Connect with us

ದೇಶ

ತಿಮ್ಮಪ್ಪನ ದರ್ಶನಕ್ಕಾಗಿ 2,150 ಕಿ.ಮೀ ಕಾಲ್ನಡಿಗೆಯಲ್ಲಿ ಬಂದ ವೃದ್ಧದಂಪತಿ!

Published

on

ತಿಮ್ಮಪ್ಪನ ದರ್ಶನಕ್ಕಾಗಿ 2,150 ಕಿ.ಮೀ ಕಾಲ್ನಡಿಗೆಯಲ್ಲಿ ಬಂದ ವೃದ್ಧದಂಪತಿ!
ತಿಮ್ಮಪ್ಪನ ದರ್ಶನಕ್ಕಾಗಿ 2,150 ಕಿ.ಮೀ ಕಾಲ್ನಡಿಗೆಯಲ್ಲಿ ಬಂದ ವೃದ್ಧದಂಪತಿ!

ತಿರುಪತಿ: ಕಲಿಯುಗದ ವೈಕುಂಠದ ಅಧಿಪತಿ, ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯಕ್ಕಾಗಿ ವೃದ್ಧ ದಂಪತಿ ಸಾವಿರಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಯಾತ್ರೆ ಕೈಗೊಂಡಿದ್ದು, ಜನರ ಗಮನ ಸೆಳೆದರು.

ಗುಜರಾತ್ ರಾಜ್ಯದ ದ್ವಾರಕಾ ನಗರದ ಡಾ.ಆರ್.ಉಪಾಧ್ಯಾಯ (74) ಮತ್ತು ಅವರ ಪತ್ನಿ ಸರೋಜಿನಿ (71) ಅವರು 2,150 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದು, ಅವರ ಭಕ್ತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಷ್ಟಕ್ಕೂ ಈ ಇಳಿವಯಸ್ಸಿನಲ್ಲಿ ವೃದ್ಧದಂಪತಿ ಆರೋಗ್ಯವನ್ನೂ ಲೆಕ್ಕಿಸದೆ ಹಗಲಿರುಳು ಕಾಲ್ನಡಿಗೆಯಲ್ಲಿ ತಿರುಪತಿ ಯಾತ್ರೆ ಮಾಡುತ್ತಿರುವುದು ಯಾಕೆ ಎಂದು ಕೊಂಡಿರಿ? ಇಲ್ಲಿದೆ ತುಂಬಾ ಆಸಕ್ತಿಕರ ಸಂಗತಿ, ಮುಂದೆ ಓದಿ…

ಉಪಾಧ್ಯಾಯ ಅವರ ತಾಯಿ ವೈದ್ಯಕೀಯ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ನಿಂದ ನಿಧನರಾದರು. ಅವರಿಗೆ ಜೀವನದಲ್ಲಿ ಒಮ್ಮೆಯಾದರೂ ತಿರುಪತಿ- ತಿರುಮಲೆಗೆ ಭೇಟಿಕೊಟ್ಟು ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಬೇಕೆಂಬ ಆಸೆ ಇತ್ತು. ಆದರೆ ಕ್ಯಾನ್ಸರ್ ನಿಂದಾಗಿ ದೇಹ ಸಹಕರಿಸದ ಕಾರಣ ಆಕೆಯ ಆಸೆ ಈಡೇರಲಿಲ್ಲ.

ಅತ್ತೆಯ ಹರಕೆ ಅರ್ಥಮಾಡಿಕೊಂಡ ಸೊಸೆ ಸರೋಜಿನಿ ತನ್ನ ಪತಿ ಉಪಾಧ್ಯಾಯರೊಂದಿಗೆ ಕಾಲ್ನಡಿಗೆಯಲ್ಲಿ ಹೋಗಿ ಬಾಲಾಜಿ ದರ್ಶನ ಮಾಡಲು ತೀರ್ಮಾನಿಸಿದರು. ಅದರಂತೆ 70 ದಿನಗಳ ಹಿಂದೆ 2,150 ಕಿ.ಮೀ ದೂರದ ತಿರುಮಲಕ್ಕೆ ಟೋಪು ಬಂಡಿಯೊಂದಿಗೆ (ಲಗೇಜ್‌ಗಾಗಿ) ಕಾಲ್ನಡಿಗೆಯಲ್ಲಿ ಹೊರಟರು. ಸ್ವಾಮಿಯ ಸನ್ನಿಧಿ ತಲುಪಲು 59 ದಿನ ಬೇಕಾಯಿತು.

ತಿರುಪತಿಗೆ ಬಂದು ಏಳುಬೆಟ್ಟವನ್ನು ಕಾಲ್ನಡಿಗೆಯಲ್ಲೇ ಹತ್ತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಮತ್ತೆ ಕಾಲ್ನಡಿಗೆಯಲ್ಲೇ ಗುಜರಾತ್​ ನತ್ತ ವಾಪಸ್ಸಾದರು. ಏತನ್ಮಧ್ಯೆ ದರ್ಶನಕ್ಕೆ ಹೊರಡುವ ಮುನ್ನ ತಮ್ಮ ಪತ್ನಿ ಕಾಲು ಊತ ಮತ್ತು ಸುಸ್ತಿನಿಂದ ಬಳಲುತ್ತಿದ್ದರು. ಅವರಿಗೆ ಗ್ಲುಕೋಮಾ ಸಮಸ್ಯೆಯಿತ್ತು ಎಂದು ಉಪಾಧ್ಯಾಯ ಹೇಳಿದರು. ಸ್ವಾಮಿಯ ಮೇಲೆ ಭಾರ ಹಾಕಿ ಯಾತ್ರೆ ಆರಂಭಿಸಿದ್ದು, ಈಗ ಎಲ್ಲವೂ ಸರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪತ್ನಿ ನಡೆಯಲು ಸಾಧ್ಯವಾಗದೇ ಇದ್ದಾಗ ತಳ್ಳುಗಾಡಿಯ ಮೇಲೆ ಕೂರಿಸಿ ಸ್ವಲ್ಪ ದೂರ ತಳ್ಳುತ್ತಿದ್ದೆ ಎಂದು ಉಪಾಧ್ಯಾಯ ಹೇಳಿದರು. ಅವರ ಹರಕೆ ತೀರಿಸಿದ ಪರಿ ಕಂಡು ಹಲವರು ಆಶ್ಚರ್ಯ ಪಡುತ್ತಾರೆ.

ದೇಶ

ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್‌ನ ‘III’: ಶಾಸ್ತ್ರೀಯ ನೃತ್ಯದ ವೈಭವ ಅನಾವರಣ

Published

on

ಬೆಂಗಳೂರು: ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ವತಿಯಿಂದ ಆಯೋಜಿಸಲಾದ “III” – ಭರತನಾಟ್ಯ ಮತ್ತು ಕಥಕ್ ತ್ರಯಿ ನೃತ್ಯೋತ್ಸವವು ಶಾಸ್ತ್ರೀಯ ನೃತ್ಯಾಭಿಮಾನಿಗಳಿಗೆ ವಿಶಿಷ್ಟ ಕಲಾನುಭವವನ್ನು ನೀಡಿತು. ಭರತನಾಟ್ಯ ಮತ್ತು ಕಥಕ್ ಎಂಬ ಎರಡು ಶ್ರೇಷ್ಠ ಭಾರತೀಯ ನೃತ್ಯಪ್ರಕಾರಗಳ ತ್ರಯಿ ವಿನ್ಯಾಸಗಳ ಮೂಲಕ ನೃತ್ಯ, ಸಂಗೀತ, ಸಾಹಿತ್ಯ ಹಾಗೂ ಭಾವಾಭಿವ್ಯಕ್ತಿಯ ಸೊಬಗನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮವು ಕಿರಿಯ ವಿದ್ಯಾರ್ಥಿಗಳ ಪ್ರಥಮ ಸಾರ್ವಜನಿಕ ಪ್ರದರ್ಶನವಾದ “ನಟೇಶ ಕೌತ್ವಂ” ಮೂಲಕ ಆರಂಭಗೊಂಡಿತು. ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ಕೂಡಿದ ಅವರ ಪ್ರದರ್ಶನವು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕಥಕ್ ತ್ರಯಿಯು ಶಿವತತ್ತ್ವವನ್ನು ವರ್ಣಿಸುವ ನೃತ್ಯ ರೂಪಕದೊಂದಿಗೆ ಕಾರ್ಯಕ್ರಮಕ್ಕೆ ಚೈತನ್ಯ ತುಂಬಿತು. ಬಳಿಕ ಭರತನಾಟ್ಯ ಶೈಲಿಯ ಪುಷ್ಪಾಂಜಲಿ ಭಕ್ತಿರಸದ ವಾತಾವರಣವನ್ನು ಸೃಷ್ಟಿಸಿತು. “ತುಮಕು ಚಲತಾ ರಾಮಚಂದ್ರ” ಕಥಕ್ ರೂಪಕವು ಶ್ರೀರಾಮನ ಜೀವನದ ತಾಯಿತನದ ವಿಭಿನ್ನ ಆಯಾಮಗಳನ್ನು ಹಾಗೂ ಭಕ್ತಕವಿ ತುಳಸಿದಾಸರ ಭಾವಲೋಕವನ್ನು ಮನೋಜ್ಞವಾಗಿ ಮೂಡಿಸಿತು.

ಕಾರ್ಯಕ್ರಮದ ಕೇಂದ್ರ ಆಕರ್ಷಣೆಯಾಗಿದ್ದ “ದುರ್ಗಾ ವರ್ಣಂ” ಭರತನಾಟ್ಯ ಪ್ರದರ್ಶನವು ದೇವಿ ದುರ್ಗೆಯ ಶೌರ್ಯ, ಕರುಣೆ ಹಾಗೂ ಸ್ತ್ರೀಶಕ್ತಿಯ ವೈಭವವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿತು. ಇದೇ ವೇಳೆ ಕಥಕ್ ಶೈಲಿಯ “ದುರ್ಗಾ ಸ್ತುತಿ” ಆದಿಶಕ್ತಿಯ ಮಹಿಮೆಯನ್ನು ಭಾವಪೂರ್ಣವಾಗಿ ಬಿಂಬಿಸಿತು. ಜನಪ್ರಿಯ ಕೃಷ್ಣಾಭಿನಯ “ವಿಷಮಕಾರಿ ಕಣ್ಣ” ಪ್ರೇಕ್ಷಕರನ್ನು ಭಕ್ತಿಭಾವದಲ್ಲಿ ತೇಲಿಸಿತು.

ಸಮಾರೋಪದಲ್ಲಿ ಪ್ರದರ್ಶಿಸಲಾದ ಕಥಕ್ ಶೈಲಿಯ “ತರಾನಾ” ತನ್ನ ಚುರುಕು ಲಯ ಮತ್ತು ಮನೋಹರ ಚಲನಶೈಲಿಯ ಮೂಲಕ ರಸಿಕರನ್ನು ರಂಜಿಸಿತು.

ಕಾರ್ಯಕ್ರಮದ ಸಂಗೀತ ಸಂಯೋಜನೆಯನ್ನು ಶರತ್ ಪ್ರಭಾತ್ ನಿರ್ವಹಿಸಿದ್ದು, “ದುರ್ಗಾ ವರ್ಣಂ” ಸಾಹಿತ್ಯ ರಚನೆ ಹಾಗೂ ಕಥಕ್ ನೃತ್ಯ ಸಂಯೋಜನೆಗಳಿಗೂ ಅವರು ಕೈಜೋಡಿಸಿದ್ದರು. ಭರತನಾಟ್ಯ ವಿಭಾಗದ ನೃತ್ಯ ಸಂಯೋಜನೆಯನ್ನು ದಿವ್ಯ ಪ್ರಭಾತ್ ರೂಪಿಸಿದ್ದರು.

ಭರತನಾಟ್ಯ ತ್ರಯಿಯ ದೀಕ್ಷಾ ಜೋಶಿ, ಪಾಯಲ್ ಮತ್ತು ತಾನ್ಯಾ ಹಾಗೂ ಕಥಕ್ ತ್ರಯಿಯ ಆದ್ಯಾ, ಅನನ್ಯಾ ಮತ್ತು ಸ್ವಪಾಂತಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ Mahathi Kannan ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಕುಂತಲಾ ರಾಘವೇಂದ್ರ ಪ್ರಭಾತ್, ಶರತ್ ಪ್ರಭಾತ್ ಹಾಗೂ ದಿವ್ಯ ಭರತ್ ಪ್ರಭಾತ್ ಉಪಸ್ಥಿತರಿದ್ದರು.

Continue Reading

ದೇಶ

ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಗೃಹಲಕ್ಷ್ಮಿಯಿಂದ ಐಟಿ, ಜಿಎಸ್‌ಟಿ ಪಾವತಿದಾರರು ಔಟ್

Published

on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ Gruha Lakshmi Scheme ಯೋಜನೆಯಲ್ಲಿ ಭಾರೀ ಪರಿಷ್ಕರಣೆ ನಡೆಸಲಾಗಿದ್ದು, ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಸರ್ಕಾರಿ ಇಲಾಖೆಗಳ ಮಾಹಿತಿಯನ್ನು ಪರಿಶೀಲಿಸಿದ ಬಳಿಕ ಈ ಕ್ರಮ ಕೈಗೊಂಡಿದೆ.

ಯೋಜನೆಯ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಕೈಗೊಳ್ಳಲಾದ ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು ₹77 ಕೋಟಿ ಉಳಿತಾಯವಾಗಲಿದೆ ಎಂದು ಇಲಾಖೆ ಅಂದಾಜಿಸಿದೆ. ಅನರ್ಹ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.

ಇಲಾಖೆಯ ಮಾಹಿತಿಯ ಪ್ರಕಾರ, ಆದಾಯ ತೆರಿಗೆ (ಐಟಿ) ಹಾಗೂ ಜಿಎಸ್‌ಟಿ ಪಾವತಿಸುತ್ತಿದ್ದ ಸುಮಾರು 1.94 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಜೊತೆಗೆ, ಮರಣ ಹೊಂದಿದ ಸುಮಾರು 1.95 ಲಕ್ಷ ಫಲಾನುಭವಿಗಳ ಹೆಸರಿನಲ್ಲಿ ಹಣ ಜಮೆಯಾಗುತ್ತಿರುವುದು ಪರಿಶೀಲನೆಯಲ್ಲಿ ಪತ್ತೆಯಾಗಿದ್ದು, ಅಂತಹ ಖಾತೆಗಳನ್ನೂ ರದ್ದುಗೊಳಿಸಲಾಗಿದೆ.

ಜಿಲ್ಲಾವಾರು ಪರಿಶೀಲನೆಯಲ್ಲಿ Bengaluru ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 47,871 ಮಹಿಳೆಯರನ್ನು ಅನರ್ಹರೆಂದು ಗುರುತಿಸಲಾಗಿದೆ. ಬಳಿಕ Belagavi, Dakshina Kannada, Mysuru ಹಾಗೂ Tumakuru ಜಿಲ್ಲೆಗಳು ಅತಿ ಹೆಚ್ಚು ಅನರ್ಹ ಫಲಾನುಭವಿಗಳನ್ನು ಹೊಂದಿರುವ ಜಿಲ್ಲೆಗಳಾಗಿವೆ.

ಮುಂದಿನ ದಿನಗಳಲ್ಲಿ ನಕಲಿ ಫಲಾನುಭವಿಗಳು ಹಾಗೂ ತಾಂತ್ರಿಕ ಲೋಪಗಳನ್ನು ಸಂಪೂರ್ಣವಾಗಿ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಂದ ಮರು ದೃಢೀಕರಣ ಅಥವಾ ಮರು ಅರ್ಜಿ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Continue Reading

ದೇಶ

ಬಿಡದಿ ಟೌನ್‌ಶಿಪ್ ವಿವಾದಕ್ಕೆ ಹೊಸ ಟ್ವಿಸ್ಟ್: ಕುಮಾರಸ್ವಾಮಿ ಹಳೆಯ ವಿಡಿಯೋ ಬಿಡುಗಡೆ

Published

on

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ರೈತರ ಭೂಸ್ವಾಧೀನ ಪ್ರಕ್ರಿಯೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇದೀಗ ಈ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕೇಂದ್ರ ಸಚಿವ H. D. Kumaraswamy ಅವರ ಹಳೆಯ ವಿಡಿಯೋವನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದು, ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.

ಬಿಡದಿ ಟೌನ್‌ಶಿಪ್ ಯೋಜನೆಯಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ಕುಮಾರಸ್ವಾಮಿ ಆರೋಪಿಸುತ್ತಿದ್ದು, ಯಾವುದೇ ಕಾರಣಕ್ಕೂ ಭೂಸ್ವಾಧೀನ ನಡೆಸಬಾರದು ಎಂದು ಒತ್ತಾಯಿಸಿದ್ದಾರೆ. ಯೋಜನೆಯ ಹಿಂದೆ ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿದ್ದು, ಸರ್ಕಾರವು ರಿಯಲ್ ಎಸ್ಟೇಟ್ ಮಾಫಿಯಾಗೆ ಮಣಿದಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ರೈತರ ಹೋರಾಟಕ್ಕೂ ಬೆಂಬಲ ಸೂಚಿಸಿದ್ದಾರೆ.

ಆದರೆ ಕಾಂಗ್ರೆಸ್ ಶಾಸಕ H. C. Balakrishna ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಬಿಡದಿಯನ್ನು ಅಭಿವೃದ್ಧಿಪಡಿಸಿ ರೈತರಿಗೆ ಆರ್ಥಿಕ ಲಾಭ ತಲುಪಿಸುವ ಉದ್ದೇಶದಿಂದ ಟೌನ್‌ಶಿಪ್ ಯೋಜನೆ ರೂಪಿಸಲಾಗಿತ್ತು ಎಂದು ಕುಮಾರಸ್ವಾಮಿ ಹೇಳಿರುವುದು ಕಂಡುಬಂದಿದೆ. ಯೋಜನೆ ಜಾರಿಯಾದ ಬಳಿಕ ಶೇ.40ರಷ್ಟು ಜಮೀನನ್ನು ರೈತರಿಗೆ ಹಿಂದಿರುಗಿಸುವ ಮಾದರಿಯ ಬಗ್ಗೆ ತಾವು ಚಿಂತನೆ ನಡೆಸಿದ್ದಾಗಿ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಡಿಯೋ ಬಿಡುಗಡೆ ಮಾಡಿದ ಬಳಿಕ ಎಚ್‌ಸಿ ಬಾಲಕೃಷ್ಣ, “ಒಂದು ವರ್ಷ ಹಿಂದೆ ಟೌನ್‌ಶಿಪ್ ಯೋಜನೆಯನ್ನು ಬೆಂಬಲಿಸಿದ್ದವರು ಈಗ ವಿರೋಧಿಸುತ್ತಿರುವುದು ಏಕೆ? ಇದು ಗೋಸುಂಬೆ ರಾಜಕೀಯವಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಡಿಸಿಎಂ D. K. Shivakumar ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದರ ನಡುವೆ ಡಿಕೆ ಶಿವಕುಮಾರ್ ಕೂಡ ಕುಮಾರಸ್ವಾಮಿ ವಿರುದ್ಧ ತಿರುಗೇಟು ನೀಡಿದ್ದಾರೆ. “ಈ ಯೋಜನೆಗೆ ಮೂಲ ಪ್ರೇರಣೆ ಮತ್ತು ಮಾರ್ಗದರ್ಶನ ಕುಮಾರಸ್ವಾಮಿ ಅವರದ್ದೇ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಟೌನ್‌ಶಿಪ್ ಅಭಿವೃದ್ಧಿ ಅಗತ್ಯ” ಎಂದು ಹೇಳಿದ್ದಾರೆ. ಅಲ್ಲದೆ, ಪ್ರಧಾನಿ Narendra Modi ಕೂಡ ಟೌನ್‌ಶಿಪ್ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬಿಡದಿ ಟೌನ್‌ಶಿಪ್ ಯೋಜನೆ ಇದೀಗ ರೈತರ ಹಿತಾಸಕ್ತಿ, ಅಭಿವೃದ್ಧಿ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳ ಕೇಂದ್ರಬಿಂದುವಾಗಿ ಪರಿಣಮಿಸಿದೆ.

Continue Reading

Trending