ಚುನಾವಣೆ

ಒಬಿಸಿಗೆ ಮುಸ್ಲಿಂಮರನ್ನು ಸೇರಿಸಲು ನಾನು ಬಿಡುವುದಿಲ್ಲ ಪ್ರಧಾನಿ ಮೋದಿ

ಬಾಗಲಕೋಟೆ: ಕಾಂಗ್ರೆಸ್‌ನವರು ಮುಸ್ಲಿಂರನ್ನು ಒಬಿಸಿಗೆ ಸೇರಿಸಲು ಮುಂದಾಗಿದ್ದಾರೆ ಅದರೆ ನಾನು ಕಾಂಗ್ರೆಸ್‌ನವರಿಗೆ ಮೀಸಲಾತಿ ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು,
ಇಂದು ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಮತಯಾಚನೆ ಬೃಹತ್ ಸಭೆಯಲ್ಲಿ ಅವರು ಮಾತನಾಡುತ್ತ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, ಕಳೆದ 70 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಸ್, ಎಸ್ಟಿ ಸೇರಿಂದAತೆ ಯಾವುದೇ ಕೆಳ ವರ್ಗಗಳ ಅಭಿವೃದ್ಧಿ ಕಾಂಗ್ರೆಸ್ ಸರ್ಕಾರ ಮಾಡಿಲ್ಲ, ಬಿಜೆಪಿಯವರು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್‌ಸಿ, ಎಸ್ಟಿ ಸಮುದಾಯಗಳಿಗೆ ಸುರಕ್ಷತೆಯಿಲ್ಲ ಅದರೆ ಈ ಸಮುದಾಯಕ್ಕೆ ಬಿಜೆಪಿ ಶಕ್ತಿ ತುಂಬಿದೆ ಎಂದು ಹೇಳಿದರು,
ಕಾಂಗ್ರಸ್‌ನವರಿಗೆ ಬಡವರ, ದಲಿತರ ಬಗ್ಗೆ ಚಿಂತೆಯೇ ಇಲ್ಲ, ದಲಿತರು ಹಿಂದುಳಿದವರು ಕಾಂಗ್ರೆಸ್ ಕಣ್ಣಿಗೆ ಕಾಣುವುದಿಲ್ಲ, ಪರಿಶಿಷ್ಟರ ಮನೆ ನಿರ್ಮಾಣಕ್ಕೆ ನೆರವು ನೀಡಿದ್ದೇವೆ, 2014 ರ ನಂತರ ದೇಶದ ಪ್ರತಿ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡಿದ್ದೇವೆ, ನಮ್ಮ ಯೋಜನೆಗಳು ಪ್ರತಿ ಗ್ರಾಮಗಳಿಗೆ ತಲುಪಿವೆ, ಅದರೆ ಈ ರಾಜ್ಯದಲ್ಲಿ ನಮ್ಮ ಯೋಜನೆಗಳನ್ನು ಕಾಂಗ್ರೆಸ್ ನಿಲ್ಲಿಸಿದೆ ಎಂದು ಕಿಡಿ ಕಾರಿದರು,
ಕಾಂಗ್ರೆಸ್ ಅವಧಿಯಲ್ಲಿ ರಾಜ್ಯದಲ್ಲಿ ಕಾನೂನು ಸವ್ಯವಸ್ಧೆ ಸಂಪೂರ್ಣ ಹದಗೆಟ್ಟಿದೆ, ಬೆಂಗಳೂರಿನಲ್ಲಿ ಹಗಲಿನಲ್ಲೇ ಭಯೋತ್ಪಾದಕ ಚಟುವಟಿಕೆಗಳು ನಡೀತಿವೆ, ಹನುಮಾನ್ ಚಾಲಿಸಾ ಕೇಳಿದ್ರೂ ಅವರ ಮೇಲೆ ಹಲ್ಲೆ ಆಗುತ್ತಿದೆ, ಹುಬ್ಬಳ್ಳಿ ನೇಹಾಳನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ, ಇವು ಮಾಮೂಲಿ ಘಟನೆಗಳಲ್ಲ, ಆತಂಕವಾದಿಯು ಘಟನೆಗಳು ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ವಿರುದ್ಧ ಮೋಡಿ ಕಿಡಿ ಕಾರಿದುರ, ದೆಹಲಿಯವರಿಗೆ ಇಲ್ಲಿನ ಸರ್ಕಾರ ಎಟಿಎಂ ಆಗಿ ಕೆಲಸ ಮಾಡುತ್ತಿದೆ, ಮೇ 7 ರಂದು ಕಾಂಗ್ರೆಸ್ ಪಕ್ಷಕ್ಕೆ ಶಿಕ್ಷೆ ಕೊಡಿ ಎಂದರು,

Trending

Exit mobile version