Connect with us

ದೇಶ

ಹೆಸರು ಹೇಳೋಕೆ ಕಷ್ಟಪಡಬೇಕಾದ ಜಗತ್ತಿನ 5 ಅಪರೂಪದ ಸ್ಕಾಚ್ಸ್‌!

Published

on

ಸ್ಕಾಚ್‌ ವಿಸ್ಕಿ ಅಂದರೆ ಕುಡುಕರ ತಲೆ ಧಿಮ್‌ ಎನ್ನುತ್ತದೆ. ಆದರೆ, ಪ್ರಪಂಚದಲ್ಲಿ ಕೆಲವೊಂದು ಸ್ಕಾಚ್‌ ವಿಸ್ಕಿಗಳಿದ್ದು, ಅವುಗಳ ಹೆಸರನ್ನು ಉಚ್ಛಾರಣೆ ಮಾಡೋದೆ ಕಷ್ಟ. ಈ ಲೇಖನದಲ್ಲಿ ಪ್ರಪಂಚದ ಐದು ಸ್ಕಾಚ್‌ ವಿಸ್ಕಿಗಳು ಸುವಾಸನೆಯ ಕಾರಣಕ್ಕಾಗಿ ಮಾತ್ರವಲ್ಲ ತನ್ನ ಹೆಸರಿನಲ್ಲೂ ಹೊಸ ಸಾಹಸ ಮಾಡುತ್ತಿದೆ. ಇವುಗಳು ಸ್ಕಾಟ್ಲೆಂಡ್‌ನ ವಿಸ್ಕಿ ಪರಂಪರೆಯನ್ನು ಮಾತ್ರವಲ್ಲದೆ, ಅಲ್ಲಿನ ಶ್ರೀಮಂತ ಭಾಷಾ ಪರಂಪರೆಯನ್ನೂ ನೋಡಬಹುದಾಗಿದೆ.

Bruichladdich

ಬ್ರೂಚ್ಲಾಡಿಚ್ (Bruichladdich) ಅಂತಾ ನೀವು ಇದನ್ನು ಓದಬಹುದಾದರೂ ಇದರ ಉಚ್ಚಾರಣೆ ಬ್ರೂಕ್ಲಾಡೀ (bru-kla-dee). ಇಸ್ಲೇಯ ಲೊಚ್ ಇಂಡಾಲ್‌ನ ಪಶ್ಚಿಮ ತೀರದಲ್ಲಿ ರೆಮಿ ಕೊಯಿಂಟ್ರೂ-ಮಾಲೀಕತ್ವದ ಡಿಸ್ಟಿಲರಿಯ ಸ್ಕಾಚ್‌ ವಿಸ್ಕಿ ಇದು. 1881ರಲ್ಲಿ ಆರಂಭವಾದ ಈ ಡಿಸ್ಟಲರಿಯ ಬ್ರೂಕ್ಲಾಡೀ  ಸೌಮ್ಯವಾದ, ಹೂವಿನ ಮತ್ತು ಜೇನುತುಪ್ಪದ ವಿಸ್ಕಿಗಳಿಗೆ ಹೆಸರುವಾಸಿಯಾಗಿದೆ. ಇದರ ಒಂದು ಬಾಟಲ್‌ನ ಬೆಲೆ 40 ಸಾವಿರ ರೂಪಾಯಿ. ಫೆಬ್ರವರಿ 2024 ರಲ್ಲಿ ಹೊಸ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಅನ್ನು ಪ್ರಾರಂಭಿಸುವುದರೊಂದಿಗೆ ಬ್ರೂಕ್ಲಾಡೀ 21 ವರ್ಷದ ಹಳೆಯ ಬಾಟಲ್‌ಅನ್ನು ನವೀಕರಿಸಿದ್ದಾರೆ. ಬ್ರೂಕ್ಲಾಡೀ ಥರ್ಟಿ ಅನ್ನು ಸಹ ಅನಾವರಣಗೊಳಿಸಲಾಯಿತು.

Bunnahabhain

ಬುನ್ನಾಹ್‌ಬೈನ್‌ ಎಂದು ನಾವಿದನ್ನು ಓದಬಹುದಾದರೂ, ಇದರ ಉಚ್ಛಾರಣೆ, ಬುನಾಹವ್‌ಎನ್‌ (Bu-Nah-Hav-En). ಒಂದು ಬಾಟಲ್‌ನ ಬೆಲೆ 2.60 ಲಕ್ಷ ರೂಪಾಯಿ. ಇಸ್ಲೇ ಡಿಸ್ಟಿಲರಿ ದ್ವೀಪದ ಈಶಾನ್ಯ ಕರಾವಳಿಯಲ್ಲಿದೆ. ಬ್ರೂಕ್ಲಾಡೀನಂತೆ, ಇದನ್ನು 1881 ರಲ್ಲಿ ವಿಕ್ಟೋರಿಯನ್ ವಿಸ್ಕಿಯ ಕ್ರಾಂತಿಯ ಮಧ್ಯೆ ಸ್ಥಾಪಿಸಲಾಯಿತು. ಡಿಸ್ಟಿಲರಿಯು ಈ ಹಿಂದೆ ಪೀಟೆಡ್ ಸಿಂಗಲ್ ಮಾಲ್ಟ್‌ಗಳನ್ನು ಉತ್ಪಾದನೆ ಮಾಡುತ್ತಿತ್ತು. 1960 ರ ದಶಕದಿಂದ ಬುನಾಹವ್‌ಎನ್‌ ಪ್ರಧಾನವಾಗಿ ಶೆರ್ರಿ ಪೀಪಾಯಿಗಳಲ್ಲಿ ಏಜಡ್‌ ಪೀಟ್ ಮಾಡದ ವಿಸ್ಕಿಯನ್ನು ಉತ್ಪಾದಿಸುತ್ತಿದೆ. ಇಲ್ಲಿಯವರೆಗೂ ಕೇವಲ 594 ಬಾಟಲ್‌ಗಳನ್ನು ಮಾತ್ರವೇ ಮಾರಾಟ ಮಾಡಲಾಗಿದೆ.

Glen Garioch

ಗ್ಲೆನ್‌ ಗ್ಯಾರಿಯೋಚ್ ಎಂದು ನಾವು ಹೇಳಬಹುದಾದರೂ, ಇದರ ಸರಿಯಾದ ಉಚ್ಛಾರಣೆ ಗ್ಲೆನ್‌ ಗೀರೇ (Glen-Geery). ಡಿಸ್ಟಿಲರಿಯು ತನ್ನ ಹೆಸರನ್ನು ಗೀರೇಯ ಹತ್ತಿರದ ಕಣಿವೆಯಿಂದ ಪಡೆದುಕೊಂಡಿದೆ, ಇದು ಸ್ಕಾಟ್ಲೆಂಡ್‌ನ ಅತ್ಯುತ್ತಮ ಬಾರ್ಲಿ-ಬೆಳೆಯುವ ಪ್ರದೇಶಗಳಲ್ಲಿ ಒಂದಾಗಿದೆ. ಸ್ಕಾಟ್ಲೆಂಡ್‌ನ ಅನೇಕ ಡಿಸ್ಟಿಲರಿಗಳು ‘ಗ್ಲೆನ್’ ಪೂರ್ವಪ್ರತ್ಯಯವನ್ನು ಹೊಂದಿರುತ್ತವೆ. ಸ್ಕಾಟ್ಸ್‌ ಗೇಲಿಕ್‌ನಲ್ಲಿ ‘ಗ್ಲೆನ್’ ಎಂದರೆ ‘ಕಣಿವೆ’ ಎಂದರ್ಥವಾಗಿದೆ. ಸ್ಕಾಟಿಷ್ ಹೈಲ್ಯಾಂಡ್ಸ್‌ನ ಓಲ್ಡ್‌ಮೆಲ್ಡ್ರಮ್‌ನಲ್ಲಿರುವ ಗ್ಲೆನ್‌ ಗೀರೇ ಅನ್ನು 1797 ರಲ್ಲಿ ಥಾಮಸ್ ಸಿಂಪ್ಸನ್ ಸ್ಥಾಪಿಸಿದರು. ಸ್ಕಾಟ್ಲೆಂಡ್‌ನ ಅತ್ಯಂತ ಹಳೆಯ ಕಾರ್ಯಾಚರಣೆಯ ಡಿಸ್ಟಿಲರಿಗಳಲ್ಲಿ ಒಂದಾಗಿದೆ. ಇದರ ಒಂದು ಸಿಂಗಲ್‌ ಬಾಟಲ್‌ನ ಬೆಲೆ 2.87 ಲಕ್ಷ ರೂಪಾಯಿ.

Auchentoshan

ಔಚೆಂಟೋಶನ್ ಎಂದು ನಾವಿದನ್ನು ಕರೆಯಬಹುದಾದರೂ ಇದರ ಉಚ್ಛಾರಣೆ ‘ಔಕುಂತೋಷ್‌ಉನ್‌'(Ock-Un-Tosh-Un). ಇದು ಲೋಲ್ಯಾಂಡ್ ಡಿಸ್ಟಿಲರಿಯಾಗಿದ್ದು, ಇದು ಗ್ಲ್ಯಾಸ್ಗೋದ ಉತ್ತರಕ್ಕೆ ಕ್ಲೈಡ್ ನದಿಯ ಮುಖಭಾಗದಲ್ಲಿದೆ. ‘ಉಚ್ಛಾರ ಮಾಡೋಕೆ ಕಷ್ಟ, ಕುಡಿಯಲು ಸುಲಭ..’ ಸಂತಾ ಸ್ವತಃ ಈ ಕಂಪನಿಯೇ ಹೇಳಿಕೊಳ್ಳುತ್ತದೆ.  ಡಿಸ್ಟಿಲರಿಯು ಸ್ಕಾಟಿಷ್ ಗೇಲಿಕ್ ನುಡಿಗಟ್ಟು ‘ಅಚಾದ್ ಆನ್ ಓಸಿನ್’ ಅಂದರೆ ಇಂಗ್ಲಿಷ್‌ನಲ್ಲಿ ‘ಸ್ಥಳದ ಮೂಲೆ’ಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.1817 ರಲ್ಲಿ ಜಾನ್ ಬುಲೋಚ್ ಸ್ಥಾಪಿಸಿದ ಔಕುಂತೋಷ್‌ಉನ್‌, ಸ್ಕಾಟ್ಲೆಂಡ್‌ನಲ್ಲಿ ಟ್ರಿಪಲ್ ಡಿಸ್ಟಿಲೇಷನ್ ಅನ್ನು ಪ್ರತ್ಯೇಕವಾಗಿ ಬಳಸುವ ಏಕೈಕ ವಿಸ್ಕಿ ಡಿಸ್ಟಿಲರಿ ಎಂದು ಪ್ರಸಿದ್ಧವಾಗಿದೆ. ಎಲ್ಲಾ ಉತ್ಪಾದನೆಯನ್ನು ಸಿಂಗಲ್‌ ಮಾಲ್ಟ್‌ಗಳಿಗೆ ಬಳಸಲಾಗುತ್ತದೆ. ಇದರ ಒಂದು ಸಿಂಗಲ್‌ ಬಾಟಲ್‌ನ ಬೆಲೆ 55 ಸಾವಿರ ರೂಪಾಯಿ.

Caol Ila

ಕಾಲ್ ಇಲಾ ಎಂದು ನೀವಿದನ್ನೂ ಉಚ್ಛಾರ ಮಾಡಿದರೂ, ಇದರ ಸರಿಯಾದ ಉಚ್ಛಾರಣೆ ಕುಲ್ ಇಲಾಹ್ (Cull-Ee-Lah). ಇದರ ಒಂದು ಸಿಂಗಲ್‌ ಬಾಟಲ್‌ನ ಬೆಲೆ 59 ಸಾವಿರ ರೂಪಾಯಿ. ಕುಲ್ ಇಲಾಹ್ ಎಂಬುದು ಸೌಂಡ್ ಆಫ್ ಇಸ್ಲೇಗೆ ಸ್ಕಾಟಿಷ್ ಗೇಲಿಕ್ ಹೆಸರಾಗಿದೆ. ಐಲ್ ಆಫ್ ಜುರಾದಿಂದ ಇಸ್ಲೇಯನ್ನು ಪ್ರತ್ಯೇಕಿಸುವ ನೀರಿನ ಭಾಗ ಇದು. ಈ ಡಿಸ್ಟಿಲರಿ  ಬುನಾಹವ್‌ಎನ್‌ ದಕ್ಷಿಣಕ್ಕೆ ಪೋರ್ಟ್ ಅಸ್ಕೈಗ್‌ನ ಉತ್ತರದಲ್ಲಿದೆ.

ದೇಶ

ಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ

Published

on

ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಭಾನುವಾರ ಭಾವುಕ ವಿದಾಯ ನೀಡಲಾಯಿತು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದ್ದು, ಮೈಸೂರು ಜಿಲ್ಲಾಡಳಿತದಿಂದ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ಎಸ್. ಜಾನಕಿ ಅವರ ಪತಿ ರಾಮಪ್ರಸಾದ್ ಅವರು 1997ರಲ್ಲೇ ನಿಧನರಾಗಿದ್ದರು. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಕೂಡ 2026ರ ಜನವರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಟುಂಬದಲ್ಲಿ ಪುರುಷ ವಾರಸುದಾರರಿಲ್ಲದ ಕಾರಣ, ಜಾನಕಿ ಅವರ ಮೊಮ್ಮಗಳು ಅಪ್ಸರಾ ಕುಟುಂಬದ ಪರವಾಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅಜ್ಜಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಭಾವುಕ ಕ್ಷಣ ಕಂಡು ಸ್ಥಳದಲ್ಲಿದ್ದ ಅಭಿಮಾನಿಗಳು ಕಣ್ಣೀರಿಟ್ಟರು.

1956ರಲ್ಲಿ ರಾಮಪ್ರಸಾದ್ ಅವರನ್ನು ವಿವಾಹವಾಗಿದ್ದ ಎಸ್. ಜಾನಕಿ, ತಮ್ಮ ಪತಿಯನ್ನು ಪ್ರೀತಿಯಿಂದ ‘ರಾಮು’ ಎಂದು ಕರೆಯುತ್ತಿದ್ದರು. ಜಾನಕಿ ಅವರ ಸಂಗೀತ ಪಯಣದಲ್ಲಿ ರಾಮಪ್ರಸಾದ್ ಸದಾ ಬೆಂಬಲವಾಗಿ ನಿಂತಿದ್ದು, ಅವರ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದರು ಎಂದು ಕುಟುಂಬದವರು ನೆನಪಿಸಿಕೊಂಡರು.

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಅಮರ ಗೀತೆಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ, 2017ರ ಅಕ್ಟೋಬರ್ 28ರಂದು ಮೈಸೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಾಯನಕ್ಕೆ ವಿದಾಯ ಹೇಳಿದ್ದರು. ಮಲಯಾಳಂ ಚಿತ್ರದ ‘ಅಮ್ಮ ಪೂವಿನುಂ’ ಜೋಗುಳ ಗೀತೆ ಅವರ ಗಾಯನ ಬದುಕಿನ ಕೊನೆಯ ದಾಖಲಾದ ಹಾಡಾಗಿ ಉಳಿದಿದೆ.

ಗಾನಕೋಗಿಲೆ ಎಸ್. ಜಾನಕಿ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಮಧುರ ಕಂಠ, ಅಮರ ಗೀತೆಗಳು ಮತ್ತು ಅಪಾರ ಸಂಗೀತ ಸೇವೆ ಭಾರತೀಯ ಸಂಗೀತ ಲೋಕದಲ್ಲಿ ಸದಾಕಾಲ ಜೀವಂತವಾಗಿರಲಿವೆ.

Continue Reading

ದೇಶ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ

Published

on

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳನ್ನು ವೈಭವೀಕರಿಸುವ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ‘Legends and Personalities of Jammu and Kashmir’ ಪುಸ್ತಕದ ಪ್ರಕಟಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಕೌಂಟರ್ ಇಂಟೆಲಿಜೆನ್ಸ್ ವಿಂಗ್ (CIK) ಮೂವರು ಪ್ರಕಾಶಕರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದೆ.

ತನಿಖಾಧಿಕಾರಿಗಳ ಪ್ರಕಾರ, ಪುಸ್ತಕದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿ ನಾಯಕರನ್ನು ಜಮ್ಮು-ಕಾಶ್ಮೀರದ ಪ್ರಮುಖ ವ್ಯಕ್ತಿಗಳಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಬಂಧಿತರಲ್ಲಿ ಇಬ್ಬರು ದೆಹಲಿ ಮೂಲದವರಾಗಿದ್ದು, ಮತ್ತೊಬ್ಬರು ಜಮ್ಮುವಿನ ನಿವಾಸಿಯಾಗಿದ್ದಾರೆ. ಈ ಹಿಂದೆ ದೆಹಲಿ ಮತ್ತು ಜಮ್ಮುವಿನ ವಿವಿಧ ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಡಿಜಿಟಲ್ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ ಆರೋಪವೂ ಕೇಳಿಬಂದಿದ್ದು, ತನಿಖಾ ತಂಡ ಡೇಟಾವನ್ನು ಮರುಪಡೆದಿದೆ ಎಂದು ತಿಳಿದುಬಂದಿದೆ.

ಪ್ರಕರಣದ ತನಿಖೆಯ ಭಾಗವಾಗಿ ಪುಸ್ತಕದ ಲೇಖಕರೊಬ್ಬರನ್ನು ರಾಜಸ್ಥಾನದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತೊಬ್ಬ ಲೇಖಕರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆಯಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ. ಈಗಾಗಲೇ ಒಬ್ಬ ಪ್ರಾಂಶುಪಾಲರು ಸೇರಿದಂತೆ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪುಸ್ತಕದ ಪ್ರಕಟಣೆ, ಮುದ್ರಣ ಹಾಗೂ ಪ್ರಚಾರಕ್ಕೆ ಸಂಬಂಧಿಸಿದವರ ವಿರುದ್ಧ ಯುಎಪಿಎ (UAPA) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Continue Reading

ಬೆಂಗಳೂರು

Shakthi Scheme ಬಳಿಕ BMTC ಸೇವೆ ಹೇಗಿದೆ? ಬಸ್‌ನಲ್ಲಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕ ಉತ್ತರ

Published

on

ಬೆಂಗಳೂರು: Shakthi Scheme ಜಾರಿಯಾದ ಬಳಿಕ ಬಿಎಂಟಿಸಿ ಸೇವೆಗಳ ನೈಜ ಸ್ಥಿತಿ ತಿಳಿಯಲು ಸಾರಿಗೆ ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದರು. ಜಯಮಹಲ್, ಆರ್.ಟಿ.ನಗರ, ಸಿಬಿಐ ರಸ್ತೆ, ಹೆಬ್ಬಾಳ ಹಾಗೂ ನಾಗವಾರ ಮಾರ್ಗಗಳಲ್ಲಿ ಪ್ರಯಾಣಿಸಿದ ಸಚಿವರು, ಸಾರ್ವಜನಿಕರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದರು.

ಈ ವೇಳೆ ಹೆಬ್ಬಾಳ ಮಾರ್ಗದ ಬಸ್‌ನಲ್ಲಿ ಸಚಿವರಿಗೆ ಅಚ್ಚರಿಯ ಅನುಭವ ಎದುರಾಯಿತು. ಟಿಕೆಟ್ ಪಡೆಯಲು ಅವರು ₹100 ಮುಖಬೆಲೆಯ ನೋಟು ನೀಡಿದಾಗ, ಅವರನ್ನು ಗುರುತಿಸದ ಕಂಡಕ್ಟರ್ ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬಸ್‌ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಸಚಿವರು ಯಾವುದೇ ವಾಗ್ವಾದ ನಡೆಸದೆ ಬಸ್‌ನಿಂದ ಇಳಿದು, ಬಳಿಕ ಚಿಲ್ಲರೆ ಹಣ ಹೊಂದಿಸಿಕೊಂಡು ಮತ್ತೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪರಿಶೀಲನೆ ವೇಳೆ ಮತ್ತೊಂದು ಗಂಭೀರ ಲೋಪವೂ ಸಚಿವರ ಗಮನಕ್ಕೆ ಬಂತು. ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕೈ ತೋರಿಸಿದರೂ ಬಸ್ ನಿಲ್ಲಿಸದೇ ಚಾಲಕ ಮುಂದಕ್ಕೆ ಚಲಿಸಿದ್ದನ್ನು ಅವರು ಖುದ್ದಾಗಿ ವೀಕ್ಷಿಸಿದರು. ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸಂಬಂಧಿಸಿದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರ ಆದೇಶದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸಾರಿಗೆ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ನಿರ್ಲಕ್ಷ್ಯ ತೋರಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬೈರತಿ ಸುರೇಶ್ ನೀಡಿದ್ದಾರೆ.

Continue Reading

Trending