ದೇಶ
ವಿಡಿಯೋ ಕೊಟ್ಟ ಸುಳಿವು ಕೊಲೆ ಪ್ರಕರಣ ದರ್ಶನ್ ವರೆಗೂ ಬಂದು ನಿಂತಿದ್ದು ಹೇಗೆ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ, ಈ ಘಟನೆಯಿಂದ ಚಿತ್ರರಂಗ ಮಾತ್ರವಲ್ಲದೇ ದರ್ಶಣ್ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ,
ಕಳೆದ ಭಾನುವಾರ ಸುಮನಹಳ್ಳಿಯ ಅಪಾರ್ಟ್ಮೆಂಟ್ ಒಂದರ ಎದುರಿನಲ್ಲಿನ ರಾಜಕಾಲುವೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು, ಸ್ಧಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಶವದ ಮೇಲೆ ಗಾಯದ ಗುರುತು ಪತ್ತೆಯಾದ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ,
ಬಳಿಕ ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಮೃತ ವ್ಯಕ್ತಿಯ ಮೊಬೈಲ್ ಕರೆಯ ಇತಿಹಾಸಗಳನ್ನು ಕೆದಕಿದ್ದಾರೆ, ಜೊತೆಗೆ ಸುತ್ತಮುತ್ತಿಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ದರ್ಶನ್ ಅವರ ಕಾರು ಘಟನೆ ನಡೆದ ಶೆಡ್ಗೆ ಹೋಗಿರುವ ದೃಶ್ಯ ಪತ್ತೆಯಾಗಿದ್ದು ಈ ಮೂಲಕ ಪೊಲೀಸರಿಗೆ ದೊಡ್ಡ ಸುಳಿವು ದೊರೆತಿದೆ,
ಇದರೊಂದಿಗೆ ದರ್ಶನ್ ಅವರ ಬೌನ್ಸರ್ಗಳು ಮೃತ ವ್ಯಕ್ತಿಯ ಜೊತೆ ಈ ಹಿಂದೆ ಮಾತನಾಡಿರುವುದು ಪತ್ತೆಯಾಗಿದೆ, ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ದರ್ಶನ್ ಅವರ ಬೌನ್ಸರ್ಗಳನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದಾರೆ, ಆರಂಭದಲ್ಲಿ ಆರೋಪಿಗಳು ಹಣಕಾಸಿನ ವಿಚಾರಕ್ಕೆ ಹಲ್ಲೆ ಮಾಡಿದ್ದಾಗಿ ಹೇಳಿದ್ದಾರೆ, ಅದರೆ ವಿಚಾರಣೆ ತೀವ್ರಗೊಳಿಸಿದಾಗ ಈ ಪ್ರಕರಣದಲ್ಲಿ ನಟ ದರ್ಶನ್ ಅವರ ಪಾತ್ರವಿರುವುದಾಗಿ ಬಾಯ್ಬಿಟ್ಟಿದ್ದಾರೆ, ಹೀಗೆ ಮೊಬೈಲ್ ಕರೆಗಳು ವಿವಿಧ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ,
ವರದಿಗಳು ಪ್ರಕಾರ ರೇಣುಕಾಸ್ವಾಮಿ ಅವರಿಗೆ ದರ್ಶನ್ ಅವರ ಬೌನ್ಸರ್ಗಳು ಕರೆ ಮಾಡಿ ಕರೆಸಿಕೊಂಡು, ರಾಜರಾಜೇಶ್ವರಿ ನಗರದ ಶೆಡ್ ಒಂದರಲ್ಲಿ ಹಲ್ಲೆ ಮಾಡಿದ್ದಾರೆ, ಹಲ್ಲೆಯಿಂದ ಅಸ್ವಸ್ಧಗೊಂಡು ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ, ಬಳಿಕ ಶವವನ್ನು ಕಾಮಾಕ್ಷಿಪಾಳ್ಯದ ನಾಲೆಯಲ್ಲಿ ಎಸೆದಿದ್ದಾರೆ ಎನ್ನಲಾಗಿದೆ, ಇದೀಗ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ,