ದೇಶ
ಎನ್ ಡಿ ಎ ಮೈತ್ರಿಕೂಟಕ್ಕೆ ಗುಡ್ ಬೈ ಪವನ್ ಕಲ್ಯಾಣ್
ಆಂಧ್ರ ಪ್ರದೇಶ: ಕಷ್ಟದ ಸಮಯದಲ್ಲಿ ಟಿಡಿಪಿಯನ್ನು ಬೆಂಬಲಿಸಲು ಬಿಜೆಪಿ ನೇತೃತ್ವದ ಎನ್ಡಿಎಯಿಂದ ಹೊರಬಂದಿದ್ದೇನೆ ಎಂದು ನಟ ವiತ್ತು ರಾಜಕಾರಣಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ, ಕೃಷ್ಣಾ ಜಿಲ್ಲೆಯ ಪೆಡನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಟಿಡಿಪಿ ಬಲಿಷ್ಟ ಪಕ್ಷವಾಗಿದೆ, ಆಂಧ್ರ ಪ್ರದೇಶಸ ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಜನಸೇನಾ ಟಿಡಿಪಿ ಅಗತ್ಯವಿದೆ, ಇಂದು ಟಿಡಿಪಿ ಹೋರಾಟ ನಡೆಸುತ್ತಿದೆ, ನಾನು ಅವರನ್ನು ಬೆಂಬಲಿಸುತ್ತೇವೆ, ಈ ಪರಿಸ್ಧಿತಿಯಲ್ಲಿ ಟಿಡಿಪಿಗೆ ಯುವ ರಕ್ತದ ಬೆಂಬಲ ಬೇಕು ಎಂದು ಹೇಳಿದರು, ಜುಲೈ 18ರಂದು ದೆಹಲಿಯಲ್ಲಿ ನಡೆದ ಎನ್ಡಿಎ ಸಭೆಯ ಬಳಿಕ ಜನಸೇನಾ ಪಕ್ಷದ ಮುಖ್ಯಸ್ಧ ಪವನ್ ಕಲ್ಯಾರ್ಣ ತಮ್ಮ ಪಕ್ಷವು ಪಿಎಂ ಮೋದಿ ಅವರ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದರು, ಆಂಧ್ರಪ್ರದೇಶದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ಸಿಪಿ ವಿರುದ್ಧ ಹೋರಾಡಲು ಆಂಧ್ರಪ್ರದೇಶದಲ್ಲಿ ಟಿಡಿಪಿ, ಬಿಜೆಪಿ ಮತ್ತು ಅವರ ಪಕ್ಷದ ಮೈತ್ರಿಯನ್ನು ಪವನ್ ಕಲ್ಯಾಣ್ ಪ್ರಸ್ತಾಪಿಸಿದ್ದರು, ಈ ಬಗ್ಗೆ ಬಿಜೆಪಿ ಇನ್ನೂ ನಿರ್ಧಾರ ಕೈಕೊಳ್ಳಬೇಕಿದೆ, ಅದರೆ ಈಗ ಪವನ್ ಕಲ್ಯಾಣ್ ತಮ್ಮ ಪಕ್ಷ ಇನ್ನು ಮುಂದೆ ಎನ್ಡಿಎ ಭಾಗವಾಗುದಿಲ್ಲ ಎಂದು ಘೋಷಿಸಿದ್ದಾರೆ,