Connect with us

ದೇಶ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ನಾರಿ ಶಕ್ತಿ’ಯಿಂದ ಅಭಿನಂದನೆಗಳ ಮಹಾಪೂರ

ಬುಧವಾರ ನಡೆದ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ಮಸೂದೆಯ ಪರವಾಗಿ 454 ಮತಗಳು ಚಲಾವಣೆಗೊಂಡು,ಗುರುವಾರ ರಾತ್ರಿ ರಾಜ್ಯಸಭೆಯಲ್ಲೂ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಿಳಾ ಸಂಸದರು ಪಕ್ಷ ಬೇಧ ಮರೆತು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಸಂಸತ್ ಭವನದ ಹೊರಗೆ ಮಹಿಳಾ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೋಸ್ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕರಿಸಲಾಗಿದೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಪಯಣದಲ್ಲಿ ಒಂದು ಐತಿಹಾಸಿಕ ಕ್ಷಣ ಇದಾಗಿದೆ. 140 ಕೋಟಿ ಭಾರತೀಯರಿಗೆ ಅಭಿನಂದನೆಗಳು. ನಾರಿ ಶಕ್ತಿ ವಂದನ್ ಕಾಯ್ದೆಗೆ ಸಂಬಂಧಿಸಿದ ಮಸೂದೆಗೆ ಮತ ಚಲಾಯಿಸಿದ ಎಲ್ಲಾ ರಾಜ್ಯಸಭಾ ಸಂಸದರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಅದರ ಸರ್ವಾನುಮತದ ಅಂಗೀಕಾರವು ತುಂಬಾ ಉತ್ತೇಜನಕಾರಿಯಾಗಿದೆ’ ಎಂದು ಬರೆದಿದ್ದಾರೆ.ಈ ಮಸೂದೆಯ ಅಂಗೀಕಾರದೊಂದಿಗೆ ಮಹಿಳಾ ಶಕ್ತಿಯ ಪ್ರಾತಿನಿಧ್ಯವು ಮತ್ತಷ್ಟು ಬಲಗೊಳ್ಳುತ್ತದೆ. ಅವರ ಸಬಲೀಕರಣದ ಹೊಸ ಯುಗ ಪ್ರಾರಂಭವಾಗಲಿದೆ. ಇದು ಕೇವಲ ಕಾನೂನಲ್ಲ. ಅದರ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಅಮೂಲ್ಯ ಪಾತ್ರ ವಹಿಸುವ ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ತಮ್ಮ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಈ ಐತಿಹಾಸಿಕ ಹೆಜ್ಜೆಯಿಂದ ಕೋಟ್ಯಂತರ ಮಹಿಳೆಯರ ಧ್ವನಿ ಗಟ್ಟಿಯಾಗಲಿದ್ದು, ಅವರ ಶಕ್ತಿ, ಧೈರ್ಯ ಮತ್ತು ಸಾಮರ್ಥ್ಯಕ್ಕೆ ಹೊಸ ಗುರುತು ಸಿಗಲಿದೆ’ ಎಂದು ಹೇಳಿದ್ದಾರೆ.ಕೇಂದ್ರ ಸಚಿವ ಅರ್ಜುನ್‌ರಾಮ್ ಮೇಘವಾಲ್ ಮಸೂದೆಯನ್ನು ಮಂಡಿಸಿದರು. ಈ ಮಸೂದೆಗೆ ಬಹುತೇಕ ಎಲ್ಲ ಪಕ್ಷಗಳ ಬೆಂಬಲ ಸಿಕ್ಕಿದೆ. ಈ ಬಾರಿಯ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ನಾರಿ ಶಕ್ತಿ’ಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಅಪರಾಧ

ನಕಲಿ ವೈದ್ಯನ ಚಿಕಿತ್ಸೆಯಿಂದ ಮಗು ಬಲಿ

ರಾಮನಗರ: ರಾಮನಗರದಲ್ಲಿ (Ramanagara news) ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ (treatment) ಶಿವರಾಜ್ ಎಂಬವರ ಆರು ತಿಂಗಳ ಕಂದಮ್ಮ (child death) ಸಾವನ್ನಪ್ಪಿದೆ. 6 ತಿಂಗಳ ಮಗುವಿನ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ‌ ಕ್ರಮಕ್ಕೂ ಸೂಚನೆ ನೀಡಿದೆ. ಶಿವರಾಜ್ ಎಂಬವರ ಆರು ತಿಂಗಳ ಪ್ರಾಯದ ಮಗು ಶರಣ್ಯ ಮೃತಪಟ್ಟವಳು. ನಕಲಿ ವೈದ್ಯ (Fake Doctor) ಮಹಮ್ಮದ್ ಸೈಫುಲ್ಲ ಎಂಬಾತ ಎಂದು ಗುರುತಿಸಲಾಗಿದೆ.

ಮಹಮ್ಮದ್ ಸೈಫುಲ್ಲ ಎಂಬವನು ವೈದ್ಯಕೀಯ ಕೋರ್ಸ್ ಮಾಡದೇ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಸಣ್ಣ ಕೋಣೆಯೊಂದರಲ್ಲಿ ಚಿಕಿತ್ಸೆ ನೀಡುತ್ತಿದ್ದ. ಈತನಿಂದಾಗಿ ಮಗು ಮರಳಿ ಬಾರದ ಲೋಕಕ್ಕೆ ತೆರಳಿದೆ. ಇದು ಜಿಲ್ಲೆಯ ಜನರನ್ನು ಸಾಕಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ರಾಮನಗರದಲ್ಲಿ ಸಾಕಷ್ಟು ನಕಲಿ ಕ್ಲಿನಿಕ್​ಗಳು ತಲೆ ಎತ್ತಿದ್ದು ಅವುಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ‌ಜಿಲ್ಲೆಯಾದ್ಯಂತ ಒಟ್ಟು 193 ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಮಾತ್ರ ಆರೋಗ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಆದರೆ ಕೆಲವರು ಹಣದಾಸೆಗೆ ನಕಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆ ಕಳೆದ ನಾಲ್ಕು ತಿಂಗಳಲ್ಲಿ ಆರು ನಕಲಿ ವೈದ್ಯರನ್ನು ಪತ್ತೆ ಮಾಡಿದೆ. ಇಬ್ಬರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೂ ಇನ್ನೂ ಕೆಲವರು ಹಣದಾಸೆಗೆ ನಕಲಿ‌ ಕ್ಲಿನಿಕ್ ನಡೆಸುತ್ತಿದ್ದಾರೆ. ನಕಲಿ ಕ್ಲಿನಿಕ್​ಗಳ ಬಗ್ಗೆ ಜನರು ಎಚ್ಚರಿದಿಂದ ಇರಬೇಕು. ಗಮನಕ್ಕೆ ಬಂದ ಕೂಡಲೇ ಅವುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಮನವಿ ಮಾಡಿದ್ದಾರೆ

Continue Reading

ದೇಶ

ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ ಕಾಂಗ್ರೆಸ್ ಶಾಸಕ ವಿನಯ್!

ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದಾಗಿದೆ, ಅದ್ದರಿಂದ ಕೋರ್ಟ್ ಆದೇಶದಂತೆ ಇಂದು ವಿನಯ್ ಕುಲಕರ್ಣಿಯವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೋಟ್ ವಿಚಾರಣೆ ಮುಗಿದ ಬಳಿಕ ಶಾಸಕ ವಿನಯ್ ಕುಲಕರ್ಣಿಯವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುವುದು, ಇತ್ತೀಚಿಗೆ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿಯ ಜಾಮೀನನ್ನು ರದ್ದುಪಡಿಸಿತು, ಒಂದು ವಾರದೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿತ್ತು,
ಇವರ ಬೆಂಬಲಿಗರು ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಜಮಾಯಿಸಿದ್ರು, ಪರಪ್ಪನ ಅಗ್ರಹಾರ ಜೈಲಿಗೆ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಕರೆದೊಯ್ದಿದ್ದಾರೆ, ಈ ವೇಳೆ ತಮ್ಮ ನಾಯಕ ಜೈಲು ಸೇರುತ್ತಿರೋದನ್ನು ಕಂಡು ಕೋರ್ಟ್ ಮುಂಭಾಗ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ,

ಏನಿದು ಪ್ರಕರಣ?
9 ವರ್ಷಗಳ ಹಿಂದೆ ಅಂದರೆ 2016 ರ ಜೂನ್ 15 ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್ ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು, ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಕೈವಾಡ ಇದೆ ಎಂಬ ಆರೋಪವಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ 2020 ನವೆಂಬರ್ 5 ರಂದು ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು,

Continue Reading

ದೇಶ

ವಿಮಾನ ದುರಂತಗಳಲ್ಲಿ ಬ್ಲ್ಯಾಕ್​ ಬಾಕ್ಸ್​ ಹುಡುಕುವುದೇಕೆ? ಇದರ ಉಪಯೋಗವೇನು?

Black Box: ನಿನ್ನೆ ಮಧ್ಯಾಹ್ನ ಗುಜರಾತ್​ನ ಅಹಮದಾಬಾದ್‌ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಏರ್ ಇಂಡಿಯಾ ವಿಮಾನ AI171 (ಬೋಯಿಂಗ್ 787 ಡ್ರೀಮ್‌ಲೈನರ್) ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:30 ಕ್ಕೆ ಟೇಕಾಫ್​ ಆಗಿ ಕೆಲವೇ ನಿಮಿಷಗಳು ಅಂದ್ರೆ..1:38 ಕ್ಕೆ ವಿಮಾನವು ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಮೇಘನಾನಿಗರ್‌ನ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.

ಈ ವಿಮಾನದಲ್ಲಿ ಒಟ್ಟು 242 ಜನರಿದ್ದರು. ಈ ವಿಮಾನವು ಮೇಘನಾನಿಗರ್‌ನಲ್ಲಿರುವ ವೈದ್ಯಕೀಯ ಹಾಸ್ಟೆಲ್ ಮೇಲೆ ಬಿದ್ದಿದ್ದು, ಇದರಿಂದಾಗಿ ಅನೇಕ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ವಿಮಾನ ಅಪಘಾತವನ್ನು ಭಾರತ ಮತ್ತು ವಿಶ್ವದ ಅತ್ಯಂತ ಮಾರಕ ವಿಮಾನ ಅಪಘಾತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ವಿಮಾನ ಅಪಘಾತಕ್ಕೆ ಸಂಬಂಧಿಸಿದ ತಾಂತ್ರಿಕ ಪದಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಅಂದ್ರೆ.. ಇದರಲ್ಲಿ ಬ್ಲ್ಯಾಕ್​ ಬಾಕ್ಸ್​ (ಕಪ್ಪು ಪೆಟ್ಟಿಗೆ) ಸೇರಿದಂತೆ ಅನೇಕ ತಾಂತ್ರಿಕ ವಿಷಯಗಳನ್ನು ಚರ್ಚಿಸಲಾಗುವುದು.

ಬ್ಲ್ಯಾಕ್​ ಬಾಕ್ಸ್​ ಎಂದರೇನು?: ಬ್ಲ್ಯಾಕ್​ ಬಾಕ್ಸ್​ ಅನ್ನು ಔಪಚಾರಿಕವಾಗಿ ಫ್ಲೈಟ್ ರೆಕಾರ್ಡರ್ ಎಂದು ಕರೆಯಲಾಗುತ್ತದೆ. ಇದು ವಿಮಾನವು ಹಾರಾಟದ ಸಮಯದಲ್ಲಿ ಸಂಭವಿಸುವ ಅನೇಕ ಪ್ರಮುಖ ಮಾಹಿತಿಯನ್ನು ದಾಖಲಿಸುವ ಅತ್ಯಂತ ಬಲವಾದ ಸಾಧನವಾಗಿದೆ. ಇದನ್ನು ಬ್ಲ್ಯಾಕ್​ ಬಾಕ್ಸ್ ಎಂದು ಕರೆದರೂ ಸಹ ಇದರ ಕಲರ್​ ಬ್ಲ್ಯಾಕ್​ ಆಗಿರುವುದಿಲ್ಲ. ಆದರೆ ಪ್ರಕಾಶಮಾನವಾದ ಕಿತ್ತಳೆ ಬಣ್ಣದ್ದಾಗಿದೆ.

ಬ್ಲ್ಯಾಕ್​ ಬಾಕ್ಸ್​ ಎರಡು ಭಾಗಗಳನ್ನು ಹೊಂದಿದೆ. ಇದರ ಮೊದಲ ಭಾಗವನ್ನು ಫ್ಲೈಟ್ ಡೇಟಾ ರೆಕಾರ್ಡರ್ (FDR) ಎಂದು ಹೆಸರಿಸಲಾಗಿದೆ ಮತ್ತು ಎರಡನೇ ಭಾಗವನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂದು ಹೆಸರಿಸಲಾಗಿದೆ. ಹಾರಾಟದಲ್ಲಿ ಅಪಘಾತವನ್ನು ತನಿಖೆ ಮಾಡುವ ತಜ್ಞರು ಬ್ಲ್ಯಾಕ್​ ಬಾಕ್ಸ್​ನಲ್ಲಿರುವ ಈ ಎರಡು ಭಾಗಗಳ ಮೂಲಕ ವಿಮಾನ ಅಪಘಾತದ ಕಾರಣಗಳನ್ನು ಕಂಡುಹಿಡಿಯುವಲ್ಲಿ ಸಹಾಯ ಪಡೆಯುತ್ತಾರೆ.

ಬ್ಲ್ಯಾಕ್​ ಬಾಕ್ಸ್​ ಯುಗಾರಂಭ: 1930 ರ ದಶಕದಲ್ಲಿ ಫ್ರೆಂಚ್ ಎಂಜಿನಿಯರ್ ಫ್ರಾಂಕೋಯಿಸ್ ಹುಸ್ಸೆನೋಟ್ ಫೋಟೋಗ್ರಾಫಿ ಫಿಲಂ ಹಾರಾಟದ ಮಾಹಿತಿಯನ್ನು ದಾಖಲಿಸುವ ಡೇಟಾ ರೆಕಾರ್ಡರ್ ಅನ್ನು ರಚಿಸಿದರು. 1950 ರ ದಶಕದಲ್ಲಿ ಆಸ್ಟ್ರೇಲಿಯಾದ ಡಾ. ಡೇವಿಡ್ ವಾರೆನ್ ವಿಮಾನದ ಡಾಟಾವನ್ನು ಹಾಗೂ ಕಾಕ್‌ಪಿಟ್‌ನ ಶಬ್ದಗಳನ್ನು (ಪೈಲಟ್‌ಗಳು ಕುಳಿತು ವಿಮಾನವನ್ನು ಹಾರಿಸುವ ಭಾಗ) ದಾಖಲಿಸಬಹುದಾದ ಸಾಧನವನ್ನು ರಚಿಸಲು ಸಲಹೆ ನೀಡಿದರು. ಡಾ. ಡೇವಿಡ್ ವಾರೆನ್ ಅವರ ಈ ಮೂಲಮಾದರಿಗೆ ಅವರ ಸ್ವಂತ ದೇಶವಾದ ಆಸ್ಟ್ರೇಲಿಯಾದಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ, ಆದರೆ ಪ್ರಪಂಚದ ಇತರ ದೇಶಗಳು ಅವರ ಸಲಹೆಯನ್ನು ಮೆಚ್ಚಿದವು.

ಅದರ ನಂತರ ಅವರ ಸಲಹೆಯನ್ನು ಸಹ ಕಾರ್ಯಗತಗೊಳಿಸಲಾಯಿತು ಮತ್ತು ಇಂದು ಎಲ್ಲಾ ದೊಡ್ಡ ವಿಮಾನಗಳಲ್ಲಿ ಬ್ಲ್ಯಾಕ್ಸ್​ ಬಾಕ್ಸ್​ ಹೊಂದಿರುವುದು ಕಡ್ಡಾಯವಾಗಿದೆ. ವಿಮಾನ ಸುರಕ್ಷತೆಗಾಗಿ ಮತ್ತು ಯಾವುದೇ ವಿಮಾನ ಅಪಘಾತದ ನಂತರ ಕಾರಣಗಳನ್ನು ಕಂಡುಹಿಡಿಯಲು ಬ್ಲ್ಯಾಕ್​ ಬಾಕ್ಸ್​ ಬಹಳ ಮುಖ್ಯವಾಗಿದೆ. ಈ ಬ್ಲ್ಯಾಕ್​ ಬಾಕ್ಸ್​ನಿಂದಾಗಿ ಭವಿಷ್ಯದ ವಿಮಾನಗಳನ್ನು ಸುರಕ್ಷಿತಗೊಳಿಸಲಾಗುತ್ತದೆ.

  • FDR ಹಾರಾಟದ ಸಮಯದಲ್ಲಿ ವಿಮಾನದ ಕಾರ್ಯಗಳು ಮತ್ತು ಸ್ಥಾನವನ್ನು ದಾಖಲಿಸುತ್ತದೆ.
  • ಇದು ಗಾಳಿಯ ವೇಗ, ಎತ್ತರ, ದಿಕ್ಕು, ಲಂಬ ವೇಗವರ್ಧನೆ ಮತ್ತು ವಿಮಾನದ ಸ್ಥಾನದಂತಹ ಅನೇಕ ಪ್ರಮುಖ ಮಾಹಿತಿಗಳನ್ನು ಕಲೆಹಾಕುತ್ತದೆ. , ಇದು ಯಾವುದೇ ಅಪಘಾತದ ನಂತರ ತನಿಖೆಗೆ ಬಹಳ ಮುಖ್ಯವಾಗಿದೆ.
  • ಹೊಸ ವಿಮಾನಗಳಲ್ಲಿ, ಕನಿಷ್ಠ 88 ನಿಯತಾಂಕಗಳನ್ನು ದಾಖಲಿಸುವುದು ಅವಶ್ಯಕ ಮತ್ತು ಫ್ಲಾಪ್ ಪೊಸಿಷನ್, ಆಟೋಪೈಲಟ್ ಸೆಟ್ಟಿಂಗ್ ಅಥವಾ ಹೊಗೆ ಪತ್ತೆಕಾರಕದಂತಹ ವಿಷಯಗಳನ್ನು ಒಳಗೊಂಡಂತೆ 1000 ಕ್ಕೂ ಹೆಚ್ಚು ವಿಷಯಗಳನ್ನು ಟ್ರ್ಯಾಕ್ ಮಾಡುವ ಕೆಲವು ಫ್ಲೈಟ್ ಡೇಟಾ ರೆಕಾರ್ಡರ್‌ಗಳು (FDR) ಇವೆ.
  • FDR ನ ವಿಶೇಷವೆಂದರೆ ಅದು 6,000 ಮೀಟರ್‌ಗಳಿಗಿಂತ ಹೆಚ್ಚು ಆಳದ ನೀರಿನ ಅಡಿಯಲ್ಲಿಯೂ ಸಹ ಸಂಕೇತಗಳನ್ನು ಕಳುಹಿಸಬಹುದು.
  • FDR ನಿಂದ ಪಡೆದ ಡೇಟಾದೊಂದಿಗೆ, ತನಿಖಾ ಸಂಸ್ಥೆಗಳು ಮತ್ತು ಜನರು ಕಂಪ್ಯೂಟರ್-ರಚಿತ ವಿಡಿಯೋಗಳನ್ನು ಮಾಡುವ ಮೂಲಕ ವಿಮಾನ ಅಪಘಾತದ ಸಮಯದಲ್ಲಿ ಅಂದರೆ ಕೊನೆಯ ಕ್ಷಣಗಳಲ್ಲಿ ಏನಾಗಿರಬಹುದು ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಈ ಡೇಟಾದ ಸಹಾಯದಿಂದ ಮಾಡಿದ ವಿಡಿಯೋವನ್ನು ಹಾರಾಟದ ಕೊನೆಯ ಕ್ಷಣಗಳನ್ನು ನೋಡಲು ಬಳಸಬಹುದು. ಇದು ವಿಮಾನದ ಸ್ಥಿತಿ, ಉಪಕರಣದ ವಾಚನಗೋಷ್ಠಿಗಳು ಮತ್ತು ಇತರ ವಿವರಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
  • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ವಿವಶೇಷತೆಗಳು!:
  • ಬ್ಲ್ಯಾಕ್​ ಬಾಕ್ಸ್​ನ ಎರಡನೇ ಭಾಗವನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅಂದರೆ CVR ಎಂದು ಕರೆಯಲಾಗುತ್ತದೆ. ಕಾಕ್‌ಪಿಟ್‌ನಲ್ಲಿ ಕುಳಿತಿರುವ ಪೈಲಟ್‌ಗಳ ಸಂಭಾಷಣೆ ಮತ್ತು ಎಂಜಿನ್‌ನ ಶಬ್ದ​, ಸ್ಟಾಲ್ ಅಲರ್ಟ್, ಲ್ಯಾಂಡಿಂಗ್ ಗೇರ್ ಚಟುವಟಿಕೆಗಳು ಮತ್ತು ಇತರ ಹಲವು ಶಬ್ದಗಳನ್ನು ರೆಕಾರ್ಡ್ ಮಾಡುವುದು ಇದರ ಕೆಲಸವಾಗಿದೆ.
  • ಈ ಶಬ್ದಗಳಿಂದ ಎಂಜಿನ್‌ನ ವೇಗ, ವಿಮಾನದ ವ್ಯವಸ್ಥೆಗಳಲ್ಲಿನ ಅಸಮರ್ಪಕ ಕಾರ್ಯ ಸೇರಿದಂತೆ ಘಟನೆಯ ಸಮಯದಲ್ಲಿ ನಡೆದ ಅನೇಕ ವಿಷಯಗಳನ್ನು ಪತ್ತೆಹಚ್ಚಬಹುದು.
  • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ಸಾಮಾನ್ಯವಾಗಿ ವಿಮಾನದ ಬಲ ವಿಭಾಗದಲ್ಲಿ ಇರಿಸಲಾಗುತ್ತದೆ. ಈ ಕಾರಣದಿಂದಾಗಿ ಅಪಘಾತದಲ್ಲಿ ಇದು ಕನಿಷ್ಠ ಪರಿಣಾಮ ಬೀರುತ್ತದೆ.
  • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ಬಹಳ ರಹಸ್ಯವಾಗಿಡಲಾಗುತ್ತದೆ. ಅಮೆರಿಕ ಕಾನೂನಿನ ಪ್ರಕಾರ, ಸಿವಿಆರ್‌ನ ಆಡಿಯೊ ರೆಕಾರ್ಡಿಂಗ್ ಅನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಮತ್ತು ಅದರ ಲಿಖಿತ ಪ್ರತಿಲಿಪಿಯನ್ನು ತನಿಖೆ ಅಥವಾ ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತದೆ.
  • ಬ್ಲ್ಯಾಕ್​ ಬಾಕ್ಸ್​ ಏಕೆ ಅಗತ್ಯ?: ಯಾವುದೇ ವಿಮಾನ ಅಪಘಾತದ ನಂತರ ಆ ಅಪಘಾತವನ್ನು ತನಿಖೆ ಮಾಡಲು ಬ್ಲ್ಯಾಕ್​ ಬಾಕ್ಸ್​ ಬಹಳ ಮುಖ್ಯ. ಅಪಘಾತದ ಕಾರಣವನ್ನು ಕಂಡುಹಿಡಿಯಲು ಇದು ಸಹಾಯ ಮಾಡುತ್ತದೆ. ಏಕೆಂದರೆ ಇದು ಹಾರಾಟದ ಪ್ರತಿ ಕ್ಷಣದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಅಪಘಾತದ ಮೊದಲು ನಡೆದ ಘಟನೆಗಳನ್ನು ಅರ್ಥಮಾಡಿಕೊಳ್ಳಲು ತನಿಖಾ ಅಧಿಕಾರಿಗಳಿಗೆ ಬ್ಲ್ಯಾಕ್​ ಬಾಕ್ಸ್​ ಸಹಾಯ ಮಾಡುತ್ತದೆ.
  • ಉದಾಹರಣೆಗೆ.. ಅಪಘಾತದ ಸಮಯದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇದೆಯೋ ಇಲ್ಲವೋ, ಎಂಜಿನ್‌ನಲ್ಲಿ ಯಾವುದೇ ಸಮಸ್ಯೆ ಇದೆಯೋ ಇಲ್ಲವೋ, ಹಕ್ಕಿ ಡಿಕ್ಕಿ ಹೊಡೆದಿದೆಯೋ ಇಲ್ಲವೋ, ಗಾಳಿಯಲ್ಲಿ ಸ್ಫೋಟವಾಗಿದೆಯೋ ಇಲ್ಲವೋ, ಯಾವುದೇ ಮಾನವ ತಪ್ಪಿನಿಂದ ಅಪಘಾತ ಸಂಭವಿಸಿದೆಯೋ ಇಲ್ಲವೋ ಸೇರಿದಂತೆ ಇತರೆ ಎಲ್ಲಾ ಅಂಶಗಳನ್ನು ಕಂಡುಹಿಡಿಯುವಲ್ಲಿ ಬ್ಲ್ಯಾಕ್​ ಬಾಕ್ಸ್​ ದೊಡ್ಡ ಪಾತ್ರವನ್ನು ವಹಿಸುತ್ತದೆ.
  • ಅಪಘಾತದ ನಂತರ ಏನಾಗುತ್ತದೆ?: ವಿಮಾನ ಅಪಘಾತದ ನಂತರ ಮೊದಲು ಹುಡುಕುವುದೇ ಬ್ಲ್ಯಾಕ್​ ಬಾಕ್ಸ್​. ಈ ಬ್ಲ್ಯಾಕ್​ ಬಾಕ್ಸ್​ ಅನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅಥವಾ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅದರ ಆಳವಾದ ತನಿಖೆ ಪ್ರಾರಂಭವಾಗುತ್ತದೆ.
  • ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಬ್ಲ್ಯಾಕ್​ ಬಾಕ್ಸ್​ ಮೆಮೊರಿ ಮಾಡ್ಯೂಲ್‌ನಿಂದ ಡೇಟಾವನ್ನು ಹೊರತೆಗೆಯುತ್ತಾರೆ. ಅದರ ನಂತರ ಅವರು ಅದರಲ್ಲಿ ರೆಕಾರ್ಡ್ ಮಾಡಿದ ಧ್ವನಿಗಳು ಮತ್ತು ಹಾರಾಟದ ಡೇಟಾವನ್ನು ಸೇರಿಸುತ್ತಾರೆ. ಈ ಡೇಟಾವನ್ನು ಸಿಂಕ್ ಮಾಡಲಾಗುತ್ತದೆ. ಬಳಿಕ ರಾಡಾರ್ ಮತ್ತು ATC ಡೇಟಾದಲ್ಲಿ ದಾಖಲಾದ ಡೇಟಾದೊಂದಿಗೆ ಹೊಂದಿಸಲಾಗುತ್ತದೆ.
  • ಈ ಸಂಪೂರ್ಣ ಪ್ರಕ್ರಿಯೆಯು ಕೆಲವು ದಿನಗಳಿಂದ ಹಲವಾರು ವಾರಗಳವರೆಗೆ ತೆಗೆದುಕೊಳ್ಳಬಹುದು. ಅಪಘಾತದ ಸಮಯದಲ್ಲಿ ಬ್ಲ್ಯಾಕ್​ ಬಾಕ್ಸ್​ ಹೆಚ್ಚಿನ ಹಾನಿಯಾಗಿಲ್ಲದಿದ್ದರೆ ತನಿಖೆಯನ್ನು ತ್ವರಿತವಾಗಿ ಮಾಡಲಾಗುತ್ತದೆ. ಒಂದು ವೇಳೆ ಬ್ಲ್ಯಾಕ್​ ಬಾಕ್ಸ್​ ಹೆಚ್ಚು ಹಾನಿಗೊಳಗಾಗಿದ್ದರೆ ತನಿಖೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.
Continue Reading

Trending