Connect with us

ದೇಶ

ಬೆಂಗಳೂರಿನಿಂದ ಜಯಯಲಿತಾ ಚಿನ್ನಾಭರಣ ಕೊಂಡೊಯ್ಯಲು ತಮಿಳುನಾಡಿನಿಂದ ಬರಲಿದೆ 6 ಟ್ರಕ್ಕು!

ಬೆಂಗಳೂರಿನಿಂದ ಜಯಯಲಿತಾ ಚಿನ್ನಾಭರಣ ಕೊಂಡೊಯ್ಯಲು ತಮಿಳುನಾಡಿನಿಂದ ಬರಲಿದೆ 6 ಟ್ರಕ್ಕು!

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ನ್ಯಾಯಾಲಯದಿಂದ ವಿಚಾರಣೆಗೀಡಾಗಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿನ್ನಾಭರಣಗಳು ಹಾಗೂ ಬೆಲೆಬಾಳುವ ಸೊತ್ತುಗಳನ್ನು ಮರಳಿ ತಮಿಳುನಾಡಿಗೆ ಕೊಂಡೊಯ್ಯಲು 6 ಟ್ರಕ್ಕುಗಳು ಬರಲಿವೆ!
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ತಮಿಳುನಾಡು ರ‍್ಕಾರಕ್ಕೆ ಹಿಂದಿರುಗಿಸಲು ರ‍್ನಾಟಕ ಹೈಕರ‍್ಟ್ ದಿನಾಂಕ ನಿಗದಿ ಮಾಡಿದೆ. ಆ ದಿನ ಸ್ವತಃ ಬಂದು ಜಯಲಲಿತಾ ಚಿನ್ನಾಭರಣ ಇತ್ಯಾದಿ ಮರಳಿ ಪಡೆಯಲು ತಮಿಳುನಾಡು ಗೃಹ ಕರ‍್ಯರ‍್ಶಿಗೆ ಆದೇಶಿಸಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಭರಣಗಳಿ ಸದ್ಯ ರ‍್ನಾಟಕ ರ‍್ಕಾರದ ವಶದಲ್ಲಿದ್ದು, ಅವುಗಳನ್ನು ಹಿಂಪಡೆಯುವಂತೆ ತಮಿಳುನಾಡು ರ‍್ಕಾರಕ್ಕೆ ನರ‍್ದೇಶನ ನೀಡಲಾಗಿದೆ. ಮರ‍್ಚ್ 6 ಮತ್ತು 7ರಂದು ಖುದ್ದು ಹಾಜರಾಗಿ ಸ್ವೀಕರಿಸುವಂತೆ ತಮಿಳುನಾಡು ರಾಜ್ಯ ಗೃಹ ಕರ‍್ಯರ‍್ಶಿಗೆ ಸೂಚನೆ ನೀಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗೆ ತಗಲಿದ ವೆಚ್ಚಕ್ಕಾಗಿ ತಮಿಳುನಾಡು ರ‍್ಕಾರ ರ‍್ನಾಟಕಕ್ಕೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಕೂಡ ಕರ‍್ಟ್ ಆದೇಶಿಸಿದೆ.
1996ರಲ್ಲಿ ಜಯಲಲಿತಾ ಆದಾಯ ಮೀರಿ ಆಸ್ತಿ ಸೇರಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಇಲಾಖೆ ಪ್ರಕರಣ ದಾಖಲಿಸಿತ್ತು. ಜಯಲಲಿತಾ ಅವರ ಬೋಯಸ್ ಗರ‍್ಡನ್ ನಿವಾಸದ ಮೇಲೆ ನಡೆದ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ವಜ್ರಾಭರಣಗಳು, ಬೆಳ್ಳಿ ವಸ್ತುಗಳು, ಕೈಗಡಿಯಾರಗಳು, ಪಾದರಕ್ಷೆ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಯಲಲಿತಾ ಅವರ ಆಸ್ತಿ ಪ್ರ ಕರಣ ಬೆಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿದ್ದುದರಿಂದ ವಶಪಡಿಸಿಕೊಂಡ ಚಿನ್ನಾಭರಣ ಸೇರಿದಂತೆ ಎಲ್ಲ ವಸ್ತುಗಳನ್ನು ಇಲ್ಲಿನ ಖಜಾನೆಯಲ್ಲಿ ಇಡಲಾಗಿತ್ತು.
2016ರಲ್ಲಿ ಅನಾರೋಗ್ಯದಿಂದ ಜಯಲಲಿತಾ ನಿಧನರಾಗಿದ್ದರು. ಅಕ್ರಮ ಆಸ್ತಿ ಸಂಗ್ರಹ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ತಪ್ಪಿತಸ್ಥರೆಂದು ಸುಪ್ರೀಂ ಕರ‍್ಟ್ ತರ‍್ಪು ನೀಡಿತು ಮತ್ತು ಕೆಳ ನ್ಯಾಯಾಲಯದ ತರ‍್ಪನ್ನು ಎತ್ತಿ ಹಿಡಿಯಿತು. ಇದಾದ ಬಳಿಕ ಶಶಿಕಲಾ ಸೇರಿದಂತೆ ಮೂವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು.
ಈ ನಡುವೆ ಸಾಮಾಜಿಕ ಕರ‍್ಯರ‍್ತ ನರಸಿಂಹಮರ‍್ತಿ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಜಯಲಲಿತಾ ಅವರ ವಸ್ತುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು
ಕಲ್ಯಾಣ ಯೋಜನೆಗಳಿಗೆ ಬಳಸಬೇಕು ಎಂದು ಆಗ್ರಹಿಸಿದರು. ಜಯಲಲಿತಾ ಅವರ ಸೊಸೆ ಜೆ.ದೀಪಾ ಅವರು, ರ‍್ಕಾರ ಜಪ್ತಿ ಮಾಡಿರುವ ಜಯಲಲಿತಾ ಅವರ ಆಸ್ತಿಗಳ ಮೇಲೆ ತನಗೆ ಹಕ್ಕಿದೆ ಮತ್ತು ಅವುಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ರ‍್ಜಿ ಸಲ್ಲಿಸಿದರು. ಅವರ ರ‍್ಜಿಯನ್ನು ವಜಾಗೊಳಿಸಲಾಗಿತ್ತು.
ಈ ಎಲ್ಲಾ ಆಭರಣಗಳು ಈಗ ರ‍್ನಾಟಕದ ಖಜಾನೆಯಲ್ಲಿವೆ. ಇತ್ತೀಚೆಗೆ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಜಯಲಲಿತಾ ಅವರಿಗೆ ಸೇರಿದ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣ ವಿಚಾರಣೆಗೆ ಬಂದಾಗ, ಆಭರಣಗಳನ್ನು ಹರಾಜು ಮಾಡುವ ಬದಲು ತಮಿಳುನಾಡು ರ‍್ಕಾರದ ಗೃಹ ಇಲಾಖೆಯ ಮೂಲಕ ತಮಿಳುನಾಡಿಗೆ ರ‍್ಗಾಯಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟು, ತಮಿಳುನಾಡು ರ‍್ಕಾರವು ಕರ‍್ಯರ‍್ಶಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಿ ಆಭರಣಗಳನ್ನು ಸಂಗ್ರಹಿಸಲು ಪೊಲೀಸರೊಂದಿಗೆ ಬರುವಂತೆ ಆದೇಶಿಸಿತು.
ಈ ಪ್ರಕರಣದಲ್ಲಿ ತಮಿಳುನಾಡು ಗೃಹ ಕರ‍್ಯರ‍್ಶಿ ಖುದ್ದು ಹಾಜರಾಗಿ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿನ್ನಾಭರಣವನ್ನು ಮರ‍್ಚ್ 6 ಮತ್ತು 7ರಂದು ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ. ಚಿನ್ನಾಭರಣ ಪಡೆಯುವ ದಿನದಂದು ಅಗತ್ಯ ಭದ್ರತಾ ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಬೆಂಗಳೂರಿನಿಂದ 6 ಟ್ರಕ್‌ಗಳಲ್ಲಿ ಜಯಲಲಿತಾ ಅವರಿಗೆ ಸೇರಿದ 28 ಕೆಜಿ ಚಿನ್ನ, ವಜ್ರಾಭರಣಗಳು, 800 ಕೆಜಿ ಬೆಳ್ಳಿ ಆಭರಣಗಳು, 11,344 ದುಬಾರಿ ರೇಷ್ಮೆ ಸೀರೆಗಳು ಮತ್ತು 740 ದುಬಾರಿ ಸ್ಯಾಂಡಲ್‌ಗಳನ್ನು ಕೊಂಡೊಯ್ದು ತಮಿಳುನಾಡಿಗೆ ತಲುಪಿಸಲಾಗುತ್ತದೆ.
ಇವುಗಳ ಮೌಲ್ಯ ಹಲವು ಕೋಟಿಗಳಾಗಿರಬಹುದು ಎಂದು ಹೇಳಲಾಗಿದೆ. ಅವುಗಳನ್ನು ತಮಿಳುನಾಡು ರ‍್ಕಾರದ ಖಜಾನೆಯಲ್ಲಿ ಇರಿಸಲಾಗುವುದು ಎಂದು ತಿಳಿದುಬಂದಿದೆ.

ದೇಶ

ಶಾಂಘೈನಲ್ಲಿ ದೈತ್ಯ ಸಿಂಕ್‌ಹೋಲ್: ರಸ್ತೆ ಕುಸಿದು ವಾಹನಗಳು ಒಳಗೆ, ಭಯಾನಕ ವಿಡಿಯೋ ವೈರಲ್

ಶಾಂಘೈ, ಫೆಬ್ರವರಿ 13: ಚೀನಾದ **Shanghai**ನಲ್ಲಿ ರಸ್ತೆಯ ಒಂದು ಭಾಗ ಹಠಾತ್ತನೆ ಕುಸಿದು ದೈತ್ಯ ಸಿಂಕ್‌ಹೋಲ್ ಉಂಟಾದ ಘಟನೆ ಬೆಚ್ಚಿಬೀಳಿಸುವಂತಾಗಿದೆ. ವಾಹನಗಳು ಹಾಗೂ ಹತ್ತಿರದ ಕಟ್ಟಡಗಳ ಭಾಗ ಸಿಂಕ್‌ಹೋಲ್‌ನಲ್ಲಿ ಒಳಗಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುರುವಾರ ಹತ್ತಿರದ ಮೆಟ್ರೋ ನಿರ್ಮಾಣ ಕಾಮಗಾರಿಯ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಗಾಯ ಅಥವಾ ಸಾವುನೋವು ವರದಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.


ಮಿನ್ಹಾಂಗ್ ಜಿಲ್ಲೆಯಲ್ಲಿ ಹಿಂದೆಯೂ ಘಟನೆ

ಇದಕ್ಕೂ ಮುನ್ನ 2024ರ ಜನವರಿಯಲ್ಲಿ **Minhang District**ನಲ್ಲಿ ಒಳಚರಂಡಿ ಪೈಪ್ ವೈಫಲ್ಯದಿಂದಾಗಿ ರಸ್ತೆ ಕುಸಿದಿತ್ತು. ಅಲ್ಲದೇ 2023ರ ಆಗಸ್ಟ್‌ನಲ್ಲಿ ನಗರದ ಮತ್ತೊಂದು ಭಾಗದಲ್ಲಿ ಸುಮಾರು 10 ಚದರ ಮೀಟರ್ ವ್ಯಾಪ್ತಿಯ ಸಿಂಕ್‌ಹೋಲ್ ಕಾಣಿಸಿಕೊಂಡಿತ್ತು.

ನಿರಂತರ ನಗರಾಭಿವೃದ್ಧಿ ಕಾಮಗಾರಿಗಳು ಮತ್ತು ಭೂಗರ್ಭದ ಮೂಲಸೌಕರ್ಯ ವೈಫಲ್ಯಗಳೇ ಇಂತಹ ಘಟನೆಗಳಿಗೆ ಕಾರಣವಾಗಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

Continue Reading

ದೇಶ

GOOD NEWS : CM ಸಿದ್ದರಾಮಯ್ಯ ಸರ್ಕಾರದ ಐತಿಹಾಸಿಕ ಆರೋಗ್ಯ ತೀರ್ಮಾನ

ಬೆಂಗಳೂರು: ರಾಜಧಾನಿಯ ಜನರಿಗೆ ಗುಣಮಟ್ಟದ ಮತ್ತು ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ Siddaramaiah ನೇತೃತ್ವದ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನಗರದ ನಾಲ್ಕು ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಸರ್ಕಾರಿ ದರದಲ್ಲೇ ಚಿಕಿತ್ಸೆ ನೀಡುವ ಪ್ರಾಯೋಗಿಕ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಯೋಜನೆಯ ಹಿನ್ನೆಲೆ

ಪ್ರಸ್ತುತ ಬೆಂಗಳೂರಿನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕಿದ್ವಾಯಿ ಹಾಗೂ ಹೃದ್ರೋಗ ಚಿಕಿತ್ಸೆಗೆ ಜಯದೇವ ಆಸ್ಪತ್ರೆಗಳ ಮೇಲೆ ಅಪಾರ ರೋಗಿಗಳ ಒತ್ತಡವಿದೆ. Greater Bengaluru Authority (GBA) ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆಗಳ ಹಾಸಿಗೆಗಳ ಕೊರತೆ ಗಂಭೀರವಾಗಿದೆ ಎಂದು ತಜ್ಞರ ಸಮಿತಿ ವರದಿ ಮಾಡಿತ್ತು. ಈ ಒತ್ತಡ ಕಡಿಮೆ ಮಾಡುವ ಜೊತೆಗೆ ಖಾಸಗಿ ಆಸ್ಪತ್ರೆಗಳ ಅತ್ಯಾಧುನಿಕ ಮೂಲಸೌಕರ್ಯವನ್ನು ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡಲು ಈ ಯೋಜನೆ ರೂಪಿಸಲಾಗಿದೆ.

ಆಯ್ದ 4 ಪ್ರತಿಷ್ಠಿತ ಆಸ್ಪತ್ರೆಗಳು

ಈ ಯೋಜನೆಯಡಿ ಕೆಳಗಿನ ಆಸ್ಪತ್ರೆಗಳಲ್ಲಿ ರೋಗಿಗಳು ಸರ್ಕಾರಿ ದರದಲ್ಲಿ ಚಿಕಿತ್ಸೆ ಪಡೆಯಬಹುದು:

  1. St. John’s Medical College
  2. M.S. Ramaiah Medical College
  3. Kempegowda Institute of Medical Sciences (KIMS)
  4. Dr. Ambedkar Medical College Hospital

ರೆಫೆರಲ್ ವಿನಾಯಿತಿ

ಇದೀಗ Ayushman Bharat–Arogya Karnataka (AB-ArK) ಯೋಜನೆಯಡಿ 2ಎ ಚಿಕಿತ್ಸಾ ವಿಧಾನಗಳು ಹಾಗೂ ಇತರ ಚಿಕಿತ್ಸೆಗಳಿಗೆ ರೆಫೆರಲ್ ವಿನಾಯಿತಿ ನೀಡಲಾಗಿದೆ. ಇದರ ফলে ಸರ್ಕಾರಿ ಆಸ್ಪತ್ರೆಯ ಶಿಫಾರಸು ಇಲ್ಲದೇ ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ದರದಲ್ಲಿ ಚಿಕಿತ್ಸೆ ಪಡೆಯಬಹುದು.

ಒಂದು ವರ್ಷದ ಪ್ರಾಯೋಗಿಕ ಅವಧಿ

ಯೋಜನೆಯನ್ನು ಮೊದಲ ಹಂತದಲ್ಲಿ ಒಂದು ವರ್ಷ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ. ಇದು ಬಡ ಮತ್ತು ಮಧ್ಯಮ ವರ್ಗದವರಿಗೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗೆ ಮಹತ್ವದ ವರದಾನವಾಗಿದ್ದು, ಸರ್ಕಾರಿ ಆಸ್ಪತ್ರೆಗಳ ಮೇಲಿನ ಭಾರವನ್ನು ಕಡಿಮೆ ಮಾಡಲಿದೆ.

Continue Reading

ಕ್ರೀಡೆ

T20 WORLD CUP : ಪಾಕ್ ಪಂದ್ಯಕ್ಕೂ ಅಭಿಷೇಕ್ ಶರ್ಮಾ ಅನುಮಾನ: ನಾಯಕ ಸೂರ್ಯಕುಮಾರ್ ಸ್ಪಷ್ಟನೆ

ನವದೆಹಲಿ, ಫೆ.13: ಹೊಟ್ಟೆನೋವಿನಿಂದ ಚೇತರಿಸಿಕೊಳ್ಳುತ್ತಿರುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಗುರುವಾರ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡಲಿಲ್ಲ. ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಮಹತ್ವದ ಪಂದ್ಯಕ್ಕೂ ಅವರ ಲಭ್ಯತೆ ಅನುಮಾನಾಸ್ಪದವಾಗಿದೆ ಎಂದು ನಾಯಕ Suryakumar Yadav ತಿಳಿಸಿದ್ದಾರೆ.

ಅಭಿಷೇಕ್‌ ಸೋಮವಾರ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರ ತಂಡಕ್ಕೆ ಮರಳಿದರೂ ತರಬೇತಿಯಲ್ಲಿ ಭಾಗವಹಿಸಲಿಲ್ಲ. ಈ ಬಗ್ಗೆ Board of Control for Cricket in India (BCCI) ಪ್ರಕಟಣೆಯಲ್ಲಿ, “ಅಭಿಷೇಕ್ ಇನ್ನೂ ಚೇತರಿಕೆ ಹಂತದಲ್ಲಿದ್ದಾರೆ. ವೈದ್ಯಕೀಯ ತಂಡ ನಿಗಾ ವಹಿಸಿದೆ” ಎಂದು ತಿಳಿಸಿತ್ತು.

ಟಾಸ್ ವೇಳೆ ಮಾತನಾಡಿದ ಸೂರ್ಯಕುಮಾರ್, “ಅಭಿಷೇಕ್ ಒಂದು ಅಥವಾ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯಬಹುದು. ಸಂಪೂರ್ಣ ಫಿಟ್ ಆಗಿಲ್ಲ” ಎಂದರು. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಅವರು ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. 24 ವರ್ಷದ ಅಭಿಷೇಕ್ ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳಲ್ಲಿ 189 ಸ್ಟ್ರೈಕ್ ರೇಟ್‌ನಲ್ಲಿ 110 ರನ್ ಗಳಿಸಿದ್ದಾರೆ.


🇮🇳 ಭಾರತಕ್ಕೆ ಭರ್ಜರಿ ಜಯ

ಗುರುವಾರ ನಡೆದ ಪಂದ್ಯದಲ್ಲಿ ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 209 ರನ್ ಪೇರಿಸಿತು. ಕಠಿಣ ಗುರಿ ಬೆನ್ನಟ್ಟಿದ ನಮೀಬಿಯಾ 18.2 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು.

ಆರಂಭಿಕ ಆಟಗಾರ Ishan Kishan ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ Hardik Pandya 52 ರನ್ ಗಳಿಸಿ ತಂಡದ ಮೊತ್ತವನ್ನು 200 ದಾಟಿಸಿದರು. ಬೌಲಿಂಗ್‌ನಲ್ಲಿ Varun Chakravarthy 3 ವಿಕೆಟ್ ಪಡೆದರೆ, Axar Patel ಮತ್ತು ಹಾರ್ದಿಕ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು

Continue Reading

Trending