ಅಪರಾಧ
ಮೋರಿಗೆ ಹಾರಿ ನಟ ದರ್ಶನ್ ಅಪ್ಪಟ ಅಭಿಮಾನಿ ಆತ್ಮಹತ್ಯೆ?
ರಾಮನಗರ: ನಟ ದರ್ಶನ್ & ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ದರ್ಶನ್ ಸೇರಿ 19 ಆರೋಪಿಗಳು ಪೊಲೀಸ್ ಕಷ್ಟಡಿಯಲ್ಲಿದ್ದಾರೆ.
ದರ್ಶನ್ ವಿರುದ್ಧ ರಾಜ್ಯಾದ್ಯಂತ ಟೀಕೆಗಳು ಕೇಳಿಬರುತ್ತಿವೆ, ಇನ್ನೊಂದೆಡೆ ತಮ್ಮ ನಟನಿಗೆ ಇಂತಹ ಪರಿಸ್ಧಿತಿ ಬರಬಾರದಿತ್ತು ಅಂತಾ ಹಲವು ದರ್ಶನ್ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ, ಇದರ ನಡುವೆಯೇ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಳೆ ದೊಡ್ಡಿಯಲ್ಲಿ ಭೈರೇಶ್ ಎಂಬಾತ ಬೃಹತ್ ಮೋರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಭೈರೇಶ್ ದರ್ಶನ್ ಅವರ ಅಪ್ಪಟ ಅಭಿಮಾನಿ ಎಂದು ಹೇಳಲಾಗುತ್ತಿದೆ, ಕಳೆದೆರಡು ದಿನಗಳ ಹಿಂದೆ ದರ್ಶನ್ ಬಂಧನ ಪ್ರಕರಣವನ್ನು ನೆನೆದು ಭೈರೇಶ್ ಊಟ, ನೀರು ಸಹ ಬಿಟ್ಟಿದ್ದನಂತೆ, ತಮ್ಮ ನೆಚ್ಚಿನ ನಟನಿಗೆ ಈ ಪರಿಸ್ಧಿತಿ ಬರಬಾರಿದಿತ್ತು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗುತ್ತಿದೆ, ಈ ಬಗ್ಗೆ ಚನ್ನಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ,