Connect with us

Blog

ಸರ್ಕಾರದ ವಿರುದ್ಧ ಬೀದಿಗಿಳಿದ ಅಂಗನವಾಡಿ ಕಾರ್ಯಕರ್ತೆಯರು

Published

on

ರಾಜ್ಯದ್ಯಂತ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಆರಂಭವಾಗಿದೆ. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಮುಖ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಫೆಡರೇಶನ್ ನ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಗೌರವ ಧನವನ್ನು 15,000 ಕ್ಕೆ ಏರಿಸುವುದಾಗಿ ಮತ್ತು ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರ ಗೌರವ ಧನವನ್ನು 10 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಚುನಾವಣೆಗು ಮುನ್ನ ಕಾಂಗ್ರೆಸ್ ಸರ್ಕಾರ ಭರವಸೆ ಕೊಟ್ಟಿತ್ತು. ಮೃತರಾದರೆ ಅಥವಾ ನಿವೃತ್ತಿ ಹೊಂದಿದವರಿಗೆ 3 ಲಕ್ಷ ರೂಪಾಯಿ ನೀಡುವುದಾಗಿಯೂ ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಎರಡು ಲಕ್ಷ ನೀಡುವುದಾಗಿಯೂ ಚುನಾವಣೆಗು ಮುನ್ನ ಖಾನಾಪುರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಭರವಸೆ ಕೊಟ್ಟಿದ್ದರು,ಇದೀಗ ಅಂಗನವಾಡಿ ಕಾರ್ಯಕರ್ತೆಯರು ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದಾರೆ.ಅಂಗನವಾಡಿ ಕೇಂದ್ರಗಳಿಗೆ ಪರ್ಯಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲು ಸೂಚನೆ ಮಾಡಲಾಗಿದೆ.ಈಗಾಗಲೇ 262 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವುದರ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಅಂಗನವಾಡಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.ಅಂಗನವಾಡಿ ಕೇಂದ್ರಗಳು ಇರುವ ಸ್ಥಳದಲ್ಲಿಯೇ ಶಿಶು ಪಾಲನ್ನು ಕೇಂದ್ರವನ್ನು ಶಾಲಾ ಪೂರ್ವ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು ಇದು ಅಂಗನವಾಡಿ ಕೇಂದ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ನರೇಗಾ ಯೋಜನೆ ಅಡಿ ಶಿಶುಪಾಲನ ಕೇಂದ್ರಗಳನ್ನು ಆರಂಭಿಸಲು ಸಿದ್ಧತೆ ಮಾಡಲಾಗಿದ್ದು ಬಿಬಿಎಂಪಿಯೂ ಕೂಡ ಶಿಶುಪಾಲನ ಕೇಂದ್ರಗಳನ್ನು ಆರಂಭಿಸುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಂದ ಆಕ್ರೋಶ ವ್ಯಕ್ತವಾಗಿದೆ ಅಂಗನವಾಡಿ ಕೇಂದ್ರಗಳು ನಿರ್ವಹಿಸಬೇಕಾದ ಕೆಲಸಗಳನ್ನು ಪರ್ಯಾಯ ಮಾಡಲು ಹೊರಟಿರುವುದರಿಂದ, ಮುಂದೆ ಅಂಗನವಾಡಿಗಳು ಮುಚ್ಚಿ ಹೋಗುವ ಸಾಧ್ಯತೆಯ ಭೀತಿ ಹೆಚ್ಚಾಗಿದೆ.ಹಾಗೆಯೇ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿ, ಅಂಗನವಾಡಿಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರು ಆಗಬಹುದು ಹೀಗಾಗಿ ಸರ್ಕಾರದ ನಡೆಗೆ ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫಡರೇಶನ್ ನಿಂದ ವಿರೋಧ ವ್ಯಕ್ತವಾಗಿದೆ.ಅಂಗನವಾಡಿ ಕಾರ್ಯಕರ್ತೆಯರು ಭವಿಷ್ಯ ನಿಧಿ ಪಡೆಯಲು ಅರ್ಹರು ಎಂಬ ಸುಪ್ರೀಂ ತೀರ್ಪು ಎಲ್ಲಾ ನಿವೃತ್ತರಿಗೂ ಅನ್ವಯವಾಗುವಂತೆ ಜಾರಿಗೊಳಿಸಲು ಆಡಳಿತಾತ್ಮಕ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ,ಈ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ಆರಂಭಿಸಿದ್ದಾರೆ..

Blog

ಗೋಡಂಬಿ ತಿನ್ನಿದರೆ ತೂಕ ಹೆಚ್ಚುತ್ತದಾ? ನಿಜ-ಸುಳ್ಳು ಬಹಿರಂಗ!

Published

on

ಬೆಂಗಳೂರು, ಏ. 4: ಇದೀಗ ಗೋಡಂಬಿ ಅಥವಾ Cashew (ಗೇರುಬೀಜ)ಗಳ ಋತು ಆರಂಭವಾಗಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಗೇರುಹಣ್ಣಿನ ಮರಗಳು ಸಮೃದ್ಧವಾಗಿ ಕಾಣಿಸುತ್ತಿವೆ. ಭಾರತೀಯ ಅಡುಗೆಗಳಲ್ಲಿ ಸಿಹಿ-ಖಾರದ ತಿನಿಸುಗಳಿಗೆ ವಿಶೇಷ ರುಚಿ ನೀಡುವ ಗೋಡಂಬಿ ಬಗ್ಗೆ ಹಲವಾರು ಗೊಂದಲಗಳು ಹಾಗೂ ತಪ್ಪು ಕಲ್ಪನೆಗಳು ಹರಿದಾಡುತ್ತಿವೆ.

ಕೆಲವರು ಗೋಡಂಬಿ ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎಂದು ನಂಬಿದರೂ, ತಜ್ಞರ ಪ್ರಕಾರ ಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಲಾಭಕಾರಿ. 100 ಗ್ರಾಂ ಗೋಡಂಬಿಯಲ್ಲಿ ಸುಮಾರು 550 ಕ್ಯಾಲರಿಗಳು ಇದ್ದರೂ, ಇದರಲ್ಲಿರುವ ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬು ದೇಹದ ಒಳ್ಳೆಯ ಕೊಲೆಸ್ಟ್ರಾಲ್ (HDL) ಹೆಚ್ಚಿಸಲು ಸಹಕಾರಿಯಾಗಿದೆ.

ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂಬ ಮತ್ತೊಂದು ಭೀತಿ ಕೂಡ ಸಂಪೂರ್ಣ ಸತ್ಯವಲ್ಲ. ಗೋಡಂಬಿಯಲ್ಲಿ ಇರುವ ಫೈಟೊಸ್ಟೆರಾಲ್ ಅಂಶಗಳು ದೇಹದ ಕೆಟ್ಟ ಕೊಲೆಸ್ಟ್ರಾಲ್ (LDL) ನಿಯಂತ್ರಿಸಲು ಸಹಾಯ ಮಾಡಬಹುದು. ದಿನಕ್ಕೆ ಸುಮಾರು 25 ಗ್ರಾಂ ಮಿತಿಯಲ್ಲಿ ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಧುಮೇಹದ ಬಗ್ಗೆ ಆತಂಕವಿರುವವರಿಗೂ ಗೋಡಂಬಿ ಸಂಪೂರ್ಣ ಹಾನಿಕಾರಕವಲ್ಲ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಧಾನವಾಗಿ ಏರಿಸುತ್ತದೆ. ಆದರೆ ಮಿತಿಮೀರಿದ ಸೇವನೆ ತಪ್ಪಿಸಬೇಕು.

ಇನ್ನು ಮೊಡವೆ ಹೆಚ್ಚುತ್ತದೆ ಎಂಬ ಮಾತಿಗೂ ವೈಜ್ಞಾನಿಕ ಆಧಾರವಿಲ್ಲ. ಗೋಡಂಬಿಯಲ್ಲಿರುವ ಸೆಲೆನಿಯಂ ಹಾಗೂ ವಿಟಮಿನ್ C ಚರ್ಮದ ಆರೋಗ್ಯಕ್ಕೆ ಸಹಾಯಕ.

ಆದಾಗ್ಯೂ, ಕೆಲವು ಮಂದಿಗೆ ಬೀಜಗಳ ಅಲರ್ಜಿ ಇರುವ ಸಾಧ್ಯತೆ ಇದ್ದು, ಇಂತಹವರು ಎಚ್ಚರಿಕೆಯಿಂದ ಇರಬೇಕು. ಒಟ್ಟಿನಲ್ಲಿ, ಗೋಡಂಬಿ ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಲಾಭಕಾರಿ ಆಹಾರವಾಗಿದ್ದು, ಅತಿಯಾದ ಸೇವನೆ ಮಾತ್ರ ಸಮಸ್ಯೆಗೆ ಕಾರಣವಾಗಬಹುದು.

Continue Reading

Blog

Bengaluru : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ: ಜನತೆಗೆ ಫೆಡರೇಷನ್ ಸ್ಪಷ್ಟನೆ

Published

on

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗಬಹುದು ಎಂಬ ಆತಂಕದ ನಡುವೆ ಮಹತ್ವದ ಸ್ಪಷ್ಟನೆ ಹೊರಬಂದಿದೆ. Akhila Karnataka Federation of Petroleum Traders (ಎಕೆಎಫ್‌ಪಿಟಿ) ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಯಾವುದೇ ರೀತಿಯ ಕೊರತೆಯಿಲ್ಲ ಎಂದು ತಿಳಿಸಿದೆ.

ಇತ್ತೀಚೆಗೆ United States, Israel ಮತ್ತು Iran ನಡುವೆ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಇಂಧನ ಪೂರೈಕೆ ಬಗ್ಗೆ ಕೆಲ ಆತಂಕಕಾರಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ. ಆದರೆ ಈ ರೀತಿಯ ಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದು ಫೆಡರೇಷನ್ ಮನವಿ ಮಾಡಿದೆ.

ಪ್ರಕಟಣೆಯಲ್ಲಿ ತಿಳಿಸಿರುವಂತೆ, ರಾಜ್ಯದಲ್ಲಿ ತೈಲ ಪೂರೈಕೆ ಸರಾಗವಾಗಿ ನಡೆಯುತ್ತಿದೆ. Indian Oil Corporation, Bharat Petroleum Corporation Limited, Hindustan Petroleum Corporation Limited ಹಾಗೂ Mangalore Refinery and Petrochemicals Limited ಕಂಪನಿಗಳು ರಾಜ್ಯದ ವಿವಿಧ ಟರ್ಮಿನಲ್‌ಗಳಿಂದ ನಿರಂತರವಾಗಿ ಇಂಧನ ಪೂರೈಕೆ ಮಾಡುತ್ತಿವೆ.

ಈ ಎಲ್ಲಾ ಕಂಪನಿಗಳಿಂದ ರಾಜ್ಯಾದ್ಯಂತ ಇರುವ ಪೆಟ್ರೋಲ್ ಬಂಕ್‌ಗಳಿಗೆ ಸುಗಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆ ನಡೆಯುತ್ತಿದೆ. ಹೀಗಾಗಿ ಜನರು ಭಯಪಡದೆ ಸಾಮಾನ್ಯ ರೀತಿಯಲ್ಲಿ ಇಂಧನ ಖರೀದಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಿಸುವುದರಿಂದ ಮಾತ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ವದಂತಿಗಳಿಗೆ ಒಳಗಾಗದೇ ಸರ್ಕಾರ ಮತ್ತು ತೈಲ ಕಂಪನಿಗಳ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಫೆಡರೇಷನ್ ಮನವಿ ಮಾಡಿದೆ.

Continue Reading

Blog

ಬೆಂಗಳೂರು ದಂಪತಿಯ ಆರ್ಥಿಕ ಸಂಕಷ್ಟ ಪೋಸ್ಟ್ ವೈರಲ್: ಮೆಟ್ರೋ ಜೀವನದ ಖರ್ಚು ಚರ್ಚೆಗೆ

Published

on

ಬೆಂಗಳೂರು: ಬೆಂಗಳೂರುನಲ್ಲಿ ಹೊಸದಾಗಿ ಮದುವೆಯಾದ ದಂಪತಿಯ ಆರ್ಥಿಕ ಒತ್ತಡಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ದೊಡ್ಡ ಚರ್ಚೆಗೆ ಕಾರಣವಾಗಿದೆ.

Xನಲ್ಲಿ ಅಭಿಷೇಕ್ ಸಿಂಗ್ ಎಂಬ ಬಳಕೆದಾರರು ತಮ್ಮ ಸ್ನೇಹಿತನ ಕಥೆಯನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ತಕ್ಷಣ ಪತ್ನಿ “ಪೂರ್ಣ ಸಮಯ ಸರ್ಕಾರಿ ಪರೀಕ್ಷೆ ತಯಾರಿ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ ಬಗ್ಗೆ ಅವರು ವಿವರಿಸಿದ್ದಾರೆ.


ಮದುವೆಗೆ ಮೊದಲು – ಉತ್ತಮ ಉಳಿತಾಯ

ಅವರ ಪ್ರಕಾರ, ಸ್ನೇಹಿತನ ವಾರ್ಷಿಕ ವೇತನ ₹18 ಲಕ್ಷ (CTC), ತಿಂಗಳಿಗೆ ಸುಮಾರು ₹1.15 ಲಕ್ಷ ಕೈಗೆ ಸಿಗುತ್ತಿತ್ತು.

ಮದುವೆಗೆ ಮೊದಲು ಖರ್ಚುಗಳು (ಅಂದಾಜು):

  • ಬಾಡಿಗೆ/ಪಿಜಿ – ₹16,000
  • ಆಹಾರ – ₹7,000
  • ಪ್ರಯಾಣ – ₹3,000
  • ಇಂಟರ್ನೆಟ್/ಫೋನ್ – ₹1,500
  • ಜಿಮ್ – ₹1,500
  • ಹೊರಗೆ ಊಟ – ₹4,000
  • ಶಾಪಿಂಗ್ – ₹2,000

ಒಟ್ಟು ಖರ್ಚು: ₹35,000
ಉಳಿತಾಯ: ಸುಮಾರು ₹80,000 ತಿಂಗಳಿಗೆ


ಮದುವೆಯ ನಂತರ – ಖರ್ಚು ಏರಿಕೆ

1BHK ಮನೆಗೆ ಸ್ಥಳಾಂತರವಾದ ಬಳಿಕ ಖರ್ಚುಗಳು ದ್ವಿಗುಣಗೊಂಡವು:

  • ಬಾಡಿಗೆ – ₹40,000
  • ತರಕಾರಿ/ಕಿಚನ್ – ₹18,000
  • ಅಡುಗೆ/ಮೈಡ್ – ₹7,000
  • ವಿದ್ಯುತ್/ವೈಫೈ/ಗ್ಯಾಸ್ – ₹6,000
  • ಇಬ್ಬರ ಪ್ರಯಾಣ – ₹10,000
  • ವೀಕೆಂಡ್/ಔಟಿಂಗ್ – ₹12,000
  • ಸಣ್ಣ ಶಾಪಿಂಗ್ – ₹8,000
  • ಆರೋಗ್ಯ/ಔಷಧಿ – ₹5,000
  • ಫರ್ನಿಚರ್/EMI – ₹15,000

ಒಟ್ಟು: ₹1,21,000 (ತಿಂಗಳಿಗೆ)

ಇದರಿಂದ ತಿಂಗಳ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆರ್ಥಿಕ ಒತ್ತಡ ಶುರುವಾಯಿತು.


ಆಚರಣಾತ್ಮಕ ನಿರ್ಧಾರ

ನಂತರ ಪತ್ನಿ ₹7 ಲಕ್ಷ CTC (ಸುಮಾರು ₹45,000 ತಿಂಗಳಿಗೆ) ವೇತನದ ಉದ್ಯೋಗ ಸ್ವೀಕರಿಸಿದರು. ಇದರಿಂದ ದಿನನಿತ್ಯದ ಖರ್ಚುಗಳು ಸಮತೋಲನಗೊಂಡು ಕುಟುಂಬದ ಹಣಕಾಸು ಸ್ಥಿತಿ ಸ್ಥಿರವಾಯಿತು.

ಪೋಸ್ಟ್‌ನಲ್ಲಿ “ಮೆಟ್ರೋ ನಗರದಲ್ಲಿ ಮದುವೆಯಾದ ಬಳಿಕ ಸರ್ಕಾರಿ ಪರೀಕ್ಷೆ ತಯಾರಿ ಮಾಡಿಕೊಳ್ಳುವುದು ಆರ್ಥಿಕವಾಗಿ ದುಬಾರಿ” ಎಂದು ಅಭಿಪ್ರಾಯ ವ್ಯಕ್ತವಾಗಿದೆ.


ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ

ಈ ಪೋಸ್ಟ್‌ಗೆ 1.97 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಲಭಿಸಿದ್ದು, ಹಲವರು ಮೆಟ್ರೋ ನಗರ ಜೀವನದ ಖರ್ಚು ಹಾಗೂ ಹಣಕಾಸು ಯೋಜನೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ವರದಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಂಡ ಮಾಹಿತಿಯನ್ನು ಆಧರಿಸಿದೆ. ಇಲ್ಲಿ ಉಲ್ಲೇಖಿಸಿದ ಘಟನೆ, ಹಣಕಾಸು ವಿವರಗಳು ಹಾಗೂ ಹೇಳಿಕೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಈ ವಿಷಯದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸಂಬಂಧಿತ ಬಳಕೆದಾರರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ನಮ್ಮ ವೇದಿಕೆಯ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ.

Continue Reading

Trending