಂ ಕೀರ್ತನಪ್ರಿಯಾಯ ನಮಃ
ಓಂ ಕೇಶವಾರಾಧಕಾಯ ನಮಃ
ಓಂ ಕೇತುದೋಷಘ್ನಾಯ ನಮಃ
ಓಂ ಕೇವಲೇಷ್ಟದಾಯ ನಮಃ
ಓಂ ಕೇತಕೀಕುಸುಮಾಸಕ್ತಾಯ ನಮಃ
ಓಂ ಕೇಸರದ್ರವಲೋಲುಪಾಯ ನಮಃ
ಓಂ ಕೈವಲ್ಯದಾತ್ರೇ ನಮಃ
ಓಂ ಕೈಂಕರ್ಯತುಷ್ಟಶ್ರೀಶಾಯ ನಮಃ
ಓಂ ಕೋಶದಾಯ ನಮಃ
ಓಂ ಕಾಲಾನುಸಾರದಾತ್ರೇ ನಮಃ
ಓಂ ಕೋಶಿನೇ ನಮಃ
ಓಂ ಕೋಶಾತಕೀಪ್ರಿಯಾಯ ನಮಃ
ಓಂ ಕೋಲಾಹಲವಿರೋಧಿನೇ ನಮಃ
ಓಂ ಕೌಪೀನಪಟಲಾಂಛನಾಯ ನಮಃ
ಓಂ ಕಂಬುಧ್ವನಿಪ್ರಿಯಾಯ ನಮಃ
ಓಂ ಕಂಬುಗ್ರೀವಾಯ ನಮಃ
ಓಂ ಕಂಪವಿವರ್ಜಿತಾಯ ನಮಃ
ಓಂ ಕೃಪೀಟಯೋನಿವರ್ಚಸ್ಥಾಯ ನಮಃ
ಓಂ ಕೃತಭಕ್ತಾರ್ತಿನಾಶನಾಯ ನಮಃ || 120 ||
ಓಂ ಕೃತ್ಯಾಸನಾಯ ನಮಃ
ಓಂ ಕೃತಜ್ಞಾಯ ನಮಃ
ಓಂ ಕೃತ್ಯಾಚೇಷ್ಟಕಭಂಜನಾಯ ನಮಃ
ಓಂ ಕೃಪಾಮಹೋದಧಯೇ ನಮಃ
ಓಂ ಕೃಷ್ಣಧ್ಯಾನಾಸಕ್ತಾಯ ನಮಃ
ಓಂ ಕೃಶಪ್ರಿಯಾಯ ನಮಃ
ಓಂ ಕಸ್ತೂರೀತಿಲಕಾಸಕ್ತಾಯ ನಮಃ
ಓಂ ಕೃತ್ತಸಂಸಾರಸಾಧ್ವಸಾಯ ನಮಃ
ಓಂ ಖಗೇಶವಾಹಭಕ್ತಾಯ ನಮಃ
ಓಂ ಖರಪಾತಕಹಾರಿಣೇ ನಮಃ
ಓಂ ಖದೋಷಹರ್ತ್ರೇ ನಮಃ
ಓಂ ಖಪುರಪ್ರಿಯಾಯ ನಮಃ
ಓಂ ಖಲಮಾರಿಣೇ ನಮಃ
ಓಂ ಖಾದ್ಯಪ್ರಿಯಾಯ ನಮಃ
ಓಂ ಖಲಪುವೇ ನಮಃ
ಓಂ ಖಿಲಹೀನಾಯ ನಮಃ
ಓಂ ಖೇದಹಂತ್ರೇ ನಮಃ
ಓಂ ಖಿನ್ನಚಿತ್ತಪ್ರಮೋದದಾಯ ನಮಃ
ಓಂ ಖೇದಘ್ನೇ ನಮಃ
ಓಂ ಖುರಣೋಘ್ನಾಯ ನಮಃ || 140 ||
ಓಂ ಖಂಜದುಃಖನಿವಾರಣಾಯ ನಮಃ
ಓಂ ಖೋಡತ್ವನಾಶಕಾಯ ನಮಃ
ಓಂ ಗರಘ್ನಾಯ ನಮಃ
ಓಂ ಗಣನಮ್ಯಾಂಘ್ರಯೇ ನಮಃ
ಓಂ ಗರುತ್ಮದ್ವಾಹಸೇವಕಾಯ ನಮಃ
ಓಂ ಗುರವೇ ನಮಃ
ಓಂ ಗುಣಾರ್ಣವಾಯ ನಮಃ
ಓಂ ಗಲಾತ್ತತುಲಸೀಮಾಲಾಯ ನಮಃ
ಓಂ ಗರ್ಭದಾಯ ನಮಃ
ಓಂ ಗರ್ಭದುಃಖಘ್ನೇ ನಮಃ
ಓಂ ಗರ್ತಹಾರಿಣೇ ನಮಃ
ಓಂ ಗಜಗತಯೇ ನಮಃ
ಓಂ ಗತದೋಷಾಯ ನಮಃ
ಓಂ ಗತಿಪ್ರದಾಯ ನಮಃ
ಓಂ ಗದಾಧರಾಯ ನಮಃ
ಓಂ ಗದಹರಾಯ ನಮಃ
ಓಂ ಗರ್ವಘ್ನೇ ನಮಃ
ಓಂ ಗರಿಮಾಲಯಾಯ ನಮಃ
ಓಂ ಗಭಸ್ತಿಮತೇ ನಮಃ
ಓಂ ಗಹ್ವರಸ್ಥಾಯ ನಮಃ || 160 ||
ಓಂ ಗತಭಿಯೇ ನಮಃ
ಓಂ ಗಲಿತಾಹಿತಾಯ ನಮಃ
ಓಂ ಗತಾಘಾಯ ನಮಃ
ಓಂ ಗರ್ಜಿತಾರಾತಯೇ ನಮಃ
ಓಂ ಗದಯಿತ್ನವೇ ನಮಃ
ಓಂ ಗವಾಂ ಪ್ರಿಯಾಯ ನಮಃ
ಓಂ ಗ್ರಸ್ತಾರಯೇ ನಮಃ
ಓಂ ಗ್ರಹದೋಷಘ್ನಾಯ ನಮಃ
ಓಂ ಗ್ರಹೋಚ್ಚಾಟನತತ್ಪರಾಯ ನಮಃ
ಓಂ ಗೀಷ್ಪತ್ಯಾಭಾಯ ನಮಃ
ಓಂ ಗಾಯತ್ರೀಜಾಪಕಾಯ ನಮಃ
ಓಂ ಗಾಯನಪ್ರಿಯಾಯ ನಮಃ
ಓಂ ಗ್ರಾಮಣ್ಯೇ ನಮಃ
ಓಂ ಗ್ರಾಹಕಾಯ ನಮಃ
ಓಂ ಗ್ರಾಹಿನೇ ನಮಃ
ಓಂ ಗ್ರಾವಗ್ರೀವಮತಚ್ಛಿದಾಯ ನಮಃ
ಓಂ ಗ್ರಾಮಕ್ಷೇಮಕರಾಯ ನಮಃ
ಓಂ ಗ್ರಾಮ್ಯಭಯಘ್ನೇ ನಮಃ
ಓಂ ಗ್ರಾಹಭೀತಿಘ್ನೇ ನಮಃ
ಓಂ ಗಾತ್ರಕ್ಷೇಮಕರಾಯ ನಮಃ || 180 ||
ಓಂ ಗಾಮಿನೇ ನಮಃ
ಓಂ ಗಿರಿಸಾರನಿಭಾಂಗಕಾಯ ನಮಃ
ಓಂ ಗತಭಾವಿಜನಯೇ ನಮಃ
ಓಂ ಗಮ್ಯಾಯ ನಮಃ
ಓಂ ಗೀರ್ವಾಣಾವಾಸಮೂಲಭುವೇ ನಮಃ
ಓಂ ಗುಣಿನೇ ನಮಃ
ಓಂ ಗುಣಪ್ರಿಯಾಯ ನಮಃ
ಓಂ ಗುಣ್ಯಾಯ ನಮಃ
ಓಂ ಗುಹಾವಾಸಾಯ ನಮಃ
ಓಂ ಗುರುಪ್ರಿಯಾಯ ನಮಃ
ಓಂ ಗುಡಪ್ರಿಯಾಯ ನಮಃ
ಓಂ ಗುಚ್ಛಕಂಠಾಯ ನಮಃ
ಓಂ ಗುಲ್ಮಚ್ಛೇತ್ತ್ರೇ ನಮಃ
ಓಂ ಗುಣಾದರಾಯ ನಮಃ
ಓಂ ಗುಪ್ತಗುಹ್ಯಾಯ ನಮಃ
ಓಂ ಗೂಢಕರ್ಮಣೇ ನಮಃ
ಓಂ ಗುರುರಾಜಾಯ ನಮಃ
ಓಂ ಗೂಹಿತಾಯ ನಮಃ
ಓಂ ಗೇಹದಾತ್ರೇ ನಮಃ
ಓಂ ಗೇಯಕೀರ್ತಯೇ ನಮಃ || 200 ||
ಓಂ ಶೈಲವಾಸಿನೇ ನಮಃ
ಓಂ ಶೈವಪ್ರಭಂಜನಾಯ ನಮಃ
ಓಂ ಶೋಕಹರ್ತ್ರೇ ನಮಃ
ಓಂ ಶೋಭನಾಂಗಾಯ ನಮಃ
ಓಂ ಶೌರ್ಯೌದಾರ್ಯಗುಣಾನ್ವಿತಾಯ ನಮಃ
ಓಂ ಶ್ಲೇಷ್ಮಹರ್ತ್ರೇ ನಮಃ
ಓಂ ಶಂಕರಾಯ ನಮಃ
ಓಂ ಶೃಂಖಲಾಬಂಧಮೋಚಕಾಯ ನಮಃ
ಓಂ ಶೃಂಗಾರಪ್ರೀತಿಜನಕಾಯ ನಮಃ
ಓಂ ಶಂಕಾಹಾರಿಣೇ ನಮಃ
ಓಂ ಶಂಸಿತಾಯ ನಮಃ
ಓಂ ಷಂಢಪುಂಸ್ತ್ವಪ್ರದಾಯ ನಮಃ
ಓಂ ಷೋಢ್ರೇ ನಮಃ
ಓಂ ಷಡ್ವೈರಿರಹಿತಾಯ ನಮಃ
ಓಂ ಷೋಡಶಮಾಂಗಲ್ಯಪ್ರದಾತ್ರೇ ನಮಃ
ಓಂ ಷಟ್ಪ್ರಯೋಗವಿದೇ ನಮಃ
ಓಂ ಸತ್ಯಸಂಧಾಯ ನಮಃ
ಓಂ ಸಮಾಧಿಸ್ಥಾಯ ನಮಃ
ಓಂ ಸರಲಾಯ ನಮಃ
ಓಂ ಸತ್ತಮಾಯ ನಮಃ || 940 ||
ಓಂ ಸುಖಿನೇ ನಮಃ
ಓಂ ಸಮರ್ಥಾಯ ನಮಃ
ಓಂ ಸಜ್ಜನಾಯ ನಮಃ
ಓಂ ಸಾಧವೇ ನಮಃ
ಓಂ ಸಾಧೀಯತೇ ನಮಃ
ಓಂ ಸಂಪ್ರದಾಯದಾಯ ನಮಃ
ಓಂ ಸಾತ್ತ್ವಿಕಾಯ ನಮಃ
ಓಂ ಸಾಹಸಿನೇ ನಮಃ
ಓಂ ಸ್ವಾಮಿನೇ ನಮಃ
ಓಂ ಸಾರ್ವಭೌಮತ್ವಸಾರವಿದೇ (ಸಾರ್ವಭೌಮಾಯ, ಸಾರವಿದೇ) ನಮಃ
ಓಂ ಸರ್ವಾವಗುಣಹೀನಾಯ ನಮಃ
ಓಂ ಸದಾಚಾರಾನುಮೋದಕಾಯ ನಮಃ
ಓಂ ಸರ್ವಭೂತದಯಾಶಾಲಿನೇ ನಮಃ
ಓಂ ಸತ್ಯಧರ್ಮರತಾಯ ನಮಃ
ಓಂ ಸಮಾಯ ನಮಃ
ಓಂ ಸ್ವನಾಮಕೀರ್ತನಾದ್ವೇದಶಾಸ್ತ್ರಾರ್ಥಜ್ಞಾನಸಿದ್ಧಿದಾಯ ನಮಃ
ಓಂ ಸ್ವನಮಸ್ಕಾರಮಾತ್ರೇಣ ನಮಃ
ಓಂ ಸರ್ವಕಾಮ್ಯಾರ್ಥಸಿದ್ಧಿದಾಯ ನಮಃ
ಓಂ ಸ್ವಭಕ್ತಾನಾಂ ದುರಾಚಾರಸಹಸನಾಯ ನಮಃ
ಓಂ ಸುಸ್ಮಿತಾನನಾಯ ನಮಃ
ಓಂ ಸರ್ವತಂತ್ರಸ್ವತಂತ್ರಾಯ ನಮಃ || 960 ||
ಓಂ ಸುಧೀಂದ್ರಕರಕಂಜಜಾಯ ನಮಃ
ಓಂ ಸಿದ್ಧಿದಾಯ ನಮಃ
ಓಂ ಸಿದ್ಧಸಂಕಲ್ಪಾಯ ನಮಃ
ಓಂ ಸಿದ್ಧಾರ್ಥಾಯ ನಮಃ
ಓಂ ಸಿದ್ಧಿಸಾಧನಾಯ ನಮಃ
ಓಂ ಸ್ವಪ್ನವಕ್ತ್ರೇ ನಮಃ
ಓಂ ಸ್ವಾದುವೃತ್ತಯೇ ನಮಃ
ಓಂ ಸ್ವಸ್ತಿದಾತ್ರೇ ನಮಃ
ಓಂ ಸಭಾಜಯಿನೇ ನಮಃ
ಓಂ ಸೀಮಾವತೇ ನಮಃ
ಓಂ ಸುರಭಯೇ ನಮಃ
ಓಂ ಸೂನುದಾತ್ರೇ ನಮಃ
ಓಂ ಸೂನೃತಭಾಷಣಾಯ ನಮಃ
ಓಂ ಸುಗ್ರೀವಾಯ ನಮಃ
ಓಂ ಸುಮನಸೇ ನಮಃ
ಓಂ ಸ್ನಿಗ್ಧಾಯ ನಮಃ
ಓಂ ಸೂಚಕಾಯ ನಮಃ
ಓಂ ಸೇವಕೇಷ್ಟದಾಯ ನಮಃ
ಓಂ ಸೇತವೇ ನಮಃ
ಓಂ ಸ್ಥೈರ್ಯಚರಾಯ (ಸ್ವೈರಚರಾಯ) ನಮಃ || 980 ||
ಓಂ ಸೌಮ್ಯಸೌಮ್ಯಾಯ ನಮಃ
ಓಂ ಸೌಭಾಗ್ಯದಾಯಕಾಯ ನಮಃ
ಓಂ ಸೋಮಭಾಸೇ ನಮಃ
ಓಂ ಸಮ್ಮತಾಯ ನಮಃ
ಓಂ ಸಂಧಿಕರ್ತ್ರೇ ನಮಃ
ಓಂ ಸಂಸಾರಸೌಖ್ಯದಾಯ ನಮಃ
ಓಂ ಸಂಖ್ಯಾವತೇ ನಮಃ
ಓಂ ಸಂಗರಹಿತಾಯ ನಮಃ
ಓಂ ಸಂಗ್ರಹಿಣೇ ನಮಃ
ಓಂ ಸಂತತಿಪ್ರದಾಯ ನಮಃ
ಓಂ ಸ್ಮೃತಿಮಾತ್ರೇಣ ಸಂತುಷ್ಟಾಯ ನಮಃ
ಓಂ ಸರ್ವವಿದ್ಯಾವಿಶಾರದಾಯ ನಮಃ
ಓಂ ಸುಕುಲಾಯ ನಮಃ
ಓಂ ಸುಕುಮಾರಾಂಗಾಯ ನಮಃ
ಓಂ ಸಿಂಹಸಂಹನನಾಯ ನಮಃ
ಓಂ ಹರಿಸೇವಾಪರಾಯ ನಮಃ
ಓಂ ಹಾರಮಂಡಿತಾಯ ನಮಃ
ಓಂ ಹಠವರ್ಜಿತಾಯ ನಮಃ
ಓಂ ಹಿತಾಯ ನಮಃ
ಓಂ ಹುತಾಗ್ನಯೇ ನಮಃ
ಓಂ ನಮಃ || 1000 ||
ಓಂ ಹೇತವೇ ನಮಃ
ಓಂ ಹೇಮದಾಯ ನಮಃ
ಓಂ ಹೈಮಪೀಠಗಾಯ ನಮಃ
ಓಂ ಹೃದಯಾಲವೇ ನಮಃ
ಓಂ ಹರ್ಷಮಾಣಾಯ ನಮಃ
ಓಂ ಹೋತ್ರೇ ನಮಃ
ಓಂ ಹಂಸಾಯ ನಮಃ
ಓಂ ಹೇಯಘ್ನೇ ನಮಃ
ಓಂ ಲಲಿತಾಯ ನಮಃ
ಓಂ ಲಬ್ಧನಿರ್ವಾಣಾಯ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ಲಾವಣ್ಯಲಕ್ಷಿತಾಯ ನಮಃ
ಓಂ ಕ್ಷಮಾಶೀಲಾಯ ನಮಃ
ಓಂ ಕ್ಷಾಮಹರಾಯ ನಮಃ
ಓಂ ಕ್ಷಿತಿಸ್ಥಾಯ ನಮಃ
ಓಂ ಕ್ಷೀಣಪಾತಕಾಯ ನಮಃ
ಓಂ ಕ್ಷುದ್ರಬಾಧಾಪಹರ್ತ್ರೇ ನಮಃ
ಓಂ ಕ್ಷೇತ್ರಜ್ಞಾಯ ನಮಃ
ಓಂ ಕ್ಷೇಮದಾಯ ನಮಃ
ಓಂ ಕ್ಷಮಾಯ ನಮಃ || 1020 ||
ಓಂ ಕ್ಷೋದಹಂತ್ರೇ ನಮಃ
ಓಂ ಕ್ಷೌದ್ರದೃಷ್ಟಯೇ ನಮಃ
ಓಂ ಭಕ್ತಕೃತಾಗಸಾಂ ಕ್ಷಂತ್ರೇ ನಮಃ
ಓಂ ಭೌಮ್ಯಂ ಕೃಷ್ಣಾವಧೂತೋಕ್ತಂ ಗುರೋರ್ನಾಮಸಹಸ್ರಕಂ ನಮಃ
ಓಂ ಕಾರ್ಣಾದಿಕ್ಯಾ ಗಿರಾ ಹಯವದನೇನ ಪ್ರಕಾಶಿತಂ ನಮಃ
ದೇಶ
Rewa Hospital ‘ಇಲ್ಲಿ ಡೆಲಿವರಿ ಮಾಡಿಸಬೇಡಿ’ ಎಂದ ಯುವತಿ: ಹೆರಿಗೆ ಬಳಿಕ ತಾಯಿ-ಮಗು ದಾರುಣ ಸಾವು
ಮಧ್ಯಪ್ರದೇಶ:Rewa Hospital “ನನ್ನನ್ನು ಇಲ್ಲಿಂದ ಮೊದಲು ಕರೆದುಕೊಂಡು ಹೋಗಿ. ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಡಿ. ಇಲ್ಲಿರುವವರ ಚಿಕಿತ್ಸೆಯಿಂದ ನಾನು ಮತ್ತು ನನ್ನ ಮಗು ಬದುಕುಳಿಯುವುದಿಲ್ಲ” ಎಂದು ಕುಟುಂಬಸ್ಥರಲ್ಲಿ ಕಣ್ಣೀರಿನಿಂದ ಮನವಿ ಮಾಡಿದ್ದ ಯುವತಿಯೊಬ್ಬರು, ಹೆರಿಗೆ ಬಳಿಕ ತನ್ನ ಮಗುವಿನೊಂದಿಗೆ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.
ಮೃತ ಯುವತಿಯನ್ನು 25 ವರ್ಷದ Kalpana Mishra ಎಂದು ಗುರುತಿಸಲಾಗಿದೆ. ಹೆರಿಗೆಗೂ ಕೆಲವೇ ಗಂಟೆಗಳ ಮುನ್ನ ಅವರು ಆಸ್ಪತ್ರೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ತಮ್ಮನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬಸ್ಥರಲ್ಲಿ ಅಂಗಲಾಚಿ ಬೇಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಕುಟುಂಬಸ್ಥರು ಆಕೆಯನ್ನು ಸಮಾಧಾನಪಡಿಸಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ನಿರ್ಧರಿಸಿದ್ದರು ಎಂದು ವರದಿಯಾಗಿದೆ.
ಡೆಲಿವರಿಗೆ ಮುನ್ನ ಕಣ್ಣೀರಿಟ್ಟ ಯುವತಿ
ಕಲ್ಪನಾ ಅವರನ್ನು ಮಂಗಳವಾರ ಆಗಸ್ಟ್ 25ರಂದು ರೇವಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಅವರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಆಪರೇಷನ್ಗೂ ಮುನ್ನ ಕಲ್ಪನಾ ಆಸ್ಪತ್ರೆಯಲ್ಲಿನ ಚಿಕಿತ್ಸೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ತನ್ನನ್ನು ಬೇರೆಡೆಗೆ ಕರೆದೊಯ್ಯುವಂತೆ ಕುಟುಂಬಸ್ಥರಲ್ಲಿ ಮನವಿ ಮಾಡುತ್ತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ತಾಯಿ-ಮಗು ಇಬ್ಬರೂ ದಾರುಣ ಸಾವು
ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಬಳಿಕ ಕಲ್ಪನಾ ಮತ್ತು ಅವರ ನವಜಾತ ಮಗು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯುವತಿ ಮುಂಚಿತವಾಗಿಯೇ ತಮ್ಮ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರೂ, ಸೂಕ್ತವಾಗಿ ಸ್ಪಂದಿಸಲಿಲ್ಲ ಎಂಬುದು ಕುಟುಂಬದ ಪ್ರಮುಖ ಆರೋಪವಾಗಿದೆ.
ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ಗಳ ನಿರ್ಲಕ್ಷ್ಯದಿಂದಲೇ ಎರಡು ಜೀವಗಳು ಬಲಿಯಾಗಿವೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಏನು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ ಎಂಬ ಆರೋಪ
ಕಲ್ಪನಾ ತಮ್ಮ ಆರೋಗ್ಯದ ಸಮಸ್ಯೆ ಬಗ್ಗೆ ಪದೇಪದೇ ಹೇಳಿಕೊಂಡಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ ಅವರ ದೂರಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.
ಚಿಕಿತ್ಸೆ ನೀಡುವ ಬದಲು ವೈದ್ಯರು ಹಾಗೂ ನರ್ಸ್ಗಳು ಕಲ್ಪನಾ ಮತ್ತು ಅವರ ಕುಟುಂಬದವರೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಆಸ್ಪತ್ರೆ ಎದುರು ಕುಟುಂಬಸ್ಥರ ಪ್ರತಿಭಟನೆ
ತಾಯಿ ಮತ್ತು ಮಗು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಅವರು, ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಯ ಡೀನ್ ಸುನಿಲ್ ಅಗರ್ವಾಲ್ ಹಾಗೂ ಸೂಪರಿಂಟೆಂಡೆಂಟ್ ರಾಹುಲ್ ಮಿಶ್ರಾ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಹೊರತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದ ವೈರಲ್ ವಿಡಿಯೋ ಹಾಗೂ ಕುಟುಂಬಸ್ಥರ ಆರೋಪಗಳ ಆಧಾರದ ಮೇಲೆ ತನಿಖೆ ಮುಂದುವರಿದಿದ್ದು, ಕಲ್ಪನಾ ಮತ್ತು ಅವರ ಮಗುವಿನ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖಾ ವರದಿಯಿಂದ ತಿಳಿದುಬರಬೇಕಿದೆ.
ದೇಶ
Nepal Flood Horror: ಮಹಿಳೆಯ ಮೃತದೇಹದಿಂದ ಆಭರಣ ಕಳವು; ವೈರಲ್ ವಿಡಿಯೋ ಆಧರಿಸಿ ಇಬ್ಬರ ಬಂಧನ
ನೇಪಾಳ: ಭೀಕರ ಪ್ರವಾಹದಿಂದ ತತ್ತರಿಸಿರುವ Nepal ದಲ್ಲಿ ಮಾನವೀಯತೆಯನ್ನೇ ಪ್ರಶ್ನಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದ ಮಹಿಳೆಯ ಮೃತದೇಹದಿಂದ ಚಿನ್ನದ ಕಿವಿಯೋಲೆಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.
ನೇಪಾಳದ ನಾರಾಯಣಿ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದ ಮಹಿಳೆಯ ಮೃತದೇಹವನ್ನು ದಡಕ್ಕೆ ಎಳೆದು ತರುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಆಕೆಯ ಕಿವಿಯೋಲೆಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆಯ 41 ಸೆಕೆಂಡ್ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ.
ವೈರಲ್ ವಿಡಿಯೋದಲ್ಲಿ ಏನಿತ್ತು?
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಯುವಕರು ಮರದ ಹಲಗೆಗಳ ಸಹಾಯದಿಂದ ನೀರಿನಲ್ಲಿ ತೇಲಿ ಬಂದ ಮಹಿಳೆಯ ಮೃತದೇಹವನ್ನು ದಡದತ್ತ ಎಳೆದು ತರುತ್ತಿರುವುದು ಕಂಡುಬಂದಿದೆ. ಈ ವೇಳೆ ಮಹಿಳೆಯ ತಲೆಯ ಕೂದಲನ್ನು ಹಿಡಿದು ಮೃತದೇಹವನ್ನು ಎಳೆದಾಡಿದ್ದಾರೆ.
ನಂತರ ಮಹಿಳೆಯ ಎರಡೂ ಕಿವಿಗಳಲ್ಲಿದ್ದ ಚಿನ್ನದ ಓಲೆಗಳನ್ನು ತೆಗೆದು ಒಂದು ಬದಿಗೆ ಇಡುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಕಂಡುಬಂದಿದೆ. ಸಮೀಪದಲ್ಲಿದ್ದ ಕೆಲವರು ಈ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ನೇಪಾಳ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.
ಆರೋಪಿಗಳು ಯಾರು?
ಚಿಟ್ವಾನ್ ಪೊಲೀಸರು ನಡೆಸಿದ ತನಿಖೆಯಲ್ಲಿ ಮೃತ ಮಹಿಳೆ ಪ್ರವಾಹದ ಸಂದರ್ಭದಲ್ಲಿ ನಾರಾಯಣಿ ನದಿಗೆ ಕೊಚ್ಚಿಹೋಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ವೈರಲ್ ವಿಡಿಯೋ ಆಧರಿಸಿ ಆರೋಪಿಗಳನ್ನು ಗುರುತಿಸಿದ ಪೊಲೀಸರು 25 ವರ್ಷದ ಮದನ್ ಗುರುಂಗ್ ಮತ್ತು 38 ವರ್ಷದ ಉಮೇಶ್ ಚೌಧರಿ ಅವರನ್ನು ಬಂಧಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಗುರುವಾರ ಭಾರತ್ಪುರ ಮಹಾನಗರ-1ರ ಪೊಖರಾ ಬಸ್ ಪಾರ್ಕ್ ಸಮೀಪ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರವಾಹದ ನಡುವೆ ಮುಂದುವರಿದ ರಕ್ಷಣಾ ಕಾರ್ಯ
ನೇಪಾಳದಲ್ಲಿ ಭೀಕರ ಪ್ರವಾಹದಿಂದ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದು, ನೂರಾರು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಂತ್ರಸ್ತರ ಮೇಲೆ ದರೋಡೆ ಅಥವಾ ಯಾವುದೇ ರೀತಿಯ ಅಮಾನವೀಯ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೇಪಾಳ ಪೊಲೀಸರು ಎಚ್ಚರಿಸಿದ್ದಾರೆ.
ದೇಶ
Nepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್
ಬಹ್ರೈಚ್: Nepal flood ದಲ್ಲಿ ಉಂಟಾದ ಭೀಕರ ಜಲಪ್ರಳಯದ ರಭಸಕ್ಕೆ ಸಿಲುಕಿದ್ದ 5 ಕಾಡಾನೆಗಳ ಹಿಂಡು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಟರ್ನಿಯಾಘಾಟ್ ಬಳಿಯ ಗಿರ್ಜಾಪುರಿ ಬ್ಯಾರೇಜ್ ಸಮೀಪ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದೆ. ಆಗಸ್ಟ್ 25ರಂದು ನಡೆದ ಈ ಘಟನೆಯಲ್ಲಿ ಮೂರು ವಯಸ್ಕ ಆನೆಗಳು ಹಾಗೂ ಎರಡು ಮರಿಗಳು ಪ್ರವಾಹದ ಸುಳಿಗೆ ಸಿಲುಕಿದ್ದವು.
ಕೌಡಿಯಾಲ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಆನೆಗಳ ಹಿಂಡು ಸಂಕಷ್ಟಕ್ಕೆ ಸಿಲುಕಿತ್ತು. ನೀರಿನ ರಭಸ ಹೆಚ್ಚಿದ್ದರಿಂದ ಆನೆ ಮರಿಗಳಿಗೆ ತೇಲುವುದು ಕಷ್ಟವಾಗಿತ್ತು. ಈ ವೇಳೆ ವಯಸ್ಕ ಆನೆಗಳು ಮರಿಗಳನ್ನು ಸುತ್ತುವರಿದು ನಿಂತು, ಅವುಗಳನ್ನು ಪ್ರವಾಹದ ರಭಸದಿಂದ ರಕ್ಷಿಸಲು ಪ್ರಯತ್ನಿಸಿರುವುದು ಗಮನ ಸೆಳೆದಿದೆ.
ಮರಿಗಳನ್ನು ಬಿಟ್ಟು ಕದಲದ ದೊಡ್ಡ ಆನೆಗಳು
ಪ್ರವಾಹದ ನೀರು ಅಪಾಯಕಾರಿಯಾಗಿ ಹರಿಯುತ್ತಿದ್ದರೂ ವಯಸ್ಕ ಆನೆಗಳು ಮರಿಗಳನ್ನು ಏಕಾಂಗಿಯಾಗಿ ಬಿಡಲಿಲ್ಲ. ಅವುಗಳ ಸುತ್ತಲೂ ನಿಂತು ಮರಿಗಳಿಗೆ ರಕ್ಷಣೆ ನೀಡುವ ಮೂಲಕ ಸುರಕ್ಷಿತವಾಗಿ ದಡ ಸೇರುವಂತೆ ನೆರವಾದವು.
ಈ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೂ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.
ಬ್ಯಾರೇಜ್ ಗೇಟ್ಗಳನ್ನು ಬಂದ್ ಮಾಡಿದ ಅಧಿಕಾರಿಗಳು
ಆನೆಗಳ ಹಿಂಡು ಅಪಾಯದಲ್ಲಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬಳಿಕ ಗಿರ್ಜಾಪುರಿ ಬ್ಯಾರೇಜ್ನ ಗೇಟ್ಗಳನ್ನು ಮುಚ್ಚಲಾಗಿದ್ದು, ನೀರಿನ ಹರಿವಿನ ವೇಗವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ನೀರಿನ ರಭಸ ಕಡಿಮೆಯಾದ ಬಳಿಕ ವಯಸ್ಕ ಆನೆಗಳು ಚೇತರಿಸಿಕೊಂಡಿವೆ. ನಂತರ ಅವು ಎರಡು ಆನೆ ಮರಿಗಳನ್ನು ಸುರಕ್ಷಿತವಾಗಿ ದಂಡೆಯತ್ತ ಕರೆದೊಯ್ದಿವೆ.
ಸುರಕ್ಷಿತವಾಗಿ ಕಾಡಿಗೆ ಮರಳಿದ ಆನೆಗಳು
ಆನೆಗಳ ಹಿಂಡು ದಡ ತಲುಪಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಬ್ಯಾರೇಜ್ ಪ್ರದೇಶದಿಂದ ದೂರಕ್ಕೆ ಕಳುಹಿಸಿ ಸುರಕ್ಷಿತವಾಗಿ ಕಾಡಿನತ್ತ ಸಾಗುವಂತೆ ಮಾಡಿದ್ದಾರೆ.
ಆಪತ್ತಿನ ಸಮಯದಲ್ಲೂ ಮರಿಗಳನ್ನು ಬಿಟ್ಟು ಹೋಗದೆ ಅವುಗಳನ್ನು ಸುತ್ತುವರಿದು ರಕ್ಷಿಸಿದ ಆನೆಗಳ ವರ್ತನೆ ಸಾರ್ವಜನಿಕರ ಗಮನ ಸೆಳೆದಿದೆ. ಮತ್ತೊಂದೆಡೆ, ಪರಿಸ್ಥಿತಿಯನ್ನು ತ್ವರಿತವಾಗಿ ಅರಿತು ನೀರಾವರಿ ಇಲಾಖೆಯ ಸಹಕಾರದೊಂದಿಗೆ ಬ್ಯಾರೇಜ್ ಗೇಟ್ಗಳನ್ನು ಬಂದ್ ಮಾಡಿ ಆನೆಗಳ ಜೀವ ಉಳಿಸಿದ ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಗೂ ಮೆಚ್ಚುಗೆ ವ್ಯಕ್ತವಾಗಿದೆ.
-
ರಾಜ್ಯ11 ಗಂಟೆಗಳು agoB Nagendra ರಾಜೀನಾಮೆ: ಡಿಕೆ ಶಿವಕುಮಾರ್ ಹೇಳಿದ್ದೇನು? ಬಿಜೆಪಿ ವಿರುದ್ಧ ಸಿಎಂ ಗರಂ, ‘ನಾಗೇಂದ್ರ ನಿರಪರಾಧಿ’ ಎಂದ ಡಿಸಿಎಂ
-
ಬೆಂಗಳೂರು10 ಗಂಟೆಗಳು agoBengaluru ನಲ್ಲಿ ಕುಡಿದು ನೀರಿನ ಟ್ಯಾಂಕರ್ ಚಲಾಯಿಸುತ್ತಿದ್ದ 40 ಚಾಲಕರ ಬಂಧನ; ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಅಲರ್ಟ್!
-
ದೇಶ10 ಗಂಟೆಗಳು agoNepal-Tibet ಪ್ರವಾಹದ ಭೀಕರ ದೃಶ್ಯ ಚೀನಾದಲ್ಲಿ ಕಾಣೆಯಾಗಿದ್ದೇಕೆ? ವೈರಲ್ ವಿಡಿಯೋಗೆ ಸೆನ್ಸಾರ್!
-
ರಾಜಕೀಯ10 ಗಂಟೆಗಳು agoRamakrishna Hegde ಜನ್ಮಶತಮಾನೋತ್ಸವ: ಬಿಜೆಪಿ ಗೆಲುವನ್ನು ಮೊದಲೇ ಊಹಿಸಿದ್ದ ಕರ್ನಾಟಕದ ಧೀಮಂತ ನಾಯಕ!
-
ದೇಶ11 ಗಂಟೆಗಳು agoGuru Raghavendra Swamy ಆರಾಧನೆಗೆ ಭಕ್ತರ ಮಹಾಪೂರ: ಮಂತ್ರಾಲಯದಲ್ಲಿ ಪೂರ್ವಾರಾಧನೆ ಅದ್ಧೂರಿ ಆಚರಣೆ
-
ರಾಜ್ಯ3 ಗಂಟೆಗಳು agoST Leaders ನ್ನೇ ಗುರಿಯಾಗಿಸಲಾಗುತ್ತಿದೆ: B Nagendra ರಾಜೀನಾಮೆ ಕುರಿತು K N Rajanna ಸ್ಫೋಟಕ ಹೇಳಿಕೆ
-
ದೇಶ3 ಗಂಟೆಗಳು agoRewa Hospital ‘ಇಲ್ಲಿ ಡೆಲಿವರಿ ಮಾಡಿಸಬೇಡಿ’ ಎಂದ ಯುವತಿ: ಹೆರಿಗೆ ಬಳಿಕ ತಾಯಿ-ಮಗು ದಾರುಣ ಸಾವು
-
ರಾಜಕೀಯ7 ಗಂಟೆಗಳು agoB Nagendra ಗೆ Janardhana Reddy ಸವಾಲ್; 10 ಶಾಸಕರಿಗೆ ರಾಜೀನಾಮೆ ಕೊಡಿಸಿ ಚುನಾವಣೆ ಎದುರಿಸಿ ಎಂದ ಬಿಜೆಪಿ ಶಾಸಕ
