ದೇಶ
ಬೆಂಗಳೂರು-ಮೈಸೂರು ಹೈವೇನಲ್ಲಿ ನದಿಯಂತೆ ಹರಿದ ನೀರು.. 8 ಕಿಮೀ ವರೆಗೆ ಟ್ರಾಫಿಕ್ ಜಾಮ್..!

ಬೆಂಗಳೂರು: ಮೊದಲ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ ಜಲಮಯ ಉಂಟಾಗಿದೆ. ಮಳೆಯಿಂದಾಗಿ ಹಳ್ಳದ ನೀರು ಹರಿದು ಹೋಗದೆ ಎಕ್ಸ್ಪ್ರೆಸ್ ವೇಗೆ ನುಗ್ಗಿದೆ. ಪರಿಣಾಮ ನಿನ್ನೆ ರಾತ್ರಿ 8 ಕಿಮೀ ತನಕ ಎಕ್ಸ್ಪ್ರೆಸ್ ವೇನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಸವಾರರು ಗಂಟೆಗಟ್ಟಲೇ ರಸ್ತೆಯಲ್ಲಿ ಸಿಲುಕಿ ಒದ್ದಾಡಿದ್ದಾರೆ. ರಜೆ ಮೂಡ್ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಪ್ರಯಾಣಿಕರಿಗೆ ಮಳೆಯಿಂದಾಗಿ ಕಿರಿಕಿರಿ ಅನುಭವಿಸಿದ್ದಾರೆ. ಸಂಗಬವಸನದೊಡ್ಡಿಯಿಂದ ಬಿಡದಿವರೆಗೆ ರಸ್ತೆಯಲ್ಲಿ ನೀರು ಹರಿದಿದೆ. ರಸ್ತೆಯಲ್ಲಿ ನದಿಯಂತೆ ನೀರು ಹರಿದಿದೆ. 2022ರಲ್ಲಿ ಅವಾಂತರವಾಗಿದ್ದು ಸರಿಪಡಿಸಿರುವುದಾಗಿ ಎನ್ಎಚ್ಎಐ ಅಧಿಕಾರಿಗಳು ಹೇಳಿದ್ದರು. ಇದೀಗ ಮೊದಲ ಮಳೆಗೇ ಅವಾಂತರ ಸೃಷ್ಟಿಯಾಗಿದೆ. ದುಬಾರಿ ಟೋಲ್ ಕೊಟ್ಟರೂ ನೆಮ್ಮದಿಯಿಂದ ತಿರುಗಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಯಾಣಿಕರ ಹಿಡಿಶಾಪ ಹಾಕುತ್ತಿದ್ದಾರೆ.