ದೇಶ
ದರ್ಶನ್ ನನ್ನು ಜೈಲಿಗೆ ಕಳಿಸಿದವರು ಇವರೇ ನೋಡಿ ದಿಟ್ಟ ಅಧಿಕಾರಿಗಳಿಗೆ ಮೆಚ್ಚುಗೆಯ ಮಹಾಪೂರ!

ಬೆಂಗಳೂರು: ಖಾಕಿ ಹಾಕಿಕೊಂಡು ಕಳ್ಳ ಕಾಕರನ್ನು ಕೊಲೆಗಡುಕರ ಸದ್ದಡಿಗಿಸುತ್ತಿದ್ದ ಐರಾವತ ಪಾತ್ರದಲ್ಲಿ ಮಿಂಚಿದ್ದ ನಟ ದರ್ಶಣ್ ಅವರನ್ನು ಪ್ರಕರಣದಲ್ಲಿ ನಿಜ ಹೀರೊಗಳೆಂದರೆ ಇವರೇ.
ಖ್ಯಾತ ನಟ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪ್ರಭಾವಿ ನಟ ದರ್ಶನ್ ಬಂಧನ ಅಷ್ಟು ಸುಲಭದ್ದಾಗಿರಲಿಲ್ಲ, ರಾಜಕಾರಣಿಗಳ ಒತ್ತಡವಂತೂ ಇದ್ದೇ ಇತ್ತು, ಆದರೂ ಎದೆಗುಂದದೆ ಈ ಅಧಿಕಾರಿಗಳು ಪ್ರಕರಣದಲ್ಲಿ ತೋರಿದ ದಿಟ್ಟತನ ಈಗ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ,
ಶುರುವಾಗುವ ಮುನ್ನವೇ ಮುಗಿದುಹೋಗಬೇಕಿದ್ದ ಪ್ರಕರಣವನ್ನು ಹೆಗಲ ಮೇಲೆ ಹೊತ್ತು ದಡ ಮುಟ್ಟಿಸುತ್ತಿರುವವರು ಈ ಖಡಕ್ ಅಧಿಕಾರಿಗಳು, ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಸ್ ಗಿರೀಶ್ ಮೊದಲ ದಿಟ್ಟತನ ತೋರಿದ ಅಧಿಕಾರಿ, ಇನ್ನೊಬ್ಬರು ಸಹಾಯಕ ಪೊಲೀಸ್ ಕಮಿಷನರ್ ಚಂದನ್ ಕುಮಾರ್ ಈ ಪ್ರಕರಣದ ನಿಜ ಹೀರೋಗಳು.
ಪ್ರಕರಣ ತಿಳಿಯುತ್ತಿದ್ದಂತೆ ದಿಟ್ಟತನ ತೋರಿದ ಅಧಿಕಾರಿಗಳು ದರ್ಶನ್ ಅಭಿಮಾನಿಗಳ ಸಿಟ್ಟು, ರಾಜಕಾರಣಿಗಳ ಪ್ರಭಾವವನ್ನು ಮೆಟ್ಟಿ ತನಿಖೆ ಆರಂಭಿಸಿದರು, ಇಲ್ಲವಾದರೆ ಪ್ರಕರಣ ಮಣ್ಣು ಪಾಲಾಗುತ್ತಿತ್ತು ಎಂಬುದು ಪೊಲೀಸ್ ವಲಯದ ಮಾತುಗಳು..