ರಾಜ್ಯ
ನಳಿನ್ ಕುಮಾರ್ ಕಟೀಲ್ :ಮಂಗಳೂರು – ಮಡಗಾಂ ವಂದೇ ಭಾರತ್ ರೈಲು ಓಡಾಟಕ್ಕೆ ಸರ್ವಸನ್ನದ್ಧ.
ಮಂಗಳೂರು – ಮಡ್ಗಾಂ ವಂದೇ ಭಾರತ್ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು, ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಇನ್ನು ಮಂಗಳೂರು – ಬೆಂಗಳೂರು ವಂದೇ ಭಾರತ್ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿಯೇ ಅದು ಕೂಡ ಈಡೇರಲಿದೆ. ಈ ಸಿಹಿಸುದ್ದಿಗಾಗಿ ಜಿಲ್ಲೆಯ ನಾಗರಿಕರ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.ಈ ಹಿಂದೆ ಕೇರಳದಲ್ಲಿ ಸಂಚರಿಸುವ ವಂದೇ ಭಾರತ್ ರೈಲನ್ನು ಮಂಗಳೂರಿನವರೆಗೆ ಸಂಚಾರ ನಡೆಸುವ ಚಿಂತನೆ ಮಾಡಲಾಗಿತ್ತು. ಇದರ ಜೊತೆಗೆ ಮಂಗಳೂರು-ಎರ್ನಾಕುಲಂ ಹಾಗೂ ಮಂಗಳೂರು-ಮಡಗಾಂ ನಡುವೆ ಸಂಚರಿಸಲು ಪ್ರಸ್ತಾವನೆ ಕೂಡ ಇತ್ತು. ಇದೀಗ ನಳಿನ್ ಕುಮಾರ್ ಕುಮಾರ್ ಕಟೀಲ್ ಅವರು ಮಾಡಿದ ಟ್ವೀಟ್, ಸಧ್ಯ ಕರ್ನಾಟಕದವರಿಗೆ ಸಂತಸವನ್ನುಂಟು ಮಾಡಿದೆ.ಇನ್ನು ರಾಜ್ಯದಲ್ಲಿ 2022ರಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಮೊದಲ ವಂದೇ ಭಾರತ್ ರೈಲು ಸಂಚಾರ ಶುವಾಗಿತ್ತು. ಇದಾದ ಬಳಿಕ ಅಂದರೆ, 2023 ರಲ್ಲಿ ಬೆಂಗಳೂರು-ಧಾರವಾಡ- ಹುಬ್ಬಳ್ಳಿ ಹಾಗೂ ಯಶವಂತಪುರ-ಕಾಚಿಗುಡ ನಡುವೇ ರೈಲು ಸಂಚರಿಸಿದವು. ಈ ಮೂಲಕ ಕರ್ನಾಟಕದಲ್ಲಿ ಮೂರು ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಇದೀಗ ಮಂಗಳೂರು – ಮಡ್ಗಾಂ ಶುರುವಾದರೆ ನಾಲ್ಕನೇಯದ್ದಾಗಲಿದೆ.