ರಾಜ್ಯ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಮೂಲಕ ಎಂಟ್ರಿ-ಎಕ್ಸಿಟ್‌ ಬಂದ್‌ ಮಾಡಲು ಮುಂದಾದ NHAI

ಬೆಂಗಳೂರು-ಮೈಸೂರು ಹೆದ್ದಾರಿ

ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಸರ್ವಿಸ್ ರಸ್ತೆ ಮೂಲಕ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದ್ದ ಆಗಮನ ಮತ್ತು ಪ್ರವೇಶ ಮಾರ್ಗಗಳು ಬಂದ್‌ ಆಗಿವೆ.ಬೆಂಗಳೂರು-ಮೈಸೂರು ಹೆದ್ದಾರಿ ಆದಾಗಿನಿಂದ ವಾಹನ ಸವಾರರು ಟೋಲ್‌ ಸಿಬ್ಬಂದಿಯ ನಡುವೆ ಒಂದಲ್ಲ ಒಂದು ಗಲಾಟೆಗಳು ನಡೆಯುತ್ತಲೇ ಇವೆ. ಹಾಗೆಯೇ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ ಈ ಹೆದ್ದಾರಿಯಿಂದ ಸರ್ವಿಸ್ ರಸ್ತೆ ಮೂಲಕ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಇರುವ ನಿರ್ಗಮನ ಮತ್ತು ಪ್ರವೇಶ ಮಾರ್ಗಗಳು ಬಂದ್‌ ಮಾಡಲು ಮುಂದಾಗಿದ್ದು, ಈ ನಿರ್ಧಾರದ ವಿರುದ್ಧ ಸಾರ್ವಜನಿಕರು ಕೆಂಡಕಾರುತ್ತಿದ್ದಾರೆ.ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರು ಸೇರಿದಂತೆ ಇತರ ವಾಹನಗಳ ಪ್ರಯಾಣಿಕರು ಟೋಲ್‌ ವಂಚಿಸಿ ಹೋಗುತ್ತಾರೆ ಎನ್ನುವ ಕಾರಣದುಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಇರುವ ನಿರ್ಗಮನ ಮತ್ತು ಪ್ರವೇಶ ಮಾರ್ಗಗಳು ಬಂದ್‌ ಮಾಡಲು ಮುಂದಾಗಿದ್ದು, ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಮಂಡ್ಯದಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಹಾಗೂ ಹೆದ್ದಾರಿಯಿಂದ ಮಂಡ್ಯ ನಗರಕ್ಕೆ ಬರಲು ಅನುಕೂಲ ಆಗುವಂತೆ ಇಂಡುವಾಳು ಗ್ರಾಮದ ಬಳಿ ಆಗಮನ, ನಿರ್ಗಮನ ಮಾರ್ಗಗಳನ್ನು ನೀಡಲಾಗಿದೆ. ಇನ್ನು ಶ್ರೀರಂಗಪಟ್ಟಣ, ಮೈಸೂರಿಗೆ ಹೋಗುವವರು ಹೆದ್ದಾರಿ ಪ್ರವೇಶಿಸಿದರೆ ಗಣಂಗೂರು ಬಳಿಯಲ್ಲಿನ ಟೋಲ್‌ ಪ್ಲಾಜಾದಲ್ಲಿ ಟೋಲ್‌ ಶುಲ್ಕ ಪಾವತಿಸಬೇಕು. ಇಲ್ಲದಿದ್ದರೆ ಸರ್ವಿಸ್ ರಸ್ತೆಯನ್ನೇ ಬಳಸಬೇಕಿದೆ.ಇಲ್ಲಿವರೆಗೆ ಮಂಡ್ಯದಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿಇಂಡುವಾಳು, ಕಾಳೇನಹಳ್ಳಿ, ತೂಬಿನಕೆರೆ, ಗರುಡನ ಉಕ್ಕಡ ಬಳಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಆಗಮನ, ನಿರ್ಮನ ನೀಡಲಾಗಿದೆ. ಅಲ್ಲದೆ ಮೈಸೂರಿನಿಂದ ಮಂಡ್ಯಕ್ಕೆ ಬರುವ ಮಾರ್ಗದಲ್ಲಿ ನಾಗನಹಳ್ಳಿ ಗೇಟ್‌, ಗರುಡನ ಉಕ್ಕಡ, ಬ್ಯಾಡರಹಳ್ಳಿ ಗೇಟ್‌, ತೂಬಿನಕೆರೆ, ಕಾಳೇನಹಳ್ಳಿ, ಸುಂಡಹಳ್ಳಿ, ಇಂಡುವಾಳು ಬಳಿ ಈ ವ್ಯವಸ್ಥೆಯನ್ನು ಮಾಡಲಾಗಿತ್ತು.ಆದರೆ ಈಗ ಆಗಮನ ಮತ್ತು ನಿರ್ಗಮನ ಮಾರ್ಗಗಳನ್ನು ಬಂದ್‌ ಮಾಡಲಾಗಿದೆ. ಮಂಡ್ಯದಿಂದ ಶ್ರೀರಂಗಪಟ್ಟಣ, ಮೈಸೂರಿಗೆ ಕಾರು ಮತ್ತು ಇತರ ವಾಹನಗಳಲ್ಲಿ ಸಂಚಾರ ಮಾಡುವವರು ಟೋಲ್‌ ಪಾವತಿಸಿಯೇ ಹೆದ್ದಾರಿಯಲ್ಲಿ ಹೋಗುವಂತೆ ಮಾಡಿದ್ದಾರೆ. ಮಂಡ್ಯದಿಂದ ಮೈಸೂರಿಗೆ ಹೋಗುವವರು ಇಂಡುವಾಳು ಬಳಿ ಹೆದ್ದಾರಿ ಪ್ರವೇಶಿಸಿದರೆ ಟೋಲ್‌ ಪಾವತಿಸುವುದು ಅನಿವಾರ್ಯ ಆಗಿದೆ.ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ, ಹೆದ್ದಾರಿಗೆ ಕಲ್ಪಿಸಿದ ಆಗಮನ, ನಿರ್ಗಮನ ದ್ವಾರಗಳನ್ನು ಮುಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ಆಗಿದೆ. ತೂಬಿನಕೆರೆ, ಕಾಳೇನಹಳ್ಳಿ, ಇಂಡುವಾಳು ಸೇರಿದಂತೆ ಹಲವೆಡೆ ಚರಂಡಿ ಕಾಮಗಾರಿಗಳು ಪೂರ್ಣವಾಗಿಲ್ಲ. ಶ್ರೀರಂಗಪಟ್ಟಣದ ಬೈಪಾಸ್‌ ರಸ್ತೆಯಲ್ಲೂ ಚರಂಡಿ ಕಾಮಗಾರಿಗಳು ಅವೈಜ್ಞಾನಿಕ ಆಗಿವೆ. ಸರ್ವೀಸ್‌ ರಸ್ತೆಯಲ್ಲಿ ಪ್ರತಿ ಗ್ರಾಮಗಳ ಬಳಿಯೂ ಅಂಡರ್‌ಪಾಸ್‌ ಸಮೀಪದಲ್ಲಿಅವೈಜ್ಞಾನಿಕವಾಗಿ ಎತ್ತರವಾದ ಹಂಫ್ಸ್‌ಗಳನ್ನು ಹಾಕಲಾಗಿದೆ. ಇವು ಅಪಘಾತಕ್ಕೆ ಕಾರಣವಾಗಿತ್ತು. ಆದರೂ ಆಗಮನ, ನಿರ್ಗಮನ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಸ್ಥಳಗಳಲ್ಲಿ ಹೆದ್ದಾರಿಯಲ್ಲೇ ಸಂಚರಿಸಲು ಅನುಕೂಲ ಆಗುವಂತೆ ಎಂಟ್ರಿ, ಎಕ್ಸಿಟ್‌ ಕೊಡಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಟೋಲ್‌ ತಪ್ಪಿಸಿಕೊಳ್ಳುವ ಅಲೋಚನೆಯಿಂದ ಏಕಮುಖ ಸಂಚಾರ ಮಾರ್ಗದಲ್ಲಿ ವಾಹನಗಳು ಸಾಗುವುದು ಅತ್ಯಂತ ಅಪಾಯಕಾರಿಯಾಗಿದೆ.

Trending

Exit mobile version