ದೇಶ
ಪೆಂಟಗಾನ್ ಮಾಜಿ ಅಧಿಕಾರಿ ಹೇಳಿದ್ದೇನು? ಅಮೆರಿಕ ಆಯ್ಕೆ ಯಾವುದು?ಕೆನಡಾ ಅಥವಾ ಭಾರತ
ಅಮೆರಿಕಕ್ಕೆ ಕೆನಡಾಕ್ಕಿಂತಲೂ ಭಾರತವು ಕಾರ್ಯತಂತ್ರದಲ್ಲಿ ಮುಖ್ಯವಾಗಿದೆ. ಭಾರತದ ಜತೆ ಕೆನಡಾ ಸಂಘರ್ಷಕ್ಕೆ ಇಳಿಯುವುದು ‘ಆನೆ ಜತೆ ಇರುವೆ ಕಾದಾಟಕ್ಕೆ ಇಳಿದಂತೆ’ ಎಂದು ಹೋಲಿಕೆ ಮಾಡಿದ್ದಾರೆ.ಜಸ್ಟಿನ್ ಟ್ರುಡೊ ಅವರ ಆರೋಪವು ಭಾರತಕ್ಕಿಂತಲೂ ಕೆನಡಾಕ್ಕೆ ‘ಹೆಚ್ಚು ಅಪಾಯ’ ಉಂಟು ಮಾಡಿದೆ ಎಂದು ಪ್ರತಿಪಾದಿಸಿರುವ ಅಮೆರಿಕದ ಮಾಜಿ ಅಧಿಕಾರಿ ಮೈಕಲ್ ರುಬಿನ್, ಕೆನಡಾ ಮತ್ತು ಭಾರತದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಪ್ರಸಂಗ ಅಮೆರಿಕಕ್ಕೆ ಎದುರಾದರೆ, ಅದು ಖಂಡಿತವಾಗಿಯೂ ಭಾರತವನ್ನು ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ. ಭಾರತದ ಜೊತೆಗಿನ ಸಂಬಂಧ ಅಮೆರಿಕಕ್ಕೆ ಬಹಳ ಮುಖ್ಯವಾಗಿದೆ ಎಂದಿದ್ದಾರೆ.ಪ್ರಧಾನಿ ಟ್ರುಡೊ ದೊಡ್ಡ ತಪ್ಪು ಮಾಡಿದ್ದಾರೆ. ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲದಂತಹ ಆರೋಪಗಳನ್ನು ಮಾಡಿದ್ದಾರೆ. ಅವರು ತಮ್ಮ ಮಾತುಗಳ ಕುರಿತು ಜಾಗ್ರತೆ ವಹಿಸಿಲ್ಲ ಹಾಗೂ ಸರ್ಕಾರದ ವಿರುದ್ಧ ಅವರು ಮಾಡಿರುವ ಆರೋಪಗಳನ್ನು ಬೆಂಬಲಿಸಲು ಯಾವ ಪುರಾವೆಹಳು ಕೂಡ ಇಲ್ಲ. ಈ ಸರ್ಕಾರವು ಉಗ್ರನೊಬ್ಬನಿಗೆ ಏಕೆ ಆಶ್ರಯ ನೀಡಿದೆ ಎಂಬುದನ್ನು ಅವರು ವಿವರಿಸುವ ಅಗತ್ಯವಿರುವ ಪ್ರಕರಣ ಇದು” ಎಂದು ಪೆಂಟಗಾನ್ನ ಮಾಜಿ ಅಧಿಕಾರಿ ತಿಳಿಸಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಕುರಿತಾದ ಕಳಪೆ ಅನುಮೋದನಾ ರೇಟಿಂಗ್ ಉಲ್ಲೇಖಿಸಿದ ರುಬಿನ್, ಅವರು ಪ್ರಧಾನಿಯಾಗಿ ಹೆಚ್ಚು ದೀರ್ಘ ಕಾಲ ಇರುವುದಿಲ್ಲ. ಅವರು ಅಧಿಕಾರದಿಂದ ಇಳಿದ ಬಳಿಕ ಕೆನಡಾ ಜೊತೆಗಿನ ಸಂಬಂಧವನ್ನು ಅಮೆರಿಕ ಮತ್ತೆ ಸರಿಪಡಿಸಿಕೊಳ್ಳಬಹುದು ಎಂದಿದ್ದಾರೆ.
ಭಾರತವು ಉಗ್ರ ಎಂದು ಘೋಷಿಸಿರುವ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಖಲಿಸ್ತಾನ್ ಬೆಂಬಲಿಗರ ತಾಣವಾಗಿರುವ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಸರ್ರೆಯಲ್ಲಿನ ಗುರುದ್ವಾರದ ಹೊರಗೆ ಪಾರ್ಕಿಂಗ್ ಪ್ರದೇಶದಲ್ಲಿ ಜೂನ್ 18ರಂದು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.
ಅಮೆರಿಕಕ್ಕೆ ಇರಡು ಮಿತ್ರ ರಾಷ್ರಗಳ ನಡುವೆ ಆಯ್ಕೆ ಮಾಡುವ ಅಗತ್ಯ ಎದುರಾದರೆ, ಈ ವಿಚಾರದಲ್ಲಿ ಹೆಚ್ಚಿನ ಪಾಲು ನಾವು ಭಾರತವನ್ನು ಆಯ್ಕೆ ಮಾಡಲಿದ್ದೇವೆ. ಏಕೆಂದರೆ ನಿಜ್ಜರ್ ಒಬ್ಬ ಉಗ್ರ ಹಾಗೂ ಭಾರತ ಬಹಳ ಮುಖ್ಯ. ನಮ್ಮ ಸಂಬಂಧಗಳು ಸಹ ಹೆಚ್ಚು ಮುಖ್ಯ” ಎಂದು ಮೈಕಲ್ ರುಬಿನ್ ಹೇಳಿದ್ದಾರೆ.”ಜಸ್ಟಿನ್ ಟ್ರುಡೊ ಅವರು ಬಹುಶಃ ಹೆಚ್ಚಿನ ಸಮಯ ಕೆನಡಾ ಪ್ರಧಾನಿಯಾಗಿ ಇರುವುದಿಲ್ಲ. ಅವರು ಅಧಿಕಾರದಿಂದ ನಿರ್ಗಮಿಸಿದ ಬಳಿಕ ನಾವು ನಮ್ಮ ಸಂಬಂಧವನ್ನು ಮರು ಸುಧಾರಿಸಬಹುದು” ಎಂದಿದ್ದಾರೆ.”ಗುಪ್ತಚರ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದವನಾಗಿ, ದೂರವಾಣಿ ಸಂಭಾಷಣೆ ಅಥವಾ ಬೇರೆ ಯಾವುದಾದರೂ ಗುಪ್ತಚರ ಸಂಗತಿಗಳು ಹೆಚ್ಚಿನ ಸಮಯ ಸ್ಪಷ್ಟವಾಗಿರುವುದಿಲ್ಲ, ಸಂಪೂರ್ಣ ವಿಶ್ವಾಸಾರ್ಹವೂ ಅಲ್ಲ ಎಂದು ನಾನು ಹೇಳಬಲ್ಲೆ. ಇರಾಕ್ ಯುದ್ಧಕ್ಕೆ ಸಂಬಂಧಿಸಿದಂತೆ ನನಗೆ ಇದು ಚೆನ್ನಾಗಿ ಅನುಭವಕ್ಕೆ ಬಂದಿತ್ತು” ಎಂದು ತಿಳಿಸಿದ್ದಾರೆ.
ಬಹುಶಃ ಪ್ರಧಾನಿ ಟ್ರುಡೊ ಸಮಸ್ಯೆಯನ್ನು ಪ್ರಸ್ತಾಪಿಸಿರಬಹುದು. ಆದರೆ ಅವರ ಹೇಳಿಕೆಯ ಅರ್ಥಕ್ಕೆ ಅಗತ್ಯ ಸಹಮತ ಇರಲಿಲ್ಲ. ಅಲ್ಲದೆ, ನಾವು ಸ್ವತಃ ಮೂರ್ಖರಾಗುವುದು ಬೇಡ. ನಿಜ್ಜರ್ ಒಬ್ಬ ಸಾಮಾನ್ಯ ಪ್ಲಂಬರ್ ಆಗಿರಲಿಲ್ಲ. ಮಿಗಿಲಾಗಿ ಒಸಾಮಾ ಬಿನ್ ಲ್ಯಾಡೆನ್ ಒಬ್ಬ ನಿರ್ಮಾಣ ಎಂಜಿನಿಯರ್ ಆಗಿದ್ದ. ಅನೇಕ ದಾಳಿಗಳಿಂದ ಆತ ಕೈಗಳಿಗೆ ರಕ್ತ ಮೆತ್ತಿಸಿಕೊಂಡಿದ್ದ” ಎಂದು ಭಾರತದ ಪರ ಬ್ಯಾಟ್ ಬೀಸಿದ್ದಾರೆ. ಕೆನಡಾ ಸಂಘರ್ಷವನ್ನು ಬಯಸಿದ್ರೆ, ಆನೆ ಜತೆ ಇರುವೆ ಯುದ್ಧಕ್ಕೆ ಇಳಿದಂತೆ ಆಗಲಿದೆ. ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎನ್ನುವುದು ವಾಸ್ತವ. ಚೀನಾ ಹಾಗೂ ಹಿಂದೂ ಮಹಾಸಾಗರದ ಪ್ರದೇಶ ಮತ್ತು ಪೆಸಿಫಿಕ್ನ ಇತರೆ ವಿಚಾರಗಳಲ್ಲಿನ ಆತಂಕಕಾರಿ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ಕೆನಡಾಕ್ಕಿಂತಲೂ ಭಾರತವು ವ್ಯೂಹಾತ್ಮಕವಾಗಿ ಹೆಚ್ಚು ಮುಖ್ಯವಾಗಿದೆ ಎಂದಿದ್ದಾರೆ.