ದೇಶ
ನಮಗೆ ಹಿಂದೂಗಳು ಓಟು ಬೇಡ ಮುಸ್ಲಿಮರ ಓಟು ಸಾಕು ಸಿಎಂ ಹೀಗೆ ಹೇಳಿದ್ದು ನಿಜವೇ ?

ಬೆಂಗಳೂರು: ನಮಗೆ ಹಿಂದೂಗಳ ಓಟು ಬೇಡ, ಮುಸ್ಲಿಮರ ಓಟು ಸಾಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವಂತಹ ಪತ್ರಿಕಾ ವರಿದಿಯೊಂದು ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ, ಬಿಜೆಪಿ ಜೆಡಿಎಸ್ ಅಪವಿತ್ರ ಮೈತ್ರಿಯ ನಾಯಕರು ಈ ಸುಳ್ಳು ಸುದ್ದಿಯನ್ನು ಸೃಷ್ಟಿಸಿದ್ದು ಈ ಬಗ್ಗೆ ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ,
ಚುನಾವಣೆಯಲ್ಲಿ ಗೆಲ್ಲಲು ಈ ರೀತಿಯ ಕುತಂತ್ರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್ಗೆ ನ್ಯಾಯಯುತವಾಗಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲದೇ ಈ ರೀತಿಯ ತಂತ್ರಗಾಗಿಕೆಗೆ ಇಳಿದಿದ್ದಾರೆಂದು ಆರೋಪಿಸಿದ್ದಾರೆ,
ಈ ರೀತಿಯ ಸುದ್ದಯ ಮೂಲ ಬೇರುಗಳನ್ನು ಹುಡುಕಾಡುತ್ತಿದ್ದು ಆರೋಪಿಗಳಿಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಾರೆ,