ರಾಜಕೀಯ
ರಾಜ್ಯ ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತ ಆಗೋದನ್ನು ನಾವು ಒಪ್ಪಲ್ಲ ಯತ್ನಾಳ್

ಬೆಂಗಳೂರು: ರಾಜ್ಯ ಬಿಜೆಪಿ ಕುಟುಂಬಕ್ಕೆ ಸೀಮಿತ ಆಗಬಾರದು ಇದನ್ನು ನಾವು ಒಪ್ಪುವುದಿಲ್ಲ ಎಂದು ಫೈರ್ಬ್ರಾಂಡ್ ಮಾಜಿ ಸಚಿವ ಬಿಜೆಪಿ ಪ್ರತಿಪಕ್ಷ ನಾಯಕ ಸ್ಧಾನದ ಆಕಾಂಕ್ಷಿ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ, ಕೇಂದ್ರದಿಂದ ಬಿಜೆಪಿ ವೀಕ್ಷಕರಾಗಿ ಆಗಮಿಸಿದ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಹಾಗೂ ದುಷ್ಯಂತ್ ಕುಮಾರ್ ಗೌತಮ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನು ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ, ನಾನು ಇವರ ರೀತಿ ಕಳಮಟ್ಟಕ್ಕೆ ಇಳಿಯಲ್ಲ, ಅಧ್ಯಕ್ಷ ಬೇಕು, ವಿಪಕ್ಷ ನಾಯಕ ಸ್ಧಾನ ಬೇಕು ಅಂತ ಕೇಳಿಲ್ಲ, ರಾಜ್ಯದ ಅಡ್ಜೆಸ್ಟ್ಮೆಂಟ್ ಬಗ್ಗೆ ಹೇಳಿದ್ದೇನೆ ಎಂದು ತಿಳಿಸಿದರು,
ಪ್ರತಿಪಕ್ಷದ ನಾಯಕತ್ವ ಸ್ಧಾನವನ್ನು ಉತ್ತರ ಕರ್ನಾಟಕದವರಿಗೆ ಕೊಡಬೇಕು, ಉತ್ತರ ಕರ್ನಾಟಕಕ್ಕೆ ಅದ್ಯತೆ ಕೊಡಬೇಕು, ಈ ಜನರು ಊಟ ಹಾಕಿದ್ದಾರೆ, ಉತ್ತರ ಕರ್ನಾಟಕದ ಮಂದಿಗೆ ಕೊಡದೇ ಹೋದರೆ ಜನರೇ ತೀರ್ಮಾನ ಮಾಡುತ್ತಾರೆ ಎಂದರು,