ಬೆಂಗಳೂರು
ನಾಯಕತ್ವ ಗೊಂದಲಕ್ಕೆ ಸಮಯ ಬಂದಾಗ ಉತ್ತರ : B. K. Hariprasad
ಬೆಂಗಳೂರು: ಕಾಂಗ್ರೆಸ್ ನಾಯಕತ್ವ ಅಸಹಾಯಕವಲ್ಲ, ಸಮಯ ಸಂದರ್ಭ ಬಂದಾಗ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ B. K. Hariprasad ಹೇಳಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಯಕತ್ವದಲ್ಲಿ ಯಾವುದೇ ಗೊಂದಲ ಇಲ್ಲ, ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
D. K. Shivakumar ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರನ್ನು ಬಂಡೆ ಎಂದು ಕರೆಯುವುದಕ್ಕಿಂತ ಇಂಜಿನ್ ಎಂದು ಕರೆಯಬೇಕು. ರೈಲು ಹತ್ತಿರ ಬಂದಾಗ ಜೋರಾಗಿ ಕೂಗುವಂತೆ, ಶಿವಕುಮಾರ್ ಬಂದಾಗ ಆರ್ಭಟ ಆಗುತ್ತದೆ ಎಂದು ಅವರು ಹೇಳಿದರು. ನಾಯಕತ್ವ ಬದಲಾವಣೆ ವಿಚಾರವನ್ನು ಪಕ್ಷದ ಅಧ್ಯಕ್ಷ Mallikarjun Kharge ತೀರ್ಮಾನಿಸಬೇಕು. “ಯಾವುದೇ ವಾಹನ ಎರಡು ಟ್ರ್ಯಾಕ್ಗಳಲ್ಲಿ ಹೋಗಲು ಸಾಧ್ಯವಿಲ್ಲ. ಸರ್ಕಾರದಲ್ಲಿ Siddaramaiah ಮುಂದಿರುತ್ತಾರೆ; ಪಕ್ಷದಲ್ಲಿ ಡಿಕೆ ಶಿವಕುಮಾರ್ ಮುಂದಿರುತ್ತಾರೆ” ಎಂದು ಹೇಳಿದರು.
ಹೈಕಮಾಂಡ್ ನಾಯಕರು ಅಸಹಾಯಕರಲ್ಲ. Sonia Gandhi, ಖರ್ಗೆ ಹಾಗೂ Rahul Gandhi ಅವರಿಗೆ ಎಲ್ಲಾ ವಿಚಾರಗಳು ತಿಳಿದಿವೆ. ಸಮಯ ಬಂದಾಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮಗೆ ರಾಷ್ಟ್ರಗೀತೆಯೇ ಮುಖ್ಯ
ವಂದೇಮಾತರಂಗೆ ವಿರೋಧವಿಲ್ಲ. ಆದರೆ ರಾಷ್ಟ್ರಗೀತೆಗೆ ಅಪಮಾನವಾಗಬಾರದು ಎಂದರು. “ಜನಗಣಮನ” ದೇಶದ ಎಲ್ಲ ಭಾಗಗಳನ್ನು ಒಳಗೊಂಡಿದೆ ಎಂದು Rabindranath Tagore ರಚಿಸಿದ ರಾಷ್ಟ್ರಗೀತೆಯ ಮಹತ್ವವನ್ನು ಉಲ್ಲೇಖಿಸಿದರು. ವಂದೇಮಾತರಂ ‘ಆನಂದ್ ಮಠ’ದ ಪ್ರಾರ್ಥನೆ ಎಂದು ಅಭಿಪ್ರಾಯಪಟ್ಟ ಅವರು, ಮೊದಲು ವಂದೇಮಾತರಂ ಬಳಿಕ ರಾಷ್ಟ್ರಗೀತೆ ಹಾಡುವುದು ಅಪಮಾನಕ್ಕೆ ಸಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು. M. S. Golwalkar ಕುರಿತು ಸಹ ಟೀಕೆ ಮಾಡಿದರು.
ದೇಶ
ವ್ಯಾಲೆಂಟೈನ್ಸ್ ಡೇ ನಿರಾಸೆ: ಬೆಂಗಳೂರಿನ ಬ್ರೂವರಿಯಲ್ಲಿ ಜೋಡಿಗಳ ದೀರ್ಘ ಸಾಲು ವೈರಲ್
ಬೆಂಗಳೂರು, ಫೆ.16: ವ್ಯಾಲೆಂಟೈನ್ಸ್ ಡೇ ಸಂಭ್ರಮಿಸಲು ಯೋಜಿಸಿದ್ದ ನೂರಾರು ಜೋಡಿಗಳಿಗೆ ಫೆ.14ರಂದು ನಿರಾಸೆ ಎದುರಾಗಿದೆ. ಬೆಂಗಳೂರಿನ ಜನಪ್ರಿಯ ಬ್ರೂವರಿಯೊಂದರಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ಕಿಂಗ್ ಮಾಡಿದ್ದರಿಂದ ಜೋಡಿಗಳು ಗಂಟೆಗಳ ಕಾಲ ಹೊರಗೆ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇನ್ಸ್ಟಾಗ್ರಾಂ ಬಳಕೆದಾರ ಅಕ್ಷಯ್ ಕುಮಾವತ್ ಹಂಚಿಕೊಂಡಿರುವ ವಿಡಿಯೋದಲ್ಲಿ, “ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ ಮಾಡಿದಾಗ ಏನಾಗುತ್ತದೆ ನೋಡಿ” ಎಂಬ ಶೀರ್ಷಿಕೆ ನೀಡಲಾಗಿದೆ. ಸಂಜೆಯ ಚಳಿಯಲ್ಲಿ ನೂರಾರು ಜೋಡಿಗಳು ಮಳಿಗೆಯ ಹೊರಗೆ ಉದ್ದ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಟೇಬಲ್ ರಿಸರ್ವೇಶನ್ ಮಾಡಿಕೊಂಡಿದ್ದರೂ ಸೀಟು ಸಿಗದ ಕಾರಣ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಗೆ ತಲಾ ₹2,000ರವರೆಗೆ ಕವರ್ ಚಾರ್ಜ್ ವಸೂಲಿ ಮಾಡಲಾಗಿದೆ ಎನ್ನಲಾಗಿದೆ. ಇಷ್ಟೊಂದು ಹಣ ಪಾವತಿಸಿದರೂ ಸಮರ್ಪಕ ವ್ಯವಸ್ಥೆ ಇರಲಿಲ್ಲ ಎಂಬುದು ಗ್ರಾಹಕರ ಆರೋಪ. ಸೀಟು ಸಿಗದೆ ಹಿಂತಿರುಗಿದ ಕೆಲವರು ತಮ್ಮ ಹಣವನ್ನು ಮರಳಿ ಪಡೆಯಲು ಸಿಬ್ಬಂದಿಯೊಂದಿಗೆ ಹರಸಾಹಸ ಪಡಬೇಕಾಯಿತು ಎಂದು ಹೇಳಲಾಗಿದೆ.
ಫೆಬ್ರವರಿ 15ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಬ್ರೂವರಿ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. “ಕೇವಲ ಸೋಶಿಯಲ್ ಮೀಡಿಯಾ ಹೈಪ್ಗಾಗಿ ಇಷ್ಟು ಕಷ್ಟ ಬೇಕೇ?” ಎಂದು ಕೆಲವರು ಪ್ರಶ್ನಿಸಿದರೆ, “ಮನೆಯಲ್ಲೇ ಉಳಿದವರೇ ಅದೃಷ್ಟವಂತರು” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಪರಾಧ
BENGALURU : ಅರ್ಧಂಬರ್ಧ ರಸ್ತೆ ಕೆಲಸಕ್ಕೆ ಬೆಲೆ ಕಟ್ಟಿದ ಪುಟ್ಟ ಜೀವ
ಬೆಂಗಳೂರು: ರಾಜ್ಯದಲ್ಲಿ ರಸ್ತೆ ದುರಸ್ತಿ ವಿಳಂಬ, ಅವೈಜ್ಞಾನಿಕ ಹಂಪ್ಗಳು ಮತ್ತು ಭಾರೀ ಗುಂಡಿಗಳಿಂದಾಗಿ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿರುವ ದುರ್ಘಟನೆಗಳು ಆತಂಕ ಮೂಡಿಸಿವೆ.
ನಗರದ Mahadevapura ಪ್ರದೇಶದಲ್ಲಿ ರಸ್ತೆ ಕಾಮಗಾರಿ ವಿಳಂಬವೇ ಎರಡು ವರ್ಷದ ಕಂದಮ್ಮ ತ್ರಿಶೂಲ್ ಜೀವ ಕಳೆದುಕೊಳ್ಳಲು ಕಾರಣವಾಗಿದೆ. ಬೈಕ್ನಲ್ಲಿ ಸಾಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಕೆಳಗೆ ಬಿದ್ದಿದ್ದು, ತಲೆ ಮೇಲೆ ಕಾರು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ. ಘಟನೆಗೆ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿ, ಅರ್ಧಂಬರ್ಧ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ, Adugodiಯ ಬಾಷ್ ಕಂಪನಿ ರಸ್ತೆಯಲ್ಲಿ ಭಾರೀ ಗುಂಡಿ ಕಾರಣವಾಗಿ 49 ವರ್ಷದ ಅಮಲಾ ಮೃತಪಟ್ಟಿದ್ದಾರೆ. ಗುಂಡಿಯಿಂದಾಗಿ ಆಯಾ ತಪ್ಪಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಹಿಂದಿನಿಂದ ಬಂದ ಟಿಪ್ಪರ್ ಹರಿದು ದುರಂತ ಸಂಭವಿಸಿದೆ.
ಅತ್ತ Shivamoggaಯ ಎಲ್ಬಿಎಸ್ ನಗರ ಫ್ಲೈಓವರ್ನಲ್ಲಿ ಪಾಲಿಕೆ ನಿರ್ಮಿಸಿದ್ದ ಅವೈಜ್ಞಾನಿಕ ಹಂಪ್ ಮತ್ತೊಬ್ಬ ಯುವಕನ ಜೀವ ಪಡೆದುಕೊಂಡಿದೆ. ಹಂಪ್ ಕಾಣದೆ ಬೈಕ್ನಲ್ಲಿ ಬಿದ್ದ 35 ವರ್ಷದ ಉಲ್ಲಾ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾಜ್ಯದಲ್ಲಿ ರಸ್ತೆ ಸುರಕ್ಷತೆ ಪ್ರಶ್ನಾರ್ಥಕವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಬೆಂಗಳೂರು
ಶಿವರಾತ್ರಿ ಸಂಭ್ರಮ: ಹನುಮಂತನಗರ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೃತ್ಯ ರೂಪಕ, ಜಾಗರಣೆ
ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ Mahadeshwara Swamy Temple Hanumanthanagarನಲ್ಲಿ ಭಕ್ತಿ ಮತ್ತು ಸಂಸ್ಕೃತಿಯ ಸಂಭ್ರಮ ಕಂಗೊಳಿಸಿತು. ಶಿವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್” ಸಂಸ್ಥೆಯ ಗುರು ಬಿ. ನಾಗೇಶ್ ಹಾಗೂ ಶಿಷ್ಯವೃಂದದಿಂದ “ಶ್ರೀ ಮಂಜುನಾಥ ಚರಿತೆ” ನೃತ್ಯ ರೂಪಕ ಮತ್ತು ಭರತನಾಟ್ಯ ಸಂಗೀತ ಪ್ರದರ್ಶನ ಮನಸೆಳೆಯಿತು.
ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕ Ravi Subramanya ಭಾಗವಹಿಸಿ ನೃತ್ಯ ಕಲಾವಿದರನ್ನು ಸನ್ಮಾನಿಸಿದರು. ಭಕ್ತಿಪರ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮ ಭಕ್ತರಲ್ಲಿ ವಿಶೇಷ ಆನಂದ ಮೂಡಿಸಿತು.
ರಾತ್ರಿ ಪೂರ್ತಿ ದೇವಸ್ಥಾನದಲ್ಲಿ ಭಕ್ತಾದಿಗಳು “ಹರ ಹರ ಮಹಾದೇವ” ಜಪ ಮಾಡುತ್ತ ಜಾಗರಣೆ ನಡೆಸಿದರು. ಶಿವಭಕ್ತರ ಭಜನೆ, ಧ್ಯಾನ ಮತ್ತು ಆರಾಧನೆಯಿಂದ ದೇವಸ್ಥಾನ ಪ್ರದೇಶ ಭಕ್ತಿರಸದ ಮೇಳವಾಗಿ ಪರಿಣಮಿಸಿತು.
ಇದೇ ಸಂದರ್ಭದಲ್ಲಿ “ಐಬಿಎಂ ಫ್ಯಾಮಿಲಿ” ಎಂಬ ಸ್ನೇಹಕೂಟದಿಂದ ಭಕ್ತಾದಿಗಳಿಗೆ 3,000ಕ್ಕೂ ಹೆಚ್ಚು ಕಾಫಿ ಮತ್ತು ಬಿಸ್ಕೆಟ್ ವಿತರಿಸಿ ಸೇವಾಭಾವ ತೋರಿಸಲಾಯಿತು. ಉತ್ಸವದಲ್ಲಿ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು.
-
ದೇಶ18 hours agoNarendra Modi: ಬಜೆಟ್ 2026 ‘We Are Ready’ ಕ್ಷಣ
-
ಕ್ರೀಡೆ19 hours agoInd vs Pak: ICC Men’s T20 World Cupನಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗ
-
ಕ್ರೀಡೆ4 hours agoT20 WORLD CUP : ಭಾರತದ ವಿರುದ್ಧ ಪಾಕ್ ಹೀನಾಯ ಸೋಲು – ಶೋಯೆಬ್ ಅಖ್ತರ್ ಕಿಡಿ
-
ದೇಶ19 hours agoKarnataka State Road Transport Corporation ಲಗೇಜು ದರ 15% ಹೆಚ್ಚಳ: ಫೆ.16ರಿಂದ ಜಾರಿ
-
ದೇಶ19 hours agoಮಹಾಶಿವರಾತ್ರಿ ಸಂಭ್ರಮ: Shankaracharya Templeನಲ್ಲಿ ಕಾಶ್ಮೀರಿ ಪಂಡಿತರ ವಿಶೇಷ ಪೂಜೆ
-
ದೇಶ6 hours agoಚೀನಾದ ಲೂನಾರ್ ನ್ಯೂ ಇಯರ್ಗೆ ಮುನ್ನ ಪಟಾಕಿ ದುರಂತ – 8 ಸಾವು, 2 ಗಾಯ
-
ಕ್ರೀಡೆ7 hours agoIND vs PAK: 61 ರನ್ ಸೋಲಿನ ಬಳಿಕ ಸಲ್ಮಾನ್ ಅಲಿ ಆಘಾ ಸ್ಪಷ್ಟನೆ – ಪವರ್ ಪ್ಲೇ ವೈಫಲ್ಯವೇ ಪಾಕ್ ಕುಸಿತಕ್ಕೆ ಕಾರಣ
-
ದೇಶ23 hours agoಚಾರ್ಧಾಮ್ ಯಾತ್ರೆ: ಕೇದಾರನಾಥ ಏಪ್ರಿಲ್ 22ರಿಂದ ಭಕ್ತರಿಗೆ ದರ್ಶನ
