ಬೆಂಗಳೂರು

ಗುಣವಂತ ಸಿರಿವಂತ ಅಮ್ಮಾ ನನ್ನ ಗಂಡ ಹೀಗಿರಬೇಕು ಭಕ್ತೆಯ ಪತ್ರ ನೀವೂ ಓದಿ

ಬೆಂಗಳೂರು: ದೇವಸ್ಧಾನದಲ್ಲಿನ ಕಾಣಿಕೆಹೊಂಡಿ ಇತ್ತೀಚೆಗೆ ಅಂಚೆ ಡಬ್ಬಿಯೇ ಆಗುತ್ತಿದೆ, ಕಾಣಿಕೆ ಜೊತೆ ವಿಧ ವಿಧ ಬೇಡಿಕೆಗಳ ಪತ್ರ ಹುಂಡಿ ಸೇರುತ್ತಿದ್ದು ಹುಂಡಿ ಏಣಿಕೆ ಸಮಯದಲ್ಲಿ ಪತ್ರ ಓದಿದ ದೇವಸ್ಧಾನದ ಅಡಳಿತ ಮಂಡಳಿ ದಂಗಾಗಿದ,
ಬೆಂಗಳೂರಿನ ಬನಶಂಕರಿ ದೇವಿಗೆ ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿರುವ ಭಕ್ತೆಯೊಬ್ಬರು ತಾಯಿಯಲ್ಲಿ ತನ್ನ ಗಂಡ ಹೇಗಿರಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಜೊತೆಗೆ ಈ ಹಿಂದೆ ಬೇಡಿಕೊಂಡಿದ್ದು ಈಗ ಬೇಡ ಕ್ಷಮಿಸು ಎಂದು ಬರೆದಿದ್ದಾರೆ, ಈ ಮೊದಲ ಗೋಪಿನಾಥ ಎಂಬುವವನನ್ನು ಬಿಟ್ಟರೆ ಬೇರೆಯವರನ್ನು ಮದುವೆಯಾಗಲ್ಲ ಎಂದಿದ್ದೆ ಅದರೆ ಈಗ ಅವನು ನನಗೆ ಬೇಡ ಐಎಎಸ್ ಅಧಿಕಾರಿಯೇ ಬೇಕು ಎಂಬ ದೊಡ್ಡ ಬೇಡಿಕೆಯನ್ನು ಬನಶಂಕರಿ ಎದುರು ಇಟ್ಟಿದ್ದಾರೆ,
ಗುಣವಂತ, ಸಿರಿವಂತ, ಐಶ್ವರ್ಯವಂತ, ಹೃದಯವಂತ ಯಾವ ಹೀರೋಗಿಂತಲೂ ಕಮ್ಮಿ ಇರಬಾರದು, ನಾನವರ ಜೀವವಾಗ ಬೇಕು, ಬೇರೆ ಹೆಂಗಸರನ್ನು ಕೆಟ್ಟ ದೃಷ್ಟಿಯಲ್ಲಿ ನೋಡಬಾರದು, ನೂರು ಕಾಲ ಮಕ್ಕಳು ಮೊಮ್ಮಕ್ಕಳ ಜೊತೆ ಬಾಳಬೇಕು ಎಂದು ಭಕ್ತೆ ಪತ್ರದಲ್ಲಿ ಕೋರಿಕೆ ಇಟ್ಟಿದ್ದಾರೆ, ಈ ಭಕ್ತೆಯ ಪ್ರಾರ್ಥನೆ ಈಡೇರಲಿ.
ಇಷ್ಟೇ ಅಲ್ಲ ದಂಪತಿಯನ್ನು ದೂರು ಮಾಡು ಅವರಿಗೆ ಶಿಕ್ಷೆ ಕೂಡು, ತಾಯಿ ಮನೆ ಆಸ್ತಿ ನನಗೇ ಸಿಗಲಿ, ನನ್ನ ಮಗನ ಮದುವೆ ಒಳ್ಳೆ ರೀತಿಯಿಂದ ನಡೆಯಲಿ ಹೀಗೆ ನಾನಾ ರೀತಿಯ ಬೇಡಿಕೆ ಪತ್ರ ಬನಶಂಕರಿ ದೇವಿ ಹುಂಡಿಯಲ್ಲಿ ಸಿಕ್ಕಿದೆ,

Trending

Exit mobile version