ಬೆಂಗಳೂರು

ವಿದ್ಯಾರ್ಥಿಗಳು ಕ್ರೀಡೆಯ ಮಹತ್ವವನ್ನು ತಿಳಿಯಬೇಕು ಶ್ರೀಮತಿ ಇಂದಿರಾ ಗೋಪಾಲಕೃಷ್ಣ

ವಿದ್ಯಾರ್ಥಿಗಳು ಕ್ರೀಡೆಯ ಮಹತ್ವವನ್ನು ತಿಳಿಯಬೇಕು ಶ್ರೀಮತಿ ಇಂದಿರಾ ಗೋಪಾಲಕೃಷ್ಣ

ಬೆಂಗಳೂರು: ವಿದ್ಯಾರ್ಥಿಗಳು ಕ್ರೀಡೆಯಿಂದ ಸ್ಪೂರ್ತಿಯನ್ನು ಪಡೆದು ಜೀವನದಲ್ಲೂ ಕೂಡ ಅದರ ಮಹತ್ವವನ್ನು ತಿಳಿಯಬೇಕು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಚೇರ್ಮನ್ ಶ್ರೀಮತಿ ಇಂದಿರಾ ಗೋಪಾಲಕೃಷ್ಣ ಹೇಳಿದರು. ಕುಂಬಳಗೂಡಿನಲ್ಲಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 2023-24ರ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ನಾವು ಕ್ರೀಡೆಯಿಂದ ಅನೇಕ ಜೀವನದ ಪಾಠವನ್ನು ಕಲಿಯುತ್ತೇವೆ. ಎಲ್ಲರೂ ಸೋಲು ಗೆಲುವುಗಳನ್ನು ಸಮಾನ ರೀತಿಯಲ್ಲಿ ಸ್ವೀಕರಿಸಬೇಕು. ಕ್ರೀಡೆ ಎಂಬುದು ಸಂಘಟಿತ ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡಬೇಕು, ಹೊಸ ಸಂಶೋಧನೆಗಳ ಕಡೆ ಅವರ ದೃಷ್ಟಿ ಹರಿಸಿ,ದೇಶಕ್ಕೆ ಗೌರವ ತರಬೇಕು. ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ನೀಡಬೇಕು.

ಕ್ರೀಡೆಯು ನಮ್ಮನ್ನು ಆರೋಗ್ಯಕರ ಶ್ರೀಮಂತ ಮತ್ತು ಕ್ರಿಯಾಶೀಲರನ್ನಾಗಿಸುತ್ತದೆ, ಆರೋಗ್ಯಕರ ದೇಹವನ್ನು ಹೊಂದಿದಾಗ ಮಾತ್ರ ನಾವು ಆರೋಗ್ಯಕರ ಮನಸ್ಸನ್ನು ಹೊಂದಲು ಸಾಧ್ಯ. ಆರೋಗ್ಯಕರ ದೇಹ ಮತ್ತು ಶಾಂತಿಯುತ ಮನಸ್ಸು ನಮ್ಮಲ್ಲಿದ್ದರೆ, ನಾವು ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ವೇಣು ಎ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Trending

Exit mobile version