ದೇಶ
ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಗಡಿ ಜಿಲ್ಲೆಯ ಮಹಿಳೆಗೆ ಆಹ್ವಾನ

ಚಾಮರಾಜನಗರ: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಚಾಮರಾಜನಗರ ತಾಲೂಕಿನ ಉಮ್ಮತೂರು ಗ್ರಾಮದ ವರ್ಷಾ ಅವರಿಗೆ ಆಹ್ವಾನ ನೀಡಲಾಗಿದೆ.
ಉಮ್ಮತುರು ಗ್ರಾಮದ ಪ್ರಗತಿಪರ ರೈತ ಮಹಿಳೆ ವರ್ಷಾ, ಮೋದಿ ಮನ್ ಕಿ ಬಾತ್ ಮಾತುಗಳಿಂದ ಪ್ರೇರಣೆಗೊಂಡು ಬಾಳೆದಿಂಡಿನಿಂದ ವಸ್ತುಗಳನ್ನು ತಯಾರಿಸಿ ಉದ್ಯಮಿಯಾಗಿದ್ದಾರೆ.
ಆತ್ಮನಿರ್ಭರ ಯೋಜನೆಯ ಮೂಲಕ ಪ್ರೇರೇಪಣೆಗೊಂಡಿರುವ ವರ್ಷಾ, ಬಾಳೆದಿಂಡಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮೌಲ್ಯವರ್ಧನೆ ಮಾಡಿ ಬದುಕು ಕಟ್ಟುಕೊಂಡಿದ್ದಾರೆ.
”ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಆಹ್ವಾನಿಸಿರುವುದು ತುಂಬಾ ಖುಷಿ ತಂದಿದೆ” ಎಂದು ವರ್ಷಾ ಸಂತಸ ವ್ಯಕ್ತಪಡಿಸಿದ್ದಾರೆ.