ದೇಶ
ಪಾರ್ವತಿ ಕುಂಡಕ್ಕೆ ಪ್ರಧಾನಿ ಭೇಟಿ : ಡಮರುಗ, ಶಂಖ ಬಾರಿಸಿದ ಮೋದಿ
ಪಿತೋರ್ಘರ್ : ಉತ್ತರಾಖಂಡದ ಪವಿತ್ರ ಹಿಂದೂ ಯಾತ್ರಾಸ್ಥಳ ಪಾರ್ವತಿ ಕುಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ನೀಡಿದ್ದಾರೆ. ಅಲ್ಲಿನ ಎಲ್ಲಾ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೇ ದೇವರಿಗೆ ಪೂಜೆ ಸಲ್ಲಿಸುವ ಸಮಯದಲ್ಲಿ ಸ್ವತಃ ತಾವೇ ಢಮರುಗ ಬಾರಿಸಿ, ಶಂಖ ಊದಿದ್ದಾರೆ
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಪಾರ್ವತಿ ಕುಂಡದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಆಯೋಜಿಸಲಾಗಿತ್ತು. ಎಂದಿನಂತೆ ತಮ್ಮ ವಿಶೇಷ ವೇಷಭೂಷಣಗಳಿಂದ ಮಿಂಚುತ್ತಿದ್ದ ಪ್ರಧಾನಿ ಮೋದಿ ದೇಗುಲದ ಅರ್ಚಕರೊಂದಿಗೆ ತುಸು ಕಾಲ ಕುಶಲ ಸಂಭಾಷಣೆಯನ್ನೂ ನಡೆಸಿದರು.
ಪಾರ್ವತಿಕುಂಡವು ಪಾರ್ವತಿ ಕಣಿವೆಯಲ್ಲಿರುವ ದೇಶದ ಅಪರೂಪದ ಬಿಸಿನೀರಿನ ಬುಗ್ಗೆಗಳ ಪೈಕಿ ಒಂದಾಗಿದೆ. ಈ ಕುಂಡಕ್ಕೆ ಪೌರಾಣಿಕ ಹಿನ್ನೆಲೆಗಳೂ ಸಹ ಇದ್ದು, ಪಾರ್ವತಿ ಕಣಿವೆಯಿಂದ ಹರಿದು ಬರುವ ನೀರಿಗೆ ವಿಶೇಷ ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತದೆ.