ದೇಶ
ಸರ್ವಪಕ್ಷ ಅಟೆಂಡ್ ಮಾಡೋಕೆ ಆಗಿಲ್ಲ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
ಹಾವೇರಿ: ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಇಂದು ಸರ್ವಪಕ್ಷ ಸಭೆ ಕರೆದಿದ್ದರು, ಇದಕ್ಕೆ ಹೋಗಲು ನನಗೆ ತಡರಾತ್ರಿ ಆಹ್ವಾನ ಬಂದಿತ್ತು, ಹೀಗಾಗಿ ಅದಕ್ಕೆ ಅಟೆಂಡ್ ಮಾಡೊಕೆ ಆಗಿಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು, ಹಾವೇರಿ ಅವರು ಮಾತನಾಡುತ್ತ ನಾನು ಇಂದು ಪ್ರವಾಸದಲ್ಲಿದ್ದೇನೆ ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ, ಈಗಾಗಲೇ 15,000 ಕ್ಯೂಸೆಕ್ಸ್ ನೀರು ಹರಿಸಿದ್ದಾರೆ, ಮತ್ತೆ ನೀರು ಬಿಡುವುದು ಸಾಧ್ಯವಾಗದ ಮಾತು, ಮಳೆಗಾಲ ಇಲ್ಲ, ರೈತರಿಗೆ ಸಂಕಷ್ಟ ಇದೇ, ಕುಡಿವ ನೀರಿಗಾಗಿ ಸಂಗ್ರಹ ಮಾಡುವ ಅವಶ್ಯವಿದೆ, ಸುಪ್ರೀಂಕೋರ್ಟ್ಗೆ ನೀರು ಕೊಡೊಲ್ಲಾ ಅಂತಾ 12ನೇ ತಾರೀಖಿನಿಂದೇ ಹೇಳಿದೆ, ಅದಕ್ಕೆ ಸರ್ಕಾರ ಬದ್ದವಾಗಿ ಇರಬೇಕು, ಯಾವುದೇ ಕಾರಣಕ್ಕೂ ನೀರು ಬಿಡಕೂಡದು, ಕೂಡಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ, ನೀರು ಯಾಕೆ ಬಿಡೊಕೆ ಆಗೋದಿಲ್ಲ ಎಂದು ಗಟ್ಟಿಯಾಗಿ ಪ್ರತಿಪಾದಿಸಬೇಕು, ಇದೇ ನಮ್ಮ ಅಗ್ರಹ, ಮತ್ತೆ ಸರ್ವಪಕ್ಷ ಸಭೆ ಕೆರದಿರುವುದು ನೋಡಿದ್ರೆ ಸುಪ್ರೀಂಕೋರ್ಟ್ನಲ್ಲಿ ಪ್ರತಿಪಾದಿಸೋಕೆ ಆಗ್ತಾ ಇಲ್ಲ, ಸರ್ಕಾರ ಒತ್ತಡಕ್ಕೆ ಸಿಲುಕಿದ್ದೆ ಎಂದು ಎನಿಸುತ್ತೆ ಎಂದು ಬೊಮ್ಮಾಯಿ ಅನುಮಾನ ವ್ಯಕ್ತಪಡಿಸಿದರು,
ನಾವೆಲ್ಲ ಅವರ ಜೊತೆ ಇದ್ದೇವೆ, ಒತ್ತಡಕ್ಕೆ ಮಣಿಯಬಾರದು, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು, ರಾಜ್ಯದ ನಾಯಕತ್ವ ಎಷ್ಟು ಗಟ್ಟಿಯಾಗಿದೆ ಎಂದು ಈ ವೇಳೆ ತೋರಿಸಕೊಡಬೇಕಾಗಿದೆ,