ದೇಶ
ಜನ್ಮದಿನಕ್ಕೆ ಉಡುಗೊರೆ ಬೇಡ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಜನ್ಮದಿನದ ಪ್ರಯುಕ್ತ ನನಗಾಗಿ ಹಾಳಾಗುವ ವಸ್ತುಗಳಿಗೆ ಹಣ ಖರ್ಚು ಮಾಡಬೇಡಿ ಬದಲಾಗಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿ ಎಂದು ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ,
ಈಗಾಗಲೇ ಸಾಕಷ್ಟು ಮಂದಿ ಜನ್ಮದಿನದೆಂದು ನನ್ನ ಲಭ್ಯತೆಯನ್ನು ವಿಚಾರಿಸಲು ದೂರವಾಣಿ ಮೂಲಕ ವಿಚಾರಿಸುತ್ತಿದ್ದಾರೆ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಕೃತಜ್ಞತೆಗಳು ಅದರೆ ಹುಟ್ಟುಹಬ್ಬವನ್ನು ದೊಡ್ಡದಾಗಿ ಸಂಭ್ರವಿಸುವ ಇಚ್ಛೆ ನನಗಿಲ್ಲ ಎಂದು ತಿಳಿಸಿದ್ದಾರೆ,
ಗುರುವಾರ ಬೆಳೆಗ್ಗೆ 10ರಿಂದ ಮಧ್ಯಾಹ್ನ 3.30 ರವರೆಗೆ ನಾನು ಕಚೇರಿಯಲ್ಲಿ ಇರುತ್ತೇನೆ, ಎಲ್ಲರನ್ನು ನೋಡಲು ಉತ್ಸುಕನಾಗಿದ್ದೇನೆ ಅದರೆ ಹಾಳಾಗುವ ವಸ್ತುಗಳಿಗೆ ಹಣ ಖರ್ಚು ಮಾಡುವ ಬದಲು ನಮೋ ವಿದ್ಯಾ ನಿಧಿಗೆ ದೇಣಿಗೆ ನೀಡಿ, ಈ ಮೂಲಕ ನಾವು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಅವರ ಶುಲ್ಕದ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು, ಇದಕ್ಕೆ ಅವಕಾಶ ನೀಡುತ್ತಿರುವ ನಮೋ ವಿದ್ಯಾ ನಿಧಿಗೆ ಧನ್ಯವಾದಗಳು ಎಲ್ಲರೂ ಹುಟ್ಟುಹಬ್ಬಗಳಿಗೆ ಅನಾವಶ್ಯಕ ಉಡುಗೊರೆಗಳನ್ನು ಕೊಡುವ ಬದಲಿಗೆ ಈ ನಿಧಿಗೆ ಕೊಡುಗೆ ನೀಡಲು ನಾನು ವಿನಂತಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.