ರಾಜಕೀಯ

ಬಿಜೆಪಿ ಪಕ್ಷದ ಷಡ್ಯಂತರ ಯಶಸ್ವಿಯಾಗುವುದಿಲ್ಲ ಡಿ ಕೆ ಸುರೇಶ್

ಬಿಜೆಪಿ ಪಕ್ಷದ ಷಡ್ಯಂತರ ಯಶಸ್ವಿಯಾಗುವುದಿಲ್ಲ ಡಿ ಕೆ ಸುರೇಶ್

ಕೆಂಗೇರಿ: ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರವನ್ನು ಯಾವುದೇ ಷಡ್ಯಂತರದಿಂದ ಬೀಳಿಸಲು ಪ್ರಯತ್ನ ಮಾಡುತ್ತಿರುವ ಬಿಜೆಪಿ ಪಕ್ಷ ಯಶಸ್ವಿಯಾಗುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು, ಉಲ್ಲಾಳು ವಾರ್ಡ್‍ನ ಉಪಕಾರ್ ಬಡಾವಣೆಯಲ್ಲಿ ನಿರಾತಂಕ ಸ್ವಯಂ ಸೇವಾ ಸಂಸ್ಧೆಯ ಕಚೇರಿಯನ್ನು ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತ ಕಾಂಗ್ರೆಸ್ ಸರ್ಕಾರ ಜಾರಿ ಗೊಳಿಸಿರುವ ಗ್ಯಾರಂಟಿ ಯೋಜನೆಗಳು ಹಲವಾರು ಬಡ ಕುಟುಂಬಗಳಿಗೆ ತಲುಪಿದೆ, ನಿರಂತರವಾಗಿ ಬಿಜೆಪಿ ಪಕ್ಷ ನಮ್ಮ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿವೆ, ಪಕ್ಷದಲ್ಲಿ ಇರುವ ನಾಯಕರ ಜೊತೆಗೆ ಕಾರ್ಯಕರ್ತರು ಹಾಗೂ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ಕೆಲಸ ಹಾಗೂ ಯೋಜನೆಗಳನ್ನು ಮೆಚ್ಚಿದೆ ಇದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ, ರಾಜ್ಯದ ಜನ ಕರ್ನಾಟಕ್ಕೆ ಉತ್ತಮ ಅಡಳಿತ ನೀಡಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವನ್ನು ನೀಡಿದ್ದಾರೆ, ಯಾವುದೇ ಅಭಿವೃದ್ಧಿ ವಿಷಯಗಳಲ್ಲಿ ಚೆರ್ಚಗೆ ಸಿದ್ದವಾಗಿರುತ್ತೇವೆ ಎಂದರು, ಕಾರ್ಯಕ್ರಮದಲ್ಲಿ ನಿರಾತಂಕ ಸ್ವಯಂ ಸೇವಾ ಸಂಸ್ಧೆಯ ಸಂಸ್ಧಾಪಕ ಕಾರ್ಯದರ್ಶಿ ಎಂ ಎಚ್ ರಮೇಶ್ ಅವರು ಮಾತನಾಡುತ್ತ ಈ ಸ್ವಯಂ ಸೇವಾ ಸಂಸ್ಧೆ ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ ಮತ್ತು ಜೀವನೋಪಾಯ ತರಬೇತಿಯಂತಹ ವಿವಿಧ ಸಾಮಾಜಿಕ ವಲಯಗಳಿಗೂ ವಿಸ್ತರಕೊಂಡಿದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಕ್ರಮಗಳನ್ನು ನೀಡಿ ಹಲವಾರು ಸಂಸ್ಧೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದರ ಮೂಲಕ ಸಹಕರಿಸುತ್ತಿದೆ, ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಪ್ರಂiÀiತ್ನ ಹಾಗೂ ಈ ವಾರ್ಡ್‍ನಲ್ಲಿ ಇರುವ ಬಡ ಕುಟುಂಬ, ಪ್ರತಿಭವಂತ ವಿದ್ಯಾರ್ಥಿಗಳಿಗೆ ಸೇವೆ ಮಾಡಲು ನಿರಾತಂಕ ಸ್ವಯಂ ಸೇವಾ ಸಂಸ್ಧೆ ಎಂದಿಗೂ ಮುಂದು ಇರುತ್ತದೆ ಎಂದರು, ಕಾರ್ಯಕ್ರಮದಲ್ಲಿ ಬೆಂಗಳೂರು ಪಶ್ಚಮಾ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ, ಕೆಪಿಸಿಸಿ ವಕ್ತಾರರು ಹಾಗೂ ಕಾಂಗ್ರೆಸ್ ಮುಖಂಡರಾದ ಕುಸುಮ ಹೆಚ್, ಮಾಜಿ ಪಾಲಿಕೆ ಸದಸ್ಯ ಮೋಹನ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಧಿತರಿದ್ದರು,

Trending

Exit mobile version