ಚುನಾವಣೆ

ಕಾಂಗ್ರೆಸ್ಸಿಗರು ನೀಡಿದ ಕಿರುಕುಳವನ್ನು ಸಹಿಸಿಕೊಂಡಿದ್ದೆ ಹೆಚ್‌ಡಿಕೆ ಮಾತು

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್‌ಡಿಕೆ ಸ್ಪರ್ಧಿಸುತ್ತಿದ್ದು ಕಾಂಗ್ರೆಸ್ ನಾಯಕರು ಮಂಡ್ಯ ಜಿಲ್ಲೆಗೆ ಹೆಚ್‌ಡಿಕೆ ಕೊಡುಗೆ ಏನು ಎಂದು ಆಗಾಗ್ಗ ಪ್ರಶ್ನೆ ಮಾಡುತ್ತಿದ್ದಾರೆ, ಈ ಪ್ರಶ್ನೆಗೆ ಪ್ರಚಾರದ ವೇಳೆ ಉತ್ತರ ನೀಡಿರುವ ಹೆಚ್‌ಡಿಕೆ ಸಮ್ಮಿಶ್ರ ಸರ್ಕಾರ ಸಮಯದ ಕಷ್ಟಕರ ದಿನವನ್ನು ನೆನೆದರು,
ಮಂಡ್ಯದಲ್ಲಿ ಮಾತನಾಡಿದ ಅವರು 2016-17 ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಾಲು ಸಾಲು ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು, ಒಟ್ಟೂ 200 ಕುಟುಂಬದಲ್ಲಿ ರೈತರ ಆತ್ಮಹತ್ಯೆ ನಡೆದಿತ್ತು ಅದರೆ ಆಗ ಯಾವೊಬ್ಬ ಕಾಂಗ್ರೆಸ್ ನಾಯಕನೂ ಕಣ್ಣೀರೊರೆಸಲು ಬಂದಿಲ್ಲ ನಾನು ಸಾಧ್ಯವಾದಷ್ಟು ಮನೆಗಳಿಗೆ ಭೇಟಿ ನೀಡಿ ಧನ ಸಹಾಯ ಮಾಡಿ ಆತ್ಮಹತ್ಯೆಯಂತಹ ಹತಾಷೆಯನ್ನು ತಂದುಕೊಳ್ಲಬೇಡಿ ಎಂದು ಮನಿವಿ ಮಾಡಿದ್ದೆ, ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಮಂಡ್ಯ ರೈತರ 750 ಕೋಟಿ ರೂ ಸಾಲ ಮನ್ನಾ ಮಾಡಿದ್ದೆ ಮೈಸೂರಿನಲ್ಲಿ ಕಾರ್ಖಾನೆ ತೆರೆಯಲು 100 ಕೋಟಿ ರೂ ಮಂಗಡ ಹಣವನ್ನು ಘೋಷಣೆ ಮಾಡಲಾಗಿತ್ತು ಎಂದರು,
ಆಗ ಬಿಜೆಪಿಯ ಬಿ ಟೀಂ ಎನ್ನುತ್ತಿದ್ದ ಕಾಂಗ್ರೆಸ್ ದೇವೆಗೌಡರ ಮನೆ ಬಾಗಿಲಿಗೆ ಬಂದು ಸಮ್ಮಿಶ್ರ ಸರ್ಕಾರ ರಚಿಸಲು ದುಂಬಾಲು ಬಿದ್ದರು, ನನ್ನನ್ನು ಒತ್ತಾಯ ಪೂರ್ವಕವಾಗಿ ಸಿಎಂ ಮಾಡಲಾಯಿತು, ಅಧಿಕಾರ ವಹಿಸಿಕೊಂಡ ಮೇಲೆ ಕಾಂಗ್ರೆಸ್ ನಾಯಕರು ಕೊಟ್ಟ ಕಿರುಕುಳ, ಮಾನಸಿಕ ಹಿಂಸೆ, ಅವಮಾನ ಎಲ್ಲವನ್ನೂ ಸಹಿಸಿಕೊಂಡೆ, ರೈತರ ಏಳಿಗೆಗೆಗಾಗಿ ದುಡಿದಿದ್ದೇನೆ ಇಷ್ಟಾದರೂ ಕಾಂಗ್ರೆಸ್ ಕುಮಾರಸ್ವಾಮಿ ಕೊಡುಗೆ ಏನೆಂದು ಕೇಳ್ತಾರೆ ಎಂದು ಹೆಚ್‌ಡಿಕೆ ಕಿಡಿಕಾರಿದರು,

Trending

Exit mobile version