ಕ್ರೀಡೆ

ಆರ್‌ಸಿಬಿಗೆ ಕಪ್ ಗೆದ್ದ ಮೇಲೆ ನಿವೃತ್ತಿ ಕಿಂಗ್ ಕೊಹ್ಲಿ

ಬೆಂಗಳೂರು: ಕಳೆದ ಐದು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಪ್ಲೇಆಫ್ ಕನಸಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ, ಇದೇ ವೇಳೆ ಕೊಹ್ಲಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದು ಆರ್‌ಸಿಬಿ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ,
ಖಾಸಗೀ ಸುದ್ದಿ ವಾಹಿನಿಯಲ್ಲಿ ನಿರೂಪಕರೊಬ್ಬರು ನಿಮ್ಮ ಸಕ್ಸಸ್ ಹಿಂದೆ ಯಾಕಿಷ್ಟು ಹಸಿವಿನಿಂದ ಓಡುತ್ತಿದ್ದೀರಿ ಎಂದು ಕೇಳಲಾಯಿತು, ಇದಕ್ಕೆ ಉತ್ತರಿಸಿದ ಕಿಂಗ್ ಕೊಹ್ಲಿ ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ನನಗೆ ಯಾವುದೇ ವಿಷಾದ ಇರಬಾರದು, ನಾನು ಆಡುವ ಕೊನೆಯ ಕ್ಷಣದ ವರೆಗೂ ನಾನು ಬೆಸ್ಟ್ ಪರ್ಫಾರ್ಮೆನ್ಸ್ ನೀಡಲು ಬಯಸುತ್ತೇನೆ ಎಂದರು,
ನನ್ನ ಕರಿಯರ್ ಮುಗಿದ ಮೇಲೆ ಚಿಂತಿಸುತ್ತ ಕೂರಬಾರದು, ಅಂತಹ ಪರಿಸ್ಧಿತಿ ನನಗೆ ಬರಬಾರದು ಎಂದರೆ ಇಂದು ಅದ್ಭುತ ಆಟ ಆಡಬೇಕು ಎಂದು ಹೇಳಿದರು,
ಕ್ರಿಕೆಟ್ ಜೀವನದಿಂದ ಒಮ್ಮೆ ನಾನು ಇದನ್ನೆಲ್ಲಾ ಮುಗಿಸಿ ಹೊರನಡೆದರೆ ಖಂಡಿತ ಮತ್ತೆ ನೀವು ನನ್ನನ್ನೂ ನೋಡೋದಕ್ಕೆ ಸಾದ್ಯವಿಲ್ಲ ಎಂದ ಕೊಹ್ಲಿ ಐಪಿಎಲ್‌ನಲ್ಲಿ ಒಮ್ಮೆ ಕೂಡ ಆರ್‌ಸಿಬಿ ಕಪ್ ಗೆದ್ದಿಲ್ಲ ಎಂಬ ನೋವು ಕೊಹ್ಲಿಗೂ ಕಾಡುತ್ತಿದ್ದು ಕಪ್ ಗೆದ್ದೇ ನಿವೃತ್ತಿ ನೀಡುವುದಾಗಿ ಹೇಳಿದ್ದಾರೆ,

Trending

Exit mobile version