ಚುನಾವಣೆ

ಮಹಾನ್ ಜ್ಞಾನಿ ಬಗ್ಗೆ ಏನೂ ಕೇಳಬೇಡಿ: ಪ್ರದೀಪ್ ಈಶ್ವರ್ ಗೆ ಸುಧಾಕರ್ ಟಾಂಗ್

ಚಿಕ್ಕಬಳ್ಳಾಪುರ: ನನಗೆ ಅಂತಹ ಮಹಾನ್ ಜ್ಞಾನಿ ಬಗ್ಗೆ ಏನೂ ಕೇಳಬೇಡಿ, ನಾನು ಅಷ್ಟೊಂದು ಪ್ರಬುದ್ಧ ರಾಜಕಾರಣಿ ಬಗ್ಗೆ ಮಾತನಾಡೋಕೆ ಹೋಗಲ್ಲ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‍ಗೆ ಟಾಂಗ್ ನೀಡಿದ್ದಾರೆ,
ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರ ಸುಧಾಕರ್ ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಾಗಿತ್ತು, ಈ ಒಂದು ವರ್ಷದ ಅವಧಿಯಲ್ಲಿ ಜನರು ಏನನ್ನು ಕಳೆದುಕೊಂಡಿದ್ದರು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ, ಅವರ ಮನೆ ಮಗನಾಗಿದ್ದಾಗ ಯಾವ ರೀತಿ ಕೆಲಸ ಆಗುತ್ತಿತ್ತು ಎಂಬುದನ್ನು ನೋಡಿ ಈಗ ಮತ್ತೆ ನನ್ನನ್ನು ಗೆಲ್ಲಿಸಿದ್ದಾರೆ ಎಂದರು,
ಈ ಗೆಲುವಿನ ಬಳಿಕ ನನ್ನ ಕ್ಷೇತ್ರದ ವ್ಯಾಪ್ತಿ ಹೆಚ್ಚಾಗಿದೆ, ಜನರ ಸೇವೆ ಮಾಡಲು ಇದು ನನ್ನ ಸೌಭಗ್ಯ ಎಂದುಕೊಂಡಿದ್ದೇನೆ, ನನ್ನ ದೃಷ್ಟಿ ಏನಿದ್ದರೂ ಅಭಿವೃದ್ಧಿ ಮೇಲಿರುತ್ತದೆ ಎಂದು ನುಡಿದರು.
ಇದೇ ವೇಳೆ ಸುಧಾಕರ್ ಗೆದ್ದರೆ ತಾನು ಶಾಸಕ ಸ್ಧಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿಕೆ ನೀಡಿದ್ದ ಪ್ರದೀಪ್ ಈಶ್ವರ್ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸುಧಾಕರ್ ನಾನು ಮೊದಲೇ ಹೇಳಿದ್ದೇನೆ ಅಂತಹವರ ಬಗ್ಗೆ ನಾನು ಏನೂ ಹೇಳಲ್ಲ, ಅಂತಹ ಮಹಾ ಜ್ಞಾನಿ ಬಗ್ಗೆ ನನ್ನನ್ನು ಏನೂ ಕೇಳಬೇಡಿ, ಅದಕ್ಕೆ ಉತ್ತರ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಕೊಡುತ್ತಾರೆ ಎಂದು ಹೇಳಿದರು,

Trending

Exit mobile version