ಚುನಾವಣೆ

ಅವರ ಮಗ ಆಯ್ತು ಈಗ ಆಳಿಯ ಎಲ್ಲವನ್ನೂ ಎದುರಿಸುತ್ತೇವೆ ಎಂದ ಡಿ ಕೆ ಶಿ

ಬೆಂಗಳೂರು: ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ ಕೆ ಸುರೇಶ್ ವರ್ಸಸ್ ಡಾ ಮಂಜುನಾಥ್ ಫೈಟ್ ಜೋರಾಗಿರಲಿದೆ, ಬಿಜೆಪಿ ಜೆಡಿಎಸ್ ಮೈತ್ರಿ ಒಕ್ಕೂಟ ಕಾಂಗ್ರೆಸ್ ಮಣಿಸಲು ತಂತ್ರ ಹೆಣೆಯುತ್ತಿದೆ,
ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಈ ಬಾರಿ ನೂರಕ್ಕೆ ನೂರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಡಿ ಕೆ ಶಿವಕುಮಾರ್ ನಾವು ಎಲ್ಲವನ್ನೂ ಎದುರಿಸಲು ಸಿದ್ದವಾಗಿದ್ದೇವೆ, ಈ ಹಿಂದೆ ದೇವೇಗೌಡರನ್ನು ಎದುರಿಸಿದ್ದೇವೆ ನಂತರ ಅವರ ಮಹ ಆಯ್ತು ಆಮೇಲೆ ಅವರ ಸೊಸೆ ಆಯ್ತು, ಈಗ ಅವರ ಆಳಿಯ ಮಂಜುನಾಥ್ ನಮ್ಮ ಎದುರಾಳಿಯಾಗಿದ್ದಾರೆ,
ಕೊರೋನಾ ಸಂದರ್ಭದಲ್ಲಿ ಜೆಡಿಎಸ್ ನಾಯಕರೆಲ್ಲಾ ಎಲ್ಲಿ ಹೋಗಿದ್ರ, ಔಷಧಿ, ಅನ್ನಾಹಾರ ಕೊಟ್ಟಿದ್ದು ಡಿ ಕೆ ಸುರೇಶ್, ಆತ ಅಲ್ಲಿ ಹಣವನ್ನೂ ಹೊತ್ತಿದ್ದಾನೆ ಪಲ್ಲಕ್ಕಿಯನ್ನೂ ಹೊತ್ತಿದ್ದಾನೆ, ಜನ ಡಿ ಕೆ ಸುರೇಶ್ ಅವರನ್ನು ಕೈಬಿಡೋದಿಲ್ಲ ಎಂದು ಶಿವಕುಮಾರ್ ಹೇಳಿದರು,

Trending

Exit mobile version