Connect with us

ಬೆಂಗಳೂರು

ಶಾಮನೂರು ಹೇಳಿಕೆ 100% ತಪ್ಪು ಎಂದ ರಾಯರೆಡ್ಡಿ

Published

on

ಶಾಮನೂರು ಹೇಳಿಕೆ 100% ತಪ್ಪು ಎಂದ ರಾಯರೆಡ್ಡಿ
ಶಾಮನೂರು ಹೇಳಿಕೆ 100% ತಪ್ಪು ಎಂದ ರಾಯರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆಯಾಗುತ್ತಿದೆ ಎಂಬ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಕಾಂಗ್ರೆಸ್ನ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಅವರು ಆಕ್ಷೇಪಿಸಿದ್ದಾರೆ ಮತ್ತು ಶಾಮನೂರು ಅವರಿಗೆ ಮಾಹಿತಿಯ ಕೊರತೆ ಇದೆ ಎಂದಿದ್ದಾರೆ.
ರಾಜ್ಯದಲ್ಲಿ ಏಳು ಮಂದಿ ಎಸ್ಪಿಗಳು, ಮೂವರು ಜಿಲ್ಲಾಧಿಕಾರಿಗಳು ಮತ್ತು 41 ವಿವಿಗಳ ಪೈಕಿ 11 ವಿವಿಗಳಲ್ಲಿ ಲಿಂಗಾಯತ ಕುಲಪತಿಗಳಿದ್ದಾರೆ. ಇಲ್ಲಿ ಕಡೆಗಣನೆಯ ಪ್ರಶ್ನೆಯೇ ಬರುವುದಿಲ್ಲ. ಶಾಮನೂರು ಶಿವಶಂಕರಪ್ಪ ಅವರಿಗೆ ಮಾಹಿತಿಯ ಕೊರತೆಯಿಂದ ಈ ರೀತಿ ಹೇಳಿದ್ದಾರೆ ಎಂದು ರಾಯರೆಡ್ಡಿ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು. ಇದರೊಂದಿಗೆ ಲಿಂಗಾಯತ ಸಿಎಂ ಚರ್ಚೆ ಕಣಕ್ಕೆ ಪ್ರವೇಶ ಪಡೆದರು.
ಲಿಂಗಾಯತ ಸಮಾಜದ ಅಧ್ಯಕ್ಷರಾಗಿರುವ ಶಾಮನೂರು ಅವರು ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸ್ಥಾನಮಾನ ಇಲ್ಲ ಎಂದು ಹೇಳಿರುವುದು ಸರಿಯಲ್ಲ. ಅಧಿಕಾರಿಗಳ ನೇಮಕ ಮಾಡುವಾಗ ಜಾತಿ ಆಧಾರದ ಮೇಲೆ ಪೋಸ್ಟಿಂಗ್ ಕೊಡಲು ಆಗುವುದಿಲ್ಲ. ಬೇಕಿದ್ದರೆ ಮಂತ್ರಿ ಮಂಡಲದ ರಚನೆಯ ವೇಳೆ ಜಾತಿ, ಪ್ರಾದೇಶಿಕ ಅಸಮಾನತೆ ತಪ್ಪಿಸಲು ಜಾತಿ ಆಧಾರಿತವಾಗಿ ಸಂಪುಟ ರಚಿಸಬಹುದು. ಇದೆಲ್ಲ ಸರಿಯೋ ತಪ್ಪೋ, ಮಾಡಬಹುದೋ ಮಾಡಬಾರದೋ ಎನ್ನುವುದು ಬೇರೆಯದೇ ಚರ್ಚೆ. ಸಿದ್ದರಾಮಯ್ಯನವರು ಈ ಸಂಪುಟ ಸರ್ಕಸ್ ಮಾಡಿದ್ದಾರೆʼʼ ಎಂದು ರಾಯರೆಡ್ಡಿ ಹೇಳಿದರು.
ʻಪ್ರಧಾನಿ ಯಾರು ಬೇಕಾದರೂ ಆಗಬಹುದು. ಹಾಗಂತ ಯಾರನ್ನು ಬೇಕಾದರೂ ಅಟೆಂಡರ್ ಮಾಡಲು ಸಾಧ್ಯವಿಲ್ಲ. ಅಟೆಂಡರ್ ಆಗೋಕೆ ಕ್ವಾಲಿಫಿಕೇಶನ್ ಇರಬೇಕುʼʼ ಎಂದು ರಾಯರೆಡ್ಡಿ ನುಡಿದರು.
ಶಾಮನೂರು ಅವರಿಗೆ ದಾವಣಗೆರೆ ಜಿಲೆಲಯ ಬಗ್ಗೆಯೇ ಮಾಹಿತಿ ಕೊರತೆ ಇದೆ. ದಾವಣಗೆರೆ ಜಿಲ್ಲೆಯಲ್ಲೇ ಮೂವರು ಲಿಂಗಾಯತ ಅಧಿಕಾರಿಗಳಿದ್ದಾರೆ. ದಾವಣಗೆರೆ ಸಿಇಒ ಸುರೇಶ್ ಹಿಟ್ನಾಳ್, ಎಸ್ಪಿ ಉಮಾರಾಣಿ ಲಿಂಗಾಯತರು ಎಂದು ವಿವರಿಸಿದರು. ಇನ್ನುಳಿದಂತೆ ರಾಜ್ಯದಲ್ಲಿ ನಿತೀಶ್ ಪಾಟೀಲ್, ದಿವಾಕರ್, ಗೋವಿಂದರೆಡ್ಡಿ ಲಿಂಗಾಯತ ಡಿಸಿಗಳು ಎಂದು ತಿಳಿಸಿದರು.
ಅದೇ ವೇಳೆ, ಜಾತಿ ಆಧಾರಿತವಾಗಿ ಮಾತನಾಡುವುದು ಸರಿಯಲ್ಲ ಎಂಬ ಕಿವಿಮಾತನ್ನೂ ಹೇಳಿದರು.
ʻʻಜಾತಿ ಆಧಾರದ ಮೇಲೆ ಪೋಸ್ಟಿಂಗ್ ಆಗಬಾರದು. ಎಲ್ಲ ಜಾತಿಗಳಲ್ಲಿ ಅರ್ಹ ಹಾಗು ಅನರ್ಹ ಅಧಿಕಾರಿಗಳು ಇದ್ದಾರೆ. ಜಾತಿ ಆಧಾರಿತ ಮೇಲೆ ಅಧಿಕಾರಿಗಳು ನೇಮಕ ಆಗಬಾರದು. ಇವತ್ತು ಲಿಂಗಾಯತ ಅಂತ ಹೇಳಿದ್ರೆ ನಾಳೆ ಒಕ್ಕಲಿಗರು ಕುರುಬ ಅಧಿಕಾರಿಗಳು ಅಂತ ಕೇಳ್ತಾರೆ. ಶ್ಯಾಮನೂರು ಅವರ ಹೇಳಿಕೆಗಳು ಆಡಳಿತದ ಮೇಲೆ ಪರಿಣಮ ಬೀರಲಿದೆʼʼ ಎಂದು ಹೇಳಿದ ರಾಯರೆಡ್ಡಿ ಅವರು, ʻʻಶ್ಯಾಮನೂರುಗೆ ಅಷ್ಟು ಪ್ರೀತಿ ಇದ್ರೆ ಲಿಂಗಾಯತ ಅಧಿಕಾರಿಗಳನ್ನು ಅವರ ಜಿಲ್ಲೆಯಲ್ಲಿ ನೇಮಕ ಮಾಡಿಕೊಳ್ಳಲಿʼʼ ಎಂದರು.
ಈಗ ನಾನು ಮಾಧ್ಯಮ ಗೋಷ್ಠಿ ಮಾಡಿದ ಕೂಡಲೇ ಕೆಲವರು ಸಿದ್ದರಾಮಯ್ಯ ಹೇಳಿ ರಾಯ ರೆಡ್ಡಿ ಮಾತನಾಡಿದರು ಎಂದು ಹೇಳಬಹುದು. ಆದರೆ, ನಾನು ಸಿದ್ದರಾಮಯ್ಯ ಹೇಳಿ ಮಾತನಾಡುತ್ತಿರುವುದಲ್ಲ. ನಾನೊಬ್ಬ ಜವಾಬ್ದಾರಿಯುತ ಶಾಸಕ. ಹಾಗಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಹಾಗಾಗಿ ಮಾತನಾಡಿದ್ದೇನೆ.
ʻʻನಾನು ಸಿದ್ದರಾಮಯ್ಯ ಬಳಿ ಏನೂ ಕೇಳಿಲ್ಲ. ನಾನು ಅಷ್ಟೊಂದು ಕೀಳು ಮಟ್ಟಕ್ಕೆ ಇಳಿದಿಲ್ಲ. ನನ್ನನ್ನ ನಾನು ಡಿಗ್ರೇಡ್ ಮಾಡಿಕೊಳ್ಳಲ್ಲ. ಅವರು ಹೇಳಿದ್ದಕ್ಕೆ ನಾನು ಪ್ರೆಸ್ನೀಟ್ ಮಾಡ್ತಿಲ್ಲʼʼ ಎಂದು ಸ್ಪಷ್ಟಪಡಿಸಿದರು.

ದೇಶ

ಸಂಕಷ್ಟದ ಹೊತ್ತಿನಲ್ಲಿ ನೆರವಾದ ದಂಪತಿ: ಶಿವನಪಾಳ್ಯದಲ್ಲಿ ಮಾನವೀಯತೆ

Published

on

By

ಬೆಂಗಳೂರು: ನಗರದಲ್ಲಿ ತೀವ್ರಗೊಂಡಿರುವ ಎಲ್‌ಪಿಜಿ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ನೆರವಾಗಲು ಸಾಮಾಜಿಕ ವಲಯದಿಂದ ಸಹಾಯದ ಹಸ್ತ ಮುಂದಾಗಿದೆ. ದಿನಗೂಲಿ ನಂಬಿಕೊಂಡಿರುವ ಚಾಲಕರ ಜೀವನವೇ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಮಾನವೀಯತೆ ಮೆರೆದ ಘಟನೆ ಗಮನ ಸೆಳೆಯುತ್ತಿದೆ.

ಇದೇ ವೇಳೆ ಶಿವನಪಾಳ್ಯ ವಾರ್ಡ್‌ನಲ್ಲಿ ಜಿಬಿಎ (GBA) ಆಸಕ್ತ ಅಭ್ಯರ್ಥಿ Mahesh Bheemanakuppe ಹಾಗೂ ಅವರ ಪತ್ನಿ Savitha Mahesh ಸಂಕಷ್ಟದಲ್ಲಿರುವ ಬಡ ಆಟೋ ಚಾಲಕರ ನೆರವಿಗೆ ಸ್ವಯಂಪ್ರೇರಿತರಾಗಿ ಮುಂದಾಗಿದ್ದಾರೆ. ಎಲ್‌ಪಿಜಿ ಅಭಾವದಿಂದ ದಿನನಿತ್ಯದ ಆದಾಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಅವರು ಆಹಾರ ಕಿಟ್‌ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಮಹೇಶ್ ಅವರು, “ಬಡವರ ನೆರವಿಗೆ ನಿಲ್ಲುವುದು ನನ್ನ ಪ್ರಥಮ ಕರ್ತವ್ಯ. ನನ್ನ ಶಿವನಪಾಳ್ಯ ವಾರ್ಡ್‌ನ ಯಾವುದೇ ಕುಟುಂಬ ಇಂತಹ ಸಂಕಷ್ಟಕ್ಕೆ ಒಳಗಾಗಬಾರದು ಎಂಬುದು ನನ್ನ ಬದ್ಧತೆ” ಎಂದು ತಿಳಿಸಿದ್ದಾರೆ. ಅವರ ಈ ಮಾತುಗಳು ಸ್ಥಳೀಯರಲ್ಲಿ ವಿಶ್ವಾಸ ಮೂಡಿಸಿದ್ದು, ಸೇವಾ ಮನೋಭಾವಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ನಗರದಲ್ಲಿ ಗ್ಯಾಸ್ ಕೊರತೆ ದಿನೇ ದಿನೇ ಗಂಭೀರವಾಗುತ್ತಿರುವ ನಡುವೆಯೇ, ಆಟೋ ಚಾಲಕರ ಆರ್ಥಿಕ ಸ್ಥಿತಿ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲೇ ಮಹೇಶ್–ಸಾವಿತಾ ದಂಪತಿಯ ಸೇವಾ ಮನೋಭಾವ ಇತರರಿಗೆ ಸ್ಪೂರ್ತಿಯಾಗಿದೆ.

ಸ್ಥಳೀಯರು ಈ ಕಾರ್ಯವನ್ನು ಶ್ಲಾಘಿಸಿ, “ಬಡ ಆಟೋ ಚಾಲಕರ ಸಂಕಷ್ಟ ಅರಿತು ನೆರವಾದ ಈ ದಂಪತಿಗಳಿಗೆ ಅಭಿನಂದನೆಗಳು. ಇತರರೂ ಇವರ ಮಾದರಿಯನ್ನು ಅನುಸರಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆ ಮೆರೆದ ಈ ಕಾರ್ಯ ಸಮಾಜದಲ್ಲಿ ಸಕಾರಾತ್ಮಕ ಸಂದೇಶವನ್ನು ಹರಡುತ್ತಿದೆ.

Continue Reading

ದೇಶ

PUC Result ಶಾಕ್: ಇಂದು ಇಲ್ಲ, ಏಪ್ರಿಲ್ 9ಕ್ಕೆ ಪ್ರಕಟ!

Published

on

By

ಬೆಂಗಳೂರು, ಏಪ್ರಿಲ್ 07: 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗಿದೆ. ಇಂದು (ಏಪ್ರಿಲ್ 07) ಫಲಿತಾಂಶ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಪ್ರಕಟಣೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. Karnataka School Examination and Assessment Board (KSEAB) ಈಗ ಹೊಸ ದಿನಾಂಕವಾಗಿ ಏಪ್ರಿಲ್ 9ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯದಾದ್ಯಂತ 7.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಫಲಿತಾಂಶ ಇಂದು ಪ್ರಕಟವಾಗಲಿದೆ ಎಂಬ ನಿರೀಕ್ಷೆ ಇದ್ದರೂ, ಅಧಿಕೃತ ಘೋಷಣೆ ಇಲ್ಲದ ಕಾರಣ ವಿದ್ಯಾರ್ಥಿಗಳಲ್ಲಿ ಗೊಂದಲ ಮತ್ತು ಆತಂಕ ಉಂಟಾಯಿತು.

ಇದೀಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 9ರಂದು ಫಲಿತಾಂಶ ಆನ್‌ಲೈನ್‌ನಲ್ಲಿ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ತಮ್ಮ Registration Number ಹಾಗೂ Date of Birth ನಮೂದಿಸಿ ಫಲಿತಾಂಶ ಪರಿಶೀಲಿಸಬಹುದು.

ಇನ್ನೊಂದೆಡೆ, ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಈ ಕಾರಣದಿಂದ ಕೆಲವು ಪ್ರದೇಶಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಫಲಿತಾಂಶ ಪ್ರಕಟಿಸಲು ಅಡಚಣೆ ಎದುರಾಗಿದೆ.

ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಿರುವುದರಿಂದ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ, ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಮುಂದೂಡಲ್ಪಟ್ಟಿದ್ದು, ವಿದ್ಯಾರ್ಥಿಗಳು ಇನ್ನೂ ಎರಡು ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Continue Reading

ದೇಶ

“ಬ್ರೆಡ್ ಇಲ್ಲ ಅಂದ್ರೆ ಕೇಕ್ ತಿನ್ನಿ!” – ಜೋಶಿಗೆ ತಿರುಗೇಟು

Published

on

By

ಬಾಗಲಕೋಟೆ: ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ವಿಚಾರ ರಾಜಕೀಯ ಕಾಳಗಕ್ಕೆ ತಿರುಗಿದೆ. ಕೇಂದ್ರ ಸಚಿವ Pralhad Joshi ಅವರು “ಗ್ಯಾಸ್ ಇಲ್ಲದಿದ್ದರೆ ಪೆಟ್ರೋಲ್ ಬಳಸಿ” ಎಂಬ ಸಲಹೆ ನೀಡಿದ್ದಕ್ಕೆ ಕೆಪಿಸಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೆಪಿಸಿಸಿ ವಕ್ತಾರ A. N. Nataraj Gowda ಅವರು ಈ ಹೇಳಿಕೆಯನ್ನು ಫ್ರೆಂಚ್ ಕ್ರಾಂತಿಯ “ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಿ” ಎಂಬ ಮನೋಭಾವಕ್ಕೆ ಹೋಲಿಸಿ ಕಿಡಿಕಾರಿದ್ದಾರೆ. “ದಿನಗೂಲಿ ನಂಬಿ ಬದುಕುವ ಆಟೋ ಚಾಲಕರಿಗೆ ಪೆಟ್ರೋಲ್ ಬಳಸುವಂತೆ ಹೇಳುವುದು ಆರ್ಥಿಕ ವಾಸ್ತವತೆ ತಿಳಿಯದ ಮಾತು” ಎಂದು ಆರೋಪಿಸಿದರು.

ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕೆಪಿಸಿಸಿ ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ. ಪೆಟ್ರೋಲ್ ದರ ಗ್ಯಾಸ್‌ಗಿಂತ ಬಹಳ ಹೆಚ್ಚಿದ್ದು, ಅದರಿಂದ ಬಡ ಚಾಲಕರ ಜೀವನ ಸಾಗುವುದೇ ಹೇಗೆ ಎಂದು ಪ್ರಶ್ನಿಸಿದೆ. ಜೊತೆಗೆ, ಹೆಚ್ಚಿನ ಆಟೋಗಳು Dedicated LPG/CNG ಎಂಜಿನ್ ಹೊಂದಿರುವುದರಿಂದ ಪೆಟ್ರೋಲ್ ಬಳಸುವುದು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಹೇಳಿದೆ.

ಇನ್ನು, ಇಂಧನ ಪೂರೈಕೆಯನ್ನು ನಿಯಂತ್ರಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದೇ ಆಗಿದ್ದು, ಖಾಸಗಿ ಕಂಪನಿಗಳಿಂದ ಉಂಟಾಗಿರುವ ಕೃತಕ ಅಭಾವದ ಮೇಲೆ ಕ್ರಮ ಕೈಗೊಳ್ಳದಿರುವುದೇಕೆ ಎಂದು ಪ್ರಶ್ನಿಸಿದೆ. “ಅಂತಾರಾಷ್ಟ್ರೀಯ ಬಿಕ್ಕಟ್ಟು” ನೆಪವೊಡ್ಡಿ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.

ಈ ನಡುವೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿದ ಕೆಪಿಸಿಸಿ, ಸಚಿವರು ತಕ್ಷಣವೇ ಆಟೋ ಚಾಲಕರಲ್ಲಿ ಕ್ಷಮೆ ಕೇಳಬೇಕು ಮತ್ತು ಎಲ್‌ಪಿಜಿ ಪೂರೈಕೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಒಟ್ಟಿನಲ್ಲಿ, ಎಲ್‌ಪಿಜಿ ಕೊರತೆ ಸಮಸ್ಯೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಬಡ ಆಟೋ ಚಾಲಕರ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ.

Continue Reading

Trending