ದೇಶ

ಕೇಂದ್ರ ಸರ್ಕಾರದಿಂದ ತುರ್ತು ಎಚ್ಚರಿಕೆ ಎಸ್ಸೆಮ್ಮೆಸ್ ಪರೀಕ್ಷೆ ವಿಚಿತ್ರ ಸೌಂಡ್ ಮೂಲಕ ಮೊಬೈಲ್‍ಗೆ ಸಂದೇಶ ರವಾನೆ

ಕೇಂದ್ರ ಸರ್ಕಾರದಿಂದ ತುರ್ತು ಎಚ್ಚರಿಕೆ ಎಸ್ಸೆಮ್ಮೆಸ್ ಪರೀಕ್ಷೆ ವಿಚಿತ್ರ ಸೌಂಡ್ ಮೂಲಕ ಮೊಬೈಲ್‍ಗೆ ಸಂದೇಶ ರವಾನೆ

ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೇಶಾದ್ಯಂತ ಜಾರಿಗೊಳಿಸುತ್ತಿರುವ ತುರ್ತು ಎಚ್ಚರಿಕೆ ವ್ಯವಸ್ಧೆಯನ್ನು ಸೋಮವಾರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು, ಈ ವೇಳೆ ಅನೇಕ ನಾಗರಿಕರ ಮೊಬೈಲ್‍ಗಳಿಗೆ ಮಧ್ಯಾಹ್ನ ಎಸ್ಸೆಮ್ಮೆಸ್ ಬಂದಿವೆ, ಈ ವೇಳೆ ಫೋನ್‍ಗಳಲ್ಲಿ ಮಾಮೂಲಿ ಎಸ್ಸೆಮ್ಮೆಸ್ ಬಜರ್ ಸೌಂಡ್ ಬಾರದೇ, ವಿಚಿತ್ರ ಬಜರ್ ಧ್ವನಿಯೊಂದಿಗೆ ಈ ತುರ್ತು ಸಂದೇಶ ಪಾಪ್‍ಆಪ್ ಆಗಿದೆ, ಇದರರ್ಥ ತುರ್ತು ಸಂದೇಶಗಳು ಇದೇ ಬಜರ್ ಸೌಂಡ್‍ನೊಂದಿಗೆ ಮೊಬೈಲ್‍ಗಳಿಗೆ ಬಂದು, ನಾಗರೀಕರನ್ನು ಎಚ್ಚರಿಸುತ್ತವೆ,
ಸಂದೇಶದಲ್ಲಿ ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಮಾದರಿ ಪರೀಕ್ಷಾ ಸಂದೇಶವಾಗಿದೆ, ದಯವಿಟ್ಟು ಈ ಸಂದೇಶ ನಿರ್ಲಕ್ಷಿಸಿ, ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೆ ತಂದಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಧೆ ಪರೀಕ್ಷಿಸಲು, ಸಾರ್ವಜನಿಕ ಸುರಕ್ಷತೆ ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆ ನೀಡುವ ಗುರಿಯನ್ನು ಈ ಸಂದೇಶ ಹೊಂದಿದೆ ಎಂದು ಬರೆಯಲಾಗಿದೆ,

Trending

Exit mobile version