ಚುನಾವಣೆ
ಮೋದಿ ಅಲೆ ಇಲ್ಲ ರಾಜ್ಯದಲ್ಲಿ ನಮ್ಮ ಗ್ಯಾರಂಟಿ ಹವಾ ಇದೆ ಪ್ರೊ.ರಾಜೀವ್ ಗೌಡ

ಬೆಂಗಳೂರು: ಮೋದಿ ಅಲೆ ಇಲ್ಲ, ನಮ್ಮ ಗ್ಯಾರಂಟಿ ಹವಾ ಇದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಅಭ್ಯರ್ಥಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್ ಗೌಡ ಹೇಳಿದರು, ಹೊಸ ಸುದ್ದಿ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡುತ್ತ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ ಅದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ, 10 ವರ್ಷ ಆಡಳಿತದಲ್ಲಿ ಇರುವ ಬಿಜೆಪಿ ಸರ್ಕಾರದ ಕೊಡುಗೆ ಏನು ಎಂಬುದು ದೇಶದ ಪ್ರಜೆಗಳಿಗೆ ತಿಳಿದಿದೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕು, ರಾಜ್ಯದಲ್ಲಿ ಆಡಳಿತದಲ್ಲಿ ಇರುವ ನಮ್ಮ ಕಾಂಗ್ರೆಸ್ ಸರ್ಕಾರದ ಯೋಜೆನಗಳ ಜೊತೆಗೆ ನಮ್ಮ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಎಲ್ಲಾ ಯೋಜನೆಗಳನ್ನು ಫಲಾನುಭವಿಗಳಿಗೆ ಸಿಗುವಂತೆ ಮಾಡಿ ಅಭಿವೃದ್ಧಿಯ ಯೋಜನೆ ನಾನು ರೂಪಿಸಿಕೊಂಡಿದ್ದೇನೆ, ನಮ್ಮ ಸಂವಿಧಾನ ಎಲ್ಲರಿಗೂ ಶಾಂತಿಯಿAದ ಬದುಕಲು ಅವಕಾಶ ಮಾಡಿಕೊಟ್ಟಿದೆ ಅದರೆ ಇಂದು ಬಿಜೆಪಿಯವರು ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂಬ ಚಿಂತನೆ ನಡೆಸುತ್ತಿದೆ, ಸಂವಿಧಾನವನ್ನು ನಾವು ಬದಲಾಯಿಸುತ್ತೇವೆ ಎಂಬ ಪಕ್ಷದವರಿಗೆ ಯಾರು ಮತ ಹಾಕುವುದಿಲ್ಲ, ಬಿಜೆಪಿ ಅವರು ಧರ್ಮವನ್ನು ದೂರಪಯೋಗಿಸಿಕೊಳ್ಳುತ್ತಿದ್ದಾರೆ, ಕ್ಷೇತ್ರದ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟಿಕೊಂಡಿದ್ದೇನೆ. ಅವರ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಮುಖ್ಯ ಉದ್ದೇಶ, ನನ್ನ ವಿರುದ್ಧ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದು ಅವರ ಕನಸು ಏಕೆಂದರೆ ಅವರು ಬರೇ ಡೋಂಗಿ ಮಾತುಗಳನ್ನು ಆಡುತ್ತಿದ್ದಾರೆ, ಅವರು ಸಂಸದೆಯಾಗಿ ಜನರ ಸಮಸ್ಯೆಗಳನ್ನು ಹಾಗೂ ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೆ ಶೋಭಕ್ಕ ಗೋ ಬ್ಯಾಕ್ ಎಂದು ಅವರು ಪಕ್ಷದವರೇ ಹೇಳಿದ್ದಾರೆ, ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿ ಹಾಗೂ ಅವರ ಯೋಜನೆಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂಬ ವಿಷಯ ದೇಶದಲ್ಲಿ ಇರುವ ಭಾರತೀಯರಿಗೆ ತಿಳಿದಿದೆ, ರಾಜ್ಯದಲ್ಲಿ ಮೋದಿ ಅಲೆ ಇಲ್ಲ ನಮ್ಮ ಗ್ಯಾರಂಟಿಯ ಅಲೆ ಇದೇ, ದೇಶದಲ್ಲಿ ಬೆಲೆ ಏರಿಕೆಗೆ ಮುಖ್ಯ ಕಾರಣ 10 ವರ್ಷದ ಮೋದಿ ಸರ್ಕಾರದ ಆಡಳಿತ ಎಂದರು, ಚುನಾಯಿತರಾಗಿ ಆಯ್ಕೆಯಾಗಿ ಬಂದ ನಂತರ ದೆಹಲಿಗೆ ಹೋಗಿ ಬೆಂಗಳೂರು ನಗರಕ್ಕೆ ಕೇಂದ್ರ,ರಾಜ್ಯ ಮತ್ತು ಬಿಬಿಎಂಪಿಗೆ ಟ್ರಿಪಲ್ ಎಂಜಿನ್ ನಂತೆ ಕೆಲಸ ಮಾಡಲು ಹಣವನ್ನು ತರುತ್ತೇವೆ ಎಂದರು, ಜನರನ್ನು ಖಾಸಗಿಯಿಂದ ಸಾರ್ವಜನಿಕ ಸಾರಿಗೆಗೆ ಬದಲಾಯಿಸುವಂತೆ ಮಾಡಬೇಕಾಗುತ್ತದೆ, ಮೆಟ್ರೋ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚು ಮಾಡಬೇಕು, ಸುತ್ತಮುತ್ತಲಿನ ಕೆರೆಗಳಿಗೆ ಕಾಯಕಲ್ಪ ನೀಡಲಾಗುವುದು ಎಂದರು,