ರಾಜಕೀಯ
ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾದಲ್ಲೇ ಅವರ ಪುತ್ರ ಯತೀಂದ್ರಗೆ ಗ್ರಾಮಸ್ಥರ ಘೇರಾವ್; ಇಲ್ಲಿದೆ ಸಚಿತ್ರ ವರದಿ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪುತ್ರ ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯಗೆ ವರುಣಾ ಕ್ಷೇತ್ರದಲ್ಲಿನ ಗ್ರಾಮಸ್ಧರು ಗ್ರಾಮದ ಒಳಗೆ ಪ್ರವೇಶಿಸದಂತೆ ಘೇರಾವ್ ಹಾಕಿದ ಘಟನೆ ನಡೆದಿದೆ,
ವರುಣಾ ಕ್ಷೇತ್ರದ ಮುದ್ದುಬೀರನಹುಂಡಿ ಗ್ರಾಮದ ಕುಂದು ಕೊರತೆ ಆಲಿಸಲು ತೆರಳಿದ್ದ ವೇಳೆ ಗ್ರಾಮಸ್ಧರು ಘೇರಾವ್ ಹಾಕಿ ಇಲ್ಲಿಂದ ಹೋಗಿ ಎಂದು ಎಳೆದಾಡಿದಾಡಿದ್ದಾರೆ, ಜನರನ್ನು ಸಮಾಧಾನಮಾಡಲು ಸಾಧ್ಯವಾಗದೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಧಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು, ಅದರೆ ಪೊಲೀಸರ ಮಾತಿಗೂ ಬಗ್ಗದ ಗ್ರಾಮಸ್ಧರು ಗಲಾಟೆ ಮಾಡಿದ್ದಾರೆ, ಗ್ರಾಮದ ಅಭಿವೃದ್ಧಿ ವಿಚಾರಕ್ಕೆ ಗ್ರಾಮಸ್ಧರು ಗರಂ ಆಗಿದ್ದಾರೆ, ಇದೇ ವಿಚಾರಕ್ಕೆ ಯತೀಂದ್ರ ಸಿದ್ದರಾಮಯ್ಯ ಮತ್ತು ಗ್ರಾಮಸ್ಧರ ನಡುವೆ ಮಾತಿನ ಚಕಮಕಿ ನಡೆದಿದೆ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರಾಮಸ್ಧರ ಒತ್ತಾಯಿಸಿದ್ದಾರೆ, ಕೊನೆಗೆ ಯತೀಂದ್ರ ಸಿದ್ದರಾಮಯ್ಯ ಮಾತನಾಡದೆ ಅಲ್ಲಿಂದ ತೆರಳಿದ ಘಟನೆ ನಡೆದಿದೆ, ಮಹಿಳೆಯರು ಕೂಡ ಯತೀಂದ್ರ ವಿರುದ್ಧ ಸಿಟ್ಟು ಆಕ್ರೋಶ ಹೊರಹಾಕಿದ್ದಾರೆ, ಸ್ಧಳದಲ್ಲಿ ನೂಕಾಟ, ತಳ್ಳಾಟ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಯಿತು, ನಮಗೆ ಯಾವುದೇ ಗ್ಯಾರಂಟಿ ಯೋಜನೆಗಳು ಬೇಡ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಡಿ ಸಾಕು ಎಂದು ಡಾ.ಯತೀಂದ್ರ ಅವರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಷ್ಟಾದ ಬಳಿಕ ಡಾ.ಯತೀಂದ್ರ ಅಲ್ಲಿಂದ ಪೊಲೀಸ್ ರಕ್ಷಣೆಯಲ್ಲಿ ಅಲ್ಲಿಂದ ಹಿಂದಿರುಗಿದ್ದಾರೆ