ಅಪರಾಧ

ದರ್ಶನ್ ಮನುಷ್ಯನ ರಾಕ್ಷಸನಾ?: ವಿಡಿಯೋ ನೋಡಿ ದಂಗಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ನ ಕ್ರೌರ್ಯದ ಒಂದೊಂದೇ ಮುಖ ಅನಾವರಣಗೊಳ್ಳುತ್ತಿದೆ.

ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿರುವ ವಿಡಿಯೋ ಲಭ್ಯವಾಗಿದ್ದು, ಸಿಎಂ ಸಿದ್ದರಾಮಯ್ಯ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದೆ.

ನಟ ದರ್ಶನ್ ಬಂಧನಕ್ಕೆ ಒಳಗಾಗುವ ಮೊದಲು ಆತ ಎಸಗಿದ್ದ ಕೃತ್ಯದ ವಿಡಿಯೋಗಳನ್ನು ಅಧಿಕಾರಿಗಳು ಸಿಎಂ ಸಿದ್ದರಾಮಯ್ಯಗೆ ತೋರಿಸಿದ್ದರು. ಈ ವೇಳೆ ವಿಡಿಯೋ ನೋಡಿದ ಸಿಎಂ ಸಿದ್ದರಾಮಯ್ಯ ದಂಗಾದ ಸಿಎಂ, ದರ್ಶನ್ ಮನುಷ್ಯನಾ ಅಥವಾ ರಾಕ್ಷಸನಾ ಎಂದು ಪ್ರಶ್ನಿಸಿದ್ದರಂತೆ.

ಬೆಂಗಳೂರು ಪೊಲೀಸ್ ಕಮಿಷನರ್ ದರ್ಶನ್ ವಿಡಿಯೋ ತೋರಿಸಿ ಸಿಎಂ ಬಳಿ ಅನುಮತಿ ಪಡೆದು ದರ್ಶನ್ ನ್ನು ಬಂಧಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Trending

Exit mobile version