ಬೆಂಗಳೂರು

ವಕೀಲರಿಗೆ ಬೆದರಿಕೆ ಹಾಕಿದರೆ ಹುಷಾರ್..! ಜೈಲು ಭಾಗ್ಯ ಗ್ಯಾರೆಂಟಿ

ಬೆಂಗಳೂರು: ಯಾವುದೇ ವಿಷಯಕ್ಕ ಸಿಟ್ಟು ಬಂದು ವಕೀಲರ ಮೇಲೆ ಹಲ್ಲೆ ಮಾಡಿದರೆ ಅಥವ ಬೆದರಿಕೆ ಹಾಕಿದರೆ ಇನ್ನು ಜೈಲೇ ಗತಿಯಾಗಗಲಿದೆ ಎಚ್ಚರ!
ಕರ್ನಾಟಕ ಸರ್ಕಾರ ನ್ಯಾಯವಾದಿಗಳು ಮೇಲೆ ಹಿಂಸಾಚಾರ ನಿಷೇಧ ಅಧಿನಿಯಮಕ್ಕೆ ಒಪ್ಪಿಗೆ ಸೂಚಿಸಿದೆ,
ಇದು ರಾಜ್ಯ ವಕೀಲರ ಸಂಘದ ಬಹು ದಿನದ ಬೇಡಿಕೆಯಾಗಿತ್ತು, ಇದನ್ನು ಸರಕಾರ ಜಾರಿಗೆ ತಂದಿದ್ದು ಜೂನ್ 10 ರಂದು ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ, ಆ ದಿನದಿಂದಲೇ ಈ ಕಾಯ್ದೆ ಜಾರಿಗೆ ಬರಲಿದ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ,
ಇನ್ನು ಮುಂದೆ ವಕೀಲರು ಕರ್ತವ್ಯದಲ್ಲಿದ್ದಾಗ ಅವರ ಮೇಲೆ ಹಲ್ಲೆ ಮಾಡುವುದು ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಬೆದರಿಕೆ ಹಾಕುವುದು ಅಥವಾ ಕಿರುಕುಳ ನೀಡುವುದು ಶಕ್ಷಾರ್ಹ ಅಪರಾಧ ಎನ್ನುತ್ತದೆ ಅಧಿಸೂಚನೆ.

Trending

Exit mobile version