ದೇಶ
ಅಮರಾವತಿ ಆಂಧ್ರಪ್ರದೇಶದ ರಾಜಧಾನಿ ಚಂದ್ರಬಾಬು ನಾಯ್ಡು ಘೋಷಣೆ

ಅಮರಾವತಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಧ ಎನ್ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಒಂದು ದಿನ ಮುಂಚಿತವಾಗಿ ಇಂದು ಅಮರಾವತಿ ರಾಜ್ಯದ ರಾಜ್ಯಾಧಾನಿಗಲಿದೆ ಎಂದು ಘೋಷಿಸಿದ್ದಾರೆ.
ವಿಜಯವಾಡದಲ್ಲಿ ನಡೆದ ಎನ್ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮೈತ್ರಿಕೂಟದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಜನಸೇನಾ ಪಕ್ಷದ ಮುಖ್ಯಸ್ಧ ಪವನ್ ಕಲ್ಯಾಣ್ ಅವರ ಹೆಸರನ್ನು ಪ್ರಸ್ತಾಪಿಸಿದರು,ಬಿಜೆಪಿ ರಾಜ್ಯಧ್ಯಾಕ್ಷೆ ಮತ್ತು ಹೊಸದಾಗಿ ಚುನಾಯಿತ ಸಂಸದೆ ಡಿ.ಪುರಂದೇಶ್ವರಿ ಬೆಂಬಲಿಸಿದ್ದಾರೆ. ಅಮರಾವತಿ ನಮ್ಮ ರಾಜ್ಯದ ರಾಜ್ಯಧಾನಿಗಲಿದೆ, ನಾವು ಕೆಲವೇ ಸ್ಧಳಗಳಲ್ಲದೇ ಇಡೀ ರಾಜ್ಯವನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದ್ದೇವೆ ಎಂದು ನಾಯ್ಡು ಹೇಳಿದರು.