Connect with us

ಸೋಶಿಯಲ್ ಮೀಡಿಯಾ

ಅಮೆರಿಕದಲ್ಲಿ ಹಿಂದೂಗಳ ರಕ್ಷಣೆಗೆ ಸಮಿತಿ – ಕನ್ನಡಿಗನ ಸಾರಥ್ಯ

Published

on

ಅಮೆರಿಕದಲ್ಲಿ ಹಿಂದೂಗಳ ರಕ್ಷಣೆಗೆ ಸಮಿತಿ – ಕನ್ನಡಿಗನ ಸಾರಥ್ಯ

ಅಮೆರಿಕದಲ್ಲಿರುವ ಹಿಂದೂ, ಬೌದ್ಧ, ಜೈನ ಮತ್ತು ಸಿಖ್‌ ಧರ್ಮೀಯರ ಹಿತಾಸಕ್ತಿಗಳನ್ನು ರಕ್ಷಿಸುವ ದೃಷ್ಟಿಯಿಂದ ಸಮಿತಿಯನ್ನು ರಚಿಸಲಾಗಿದೆ. ಭಾರತೀಯ ಮೂಲದ ಅಮೆರಿಕ ರಾಜಕಾರಣಿ ಥಾನೆದಾರ್‌ ನೂತನ ಸರ್ಕಾರಿ ಸಮಿತಿಗೆ ಚಾಲನೆ ನೀಡಿದ್ದಾರೆ. ನೂತನ ಸಮಿತಿಗೆ ಅಮೆರಿಕ ಸಂಸತ್‌ ಡೆಮಾಕ್ರಟಿಕ್‌ ಮತ್ತು ರಿಪಬ್ಲಿಕನ್‌ ಉಭಯ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದ್ದು, 27 ಕ್ಕೂ ಹೆಚ್ಚು ಸಂಸದರು ಸಮಿತಿಯ ರಚನೆಗೆ ಅನುಮೋದನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಥಾನೇದಾರ್‌, ಈ ಪ್ರಮುಖ ಘಟ್ಟವನ್ನು ಅತ್ಯಂತ ಹೆಮ್ಮೆ ಗೌರವದಿಂದ ನಾನು ಸ್ವಾಗತಿಸುತ್ತೇನೆ. ನಾವೀಗ ಅತ್ಯಂತ ಪ್ರಮುಖ, ಪ್ರಗತಿಪರ ಹಂತದಲ್ಲಿ ಇದ್ದೇವೆ. ಪರಸ್ಪರರನ್ನು ಅರ್ಥೈಸಿಕೊಳ್ಳುವಿಕೆ, ಒಳಗೊಳ್ಳುವಿಕೆ ಮತ್ತು ಧೃಡವಾದ ಕಾನೂನುಗಳ ರಚನೆ ಈ ಸಮಿತಿಯ ಉದ್ದೇಶವಾಗಿದೆ ಎಂದಿದ್ದಾರೆ. ಭಾರತದ ಕರ್ನಾಟಕದಲ್ಲಿ ನಾನು ಹುಟ್ಟಿದೆ. ನಾನೂ ಸಹ ಈ ದೇಶಕ್ಕೆ ವಲಸಿಗನಾಗಿ ಬಂದೆ. ಪ್ರತಿಯೊಂದು ನಂಬಿಕೆ, ಪ್ರತಿಯೊಂದು ಸಂಸ್ಕೃತಿ ಹಾಗೂ ಪ್ರತಿಯೊಂದು ಸಮುದಾಯಕ್ಕೂ ಸಹ ಅಮೆರಿಕದಲ್ಲಿ ಸ್ಥಳವಿದೆ. ಹಿಂದೂ, ಬೌದ್ಧ, ಸಿಖ್‌ ಮತ್ತು ಜೈನ ಸಮುದಾಯದ ಸರ್ಕಾರಿ ಸಮಿತಿಯ ರಚನೆ ಸಾಮಾನ್ಯ ಸಮಿತಿಗಿಂತ ಹೆಚ್ಚಾಗಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.ಇದೇ ಸಮಯದಲ್ಲಿ ಮತೀಯ ತಾರತಮ್ಯಗಳನ್ನು ವಿರೋಧಿಸಲು ನಾವು ಬದ್ಧರಾಗಿದ್ದೇವೆ. ವೈವಿಧ್ಯತೆಗಳನ್ನು ನಾವು ಸಹಿಸುಕೊಳ್ಳುವುದಲ್ಲ. ಅದನ್ನು ನಾವು ಸಂಭ್ರಮಿಸುತ್ತಿದ್ದೇವೆ ಎಂದು ತಾನೇದಾರ್‌ ನುಡಿದರು.

ದೇಶ

ಭಾರತೀಯ ಇನ್‌ಫ್ಲುಯೆನ್ಸರ್‌ಗಳಿಗೆ ನೇಪಾಳ ರಾಯಭಾರ ಕಚೇರಿಯಿಂದ ವಿಶೇಷ ಅವಕಾಶ

Published

on

ನವದೆಹಲಿ: Embassy of Nepal in India ಭಾರತೀಯ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು, ವ್ಲಾಗರ್‌ಗಳು ಹಾಗೂ ಪಾಡ್‌ಕಾಸ್ಟರ್‌ಗಳಿಗೆ ವಿಶೇಷ ಅವಕಾಶ ಘೋಷಿಸಿದೆ.

ಡಿಜಿಟಲ್ ಮಾಧ್ಯಮಗಳ ಮೂಲಕ Nepalದ ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಐದು ಭಾರತೀಯ ಕಂಟೆಂಟ್ ಕ್ರಿಯೇಟರ್‌ಗಳನ್ನು ಆಯ್ಕೆ ಮಾಡಿ ವಿಶೇಷ “ಫ್ಯಾಮಿಲಿಯರೈಸೇಶನ್ ಟ್ರಿಪ್” ಆಯೋಜಿಸಲಾಗುತ್ತಿದೆ.

ಐದು ಕ್ರಿಯೇಟರ್‌ಗಳಿಗೆ ವಿಶೇಷ ಪ್ರವಾಸ

ಈ ಕುರಿತು ನೇಪಾಳ ರಾಯಭಾರ ಕಚೇರಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಆಸಕ್ತ ಭಾರತೀಯ ಕಂಟೆಂಟ್ ಕ್ರಿಯೇಟರ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆಯ್ಕೆಯಾದ ಐದು ಮಂದಿಗೆ ನೇಪಾಳದ ಪ್ರಮುಖ ಪ್ರವಾಸಿ ತಾಣಗಳು, ಸಾಂಸ್ಕೃತಿಕ ಕೇಂದ್ರಗಳು ಹಾಗೂ ನೈಸರ್ಗಿಕ ಸೌಂದರ್ಯ ಪ್ರದೇಶಗಳನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

ನೇಪಾಳದ ಸಂಸ್ಕೃತಿ ಅನುಭವಿಸುವ ಅವಕಾಶ

ಪ್ರವಾಸದ ವೇಳೆ ಸ್ಥಳೀಯ ಜೀವನಶೈಲಿ, ಆಹಾರ ಸಂಸ್ಕೃತಿ, ಪರಂಪರೆ ಹಾಗೂ ಪ್ರವಾಸೋದ್ಯಮ ವೈಶಿಷ್ಟ್ಯಗಳನ್ನು ನೇರವಾಗಿ ಅನುಭವಿಸುವ ವ್ಯವಸ್ಥೆಯೂ ಇರಲಿದೆ.

ವಿಶೇಷವಾಗಿ ಯೂಟ್ಯೂಬ್, ಇನ್‌ಸ್ಟಾಗ್ರಾಂ, ಟ್ರಾವೆಲ್ ವ್ಲಾಗಿಂಗ್ ಹಾಗೂ ಪಾಡ್‌ಕಾಸ್ಟ್ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಭಾರತೀಯ ಯುವ ಕ್ರಿಯೇಟರ್‌ಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ.

ಡಿಜಿಟಲ್ ಪ್ರಚಾರಕ್ಕೆ ಹೊಸ ಹೆಜ್ಜೆ

ಪ್ರವಾಸೋದ್ಯಮ ಪ್ರಚಾರದಲ್ಲಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಯುವಜನತೆಗೆ ತಲುಪುವ ಹೊಸ ಮಾರ್ಗವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.

ಆಯ್ಕೆಯಾದ ಕ್ರಿಯೇಟರ್‌ಗಳು ತಮ್ಮ ಪ್ರವಾಸ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದ್ದು, ಅದರ ಮೂಲಕ ನೇಪಾಳದ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶ ಹೊಂದಲಾಗಿದೆ.

ಭಾರತ-ನೇಪಾಳ ಬಾಂಧವ್ಯಕ್ಕೆ ಉತ್ತೇಜನ

ಭಾರತ ಮತ್ತು ನೇಪಾಳದ ನಡುವೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಬಾಂಧವ್ಯಗಳಿದ್ದು, ಇಂತಹ ಕಾರ್ಯಕ್ರಮಗಳು ಜನರಿಂದ ಜನರಿಗೆ ಇರುವ ಸಂಪರ್ಕವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಅರ್ಜಿ ಹೇಗೆ ಸಲ್ಲಿಸಬೇಕು?

ಅರ್ಜಿ ಪ್ರಕ್ರಿಯೆ ಹಾಗೂ ಹೆಚ್ಚಿನ ಮಾಹಿತಿಗಾಗಿ Embassy of Nepal in India Official Website ಅಥವಾ ರಾಯಭಾರ ಕಚೇರಿಯ ಅಧಿಕೃತ ಸಾಮಾಜಿಕ ಜಾಲತಾಣ ಪೋಸ್ಟ್ ಪರಿಶೀಲಿಸಬಹುದು.

Continue Reading

ದೇಶ

ಸೈಬೀರಿಯಾದಲ್ಲೂ ಸನಾತನ ಸಂಸ್ಕೃತಿ ಝಲಕ್: ರಷ್ಯಾದ ಗ್ರಾಮದಲ್ಲಿ ‘ಓಂ’ ನಾದ ವೈರಲ್

Published

on

By

ರಷ್ಯಾದ Siberia ಪ್ರದೇಶದ ಒಂದು ಗ್ರಾಮದಲ್ಲಿ ಹಿಂದೂ ಸಂಸ್ಕೃತಿ ಮತ್ತು ಭಾರತೀಯ ಆಧ್ಯಾತ್ಮಿಕತೆಯ ಝಲಕ್ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮೈನಸ್ 40 ಡಿಗ್ರಿಗೂ ಇಳಿಯುವ ತೀವ್ರ ಚಳಿಯ ನಡುವೆಯೂ ಅಲ್ಲಿನ ಜನರು ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಿರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿವೆ.

Okunevo ಎಂಬ ಗ್ರಾಮದಲ್ಲಿ ಈ ಅಪರೂಪದ ದೃಶ್ಯಗಳು ಕಂಡುಬಂದಿವೆ. ರಷ್ಯಾದ ಓಮ್ಸ್ಕ್ ಓಬ್ಲಾಸ್ಟ್ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ ಸ್ಥಳೀಯ ನಿವಾಸಿಗಳು ಹಿಂದೂ ದೇವತೆಗಳ ಪೂಜೆ, ‘ಓಂ’ ಸಂಕೇತಗಳ ಬಳಕೆ ಮತ್ತು ಭಾರತೀಯ ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.

ಜಗತ್ತಿನ ಅತ್ಯಂತ ಶೀತ ಪ್ರದೇಶಗಳಲ್ಲೊಂದಾದ ಸೈಬೀರಿಯಾದಲ್ಲೂ ಭಾರತೀಯ ಆಧ್ಯಾತ್ಮಿಕತೆಯ ಪ್ರಭಾವ ಹರಡಿರುವುದು ಅಚ್ಚರಿಗೆ ಕಾರಣವಾಗಿದೆ. ಕಡು ಚಳಿಯ ನಡುವೆಯೂ ದೇವಸ್ಥಾನ ಮಾದರಿಯ ಪೂಜಾ ಸ್ಥಳಗಳು, ಧಾರ್ಮಿಕ ಚಿಹ್ನೆಗಳು ಹಾಗೂ ಭಾರತೀಯ ಸಂಸ್ಕೃತಿಯ ಆಚರಣೆಗಳು ಜೀವಂತವಾಗಿರುವುದನ್ನು ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಭಾರತ ಮತ್ತು ರಷ್ಯಾ ನಡುವಿನ ಸಾಂಸ್ಕೃತಿಕ ಬಾಂಧವ್ಯದ ಪ್ರತೀಕವಾಗಿ ಹಲವರು ಇದನ್ನು ಕೊಂಡಾಡುತ್ತಿದ್ದಾರೆ. “ಸನಾತನ ಧರ್ಮದ ಪ್ರಭಾವ ಜಗತ್ತಿನ ಎಲ್ಲೆಡೆ ಇದೆ” ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಭಾರತೀಯ ಸಂಸ್ಕೃತಿ, ಯೋಗ ಮತ್ತು ಆಧ್ಯಾತ್ಮಿಕತೆಯ ಮೇಲಿನ ಜಾಗತಿಕ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸೈಬೀರಿಯಾದ ಈ ಗ್ರಾಮ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಕಠಿಣ ಪ್ರಕೃತಿ ಪರಿಸ್ಥಿತಿಯ ನಡುವೆಯೂ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ಅನೇಕರಿಗೆ ಪ್ರೇರಣೆಯಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ Hosa Suddi Kannada News Portal ಓದಿ.

Continue Reading

ದೇಶ

Viral News : ಹೇರ್‌ಕಟ್ ಬಳಿಕ ಕನ್ನಡಿಯಲ್ಲಿ ಸ್ಟೈಲ್ ಚೆಕ್ ಮಾಡಿದ ಕೋತಿ: ನೆಟ್ಟಿಗರು ಫಿದಾ!

Published

on

ಚಾಮರಾಜನಗರ: ಸಾಮಾನ್ಯವಾಗಿ ಕೋತಿಗಳು ಎಂದರೆ ಗಲಾಟೆ, ವಸ್ತು ಕಸಿದುಕೊಳ್ಳುವುದು ಅಥವಾ ಜನರನ್ನು ಕಿರಿಕಿರಿ ಮಾಡುವ ದೃಶ್ಯಗಳೇ ಹೆಚ್ಚು ನೆನಪಾಗುತ್ತವೆ. ಆದರೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯಲ್ಲಿ ನಡೆದ ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇಲ್ಲಿನ “ದೇವೂ ಮೆನ್ಸ್ ಕಟಿಂಗ್ ಸಲೂನ್”ಗೆ ಬಂದ ಕೋತಿಯೊಂದು ಹೇರ್‌ಕಟ್ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದೆ.

ಸಂತೇಮರಹಳ್ಳಿಯ ಸ್ಥಳೀಯ ಸಲೂನ್‌ಗೆ ಏಕಾಏಕಿ ಬಂದ ಕೋತಿ, ಯಾವುದೇ ಗಲಾಟೆ ಮಾಡದೇ ಶಾಂತವಾಗಿ ಒಳಗೆ ಬಂದು ಕುರ್ಚಿಯ ಮೇಲೆ ಕುಳಿತಿದೆ. ಇದನ್ನು ನೋಡಿ ಅಚ್ಚರಿಗೊಂಡ ಸಲೂನ್ ಮಾಲೀಕ ದೇವೂ, ಮೋಜಿಗಾಗಿ ಕೋತಿಯ ತಲೆಗೆ ಬಾಚಣಿಗೆ ಹಾಕಿ ಕೂದಲು ಸರಿಪಡಿಸಲು ಆರಂಭಿಸಿದ್ದಾರೆ. ಆದರೆ, ಎಲ್ಲರಿಗೂ ಶಾಕ್ ಆಗುವಂತೆ ಕೋತಿ ಸಂಪೂರ್ಣ ಶಾಂತವಾಗಿ ಕೂತೇ ಇತ್ತು.

ಕತ್ತರಿ ಮತ್ತು ಟ್ರಿಮ್ಮರ್ ಹತ್ತಿರ ಬಂದರೂ ಕೋತಿ ಯಾವುದೇ ಭಯ ತೋರಿಸದೇ ಶಿಸ್ತಿನಿಂದ ವರ್ತಿಸಿದೆ. ವಿಶೇಷವೆಂದರೆ, ಹೇರ್‌ಕಟ್ ನಡೆಯುವ ವೇಳೆ ಅದು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನೇ ನೋಡುತ್ತಾ ಕುಳಿತಿದ್ದ ದೃಶ್ಯ ಜನರನ್ನು ಮಂತ್ರಮುಗ್ಧರನ್ನಾಗಿಸಿದೆ.

ಸ್ಥಳೀಯರು “ಈ ಕೋತಿ ಹಲವಾರು ಜನರಿಗಿಂತ ಹೆಚ್ಚು ಶಿಸ್ತಿನಿಂದ ವರ್ತಿಸಿತು” ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಹೇರ್‌ಕಟ್ ಮುಗಿದ ಬಳಿಕ ಕೋತಿ ಮತ್ತೊಮ್ಮೆ ಕನ್ನಡಿಯಲ್ಲಿ ತನ್ನ ಹೊಸ ಸ್ಟೈಲ್ ನೋಡಿಕೊಂಡು ಶಾಂತವಾಗಿ ಹೊರಟಿದೆ.

ಈ ಅಪರೂಪದ ಘಟನೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಕೋತಿಯ ಬುದ್ಧಿವಂತಿಕೆ ಹಾಗೂ ಸಲೂನ್ ಮಾಲೀಕರ ಸಹನೆಯನ್ನು ಮೆಚ್ಚಿಕೊಂಡಿದ್ದಾರೆ.

Continue Reading

Trending