ದೇಶ
ದರ್ಶನ್ ಪ್ರಕರಣ ರಾಮ್ಗೋಪಾಲ್ ವರ್ಮಾ ಪ್ರತಿಕ್ರಿಯೆ!

ನವ ದೆಹಲಿ: ಕೊಲೆ ಕೇಸ್ನಲ್ಲಿ ಬಂಧಿತನಾಗಿರುವ ನಟ ದರ್ಶನ್ ನಡೆ ಸಿನಿಮಾ ರಂಗವೇ ತಲೆ ತಗ್ಗಿಸುವಂತದ್ದು ಎಂದು ಕನ್ನಡ ಸಿನಿ ರಂಗದ ಪ್ರಮುಖರು ಪ್ರತಿಕ್ರಿಯಿಸಿದ್ದಾರೆ,
ಸಿನಿಮಾ ರಂಗ ಅಥವಾ ಇನ್ನಾವುದೋ ಸಾಮಾಜಿಕ ತಲ್ಲಣಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಸಿನಿ ನಿರ್ದೇಶಕ ರಾಮ್ಗೋಪಾಲ್ ವರ್ಮಾ ದರ್ಶನ್ ಬಂಧನ ವಿಷಯಕ್ಕೂ ಪ್ರತಿಕ್ರಿಯಿಸಿದ್ದಾರೆ,
ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು ಸಿನಿಮಾ ಬಿಡುಗಡೆಯಾದ ಮೇಲೆ ಚಿತ್ರಕಥೆ ಬರೆದಂತಾಗಿದೆ ನಟ ದರ್ಶನ್ ಪ್ರಕರಣ ಎಂದಿದ್ದಾರೆ, ಚಿತ್ರೀಕರಣ ಆರಂಭಕ್ಕೂ ಮುನ್ನ ಚಿತ್ರಕಥೆ ಬರೆದುಕೊಳ್ಳಲಾಗುತ್ತದೆ, ಅದರೆ ಕೆಲವರು ಚಿತ್ರೀಕರಣ ಸಂದರ್ಭದಲ್ಲೇ ಚಿತ್ರಕತೆ ಬರೆಯುತ್ತಾ ಕುಳಿತುಕೊಳ್ಳುತ್ತಾರೆ, ಅದರೆ ದರ್ಶನ್ ವಿಚಾರದಲ್ಲಿ ಹಾಗಾಗಿಲ್ಲ ಎಂದಿದ್ದಾರೆ.
ಹಾಗೆಯೇ ಇನ್ನೊಂದು ಪೋಸ್ಟ್ನಲ್ಲಿ ದರ್ಶನ್ ಅವರು ಅಭಿಮಾನಿಯನ್ನು ಕೊಲ್ಲಲು ಇನ್ನೊಬ್ಬ ಕಟ್ಟರ್ ಅಭಿಮಾನಿಯನ್ನು ಬಳಸಿಕೊಂಡಿದ್ದಾರೆ, ಸ್ಟಾರ್ ಗಿರಿಯ ಆರಾಧನಾ ಸಂಸ್ಕøತಿ ಈ ವಿಲ್ಲಕ್ಷಣತೆಗೆ ಸಾಕ್ಷಿ, ಒಬ್ಬ ವ್ಯಕ್ತಿಯ ಆರಾಧನೆ ಎಂತಹ ದುರಂತಕ್ಕೆ ತಲುಪಬಹುದು ಎನ್ನುವುದಕ್ಕೆ ಈ ಪ್ರಕರಣ ಒಳ್ಳೆಯ ಉದಾಹರಣೆ ಎಂದಿದ್ದಾರೆ