ಚುನಾವಣೆ

ಮೋದಿ ಮತ್ತೊಮ್ಮೆ..! ಇದು ಗಿಳಿ ಪಂಚಾಗ ಅಲ್ಲ, ಶ್ವಾನ ಭವಿಷ್ಯ..!

ಮೈಸೂರು: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣೆ ಆರಂಭವಾಗಿದ್ದು ಈ ಮಧ್ಯೆ ಗೆಲುವ-ಸೋಲುಗಳ ಲೆಕ್ಕಾಚಾರ ಶುರುವಾಗಿದೆ, ನಿನ್ನೆಯಷ್ಟೇ ಎಕ್ಸಿಟ್ ಪೋಲ್ ಬಿಡುಗಡೆಯಾಗಿದ್ದವು, ಅದರ ಬೆನ್ನಲ್ಲೇ ಶ್ವಾನವೊಂದು ಫಲಿತಾಂಶದ ಭವಿಷ್ಯ ನುಡಿದಿದೆ,
ಮೈಸೂರಿನ ಕೆ.ಟಿ.ಸ್ಟ್ರೀಟ್ ನ ಕಾಲಬೈರವೇಶ್ವರ್ ದೇಗುಲದಲ್ಲಿ ಬೈರವ ಎಂಬ ಶ್ವಾನ ಈ ಬಾರಿ ನರೇಂದ್ರ ಮೋದಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದೆ, ಬೈರವ ಶ್ವಾನದ ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಫೋಟೋ ಇಟ್ಟಾಗ ಅದು ಮೋದಿ ಫೋಟೋವನ್ನು ಆಯ್ಕೆ ಮಾಡುವ ಮೂಲಕ ಫಲಿತಾಂಶದ ಭವಿಷ್ಯ ನುಡಿದಿದೆ,
ನಂತರ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿರುವ ಎಂ.ಲಕ್ಷಣ್ ಹಾಗೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಫೋಟೋ ಇಟ್ಟಾಗ ಯದುವೀರ್ ಪೋಟೋವನ್ನು ಆಯ್ಕೆ ಮಾಡಿದೆ, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ಬೆಂಬಲಿಗರು, ನಾಯಕರು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ,
ಈ ಹಿಂದೆ ಹಲಾವರು ಕಾರ್ಯಕ್ಕೆ ಈ ರೀತಿ ಬೈರವನ ಬಳಿ ಭವಿಷ್ಯ ಕೇಳಲಾಗಿತ್ತು, ಶ್ವಾನ ನುಡಿದ ಭವಿಷ್ಯದಂತೆ ಆಗಿತ್ತು, ಆ ಕಾರಣದಿಂದ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತಾರೆ, ಜೊತೆಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಯದುವೀರ್ ಒಡೆಯರ್ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದೆ

Trending

Exit mobile version