ಚುನಾವಣೆ
ಬಿಜೆಪಿ ಜೆಡಿಎಸ್ ಸಭೆ ಬಂಡಾಯ ಶಮನಕ್ಕೆ ಅಮಿತ್ ಶಾ ಶತಪ್ರಯತ್ನ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯ ರಾಜಕೀಯ ಚಟುವಟಿಕೆಗಳು ಭರದಿಂದ ಸಾಗಿವೆ, ಈ ಹಿನ್ನೆಲೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಬಿಜೆಪಿ ಚಾಣಕ್ಯ ಅಮಿತ್ ಶಾ ಬಿಜೆಪಿ ಮತ್ತು ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದರು,
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮಣಿಸಲು ಪಣ ತೊಟ್ಟಿರುವ ಬಿಜೆಪಿ, ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿದೆ, ಈ ಹಿನ್ನೆಲೆ ರಾಜ್ಯಕ್ಕೆ ಅಗಮಿಸಿರುವ ಸಚಿವ ಅಮಿತ್ ಶಾ ಬೆಂಗಳೂರಿನ ಹೋಟೆಲ್ ತಾಜ್ ವೆಸ್ಟೆಂಡ್ ಬಿಜೆಪಿ ಮತ್ತು ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದರು,
ಬಂಡಾಯ ಶಮನಕ್ಕೆ ಅಮಿತ್ ಶಾ ಮುಖದಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜ್ಯ ನಾಯಕರ ಜತೆ ಚುನಾವಣೆಯ ರಣತಂತ್ರ ಹಾಗೂ ಉಭಯ ಪಕ್ಷಗಳ ನಡುವಿನ ಹೊಂದಾಣೀಕೆಯನ್ನು ಸುಸೂತ್ರವಾಗಿ ಮುಂದುವರೆಸುವ ಕುರಿತು ಸಲಹೆ ಸೂಚನೆ ನೀಡಿದ್ದಾರೆ ಎಂದು ಮೂಲಗಳ ತಿಳಿಸಿವೆ.