ಬಿಬಿಎಂಪಿ
ಕರ್ನಾಟಕ ಉತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ* ದ ಮಾರ್ಗದರ್ಶನದಲ್ಲಿ ದಿನಾಂಕ 4 ಹಾಗೂ 5 ನವೆಂಬರ್ ನಲ್ಲಿ ನಡೆದ ಕರ್ನಾಟಕ ಉತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.
*ಸುವರ್ಣ ಕರ್ನಾಟಕ ಸಂಭ್ರಮ* ನಿಮಿತ್ತ ನಡೆದ ಈ ಕಾರ್ಯಕ್ರಮದಲ್ಲಿ *ದೇಸಿ ಕ್ರೀಡೆಗಳ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆ* ನಡೆಸಲಾಯಿತು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ *ಸನ್ಮಾನ್ಯ ಎಮ್. ಕೃಷ್ಣಪ್ಪರವರು, ಶಾಸಕರು- ಬೆಂಗಳೂರು ದಕ್ಷಿಣ ಹಾಗೂ ಶ್ರೀ ಹನುಮಂತಯ್ಯ, ನಿಕಟ ಪೂರ್ವ ಬಿ ಬಿ ಎಂ ಪಿ ಸದಸ್ಯರು* ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ *ಡಾ. ಸಂತೋಷ್ ಹಾನಗಲ್,* ಕಾರ್ಯದರ್ಶಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರ, *ಶ್ರೀ ಬಿ ಶಿವಪ್ರಕಾಶ್* ಇಸ್ರೋ ವಿಜ್ಞಾನಿಗಳು, *ಡಾ. ಸಿ ಎ ಕಿಶೋರ್* ಸಂಸ್ಥಾಪಕ ಅಧ್ಯಕ್ಷರು ಸ್ವಸ್ತ ಸಮೃದ್ಧ ಭಾರತ ಮುಂತಾದ ಗಣ್ಯಮಾನ್ಯರು ಸಮೂಹ ಗಾಯನ, ಸಮೂಹ ನೃತ್ಯ ಅಲ್ಲದೆ ವಿಶೇಷ ವೇಶಭೂಷಣಗಳ ಪ್ರದರ್ಶನ ಮಾಡಿದ ಎಲ್ಲರಿಗೂ ಗೌರವವನ್ನು ಸೂಚಿಸಿದರು.
*ಸ್ವಸ್ಥ ಸಮೃದ್ಧ ಭಾರತ* ತಂಡದೊಂದಿಗೆ *ಪ್ರಣವ್ ಫೌಂಡೇಶನ್, ಜಯನಗರ ಹೌಸಿಂಗ್ ಆಪರೇಟಿವ್ ಸೊಸೈಟಿ, ಆದ್ಯತೆ ಫೌಂಡೇಶನ್ ಹಾಗೂ ಆಹ್ವಾಹನ್ ಫೌಂಡೇಶನ್* ಮುಂತಾದ ಸಂಘಟನೆಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
*ಕರ್ನಾಟಕ ಉತ್ಸವ* ದಲ್ಲಿ ಭಾಗವಹಿಸಿ ಎಲ್ಲರನ್ನು ಹುರಿದುಂಬಿಸಿದ ಪ್ರತಿಯೊಬ್ಬ ಕನ್ನಡಿಗರಿಗೂ ಹೃತ್ಪೂರ್ವಕ ಪ್ರಣಾಮಗಳು.