ದೇಶ
ಪೊಲೀಸ್ ಠಾಣೆ ಬಳಿ ದರ್ಶನ್ ಲೇಡಿ ಫ್ಯಾನ್ ಹೈಡ್ರಾಮಾ!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ & ಟೀಂ ಈಗಾಗಲೇ ಪೊಲೀಸ್ ಕಷ್ಟಡಿಯಲ್ಲಿದ್ದಾರೆ, ನಮ್ಮ ಡಿ ಬಾಸ್ ಅವರನ್ನು ನೋಡಲು ಬಿಡಿ ಎಂದು ಕೆಲಹೊತ್ತು ಅನ್ನಪೂಣೇಶ್ವರಿ ಪೊಲೀಸ್ ಠಾಣೆ ಬಳಿ ಮಹಿಳಾ ಅಭಿಮಾನಿಯೋರ್ವರು ಹೈಡ್ರಾಮಾ ಮಾಡಿರುವ ಪ್ರಸಂಗ ನಡೆದಿದೆ,
ದರ್ಶನ್ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ವಿಚಾರವಾಗಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಹಿಳೆಯ ವಾಗ್ವಾದ ನಡೆಸಿದ್ದಾಳೆ, ದರ್ಶನ್ ನೋಡಲು ಬಿಡಿ ಎಂದು ಠಾಣೆಯ ಸಿಬ್ಬಂದಿ ಬಳಿಯೂ ಆಕೆ ಕೆಲಕಾಲ ಹಠಹಿಡಿದ ಘಟನೆ ನಡೆದಿದೆ,
ಠಾಣೆ ಬಳಿಯಿಂದ ದೂರ ಹೋಗುವಂತೆ ಮಹಿಳೆಯನ್ನು ತಡೆದ ಮಹಿಳಾ ಸಿಬ್ಬಂದಿಯೊಂದಿಗೂ ವಾಗ್ವಾದಕ್ಕಿಳಿದ್ದು, ಮಹಿಳೆಯ ಹೈಡ್ರಾಮಾ ಮಾಡಿರುವುದು ವರದಿಯಾಗಿದ,