Connect with us

Blog

ಶಿವಮೊಗ್ಗ : ಬಿಜೆಪಿಯ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಚರ್ಚೆ ನಡೆಯುತ್ತಿದೆ

ಬಿಜೆಪಿಯ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಚರ್ಚೆ ನಡೆಯುತ್ತಿದೆ.ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಕೇಂದ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಮ್ಮ ಕಾರ್ಯಕರ್ತರು ಕೂಡ ಕೇಳುತ್ತಿದ್ದಾರೆ. ಕಾಂಗ್ರೆಸ್‌ ನವರು ಇದೇ ವಿಚಾರದಲ್ಲಿ ನಮ್ಮನ್ನು ಟೀಕಿಸುತ್ತಿದ್ದಾರೆ. ಸದನದಲ್ಲಿ ಲೇವಡಿ ಮಾಡುತ್ತಿದ್ದಾರೆ ಎಂದು ಅವರು ಅವಲತ್ತುಕೊಂಡಿದ್ದಾರೆ.ಶನಿವಾರ ಸುದ್ದಿಮಾಧ್ಯಮಗಳೊಡನೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರದ ಬಿಜೆಪಿ ನಾಯಕರೂ ರಾಜ್ಯದ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ನಮ್ಮ ತಪ್ಪೇನಾದರು ಇದ್ದರೆ ಕರೆದು ಬುದ್ದಿ ಹೇಳಲಿ. ನಮಗೆ ಗೊತ್ತಾಗದೆ ಯಾವುದಾದರೂ ತಪ್ಪಾಗಿರಬಹುದು. ಆದರೆ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ನಮ್ಮ ಆಸೆ ಎಂದರು.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯ ಬಗ್ಗೆ ಮಾತನಾಡಿ, ನಾವು ರಾಜ್ಯದಲ್ಲಿ 28 ಸ್ಥಾನ ಗೆಲ್ಲಬೇಕಿದೆ. ಸಂಸತ್ ಚುನಾವಣೆ ಹತ್ತಿರ ಬರುತ್ತಿದೆ.ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಘೋಷಿಸಲಿ ಎಂದು ಒತ್ತಾಯಿಸಿದರು.
ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಮುಂದುವರೆಸುವುದಕ್ಕೂ ಸಹ ನನ್ನ ಒಮ್ಮತ ಇದೆ ಎಂದು ಹೇಳಿದ ಈಶ್ವರಪ್ಪ, ಯಾವುದಾದರೂ ತೀರ್ಮಾನ ಬೇಗನೇ ತೀರ್ಮಾನ ತೆಗೆದುಕೊಳ್ಳಲಿ ಎಂದು ಕೇಂದ್ರದ ನಾಯಕರಿಗೆ ನಾನು ಮನವಿ ಮಾಡುವುದಾಗಿ ಹೇಳಿದರು.

Blog

ಬೆಂಗಳೂರು ಪಿಜಿ ಮಾಲೀಕರಿಗೆ ಬಿಗ್ ಶಾಕ್ ಕೊಟ್ಟ ಜಲಮಂಡಳಿ

ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿಜಿ) ಮಾಲೀಕರಿಗೆ ಬೆಂಗಳೂರು ಜಲಮಂಡಳಿಯ (BWSSB) ದಿಢೀರ್ ನೀರಿನ ಬಿಲ್ ಏರಿಕೆಯಿಂದ ಆಘಾತವಾಗಿದೆ. ಏಪ್ರಿಲ್ 2025ರಿಂದ ಜಾರಿಗೆ ಬಂದಿರುವ ವಸತಿಯೇತರ ಬಳಕೆಯ ನೀರಿನ ದರ ಏರಿಕೆಯಿಂದಾಗಿ, ಪಿಜಿಗಳಿಗೆ ಬರುತ್ತಿದ್ದ ₹3,000-₹4,000 ಬಿಲ್ ಏಕಾಏಕಿ ₹20,000-₹25,000ಕ್ಕೆ ಏರಿಕೆಯಾಗಿದೆ. ಈ ಅವೈಜ್ಞಾನಿಕ ದರ ಏರಿಕೆಯಿಂದ ಕಂಗಾಲಾಗಿರುವ ಪಿಜಿ ಮಾಲೀಕರು, ಜಲಮಂಡಳಿಯಿಂದ ಶುಲ್ಕ ಕಡಿಮೆಗೊಳಿಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು ಜಲಮಂಡಳಿಗೆ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಸಲ್ಲಿಸಲಾಗಿದ್ದು, ಈ ದರ ಏರಿಕೆಯನ್ನು ವಾಪಸ್ ಪಡೆಯುವಂತೆ ಕೋರಲಾಗಿದೆ. ಪಿಜಿಗಳನ್ನು ದೊಡ್ಡ ವಾಣಿಜ್ಯ ಚಟುವಟಿಕೆಯ ರೀತಿಯಲ್ಲಿ ಪರಿಗಣಿಸಿ, ಒಳಚರಂಡಿ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ದುಬಾರಿಗೊಳಿಸಲಾಗಿದೆ ಎಂದು ಸಂಘ ದೂರಿದೆ. ಬೆಂಗಳೂರಿಗೆ ಉದ್ಯೋಗ, ಶಿಕ್ಷಣಕ್ಕಾಗಿ ಬರುವ ಲಕ್ಷಾಂತರ ಜನರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಪಿಜಿಗಳು ಒದಗಿಸುತ್ತಿವೆ. ಕಾನೂನುಬದ್ಧವಾಗಿ ನಡೆಯುವ ಈ ಸಂಸ್ಥೆಗಳು ಸಾಮಾಜಿಕ ಸೇವೆಯ ಭಾಗವಾಗಿದ್ದರೂ, ಜಲಮಂಡಳಿಯ ದರ ಏರಿಕೆ ಇವುಗಳನ್ನು ಆರ್ಥಿಕವಾಗಿ ಒತ್ತಡಕ್ಕೆ ಸಿಲುಕಿಸಿದೆ.

ನಗರದ ಸಣ್ಣ ಪಿಜಿಗಳು ಈಗಾಗಲೇ ಏರುತ್ತಿರುವ ವೆಚ್ಚಗಳಿಂದ ಕಂಗಾಲಾಗಿವೆ. ವಿದ್ಯುತ್, ಆಹಾರ, ಮತ್ತು ಕಾರ್ಮಿಕ ವೆಚ್ಚಗಳ ಜೊತೆಗೆ ಈ ಹೊಸ ಶುಲ್ಕವು ಮಾಲೀಕರಿಗೆ ಭಾರವಾಗಿದೆ. ಕೆಲವು ಪಿಜಿ ಮಾಲೀಕರು ತಮ್ಮ ವ್ಯವಹಾರವನ್ನೇ ಮುಚ್ಚುವ ಆಲೋಚನೆಯಲ್ಲಿದ್ದಾರೆ. “ಪಿಜಿಗಳು ಸಾಮಾಜಿಕ ಸೇವೆಯಾಗಿದ್ದು, ಇವುಗಳಿಗೆ ವಾಣಿಜ್ಯ ದರ ವಿಧಿಸುವುದು ಸರಿಯಲ್ಲ. ಜಲಮಂಡಳಿಯು ಈ ದರವನ್ನು ಕಡಿಮೆ ಮಾಡದಿದ್ದರೆ, ಅನೇಕ ಸಣ್ಣ ಪಿಜಿಗಳು ಮುಚ್ಚಲ್ಪಡಬಹುದು,” ಎಂದು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಟಿ.ಅರುಣ್ ಕುಮಾರ್ ತಿಳಿಸಿದ್ದಾರೆ.

ಅವರು ಮಾತನಾಡುತ್ತಾ, “ಕಳೆದ ತಿಂಗಳು ₹3,450 ಆಗಿದ್ದ ನೀರಿನ ಬಿಲ್ ಈ ತಿಂಗಳು ₹23,682ಕ್ಕೆ ಏರಿಕೆಯಾಗಿದೆ. ಒಳಚರಂಡಿ ಶುಲ್ಕವನ್ನು ಅವೈಜ್ಞಾನಿಕವಾಗಿ ವಿಧಿಸಲಾಗಿದ್ದು, ಇದರಿಂದ ಸಣ್ಣ ಪಿಜಿಗಳಿಗೆ ತೊಂದರೆಯಾಗಿದೆ. ಜಲಮಂಡಳಿಯು ಈ ವಿಷಯವನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದೆ,” ಎಂದು ತಿಳಿಸಿದರು.

ಬೆಂಗಳೂರು ಜಲಮಂಡಳಿಯ ದರ ಏರಿಕೆಯಿಂದ ಸಾಮಾನ್ಯ ನಾಗರಿಕರಿಗೂ ತೊಂದರೆಯಾಗಿದೆಯಾದರೂ, ಪಿಜಿಗಳಿಗೆ ಇದರ ಪರಿಣಾಮ ತೀವ್ರವಾಗಿದೆ. ಪಿಜಿಗಳು ಒಂದು ಕೊಠಡಿಯಲ್ಲಿ 3-4 ಜನರಿಗೆ ವಸತಿಯನ್ನು ಒದಗಿಸುತ್ತವೆ, ಆದರೆ ಜಲಮಂಡಳಿಯು ಇವುಗಳನ್ನು ಹೆಚ್ಚಿನ ನೀರಿನ ಬಳಕೆಯ ವಾಣಿಜ್ಯ ಘಟಕಗಳೆಂದು ಪರಿಗಣಿಸಿದೆ. ಇದರಿಂದಾಗಿ, ಪಿಜಿಗಳಿಗೆ ವಿಧಿಸಲಾಗಿರುವ ಒಳಚರಂಡಿ ಶುಲ್ಕವು 50%-60% ರಷ್ಟು ಏರಿಕೆಯಾಗಿದೆ.

ಜಲಮಂಡಳಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪಿಜಿಗಳಿಗೆ ವಿಶೇಷ ದರ ವಿಧಾನವನ್ನು ರೂಪಿಸಬೇಕೆಂದು ಸಂಘ ಒತ್ತಾಯಿಸಿದೆ. “ಪಿಜಿಗಳನ್ನು ವಾಣಿಜ್ಯ ಘಟಕವೆಂದು ಪರಿಗಣಿಸುವ ಬದಲು, ಸಾಮಾಜಿಕ ಸೇವೆಯಾಗಿ ಗುರುತಿಸಿ, ಕಡಿಮೆ ದರದ ನೀರಿನ ಶುಲ್ಕವನ್ನು ವಿಧಿಸಬೇಕು,” ಎಂದು ಅರುಣ್ ಕುಮಾರ್ ಒತ್ತಾಯಿಸಿದ್ದಾರೆ. ಜಲಮಂಡಳಿಯು ಈ ಮನವಿಯನ್ನು ಪರಿಶೀಲಿಸಿ, ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

ಈ ದರ ಏರಿಕೆಯಿಂದಾಗಿ ಬೆಂಗಳೂರಿನ ಪಿಜಿ ವಲಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು. ಸಣ್ಣ ಪಿಜಿಗಳು ಮುಚ್ಚಿದರೆ, ನಗರಕ್ಕೆ ಬರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಕೈಗೆಟುಕುವ ವಸತಿ ಸೌಲಭ್ಯ ಕಡಿಮೆಯಾಗಬಹುದು. ಇದು ಬೆಂಗಳೂರಿನ ಆರ್ಥಿಕತೆ ಮತ್ತು ಜೀವನ ಶೈಲಿಯ ಮೇಲೆ ಪರಿಣಾಮ ಬೀರಬಹುದು.

Continue Reading

Blog

ಈ ಸಲ ಕಪ್ ನಮ್ದೆ ಆದ್ರೆ ಒನ್ ಡೇ ಪಾನಿಪುರಿ ನಿಮ್ದು- ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ನ ಮಾಲೀಕ

ಬೆಂಗಳೂರು: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‍ಸಿಬಿ ಹಾಗೂ ಪಂಜಾಬ್ ತಂಡಗಳು ಸೆನಸಲಿವೆ, ಆರ್‍ಸಿಬಿ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಿದ್ದು, ಕಪ್ ಗೆಲ್ಲಲೇಬೇಕು ಎಂದು ಫ್ಯಾನ್ಸ್ ಹಾರೈಕೆ ಮಾಡ್ತಿದ್ದಾರೆ,
ಆರ್‍ಸಿಬಿ ಕ್ರೇಜ್ ಯಾವ ಮಟ್ಟಿಗೆ ಇದೆ ಅಂದ್ರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ನ ಮಾಲೀಕರು ಉಚಿತ ಚಾಟ್ಸ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.

ಆರ್ ಸಿ ಬಿ ಕಟ್ಟಾ ಅಭಿಮಾನಿಯಾಗಿರೋ ಚಾಟ್ಸ್ ಮಾಲೀಕರು ತಮ್ಮ ನೆಚ್ಚಿನ ತಂಟ ಫೈನಲ್ ಪ್ರವೇಶ ಮಾಡಿರೋ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ,
ಈ ಸಲ ಕಪ್ ನಮ್ದೆ ಆದ್ರೆ ಒನ್ ಡೇ ಪಾನಿಪುರಿ ನಿಮ್ದು, ಮಸಾಲಾಪುರಿ, ಪಾನಿಪುರಿ, ಭೇಲ್ ಪುರಿ ಫ್ರೀ ಕೊಡುವುದಾಗಿ ಬರೆದುಕೊಂಡಿದ್ದಾರೆ, ಇದೇ ಜೂ.4 ರಂದು ಸಂಜೆ 5 ಗಂಟೆಯಿಂದ ಉಚಿತ ಚಾಟ್ಸ್ ನೀಡಲಿದ್ದಾರೆ,

Continue Reading

Blog

ಅಕ್ರಮ ಗಣಿಗಾರಿಕೆ ಕೇಸ್- ಜನಾರ್ದನ ರೆಡ್ಡಿಗೆ 7 ವರ್ಷ ಜೈಲು

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ದೋಷಿ ಎಂದು ಸಿಬಿಐ ಕೋರ್ಟ್‌ ತೀರ್ಪು ನೀಡಿದೆ.

ಗಾಲಿ ಜನಾರ್ದನ ರೆಡ್ಡಿ ಜೊತೆಗೆ ಶ್ರೀನಿವಾಸ್‌ ರೆಡ್ಡಿ ಮತ್ತು ಅಲಿ ಖಾನ್‌ಗೆ ಕೋರ್ಟ್‌ ಸೇರಿ ಐದು ಆರೋಪಿಗಳಿಗೆ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅವಿಭಜಿತ ಆಂಧ್ರಪ್ರದೇಶ ಗಣಿ ಸಚಿವೆಯಾಗಿದ್ದ ಸಬಿತಾ ಇಂದ್ರರೆಡ್ಡಿ, ಕೃಷ್ಣ ನಂದಾಗೆ ಕೋರ್ಟ್‌ ಕ್ಲೀನ್‌ಚಿಟ್‌ ನೀಡಿದೆ.

ಏನಿದು ಪ್ರಕರಣ?
ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿ‌ಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ‌ ಇಲಾಖೆಯಿಂದಲೂ ಅಕ್ರಮ‌ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ.

Continue Reading

Trending