ಚುನಾವಣೆ
ನಿಜವಾಗಲೂ ಆಪರೇಷನ್ ಆಗಿದೆ : ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ನಮ್ಮ ತಂದೆ ಕುಮಾರಸ್ವಾಮಿಯವರಿಗೆ ಹೃದಯ ಶಸ್ತç ಚಿಕಿತ್ಸೆ ಆಗಿರುವ ನಿಜ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ,
ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಕುಮಾರಸ್ವಾಮಿವರ ಚಿಕಿತ್ಸೆಯ ವಿಚಾರವನ್ನು ಟೀಕಿಸುತ್ತಾ ಚುನಾವಣೆ ಬಂದಾಗಲೆಲ್ಲಾ ಕುಮಾರಸ್ವಾಮಿ ಅವರಿಗೆ ಆಪರೇಷನ್ ಆಗುತ್ತೆ, ಚಿಕಿತ್ಸೆ ಆದ ಮೂರೇ ದಿನಕ್ಕೆ ಅವರು ಸಾಮಾನ್ಯರಂತೆ ಓಡಾಡಿಕೊಂಡು ಇರ್ತಾರೆ, ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿ ವ್ಯಂಗ್ಯವಾಡಿದ್ದರು,
ಈ ಕುರಿತು ಪ್ರತಿಕ್ರಿಯಿಸಿದ ನಿಖಿಲ್ ನಮ್ಮ ತಂದೆಯವರಿಗೆ ಇದು ಮೂರನೇ ಹೃದಯ ಶಸ್ತçಚಿಕಿತ್ಸೆ, ಇದನ್ನು ನಾವು ಸಾಬೀತು ಮಾಡುವ ಅಗತ್ಯವಿಲ್ಲ, ರಾಜಕಾರಣದಲ್ಲಿ ಹಗಲು ರಾತ್ರಿ ದುಡಿಯುತ್ತಾ ಕುಮಾರಸ್ವಾಮಿ ಅವರು ದೇಹ ದಂಡಿಸಿದ ಪರಿಣಾಮ ಅವರಿಗೆ ಈ ರೀತಿ ಚಿಕಿತ್ಸೆ ಅಗತ್ಯವಿತ್ತು, ಈ ವಿಚಾರವನ್ನು ರಮೇಶ್ ಬಂಡಿಸಿದ್ದೇಗೌಡರು ವ್ಯಂಗ್ಯ ಮಾಡಿರೋದು ದುರಂತದ ವಿಚಾರ, ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ನಿಖಿಲ್ ಕಿಡಿ ಕಾರಿದ್ರು,
ಇನ್ನೂ ಜನರ ಅನುಕಂಟ ಗಿಟ್ಟಿಸಲು ನಮ್ಮ ಕುಟುಂಬದವರಾರೂ ಮೊಸಳೆ ಕಣ್ಣೀರು ಹಾಕೋದಿಲ್ಲ, ಜನರ ಕಷ್ಟ ಕೇಳಿ ಕುಮಾರಸ್ವಾಮೀ ಕಣ್ಣೀರು ಹಾಕುತ್ತಾರೆ ಎಂದು ನಿಖಿಲ್ ಹೇಳಿದ್ದಾರೆ,