ಚುನಾವಣೆ
ಸಚಿವ ನಾಗೇಂದ್ರ ಬಗ್ಗೆ ಸಿ ಟಿ ರವಿ ಸ್ಪೋಟಕ ಹೇಳಿಕೆ!

ಬೆಂಗಳೂರು: 187 ಕೋಟಿ ರೂಪಾಯಿ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಅಂದರೆ, ಮತ್ಯಾವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತೆ ಎಂದು ಮಾಜಿ ಸಚಿವ ಸಿ ಟಿ ರವಿ ಪ್ರಶ್ನಿಸಿದ್ದಾರೆ,
ಚಂದ್ರಶೇಖರ್ ಅತ್ಮಹತ್ಯೆಯ ಕುರಿತು ಮಾತನಾಡಿದ ಅವರು ಡೆತ್ ನೋಟ್ನಲ್ಲಿ ಎಂ ನಾಗರಾಜ್ ಹೆಸರು ಉಲ್ಲೇಖವಾಗಿದೆ, ನಾಗರಾಜ್ ಎನ್ನುವ ವ್ಯಕ್ತಿ ಸಚಿವ ನಾಗೇಂದ್ರ ಅವರ ಬುಸಿನಸ್ ಪಾರ್ಟನರ್ ಆಗಿದ್ದಾರೆ, ಅವರು ಡಿ ಕೆ ಶಿವಕುಮಾರ್ ಅವರ ಪರಮಾಪ್ತ, ಡಿಕೆಶಿ ಜೊತೆ ವಿಶೇಷ ವಿಮಾನದಲ್ಲಿ ಹೋಗಿದ್ದಾರೆ, ಪರಿಚಯ ಇಲ್ಲದೇ ಇದ್ದವರು ವಿಮಾನದಲ್ಲಿ ಒಟ್ಟಿಗೆ ಹೋಗುತ್ತಾರಾ? ಎಂದು ಪ್ರಶ್ನಿಸಿದ್ದಾರೆ,
ನಾಗರಾಜ ಎಂಬಾತ ಸಿಎಂ ಸಿದ್ದರಾಮಯ್ಯ ಜೊತೆ ಸಮವಾಗಿ ನಡೆದುಕೊಂಡು ಬಂದಿದ್ದಾರೆ, ನನಗೆ ಬಂದಿರುವ ಮಾಹಿತಿ ಪ್ರಕಾರ ನಾಗರಾಜ್ ಹಾಗೂ ಸಚಿವ ನಾಗೇಂದ್ರ ಪಾರ್ಟನರ್ ಇದ್ದಾರೆ, ಇದರಲ್ಲಿ ಕಾಣುವ ಕೈಗಳು ಇದ್ದಾವೆ, ಕಾಣದ ಕೈಗಳು ಇವೆ ಎಂದರು,
ಕಾಂಗ್ರೆಸ್ ಸರ್ಕಾರ ಕಾಣದ ಕೈಗಳನ್ನು ಪತ್ತೆ ಮಾಡಬೇಕು, ಸರ್ಕಾರ ಕೂಡಲೇ ಎಫ್ಐಆರ್ ನಲ್ಲಿ ನಾಗೇಂದ್ರ ಹೆಸರನ್ನು ಸೇರ್ಪಡೆ ಮಾಡಬೇಕು, ಅವರ ರಾಜೀನಾಮೆಯನ್ನು ಪಡೆಯಬೇಕು, ಒಂದು ವೇಳೆ ನಾಗೇಂದ್ರ ವಿರುದ್ಧ ಎಫ್ಐಆರ್ ಮಾಡದೇ ಇದ್ದರೆ ಇದರಲ್ಲಿ ಸಿಎಂ ಹಾಗೂ ಡಿಸಿಎಂ ಭಾಗಿಯಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ, ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು,