ದೇಶ
ಸಂಬಳ ಕೊಡಿ ಎಂದು ಮುಷ್ಕರ ಹೊಡಿದ ಪೈಲೆಟ್ಗಳು ನೂರಾರು ವಿಮಾನ ಸಂಚಾರ ವ್ಯತ್ಯಯ

ಬೆಂಗಳೂರು: ವೇತನಕ್ಕಾಗಿ ಆಗ್ರಹಿಸಿ ವಿಮಾನ ಚಾಲಕರು ಮುಷ್ಕರ ಹೊಡಿರುವ ಪರಿಣಾ ವಿಸ್ತಾರ ಏರ್ಲೈನ್ಸ್ ಸಂಸ್ಧೆಯ ವಿಮಾನಗಳ ಸಂಚಾರ ಇಂದು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ, ಇದುವರೆಗೂ 50 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು 150 ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾಗಲಿದೆ, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ,
ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ವಿಸ್ತಾರ ಸಂಸ್ಧೆಯ ಉದ್ಯೋಗಿಗಳಿಗೆ ನ್ಯಾಯ ಕೊಡಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ, ಜೊತೆಗೆ ತಮ್ಮ ವೇತನ ಪರಿಷ್ಕರಣೆಯನ್ನೂ ಕೂಡಲೇ ಮಾಡಬೇಕು, ಏರ್ ಇಂಡಿಯಾ ಸಿಬ್ಬಂದಿಗಳಿಗೆ ಸರಿಸಮಾನ ವೇತನ ನೀಡಬೇಕೆಂಬುದು ಪ್ರತಿಭಟನಾ ನಿರತರ ಬೇಡಿಕೆಯಾಗಿದ,
ವಿಸ್ತಾರದ ಅಯೋಮಯದ ಸ್ಧಿತಿಯಿಂದಾಗಿ ಬೆಂಗಳೂರು, ದೆಹಲಿ,ಚನ್ನೆöÊ, ಮುಂಬೈ, ಕೊಲ್ಕತ್ತಾ ಇತೆರ ಪ್ರಮುಖ ನಗರಗಳಲ್ಲಿ ಬೇರೆ ವಿಮಾನಯಾನ ಸಂಸ್ಧೆಗಳ ಟಿಕೆಟ್ ಗಳಿಗೆ ತೀವ್ರ ಬೇಡಿಕೆ ಉಂಟಾಗಿದೆ, ಏಕಾಏಕಿ ವಿಮಾನವನ್ನು ರದ್ದುಪಡಿಸಿರುವುದು ಹಾಗೂ ಪರ್ಯಾಯ ವ್ಯವಸ್ಧೆ ಕೈಗೊಳ್ಳದಿರುವ ವಿಸ್ತಾರ ವಿಮಾನ ಯಾನ ಸಂಸ್ಧೆಯ ವಿರುದ್ಧ ಪ್ರಯಾಣಿಕರು ಕಿಡಿಕಾರಿದ್ದಾರೆ,